Sunday 29 January 2012

ಜುಂಜಪ್ಪ ಜನಪದಮಹಾಕಾವ್ಯ : ಪ್ರಭುತ್ವದ ನೆಲೆಗಳು

                                         ಜನಪದ ಮಹಾಕಾವ್ಯಗಳು ಆಳುವ ವರ್ಗದ ಪುರಾಣಗಳನ್ನು ಭಂಜಿಸಿ, ತಮ್ಮ ಪರವಾದ ಪುರಾಣಗಳನ್ನು ಕಟ್ಟಿಕೊಳ್ಳುವಲ್ಲಿ ಪ್ರಯತ್ನಿಸಿವೆ.ಇದನ್ನು ಕಂಡಾಕ್ಷಣ ಒಂದೆರೆಡು ಸರಳ ಹಾಗೂ ಸಹಜವಾದ ಪ್ರಶ್ನೆಗಳು ಎದುರಾಗುತ್ತವೆ. ಮೂಲತಃ ಪುರಾಣಗಳು ಆಳುವ ವರ್ಗ ಅಥವಾ ಪ್ರಭುತ್ವದ ನಿರ್ಮಾಣಗಳು. ಇಂಥ  ಪುರಾಣಗಳ ಜೊತೆ ಹೀಗೆ ಗುದ್ದಾಡುವ ಸಮುದಾಯಗಳು ವಾಸ್ತವವಾಗಿ ಪ್ರಭುತ್ವಗಳೊಡನೆ ಯಾವ ತರಹದ ಸಂಬಂಧವಿರಿಸಿಕೊಂಡಿರುತ್ತವೆ? ಮತ್ತು ಅವುಗಳ ಅಧಿಕಾರದ ಬಗ್ಗೆ ಇವುಗಳ ದೃಷ್ಟಿ ಧೋರಣೆಗಳೇನು? ಎಂಬಿತ್ಯಾದಿ. ಇವು ಪ್ರಭುತ್ವ ಹಾಗೂ ದುಡಿಯುವ ಸಮುದಾಯಗಳ ಅಂತರ್ ಸಂಬಂಧಗಳನ್ನು ಕಂಡುಕೊಳ್ಳುವ ದಿಕ್ಕಿನತ್ತ ಬೆರಳು ಮಾಡುತ್ತವೆ.ಹಾಗಾಗಿ ಪ್ರಸ್ತುತ ಅಧ್ಯಾಯದಲ್ಲಿ ಪುರಾಣಗಳನ್ನು ಪ್ರಶ್ನಿಸುವ ಜನಪದ ಮಹಾಕಾವ್ಯಗಳ ಸೃಷ್ಟಿಶೀಲ ಮನಸ್ಸುಗಳು,ಪುರಾಣಗಳ ಸೃಷ್ಟಿಶೀಲ ನೆಲೆಗಳಾದ ಪ್ರಭುತ್ವವನ್ನು ಹೇಗೆ ಮುಖಾ-ಮುಖಿಯಾಗುತ್ತವೆ ಎಂಬುದನ್ನು ಜನಪದ ಮಹಾಕಾವ್ಯಗಳ ಮೂಲಕ ಶೋಧಿಸುವ ಪ್ರಯತ್ನ ಮಾಡಲಾಗಿದೆ.
ಪ್ರಭುತ್ವದ ಪರಿಕಲ್ಪನೆ
 ಇಲ್ಲಿಯವರೆಗೆ ಪ್ರಭುತ್ವ ದ ಪರಿಕಲ್ಪನೆಯನ್ನು ಕುರಿತು ಸಾಕಷ್ಟು ಚಚರ್ೆಗಳು ನಡೆದಿವೆ. ಇವುಗಳಿಂದ ತಿಳಿದುಬರುವ ಮುಖ್ಯ ಸಂಗತಿ ಎಂದರೆ - ಇಲ್ಲಿ ಪ್ರಭುತ್ವ ಎಂಬುದನ್ನು ಇಣಚಿಛಟಟಜಟಿಣ, ಖಣಚಿಣಜ, ಕಠತಿಜಡಿ, ಕಠಟಣಛಿ ಎನ್ನುವ ಅರ್ಥದಲ್ಲಿಯೇ ಹೆಚ್ಚಾಗಿ ಗುರುತಿಸಲಾಗಿದೆ. ಆದ್ದರಿಂದ ಪ್ರಭುತ್ವಕ್ಕೆ ರಾಜ್ಯ-ರಾಜ, ಸಾಮ್ರಾಜ್ಯ-ಸಾಮ್ರಾಟ, ಪುರ - ಪಟೇಲ ಎನ್ನುವ ರಾಜ್ಯತ್ವದ ನೆಲೆಯೇ ಪ್ರಧಾನವಾಗಿದೆ. ಆದರೆ ಪ್ರಭುತ್ವ ವಾಸ್ತವವಾಗಿ ಇಷ್ಟಕ್ಕೆ ಸೀಮಿತವಾಗಬೇಕಿಲ್ಲ. ಇಟಲಿಯ ಪ್ರಸಿದ್ಧ ಚಿಂತಕ ಆಂತೋನಿ ಗ್ರಾಂಶ್ಚಿ ಹಾಗೂ ಆತನ ಅನುಯಾಯಿಗಳು,ಪ್ರಭುತ್ವಕ್ಕಿರುವ ಇಂಥ ಸೀಮಿತ ಅರ್ಥವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.ಮುಖ್ಯವಾಗಿ ಅವರು ಪ್ರಭುತ್ವವನ್ನು ಊಜರಠಟಠಟಿಥಿ ಎನ್ನುವ ಪರಿಕಲ್ಪನೆಯಡಿಯಲ್ಲಿ ವಿವರಿಸುತ್ತಾರೆ.  ಊಜರಠಟಠಟಿಥಿ ಎನ್ನುವುದು ಇಣಚಿಛಟಟಜಟಿಣ, ಖಣಚಿಣಜ, ಕಠತಿಜಡಿ, ಕಠಟಣಛಿ ಗಿಂತ ಹೇಗೆ ಭಿನ್ನ ಎಂಬುದನ್ನು ವಿವರಿಸಿಕೊಳ್ಳುವುದಾದರೆ, ಮೇಲಿನ ಪರಿಕಲ್ಪನೆಗಳು ರಾಜಕೀಯ ನೆಲೆಯ ಚಿಂತನೆಯೊಳಗೆ ಬೃಹತ್ ವ್ಯವಸ್ಥೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿರುವುದು ಕಂಡುಬರುತ್ತದೆ. ಆದರೆ ಪ್ರಭುತ್ವ(ಊಜರಠಟಠಟಿಥಿ)  ಎನ್ನುವ  ಪದದ ಅರ್ಥದಲ್ಲಿ ಅಲ್ಪಮಟ್ಟಿಗೆ 'ಅಧಿಕಾರದೊಂದಿಗೆ ಅಂಕಿತದಲ್ಲಿಟ್ಟುಕೊಳ್ಳುವುದು' ಎಂಬರ್ಥ ಬರುತ್ತದೆ. ಹೀಗೆ ಅಂಕಿತ ಸಾಧಿಸುವಲ್ಲಿ ಪ್ರಭುತ್ವದ ಪ್ರತಿನಿಧಿ ಮತ್ತು ಅಂಕಿತಕ್ಕೆ ಒಳಪಡುವವರ ಮಧ್ಯೆ ಅನ್ಯೋನ್ಯವಾದ ಒಂದು ಸಂಬಂಧವಿರುತ್ತದೆ. ಇದನ್ನು ತೀರಾ ಸಮಾನ್ಯಗೊಳಿಸಿದರೆ ಹೆಂಡತಿಯ ಮೇಲಿನ ಗಂಡನ ಪ್ರಭುತ್ವ, ಸೊಸೆಯ ಮೇಲಿನ ಅತ್ತೆಯ ಪ್ರಭುತ್ವ ಇಲ್ಲಿಯವರೆಗೂ ಪ್ರಭುತ್ವದ ವ್ಯಾಪ್ತಿಯನ್ನು ಹರಿಸಬಹುದಾಗಿದೆ.(ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪುಟ: 207, 1993)  ಗ್ರಾಂಶ್ಚಿಯಂತೂ ಪ್ರಧಾನವಾಗಿ ಪ್ರತಿಪಾದಿಸಿದ ಸಿದ್ಧಾಂತವಿದು. ಅವರು ಹೇಳುವ ಹಾಗೆ ಇಡೀ ಜೀವನವೇ ಯಜಮಾನ್ಯಗಳ ಸಂಕೀರ್ಣ. ಜೀವನದ ಯಾವ ಭಾಗವು ಈ ಯಜಮಾನ್ಯದಿಂದ ಮುಕ್ತವಾಗಿಲ್ಲ. ಹೀಗೆ ಸರ್ವವ್ಯಾಪಿಯಾದ ಯಜಮಾನ್ಯವನ್ನು ಎರಡು ಗುಂಪುಗಳಾಗಿ ವಿಭಜಿಸಬಹುದು. ಅವುಗಳೆಂದರೆ ಒಂದು ಘನ' ಮತ್ತೊಂದು 'ಕಿರಿ' ಇವುಗಳಲ್ಲಿ ಮೊದಲನೆಯದು ಸೃಜನಶೀಲವಾದುದು. ಅದಕ್ಕೆ ಒಂದು 'ಖಣಚಿಣಜ' ನ ಪರಿಕಲ್ಪನೆ ಇರುತ್ತದೆ. ವ್ಯಾಪ್ತಿಯಲ್ಲಿ ಹಿರಿದಾದ ಇದು ಯಾಂತ್ರಿಕವೂ ಅನ್ನಿಸಬಹುದು. ಎರಡನೆಯದು ದೈವಿಕವಾದುದು. ಕೆಳಗಿನ ರಾಜಕಾರಣವಿದ್ದು. ವ್ಯಕ್ತಿಗತ ಸಂಬಂಧಗಳನ್ನು ನಿರ್ವಚಿಸುವುದು ಇಲ್ಲಿ ಮುಖ್ಯ. ಹೀಗೆ ಹೇಳುವಾಗಲೂ ಇವೆರಡನ್ನು ಸಂಪೂರ್ಣ ಭಿನ್ನ ಎಂದು ಭಾವಿಸಬೇಕಿಲ್ಲ.ಬದಲಿಗೆ ಒಂದರಿಂದ ಮತ್ತೊಂದು ಅವಲಂಬಿತವಾಗಿರುತ್ತದೆ(ಕೇಶವಶರ್ಮ ಕೆ.,ಶಬ್ದರೇಖೆ,ಪುಟ:80-81,1998). ಗ್ರಾಂಶ್ಚಿಯ ಪ್ರಕಾರ ಊಜರಠಟಠಟಿಥಿ/ಅಧಿಕಾರ ಎಂಬುದು ದುರ್ಬಲರನ್ನು ಆಳುವ ಪ್ರಬಲ ಶಕ್ತಿಯಾಗಿದೆ.(ಮನೋಹರ ಚಂದ್ರಪ್ರಸಾದ್ ಡಿ.,ಪ್ರತಿಸಂಸ್ಕೃತಿ ಆಂತೋನಿಗ್ರಾಂಶ್ಚಿಯ ಚಿಂತನೆಗಳು, ಪುಟ: 50, 2002) ಸಮಾಜದ ಉಪ ವ್ಯವಸ್ಥೆಗಳಾದ ಜಾತಿ, ಧರ್ಮ, ವರ್ಗ, ಜನಾಂಗ, ರಾಜ್ಯ ಮೊದಲಾದವು ಅಂಥ ಶಕ್ತಿಗಳಾಗಿ ಕಂಡುಬರುತ್ತವೆ.ಹೀಗೆ ಉಪವ್ಯವಸ್ಥೆಗಳು ಹಿಂದುಳಿದ ಗುಂಪುಗಳನ್ನು ಆಳುತ್ತಿರುತ್ತವೆ. ಈ ಆಳ್ವಿಕೆಗಳಲ್ಲಿ ಬಡವ-ಶ್ರೀಮಂತ, ಬ್ರಾಹ್ಮಣ-ಶೂದ್ರ, ಪುರೋಹಿತ-ಭಕ್ತ, ಆರ್ಯ-ದ್ರಾವಿಡ, ರಾಜ-ಪ್ರಜೆ ಇವೇ ಮೊದಲಾದ ಶ್ರೇಣೀಕರಣಗಳು ಕಂಡುಬರುತ್ತವೆ.ಇವೆಲ್ಲಕ್ಕೂ ಆಳುವ ಮತ್ತು ಆಳಿಸಿಕೊಳ್ಳುವ ತತ್ವವೇ ತಳಪಾಯವಾಗಿರುತ್ತದೆ.ಒಟ್ಟಾರೆ ಹೇಳುವುದಾದರೆ ಯಜಮಾನ್ಯತೆ ಅಥವಾ ಪ್ರಭುತ್ವಕ್ಕೆ ತೋಳ್ಬಲ ಹಾಗೂ ಬುದ್ಧಿಬಲಗಳೆರಡೂ ಸೇರಿಕೊಳ್ಳುತ್ತವೆ.ಇದರ ಜೊತೆಗೆ ಊಳಿಗಮಾನ್ಯ ಪದ್ಧತಿ,ಬಂಡವಾಳಶಾಹಿತ್ವ ಸಾಮಾಜಿಕ ಶ್ರೇಣೀಕರಣಗಳು ಕೂಡಾ ಸಮಾವೇಶಗೊಳ್ಳುತ್ತವೆ.ಆಳುವ ಶಕ್ತಿಯಾದ ಪ್ರಭುತ್ವ/ಯಜಮಾನ್ಯತೆ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಇದಕ್ಕೆ ಪ್ರಮುಖವಾದ ಎರಡು ಮುಖಗಳಿರುತ್ತವೆ. ಒಂದು; ಸಮಾಜದ ಬೇರೆ ಬೇರೆ ಪಂಗಡಗಳ ಒಳಿತನ್ನು ಸಮನ್ವಯಗೊಳಿಸುವ ಏಪರ್ಾಡು, ಇತರೆ ದುರ್ಬಲ ವರ್ಗಗಳನ್ನು ತುಳಿಯುವ ಅಸ್ತ್ರ ಇದನ್ನು ಹೆಚ್.ಎಸ್. ಶಿವಪ್ರಕಾಶ್ ಅವರು ಎರಡು ಸುಂದರ ರೂಪಕಗಳ ಮೂಲಕ ವಿವರಿಸುತ್ತಾರೆ. ಅವುಗಳೆಂದರೆ ಒಂದು ಅನ್ನಪೂಣರ್ೆಯದು. ಮತ್ತೊಂದು ದುಗರ್ಿಯದು.ಇವುಗಳಲ್ಲಿ ಮೊದಲನೆಯದು ಸಮಾಜವನ್ನು ಕಾಪಾಡುವ ಬದ್ಧತೆಯಿಂದ ಕೂಡಿದ್ದಾಗಿದೆ.(ಬರಗೂರು ರಾಮಚಂದ್ರಪ್ಪ(ಪ್ರ.ಸಂ.)ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ ಪುಟ:1,1993)ನಮ್ಮಸಾಂಸ್ಕೃತಿಕಚರಿತ್ರೆಯನ್ನು ಅವಲೋಕಿಸಿದರೆ ಪ್ರಭುತ್ವ ಅನ್ನಪೂಣರ್ೆಯಾಗಿರವಷ್ಟೆ ದುಗರ್ಿಯೂ ಆಗಿದೆ. ಇತಿಹಾಸದಲ್ಲಿ ಆಳುವವರ ಸ್ವಜನ ಪಕ್ಷಪಾತ, ಸ್ವಾರ್ಥ, ಭ್ರಷ್ಟ ಮನೋಭಾವಗಳು ಹೆಚ್ಚಾಗಿವೆ.ಇವು ಪ್ರಭುತ್ವದ ದುಗರ್ಿಯ ಮುಖದಲ್ಲಿ ಪರಿಣಾಮಕಾರಿಯಾಗಿ ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ.ಸಮಾಜದಲ್ಲಿ ಪ್ರಭುತ್ವವನ್ನು ಎಲ್ಲಾಕಡೆ ಕಾಣಲು ಸಾಧ್ಯ.ಹಾಗೆ ಕಾಣುವ ಪ್ರಭುತ್ವಗಳಲ್ಲಿ ಪ್ರಧಾನವಾದವುಗಳೆಂದರೆ : ರಾಜ ಪ್ರಭುತ್ವ. ಧಾರ್ಮಿಕ ಪ್ರಭುತ್ವ. ಆರ್ಥ ಪ್ರಭುತ್ವ. ಸಾಮಾಜಿಕ ಪ್ರಭುತ್ವ. ಹೀಗೆ ಪ್ರಭುತ್ವವು ಹಲವಾರು ಹಂತಗಳಲ್ಲಿ ತನ್ನ ಛಾಯೆಯನ್ನು ಒತ್ತಿರುತ್ತದೆ.ಮೇಲೆ ಉಲ್ಲೇಖಿಸಿರುವ ಪ್ರಭುತ್ವದ ಮಾದರಿಗಳು ಅಧ್ಯಯನದ ಅನುಕೂಲಕ್ಕೆ ಮಾಡಿಕೊಂಡ ವಿಭಾಗ ಕ್ರಮ ಮಾತ್ರ. ಇವು ಮೇಲ್ನೋಟಕ್ಕೆ ವಿಭಿನ್ನ ಎನಿಸಿದರೂ ಆಂತರ್ಯದಲ್ಲಿ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುತ್ತವೆ.ಅದು ಎಷ್ಟರ ಮಟ್ಟಿಗೆ ಎಂದರೆ,ಒಂದನ್ನೊಂದು ಬಿಟ್ಟು ಇರಲಾರವು. ಉದಾಹರಣೆಗೆ ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳನ್ನು ತೆಗೆದುಕೊಂಡರೆ ಧರ್ಮ ಎಂಬುದು ಪ್ರಭುತ್ವದಿಂದ ಪ್ರತ್ಯೇಕವಲ್ಲ.ಅದು ನಾಸ್ತಿಕ ಬೌದ್ಧಧರ್ಮವಾಗಿರಬಹುದು.ಇಲ್ಲಿ ಆಸ್ತಿಕ ಸಂಪ್ರದಾಯಗಳ ವಣರ್ಾಶ್ರಮಧರ್ಮವಾಗಿರಬಹುದು. ಅದು ಪ್ರಭುತ್ವಕ್ಕೆ ಆಕರವಾಗಿರುತ್ತದೆ.ಹಾಗೂ ಪ್ರಭುತ್ವಕ್ಕೆ ಮಾನ್ಯತೆಯನ್ನು ಸೃಷ್ಟಿಸುತ್ತದೆ. (ರಾಜಾರಾಮ ಹೆಗಡೆ, ಲೌಕಿಕ-ಅಲೌಕಿಕ, ಪುಟ: 7, 2001) ಹೀಗಿರುವುದರಿಂದ ಒಂದರಿಂದ ಮೊತ್ತೊಂದರ ಅಸ್ತಿತ್ವ ಸಾಧ್ಯವಾಗಿದೆ. ಈ ಅಂಶ ಉಳಿದ ಎಲ್ಲಾ ರೀತಿಯ ಪ್ರಭುತ್ವಗಳಿಗೂ ಅನ್ವಯವಾಗುತ್ತದೆ. ಇವುಗಳಲ್ಲಿ ಕೆಲವೊಮ್ಮೆ ಸಂಘರ್ಷವೂ ನಡೆಯುತ್ತದೆ. ಹೀಗೆ ಸಂಘರ್ಷ ಏರ್ಪಟ್ಟಾಗ ಯಾವುದರ ಅಸ್ತಿತ್ವವೂ ಸ್ಪಷ್ಟವಾಗಿರುವುದಿಲ್ಲ.
ಧರ್ಮ ಮತ್ತು ರಾಜ್ಯತ್ವ ಇವರೆಡನ್ನು ಗಮನದಲ್ಲಿಟ್ಟುಕೊಂಡು ಚಚರ್ೆಯನ್ನು ಇನ್ನಷ್ಟು ಬೆಳೆಸುವುದಾದರೆ: ರಾಜ, ಪ್ರಜೆಗಳಿಗೆ ದೇವರಾಗಿ ಕಾಣುತ್ತಾನೆ. ಏಕೆಂದರೆ ರಾಜ್ಯದಲ್ಲಿ ಪ್ರಜೆಗಳ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವತ್ತ ಮತ್ತು ಅವರನ್ನು ಕಾಪಾಡುವತ್ತ ಕಾಳಜಿವಹಿಸಿರುವುದರಿಂದ ಹೀಗೆ ಪ್ರಜೆಗಳ ಕಣ್ಣಿನಿಂದ ರಾಜ ದೇವತೆಯಾಗುತ್ತಾನೆ. ಆದರೂ ರಾಜ ಸರ್ವಸ್ವತಂತ್ರವೆನಿಸುವುದಿಲ್ಲ. ಮತ್ತೊಂದು ಕಡೆ ರಾಜ ಧರ್ಮದ ಚೌಕಟ್ಟಿನಿಂದ ಬಂಧಿತನಾಗಿರುತ್ತಾನೆ. ಧರ್ಮದ ಸ್ಥಾನದಲ್ಲಿ ಧರ್ಮಶಾಸ್ತ್ರಗಳು, ಪುರಾಣಗಳು, ಪುರೋಹಿತರು ನಿಂತಿರುತ್ತಾರೆ. ಹಾಗಾಗಿಯೇ ರಾಜ ಪ್ರಜೆಗಳನ್ನು ಕಾಪಾಡುವುದು ಎಷ್ಟು ಮುಖ್ಯವೋ ಧರ್ಮದ ರಕ್ಷಣೆಯೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. 'ಧಮರ್ೊ ರಕ್ಷಿತಿಃ ರಕ್ಷತಾ' ಎನ್ನುವ ಜನಪ್ರಿಯ ಮಾತು ಇಲ್ಲಿ ಪ್ರಭಾವಿಸಿರುತ್ತದೆ.
ಒಟ್ಟಾರೆ, ರಾಜ್ಯದಲ್ಲಿ ಆಥರ್ಿಕತೆ, ಧಾರ್ಮಿಕತೆ ಮತ್ತು ಮೊದಲಾದವು ಒಟ್ಟು ಸಂಘಟಿತ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾಗಿರುತ್ತವೆ. ಆ ಮೂಲಕ ಆಳುವ ವ್ಯವಸ್ಥೆಯೊಂದು ರೂಪಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಆಳಿಸಿಕೊಳ್ಳುವ ವರ್ಗಗಳು ಅಧಿಕಾರದ ಕ್ರೂರ ಶಕ್ತಿಯ ಬಗ್ಗೆ ಕೋಪಗೊಳ್ಳುತ್ತಲೇ ಅದರಿಂದ ಬಿಡುಗಡೆಗೊಳ್ಳಲು ಅನೇಕ ರೀತಿಯ ಪ್ರಯತ್ನಗಳನ್ನು ಮುಂದುವರಿಸುತ್ತವೆ. ಅಷ್ಟೇ ಅಲ್ಲದೆ ಇವೂ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತವೆ. ಅಂಥ ಪ್ರಯತ್ನಗಳನ್ನು ಅರಿಯಲು ಆಳಿಸಿಕೊಂಡ ಸಮುದಾಯಗಳ ಕಲೆ, ಸಾಹಿತ್ಯ, ಸಂಪ್ರದಾಯ-ಆಚರಣೆಗಳನ್ನು ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಿಂದ 'ಜನಪದ ಮಹಾಕಾವ್ಯ'ಗಳಲ್ಲಿ ಶೂದ್ರ ಸಮುದಾಯಗಳು ಪ್ರಭುತ್ವವನ್ನು ಮುಖಾಮುಖಿಗೊಂಡ ಬಗೆ ಯಾವುದು? ಅವುಗಳಿಂದ ಬಿಡುಗಡೆಗೊಳ್ಳುವ ರೀತಿ ಯಾವುದು? ಇಂಥ ಎಲ್ಲಾ ಸಂಗತಿಗಳನ್ನು ಮುಂದಿನ ಭಾಗದಲ್ಲಿ ವಿಶ್ಲೇಷಿಸಬಹುದಾಗಿದೆ.
 ಜುಂಜಪ್ಪನ ಕಾವ್ಯವನ್ನು ಕಟ್ಟಿ ಹಾಡುತ್ತಿರುವ ಕಾಡುಗೊಲ್ಲರು ಮೂಲತಃ ಪಶುಪಾಲಕರಾಗಿದ್ದು, ಒಂದೇ ಒಂದು ಭೂ ಪ್ರದೇಶಕ್ಕೆ ಒಳಗಾದವರಾಗಲಿ, ಒಂದೇ ಪ್ರಭುತ್ವವದಡಿಯಲ್ಲಿ ಬದುಕಿದವರಾಗಲೀ ಆಗಿಲ್ಲ. ಇದು ಈವರೆಗಿನ ಅಧ್ಯಯನಗಳಿಂದ ಸ್ಪಷ್ಟ. ಈ ಕಾಡುಗೊಲ್ಲರಿಗೆ ಪಶುಗಳೇ ಸಂಪತ್ತು. ದೈವ, ಬದುಕು ಎಲ್ಲವೂ ಹೌದು. ಅಂತಹ ಪಶುಗಳ ಪಾಲನೆ ಅಷ್ಟು ಸರಳವಾದ ಕೆಲಸವಲ್ಲ. ಪಶುಗಳ ಆಹಾರಕ್ಕೆ ಬೇಕಾದ ಯಾವುದೇ ರೀತಿಯ ಹುಲ್ಲುಗಾವಲುಗಳು ಇವರ ವಶದಲ್ಲಿಲ್ಲ. ಅವು ಏನಿದ್ದರು ಆಥರ್ಿಕವಾಗಿ ಪ್ರಬಲರಾಗಿದ್ದ ಪ್ರಭುಗಳ ಕೈವಶದಲ್ಲಿವೆ. ಕಾವ್ಯ ವಿವರಿಸುವ ಹಾಗೆ ಮುತ್ತು ರತ್ನ ವ್ಯಾಪಾರ ಮಾಡುವ ಸೇಳೂರು ದೊರೆಗಳು, ಸಾಣೇಕೆರೆ ಪುಟ್ಟಣ್ಣನಂಥ ಪ್ರಭುಗಳು ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವ ಎತ್ತುಗಳ ನಿರ್ವಹಣೆಗೆ, ಇದ್ದ ಹುಲ್ಲುಗಾವಲುಗಳೆಲ್ಲವನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕಾಡುಗೊಲ್ಲರ ಸ್ಥಿತಿ ಚಿಂತಾಜನಕ.ಇವರಿಗಿರುವ ಒಂದೇ ಒಂದು ದಾರಿ.ಅದು ಹುಲ್ಲುಗಾವಲಿನ ಒಡೆಯರ ಜೊತೆ ಸಂಘರ್ಷಕ್ಕಿಳಿಯುವುದು ಜುಂಜಪ್ಪ ಮಾಡಿರುವ ಇಂಥ ಹಲವಾರು ಸಂಘರ್ಷಗಳನ್ನು ಕಾವ್ಯ ಅರ್ಥಪೂರ್ಣವಾಗಿ ವಿವರಿಸುತ್ತದೆ.
 ಸೇಳೂರು ದೊರೆಗಳೊಡನೆ ಸಂಘರ್ಷ
 ಜುಂಜಪ್ಪ ಹಾಗೂ ಅವನ ಸಹೋದರರು ಸಾಕಷ್ಟು ದನಗಳುಳ್ಳ ಪಶುಪಾಲಕರು. ಇವರ ನಾಡಿಗೆ ಒಮ್ಮೆ ಕ್ಷಾಮ ಬಂದು ಹುಲ್ಲು-ನೀರಿಗೆ ಸಾಕಷ್ಟು ಬರ ಬರುತ್ತದೆ. ದನಗಳೆಲ್ಲವೂ ಆಹಾರವಿಲ್ಲದೆ ಹೊಟ್ಟೆಹತ್ತಿಸಿಕೊಂಡು ಮಲಗುತ್ತವೆ. ಪಶುಗಳ ಈ ಕಷ್ಟವನ್ನು ನೋಡಲಾಗದೆ ಹುಲ್ಲು ನೀರು ಹುಡುಕಲು ಜುಂಜಪ್ಪನ ಸಹೋದರರು ಹೊರಡುತ್ತಾರೆ. ಆಗ ಅವರಿಗೆ ಸೇಳೂರು ದೊರೆಗಳ ಹಲ್ಲುಗಾವಲು ಕಾಣಿಸುತ್ತದೆ.ಆ ಸೇಳೂರು ದೊರೆಗಳು ಹಾಗೂ ಅವರ ಹುಲ್ಲುಗಾವಲಿನ ಸ್ವರೂಪವನ್ನು ಕಾವ್ಯ ಹೀಗೆ ಚಿತ್ರಿಸುತ್ತದೆ.ಸೇಳೂರು ದೊರೆಗಳು ಮೂಲತಃ ಮುತ್ತು ರತ್ನದ ವ್ಯಾಪಾರಸ್ತರು.ಎತ್ತುಗಳ ಮೇಲೆ ಮುತ್ತು ರತ್ನ ಹೇರಿಕೊಂಡು ಪಟ್ಟಣಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಈ ಉದ್ದೇಶಕ್ಕಾಗಿ ದೊರೆಗಳು ನೂರಾ ಒಂದು ಜೊತೆ ಎತ್ತುಗಳನ್ನು ಸಾಕಿದ್ದರು. ಎತ್ತುಗಳ ಮೇವಿಗಾಗಿ 168 ಎಕರೆ ಹುಲ್ಲುಗಾವಲನ್ನು ಹೊಂದಿದ್ದರು. ಹುಲ್ಲುಗಾವಲನ್ನು ಕಾಯಲು ನೂರಾರು ಜನ ಗುರಿಕಾರರನ್ನು ನೇಮಿಸಿದ್ದರು. ಕಾವಲಿಗೆ ಗಾಜಿನ ಗೋಡೆ ಹಾಕಿಸಿ ಭದ್ರ ಮಾಡಿದ್ದರು (ಜುಂಜಪ್ಪ ಪುಟ: 335). ಇಂಥ ಭದ್ರಕೋಟೆಯನ್ನು ಭೇದಿಸಿದ ಜುಂಜಪ್ಪ ಹಾಗೂ ಅವರ ಸೋದರರು ತಮ್ಮ ದನಗಳನ್ನು 168 ಎಕರೆ ಹುಲ್ಲುಗಾವಲಲ್ಲಿ ಬಿಟ್ಟು ಮೇಯಿಸುತ್ತಾರೆ. ಈ ಮಧ್ಯೆ ಜುಂಜಪ್ಪನಿಗೂ ಹಾಗೂ ದೊರೆಗಳಿಗೂ ನಡೆದ ಸಂಭಾಷಣೆ, ಸಂಘರ್ಷಗಳು ತುಂಬಾ ಮಹತ್ವದ ಅಂಶಗಳನ್ನು ಬಿಂಬಿಸುತ್ತವೆ. ಮೊದಲಿಗೆ ಜುಂಜಪ್ಪ ಕಾವಲಿನ ಕಾವಲುಗಾರರ ಜೊತೆ ಮುಖಾ-ಮುಖಿಯಾಗುತ್ತಾನೆ. ಆ ಸಂದರ್ಭದಲ್ಲಿ ಜುಂಜಪ್ಪ ಕಣ್ಣು ಕಾಣದ ಕುರುಡನಂತೆ,ಕಿವಿ ಕೇಳಿಸಿದ ಕಿವುಡನಂತೆ ನಟಿಸಿ ನಿಮ್ಮ ದೊರೆಗಳನ್ನು ನನ್ನ ಹತ್ತಿರವೇ ಕಳುಹಿಸಿರಯ್ಯಾ ಎಂದು ಕೇಳುತ್ತಾನೆ. ಇದರಿಂದ ಕುಪಿತಗೊಂಡ ಕಾವಲುಗಾರರು
  ಇವನಿರೋ ಜಾಗಕ್ಕೆ ನಮ್ಮ ಸೇಳೂರು ದೊರೆ
  ದೊರೆ ಅಂದ್ರೇನು ನೀನು ಅಂದ್ರೇನು
  ನಿನ್ಹತ್ರಕೆ ದೊರೆ ಬರಬೇಕೇನೂ ದಗಡಿ ಮಗನೆ (ಜುಂಜಪ್ಪ. ಪುಟ: 341)
 ಎಂಬುದಾಗಿ ಹೇಳುತ್ತಾರೆ. ಇಲ್ಲಿಯ ಮಾತುಗಳು ಪ್ರಭುತ್ವಮುಖೀನೆಲೆಯುಳ್ಳವು. ಕಾವಲುಗಾರರ ಈ ಮಾತುಗಳಿಗೆ ಜುಂಜಪ್ಪ ಕಾವಲುಗಾರರೇ ನೀವು ಸಂಬಳದಾಳುಗಳು ನಿಮಗೇಕೆ ಈ ಕೆಲಸ ಸುಮ್ಮನಿರಿ ಎಂಬ ಸೂಕ್ತ ಪ್ರತಿವಾದವನ್ನು ಒಡ್ಡುತ್ತಾನೆ. ಇದರಿಂದ ಕಾವಲುಗಾರರಿಗೆ ವಿಪರೀತ ಸಿಟ್ಟು ಬಂದು ಜುಂಜಪ್ಪನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆದರೆ ಜುಂಜಪ್ಪ ಅವರಿಗೆ ಕೊಡುವ ಶಿಕ್ಷೆಯನ್ನು ತಾಳಲಾರದೆ ಅವರು, ಸಂಬಳ ಕೊಡುವ ದೊರೆಗಳೇ ನಮಗೆ ಒಮ್ಮೆಯೂ ಇಂಥ ಕಷ್ಟಕೊಡಲಿಲ್ಲ. ಈ ಕಾಡುಗೊಲ್ಲ ನಮಗೆ ಎಷ್ಟೊಂದು ಕಷ್ಟಕೊಟ್ಟ ಎಂದು ಹೇಳುವ ಮಾತುಗಳು ಅತ್ಯಂತ ಮಾಮರ್ಿಕವಾಗಿವೆ. ದೊರೆಗಳಿಗೆ ಇಲ್ಲದ ಅದ್ಬುತ ಶಕ್ತಿ ಜುಂಜಪನಲ್ಲಿತ್ತೆಂದು ಕಾವ್ಯ ಸಾದರಪಡಿಸುತ್ತದೆ. ಇಷ್ಟಾದ ನಂತರವೂ ಜುಂಜಪ್ಪನ ಶಿಕ್ಷೆಯನ್ನು ತಾಳಲಾರದೆ ನಮ್ಮ ದೊರೆ ಕೊಡೋ ಮೂರು ಕಾಸಿನ ಸಂಬ್ಳಾನು ಬೇಡ ಈ ಶಿಕ್ಷೆನೂ ಬೇಡ. ನಮ್ಮ ಹೆಂಡ್ರು ಮಕ್ಕಳ್ನ ನೋಡಿದರೆ ಸಾಕೆಂದು ಓಡಿಹೋಗುವ ಪ್ರಸಂಗವಂತೂ ಧ್ವನಿಪೂರ್ಣವಾಗಿದೆ. ದೊರೆ ಹಾಗೂ ಸಂಬಳಗಾರರ ನಡುವೆ ಇಷ್ಟವಿಲ್ಲದ ಅನಿವಾರ್ಯತೆಯ ನಂಟಿನ ಸ್ವರೂಪ ಇಲ್ಲಿ ಬಯಲಾಗಿದೆ.
 ತದನಂತರ ಜುಂಜಪ್ಪ ನೇರವಾಗಿ ದೊರೆಗಳೊಡನೆ ಸಂಘರ್ಷಕ್ಕಿಳಿಯುತ್ತಾನೆ. ಆಗ ಆರಂಭಕ್ಕೆ ದೊರೆಗಳು ಈ ಕೆಳಗಿನಂತೆ ಶರಣಾಗುತ್ತಾರೆ.
  ತಂದೆ ಧನ್ಯನಾದೆನು ಸ್ವಾಮಿ ನಾನು
  ಯಾರೋ ನರಮನುಷ್ಯರೆಂದು
  ದುರಹಂಕಾರಪಟ್ಟು ಓಡಿ ಬಂದೆನು ತಂದೆ
  ನೀನೆಂಬುದು ನಾನರಿಯೇ ಸ್ವಾಮಿ (ಜುಂಜಪ್ಪ ಪುಟ: 346)
 ಹೀಗೆ, ಶರಣಾದ ದೊರೆಗಳು ಅಲ್ಲಿಗೆ ನಿಲ್ಲುವುದಿಲ್ಲ. ಜುಂಜಪ್ಪನ ಇಂಥ ಪರಾಕ್ರಮಕ್ಕೆ ಆತನ ಬಡ ಮೈಲನೆಂಬ ಎತ್ತೇ ಕಾರಣ ಎಂಬುದನ್ನು ಅರಿತು, ಅದನ್ನು ಕ್ರಯಕ್ಕೆ ಪಡೆಯಲು ಮುಂದಾಗುತ್ತಾರೆ. ಆಳುವ ವರ್ಗಗಳು ದುಡಿಯುವ ಸಮುದಾಯಗಳ ಚೈತನ್ಯ ಶಕ್ತಿಗಳನ್ನು ವಶಪಡಿಸಿಕೊಂಡು ಈ ಮೂಲಕ ಅವರನ್ನು ಅಸಮರ್ಥರನ್ನಾಗಿಸುವ ಹುನ್ನಾರ ಇಲ್ಲಿ ಕಂಡುಬರುತ್ತದೆ. ಆಗ ಜುಂಜಪ್ಪ ದೊರೆಗಳ ಈ ತಂತ್ರವನ್ನು ಸರಿಯಾಗಿಯೇ ಅರ್ಥಮಾಡಿಕೊಳ್ಳುತ್ತಾನೆ.
 ನೋಡಯ್ಯ
 ನೀನು ಅಟೈಸ್ವರವಂತನಾಗಿರಬಹುದು
 ವಜ್ರ ವೈಡೂರ್ಯ ಸಂಪಾದನೆ ಮಾಡಿರಬಹುದು
 ಬಸುವನ ಪೂಜೆ ಮಾಡೋ ಯೋಗ್ಯತೆ ನಿನಗಿಲ್ಲಕಣಯ್ಯ (ಜುಂಜಪ್ಪ ಪುಟ: 348)
ಎಂದು ದೊರೆಗಳ ತಂತ್ರಕ್ಕೆ ಪ್ರತಿಕ್ರಿಯಿಸುತ್ತಾನೆ. ಪ್ರಭುತ್ವ ಅಂದಾಕ್ಷಣ ಅದಕ್ಕೆ ಎಲ್ಲಾತರಹದ ಶಕ್ತಿ ಇರುತ್ತದೆ ಎಂಬುದು ಸುಳ್ಳು. ಇದನ್ನು ವಾದಿಸುತ್ತ ಪ್ರಭುತ್ವವು ದುಡಿಯುವ ಸುಮದಾಯಗಳ ಶಕ್ತಿಯನ್ನು ಪಡೆಯಲಾಗದು ಎಂಬುದನ್ನು ಜುಂಜಪ್ಪ ಮನವರಿಕೆ ಮಾಡಿಸುತ್ತಾನೆ. ಜುಂಜಪ್ಪನ ಈ ಆತ್ಮವಿಶ್ವಾಸವು ಪ್ರಭುತ್ವಕ್ಕೆ ನೇರ ಸವಾಲಾಗುತ್ತದೆ. ಇಲ್ಲಿ ವಿಫಲರಾದ ದೊರೆಗಳು ತಮ್ಮ ತಂತ್ರವನ್ನು ಮತ್ತೊಂದು ರೀತಿ ರೂಪಿಸುತ್ತಾರೆ. ಅದರ ಪ್ರಕಾರ ಕವಡೆ ಆಟ ಆಡುವುದು. ಆಟದಲ್ಲಿ ದೊರೆಗಳು ರಾಜ್ಯವನ್ನು, ಕಾಡುಗೊಲ್ಲರು ಬಡಮೈಲನೆಂಬ ಎತ್ತನ್ನು ಪಣಕ್ಕಿಡುವುದು ಎಂದಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ರಾಜರ ರಾಜ್ಯಕ್ಕೆ ಬಡಮೈಲನೆಂಬ ಎತ್ತು ಸಮತೂಕವಾಗುವುದು. ಕವಡೆ ಆಟ ಆಡಲು ಬರುವುದಿಲ್ಲವೆಂದ ಜುಂಜಪ್ಪ ಕೊನೆಗೆ ಒಪ್ಪಿ ದೊರೆಗಳೊಡನೆ ಕವಡೆ ಆಟ ಆಡಿ ಪಣವನ್ನು ಗೆದ್ದುಬಿಡುತ್ತಾನೆ. ನಿಯಮದಂತೆ ರಾಜ್ಯ ಜುಂಜಪ್ಪನಿಗೆ ದೊರೆಯುತ್ತದೆ. ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಜುಂಜಪ್ಪ ದೊರೆಗಳಿಗೆ ಹೀಗೆ ಆದೇಶಿಸುತ್ತಾನೆ.
  ಬಿಚ್ಚಿರೋ ನಿಮ್ಮ
  ಜೋತ್ರ ಪಂಚೆಗಳಾ
  ತಗ್ದುಹಾಕಿರಲೇ
  ಕೋಟು ರುಮಾಲುಗಳ
  ಇಕ್ಕಳಿರೋ ಪುಟಗೋಸಿಗಳ
  ತಗಳಿರೋ ಸಲಿಕೆ ಗುದ್ಲಿ
  ನಡಿರಲೇ ಸೇಳೂರು ಕೆರೆಯ
  ಕಟ್ಟನು ಎಂದನು ಜುಂಜಪ್ಪಶಿವ್ನಿಗೋ (ಜುಂಜಪ್ಪ ಪುಟ: 399)
 ಜುಂಜಪ್ಪನ ಈ ಆದೇಶ ದುಡಿಯುವ ಸಮುದಾಯಗಳ ಪ್ರತಿಸಂಸ್ಕೃತಿ ನಿರ್ಮಾಣದ ಗಟ್ಟಿ ಆಶಯವನ್ನು ಬಿಂಬಿಸುತ್ತದೆ. ಇನ್ನೊಬ್ಬರ ನಾಶಕ್ಕೆ ತಮ್ಮ ಪ್ರಭುತ್ವವನ್ನು ಬಳಸಿಕೊಳ್ಳುವ ಅರಸರು ಅನೇಕ. ಅಂಥ ಅರಸರ ಅಧಿಕಾರವನ್ನೇ ಕಿತ್ತುಕೊಳ್ಳುವುದು ಸಮುದಾಯಗಳ ಮನಸ್ಸಿನ ಆಳದ ಪ್ರಜ್ಞೆಯಾಗಿದೆ ಎನ್ನುವುದು ತಿಳಿದುಬರುತ್ತದೆ.
 ಪ್ರತಿಸಂಸ್ಕೃತಿ ನಿರ್ಮಾಣದಲ್ಲಿ ಬಹುಮುಖ್ಯವಾಗುವ ಅಪವಗರ್ೀಕರಣ ಮತ್ತು ಮೌಲ್ಯೀಕರಣದ ಪ್ರಕ್ರಿಯೆಗಳು ಮೇಲಿನ ಪ್ರಸಂಗದಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ರಾಜಮುದ್ರಿಕೆ, ಉಂಗುರ, ಕೋಟು, ರುಮಾಲುಗಳ ಧರಿಸಿ ರಾಜ್ಯವಾಳುತ್ತಿದ್ದ ದೊರೆಗಳು ಪುಟಗೋಸಿ ತೊಟ್ಟು ಸಲಿಕೆ-ಗುದ್ಲಿ ಕೈಯಲ್ಲಿಡಿದು ಅರಮನೆಯಿಂದ ಕೆರೆಯ ಏರಿಗೆ ನಡೆಯುವುದು ಅಪವಗರ್ೀಕರಣವಾಗಿದೆ. ಅದೇ ಪುಟಗೋಸಿ ತೊಟ್ಟು ಕೈಯಲ್ಲಿ ಕೋಲುಹಿಡಿದಿದ್ದ ಜುಂಜಪ್ಪ ರಾಜಮುದ್ರಿಕೆ, ಉಂಗುರ ಧರಿಸಿ ಕಾಡಿನಿಂದ ಅರಮನೆಗೆ ನಡೆಯುವುದು ಮೌಲ್ಯೀಕರಣವಾಗುತ್ತದೆ.
 ಇನ್ನೂ ವಿಶೇಷವೆಂದರೆ, ರಾಜನಾದ ಜುಂಜಪ್ಪ ಮತ್ತೆ ರಾಜತ್ವದ ಯಥಾ ಸ್ಥಿತಿಯನ್ನು ಮುಂದುವರಿಸುವುದಿಲ್ಲ. ಬದಲಿಗೆ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾನೆ. ಸೇಳೂರಿನಲ್ಲಿ ಕೆರೆಯೊಂದನ್ನು ಕಟ್ಟಿಸುವ ಕಾಯಕ ಈ ಸಂಗತಿಯನ್ನು ಸರಿಯಾಗಿ ಸಪಷ್ಟಪಡಿಸುತ್ತದೆ. ಪಶುಗಳನ್ನು ಸಾಕಿಸಲುಹುತ್ತ ಹುಲ್ಲು - ನೀರಿಗಾಗಿ ಸಾಕಷ್ಟು ಕಷ್ಟಪಟ್ಟ ಸಮುದಾಯ ಮನಸ್ಸೊಂದು ಕೆರೆಯ ನಿರ್ಮಾಣದಂತಹ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅತ್ಯಂತ ಸಹಜವಾಗಿದೆ. ಇಂಥಲ್ಲಿ ದೊರೆಗಳನ್ನೇ ಕೆರೆ ಕಟ್ಟಲು ಹಚ್ಚಿದ್ದು ಗಮನಾರ್ಹ. ಅದರಂತೆ ಇದು ದೊರೆಗಳ ಬಗ್ಗೆ ದುಡಿಯುವ ಸಮುದಾಯಗಳು ಇಟ್ಟುಕೊಂಡಿರುವ ಮನೋಭಾವವನ್ನು ತಿಳಿಸುತ್ತದೆ. ಕೊನೆಗೆ ಒಪ್ಪಂದದ ಸಮಯ ಮುಗಿದಾಗ ಜುಂಜಪ್ಪ ರಾಜ್ಯ ತೆಗೆದುಕೊಂಡು ನಾನೇನು ಮಾಡಲಿ ಎಂದು, ರಾಜತ್ವನ್ನು ನಿರಾಕರಿಸಿ ತನ್ನ ಸಮುದಾಯದ ಮೂಲ ವೃತ್ತಿಗೆ ಹೊರಡುತ್ತಾನೆ. ಇದ್ದಷ್ಟು ಕಾಲ ರಾಜತ್ವವನ್ನು ಆಥರ್ಿಕ ಶ್ರೀಮಂತಿಕೆಯನ್ನು ಹೇಗೆ ಜನಪರವಾಗಿ ಬಳಸಿಕೊಳ್ಳಬೇಕೆಂದು ಸೂಚಿಸಿದ ಜುಂಜಪ್ಪನ ಕ್ರಮ ವಿಶೇಷವಾಗಿದೆ.
 ಸಾಣೇಕೆರೆ ಪುಟ್ಟಣ್ಣನೊಡನೆ ಜಗಳ
 ಸೇಳೂರು ದೊರೆಗಳಂತೆ ಹುಲ್ಲುಗಾವಲನ್ನು ಪಡೆದಿದ್ದ ಮೊತ್ತಬ್ಬ ವ್ಯಕ್ತಿ ಸಾಣೇಕೆರೆ ಪುಟ್ಟಣ್ಣ. ಈತ ಆತಿ ಶ್ರೀಮಂತ. ಮುತ್ತು-ರತ್ನ ವ್ಯಾಪಾರ ಮಾಡುವುದರ ಜೊತೆಗೆ ಮಾಟ, ಶೂನ್ಯ ಮಾಡುವುದನ್ನು ಕಲ್ತಿದ್ದ. ಈತನು ಕೂಡ ಮುತ್ತು-ರತ್ನದ ವ್ಯಾಪಾರಕ್ಕೆ ಅನುಕೂಲವಾಗುವ ಎತ್ತುಗಳಿಗೆಂದು ನೂರಾರು ಎಕರೆ ಹುಲ್ಲುಗಾವಲನ್ನು ಹೊಂದಿ, ಅದಕ್ಕೆ ಬಂಗಾರದ ಬೇಲಿ ಹಾಕಿಸಿದ್ದ. ಇದನ್ನು ಕೂಡ ಜುಂಜಪ್ಪ ಹಾಗೂ ಆತನ ಸೋದರರು ಭೇದಿಸಿ ತಮ್ಮ ಎತ್ತುಗಳನ್ನು ಮೇಯಿಸುತ್ತಾರೆ. ಸಾಣೇಕೆರೆ ಪುಟ್ಟಣ್ಣನಿಗೆ ಕೆಲವು ಅಹಂಕಾರಗಳಿದ್ದವು. ಅವು ಆಕ್ರಮಣಾಕಾರಿಯಾದವು. ಅವುಗಳಲ್ಲಿ.
  ಸುತ್ತ ಹದಿನಾರಳ್ಳಿ ಒಳಗಿರ್ತಕ್ಕಂತ ಗಂಡುಸ್ರುನನ್ನೆಲ್ಲ
ಮಾಟ ಶೂನ್ಯ ಮಾಡಿ ಸಾಯ್ಬಡುದು
ಅವುರೆಂಡ್ತಿರ್ನೆಲ್ಲ ತಂದು ಇಟ್ಕಂಡಿದ್ದೀಯ (ಜುಂಜಪ್ಪ ಪುಟ: 433)
 ಮಾಟ ಶೂನ್ಯ ಮಾಡಿಸೋದು ಹಾಗೂ ಪರರ ಹೆಂಡತಿಯರನ್ನು ತಾನು ಇಟ್ಟುಕೊಳ್ಳುವುದು ಇವೆರಡನ್ನು ಸಾಣೇಕೆರೆ ಪುಟ್ಟಣ್ಣನ ಹೆಂಡತಿಯರ ಮೂಲಕವೇ ಆತನ ಎಲ್ಲಾ ಮಾಟ-ಶೂನ್ಯದ ಪುಸ್ತಕಗಳನ್ನು ತರಿಸಿಕೊಂಡು ಅವುಗಳನ್ನು ಸುಟ್ಟು ಹಾಕುತ್ತಾನೆ. ವಿಶೇಷವೆಂದರೆ ಮಾಟದ ಪುಸ್ತಕದ ಜೊತೆಗಿದ್ದ ಬಾಲಗ್ರಹದ ಪುಸ್ತಕಗಳಂಥ ಆಕಾರಗಳನ್ನು ಸಂರಕ್ಷಿಸುತ್ತಾನೆ. ಹಾಗಾಗಿ ಇಲ್ಲಿ ಜುಂಜಪ್ಪ ಶ್ರೀಮಂತಿಕೆಯ ಕ್ರೂರ ಮುಖವನ್ನು ಕಳಚಿ, ಉಪಯುಕ್ತವೆನಿಸುವ ಮುಖವನ್ನು ಉಳಿಸಿದ್ದಾರೆ.
 ಮೇಲೆ ವಿವರಿಸಿದ ಎರಡು ಸಂಗತಿಗಳಲ್ಲಿ ಕಾಡುಗೊಲ್ಲರು ತಮ್ಮ ಪಶುಪಾಲನೆಗೆ ತೊಡಕಾಗಿದ್ದ ಆಥರ್ಿಕ ಪ್ರಭುತ್ವಗಳನ್ನು ಎದುರಿಸಿ ತಮ್ಮ ಅಸ್ತಿತ್ವಗಳನ್ನು ಸ್ಥಾಪಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ಆಥರ್ಿಕ ಪ್ರಭುತ್ವಗಳ ಅಹಂಗಳನ್ನು ನಾಶಮಾಡಿ, ಅವುಗಳ ಶಕ್ತಿ ಕುಂದುವಂತೆ ಮಾಡಿರುವುದು ಕಂಡುಬರುತ್ತದೆ. ಒಟ್ಟಾರೆ, ಕಾಡುಗೊಲ್ಲರು ಹುಲ್ಲುಗಾವಲು ಒಡೆಯರೊಡನೆ ಮಾಡಿದ ಸಂಘರ್ಷ ಒಂದು ಮಾದರಿಯದಾದರೆ, ನೇರವಾಗಿ ರಾಜತ್ವವನ್ನು ಮುಖಾ-ಮುಖಿಯಾದುದು ಮತ್ತೊಂದು ಮಾದರಿ ಅಂಥವುಗಳಲ್ಲಿ ಕಾವ್ಯ ವಿವರಿಸುವ ಮೂರು ಪ್ರಸಂಗಗಳನ್ನು ಇಲ್ಲಿ ವಿಶ್ಲೇಷಿಸಬಹುದಾಗಿದೆ.
ರಾಜತ್ವದ ಅವಾಹನೆ 
 ಮನುಷ್ಯ ನಿಜ ಜೀವನದಲ್ಲಿ ಸಾಧಿಸಲಾಗದ್ದನ್ನು ಕನಸಿನ ರೂಪದಲ್ಲಿ ಕಾಣುತ್ತಾನೆ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಇದು ಮನುಷ್ಯನ ಆಸೆಗೆ ಸಂಬಂಧಿಸಿದ ಸಂಗತಿ. ಆಸೆ ಎಂಬುದು ಪ್ರಜೆಗೇ ಆಗಲಿ ಪ್ರಭುವಿಗೇ ಆಗಲಿ ಬಿಟ್ಟಿದ್ದಲ್ಲ. ಹೀಗಾಗಿ ರಾಜತ್ವದಿಂದ ದೂರ ಉಳಿದಿರುವ ಕಾಡುಗೊಲ್ಲರು ತಮ್ಮ ಸಾಂಸ್ಕೃತಿಕ ನಾಯಕರನ್ನು ಅನೇಕ ಸಲ ರಾಜರನ್ನಾಗಿ ಪರಿಭಾವಿಸುತ್ತಾರೆ. ಕಾವ್ಯದಲ್ಲಿ ಇದಕ್ಕೆ ಹಲವಾರು ಪೂರಕ ಆಕರಗಳು ದೊರೆಯುತ್ತವೆ. ಈಗಾಗಲೇ ವಿವರಿಸಿದಂತೆ ಜುಂಜಪ್ಪಸೇಳೂರು ದೊರೆಗಳ ರಾಜ್ಯವನ್ನು ಏಳು ವರ್ಷ ಆಳುವುದು. ಕುಂಚಿಟಿಗ ಒಕ್ಕಲಿಗರ ಆಲೇಗೌಡನಿಂದ ಅರಮನೆ ಪಡೆಯುವುದು. ಇವೆಲ್ಲವುಗಳನ್ನು ರಾಜತ್ವದ ಆವಾಹನೆ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪರಿಭಾವಿಸಬೇಕಾಗುತ್ತದೆ.
 ಜುಂಜಪ್ಪನ ಕಾವ್ಯದಲ್ಲಿ ಹೇಳಿರುವ ಮತ್ತೊಂದು ಪ್ರಸಂಗ ಅವಾಹಗನೆಗೆ ಅತ್ಯುತ್ತಮ ಉದಾಹರಣೆ. ಜುಂಜಪ್ಪ ಮತ್ತು ತಾಯಿ ಚಿನ್ನಮ್ಮನ ನಡುವೆ ಸಣ್ಣ ಜಗಳವೊಂದು ನಡೆಯುತ್ತದೆ. ಈ ವಿವಾದವನ್ನು ಬಗೆಹರಿಸಲು ಜುಂಜಪ್ಪ ಐವತ್ತಾರು ದೇಶಗಳ ರಾಜರುಗಳನ್ನು ಆಹ್ವಾನಿಸುತ್ತಾನೆ. ಅದೆಂಥ ಆಹ್ವಾನವೆಂದರೆ
 ಐವತ್ತಾರು ದೇಶದ ದೊರಿಗಾಳು
 ದೇವಾನೆ ಪ್ರಜೆಗಳು ಬರಬಹುದು (ಜುಂಜಪ್ಪ, ಪುಟ: 222)
 ಇಲ್ಲಿ ಎಲ್ಲರೂ ಬರಲೇಬೇಕೆಂಬ ಕಡ್ಡಾಯವಾದ ಕರೆಯಿಲ್ಲ. ಬರಬಹುದೆಂಬ ಸ್ವಾತಂತ್ರ್ಯದ ಕರೆಗೆ ಮರು ಮಾತನಾಡದೆ ಐವತ್ತಾರು ದೇಶದ ಅರಸರು ಜುಂಜಪ್ಪನ ಮನೆಬಾಗಿಲಿಗೆ ಬರುತ್ತಾರೆ. ಹಾಗೆ ಬಂದ ಅರಸರಿಗೆ ವಿಶೇಷವಾದ ಮಾನ್ಯತೆಗಳಾಗಲಿ, ಆತಿಥ್ಯಗಳಾಗಲಿ ಇಲ್ಲ. ಎಲ್ಲರಂತೆ ಅವರೂ ಸಮಾನರು. ಗಮನಾರ್ಹ ಸಂಗತಿ ಎಂದರೆ ಅರಸರು ಮತ್ತು ಅವರ ರಾಜತ್ವ ಜುಂಜಪ್ಪನ ಮುಂದೆ ಗೌಣ. ಹೋಗುವ ಮೊದಲು ಅರಸರು
 ನಾವು ಧನ್ಯರಾದೆವು ತಂದೆ
 ಧನ್ಯರಾದೆವು ನಾವಂದು
 ಐವತ್ತಾರು ದೇಶದ ದೊರೆಗಳೇಳಿ
 ಅವ್ರರವ್ರ ಊರಿಗವ್ರುರೊರುಟಾರಯ್ಯಗಳಿಗೋ (ಜುಂಜಪ್ಪ ಪುಟ: 240)ಎಂಬ ಮಾತು ಆ ಸಂಗತಿಯನ್ನು ಶ್ರುತಪಡಿಸುತ್ತದೆ.
ಇಲ್ಲಿ ರಾಜರನ್ನು ಸಾಮಾನ್ಯರನ್ನಾಗಿರಿಸಿಕೊಂಡ ಜುಂಜಪ್ಪ ತಮ್ಮ ಮನೆಗೆ ಕರೆಸಿಕೊಂಡು ಅವರ ಮುಂದೆ ತಾನೂ ರಾಜನಂತೆ ವತರ್ಿಸುವುದು; ರಾಜರಾದರೂ ಸ್ವತಃ ತಾವೇ ಸಾಮಾನ್ಯ ಪ್ರಜೆಗಳಂತೆ ತಿಳಿಯುವುದು ಪುರಾಣಲೋಕದ ಆಚೆಗಿನ ಸತ್ಯಗಳನ್ನು ಹೇಳುತ್ತವೆ. ಆಳಿಸಿಕೊಳ್ಳುವ ಸಮುದಾಯಗಳು ಹೀಗೆ ತಮ್ಮ ನಾಯಕನನ್ನು ರಾಜನನ್ನಾಗಿಸಿ, ರಾಜರನ್ನು ಸಾಮಾನ್ಯರಾಗಿಸಿ ನೋಡುವ ಕ್ರಮ ಗಮನಾರ್ಹವಾಗಿದೆ. ಇದು ಆಳಿಸಿಕೊಂಡು ನಲುಗಿದ ಸಮುದಾಯಗಳು ತಮ್ಮ ಆತ್ಮ ವಿಶ್ವಾಸವನ್ನು ಮೇಲ್ಮುಖವಾಗಿ ತುಂಬಿಕೊಳ್ಳುವ ತಂತ್ರವಾಗಿದೆ. ಇಲ್ಲಿ ತಮಗೆ ಜೈಜ ಜೀವನದಲ್ಲಿ ಅಸಾಧ್ಯವಾದುದನ್ನು ತಮ್ಮ ಕಲ್ಪನಾ ಲೋಕದಲ್ಲಿ ಸಾಧ್ಯವಾಗಿಸಿಕೊಳ್ಳುತ್ತಾರೆ. ಇದು ಅಧಿಕಾರಸ್ಥರನ್ನು ಶ್ರೀಮಂತರನ್ನು ನೋಡಿ ಜನ ಹೊಟ್ಟೆಕಿಚ್ಚಿನಿಂದ ಗೈಯುವ ಕೆಲಸವಲ್ಲ. ಬದಲಾಗಿ ತಾವು ಹಾಗೆ ಸುಖವಾಗಿರಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತ, ತಮ್ಮ ಈ ಸ್ಥಿತಿಗೆ ಕಾರಣರಾದ ಆ ಜನರನ್ನು ಪ್ರತಿಭಟಿಸುವ ಮನೋಸ್ಥಿತಿಯನ್ನು ನಾವು ಇಲ್ಲಿ ಕಾಣಬಹುದಾಗಿದೆ. (ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪುಟ: 209, 1993)
ಒಟ್ಟಾರೆ ಈ ರೀತಿಯ ಆವಾಹನೆ ಕೂಡ ರಾಜತ್ವಕ್ಕೆ ಕನಸಿನ ರೂಪದಲ್ಲಿ ನೀಡಿದ ಪ್ರತಿಕ್ರಿಯೆ ಎನ್ನಬಹುದು. ರಾಜಪ್ರಭುತ್ವ ತನ್ನ ಅಧಿಕಾರ ಹಾಗೂ ವೈಭೋಗದ ಬದುಕನ್ನು ಮತ್ತೊಬ್ಬರಿಗೆ ಅಥವಾ ಮತ್ತೊಂದು ಸಮುದಾಯಕ್ಕೆ ಬಿಟ್ಟುಕೊಡಲು ಬಯಸುವುದಿಲ್ಲ. ಬದಲಿಗೆ ಅದನ್ನು ರಕ್ಷಿಸಿಕೊಳ್ಳುವುದರಲ್ಲೇ ತನ್ನ ಶಕ್ತಿಯನ್ನು ವಿನಿಯೋಗಿಸುತ್ತದೆ. ಇದೇ ಸಂದರ್ಭಕ್ಕೆ ಆಳಿಸಿಕೊಳ್ಳುವ ಸಮುದಾಯಗಳು ತಾವೂ ಕೂಡ ಅಧಿಕಾರದ ನೆಲೆಗೆ ಹೋಗಬೇಕೆಂದು ಬಯಸುತ್ತವೆ. ವಾಸ್ತವ ಜೀವನದಲ್ಲಿ ಇದು ತತ್ಕ್ಷಣಕ್ಕೆ ಆಗಬಹುದಾದ ಕಾರ್ಯವಲ್ಲ. ನಿರಂತರ ಹೋರಾಟ ಪ್ರತಿಭಟನೆ ಬೇಕು. ಜೊತೆಗೆ ಅದಮ್ಯವಾದ ಆತ್ಮವಿಶ್ವಾಸ, ಜನಬೆಂಬಲ ಇವೆಲ್ಲವೂ ಬೇಕೆನಿಸುತ್ತದೆ. ಇಂಥ ಎಲ್ಲಾ ಸವಾಲುಗಳ ನಡುವೆ ನಿಂತ ಕಾಡುಗೊಲ್ಲರ ಸಮುದಾಯ ತನ್ನಲ್ಲಿ ರಾಜತ್ವವನ್ನು ಆವಾಹಿಸಿಕೊಂಡಿರುವುದು ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಯಾಗಿ ತೋರುತ್ತದೆ.
ಹೀಗೆ ರಾಜತ್ವವನ್ನು ಮಾನಸಿಕವಾಗಿ ಮುಖಾಮುಖಿಯಾಗುವುದರ ಜೊತೆಗೆ ನೇರ ಮುಖಾಮುಖಿಯಾಗಿರುವುದೂ ಇದೆ. ಜುಂಜಪ್ಪನ ಕಾವ್ಯದಲ್ಲಿ ಇಂಥ ಅನೇಕ ಪ್ರಸಂಗಗಳಿವೆ. ಈ ದೃಷ್ಟಿಯಿಂದ ನೋಡುವುದಾದರೆ ಕಾಡುಗೊಲ್ಲರು ಹೆಚ್ಚಾಗಿ ಹೋರಾಟ ನಡೆಸಿರುವುದು ಬೇಡ ಮತ್ತು ಕುರುಬ ಸಮುದಾಯಗಳೊಡನೆ. ಅದರಲ್ಲೂ ಬೇಡರ ಕೆಲವು ಗುಂಪುಗಳು ಆಗ ಸಾಮಂತರಸರಾಗಿ ಪಾಳೇಗಾರರೆನಿಸಿಕೊಂಡಿದ್ದವು. ಇಂಥ ಪಾಳೇಗಾರರೊಡನೆ ಗೊಲ್ಲ ಸಮುದಾಯ ಸಾಕಷ್ಟು ಕದನಗಳನ್ನು ನಡೆಸಿರುವುದಾಗಿ ತಿಳಿದುಬರುತ್ತದೆ. ಇಂಥ ಸಂಗತಿಗಳಲ್ಲಿ ಒಂದೆರಡನ್ನು ಇಲ್ಲಿ ಪ್ರಸ್ತಾಪಿಸಬಹುದು.
ಹರತಿ ಪಾಳೇಗಾರರು ಗಿ/ಖ ಗೊಲ್ಲರು
ಜುಂಜಪ್ಪ ಕಾವ್ಯದ ಆರಂಭಕ್ಕೆ ಒಂದು ಕುತೂಹಲಕರ ಸಂಗತಿ ಎದುರಾಗುತ್ತದೆ. ಅದ್ಯಾವುದೆಂದರೆ: ಗೊಲ್ಲರಲ್ಲಿ ಚಿತ್ತಮುತ್ತಿಗೊಲ್ಲರು, ಮಾರ್ನೋರು ಗೊಲ್ಲರು ಎಂಬ ಎರಡು ಗುಂಪುಗಳಿವೆ. ಅವು ಮೂಲದಲ್ಲಿ ಒಂದೇ ಗುಂಪಾಗಿದ್ದು ನಂತರ ಎರಡಾಗಿ ಒಡೆಯುತ್ತವೆ. ಇದಕ್ಕೆ ಕಾರಣವೆಂದರೆ, ಮಹಾರಾಜನ ಹತ್ತಿರ ಬಾಳೆತ್ತಿನ ದಂಡಕ್ಕಾಗಿ ಅಣ್ಣನಾಗಿದ್ದವನು ತನ್ನ ಮಡದಿಯ ತಾಳಿ ಬಿಚ್ಚಿಕೊಟ್ಟ, ತಮ್ಮ ಆಗಿದ್ದವನು ಬಿಚ್ಚಿಕೊಡಲಿಲ್ಲ. ಹೀಗೆ ಮಾತಿಗೆ ತಪ್ಪಿದೋನೆಂದು ತಮ್ಮನನ್ನು ಗುಂಪಿನಿಂದ ಹೊರ ತಳ್ಳಿದರು. ಅವನ ಗುಂಪೇ ಮುಂದೆ 'ಮಾರ್ನೋರು ಗೊಲ್ಲ'ರೆಂದು ಹೆಸರಾಯಿತು.
ಮೇಲಿನ ವಿವರಣೆಯನ್ನಷ್ಟೇ ಕಾವ್ಯ ನೀಡುತ್ತದೆ. ಆದರೆ ಇಲ್ಲಿ ಕೆಲವು ಅಂಶಗಳು ನಿಖರವಾಗಿ ತಿಳಿಯುವುದಿಲ್ಲ. ಅವುಗಳಲ್ಲಿ ಬಾಳೆತ್ತಿನ ದಂಡ ಎಂದರೆ ಏನು? ಆ ಮಹಾರಾಜ ಯಾರು? ಆತ ಯಾಕೆ ಗೊಲ್ಲರ ಮೇಲೆ ದಂಡವಿಧಿಸಿದ ಈ ಮೊದಲಾದ ಸಂಗತಿಗಳು ಇನ್ನಷ್ಟು ವಿವರಣೆಗಳನ್ನು ಬೇಡುತ್ತವೆ. ಗೊಲ್ಲರ ಕುರಿತು ದೀರ್ಘ ಅಧ್ಯಯನ ಮಾಡಿರುವ ಮೀರಾಸಾಬಿಹಳ್ಳಿ ಶಿವಣ್ಣ ಅವರು ಈ ಪ್ರಸಂಗದ ಹಿನ್ನೆಲೆಗಳನ್ನು ತಿಳಿಸುತ್ತಾರೆ. ಇಲ್ಲಿ ಬರುವ ಪಾಳೇಗಾರ ಹರತಿ ಕೋಟೆಯ ಪಾಳೇಗಾರ. ಈ ಪಾಳೇಗಾರನ ಮಗಳು ಕರಿಯೋಬಿ. ಇವಳನ್ನು ಒಬ್ಬ ಕಾಡುಗೊಲ್ಲ ಒಗಟು ಬಿಡಿಸುವ ಮೂಲಕ ವಿವಾಹವಾಗುತ್ತಾನೆ. ಈ ಕಾಡುಗೊಲ್ಲನ ಹೆಸರು ಬುಳ್ಳಣ್ಣ. ಮೊದಲೇ ಇಬ್ಬರ ಹೆಂಡಿರ ಗಂಡ. ಆದರೂ ಕರಿಯೋಬಿ, ಬುಳ್ಳಣ್ಣನ ಮೊದಲನೇ ಹೆಂಡತಿ ನಾಗಮ್ಮನ ಮಗ ಚಿತ್ತಮುತ್ತಿಯನ್ನು ದತ್ತು ತೆಗೆದುಕೊಂಡು ತನ್ನ ಬೇಡ ಜಾತಿಯ ಹೆಣ್ಣಿನೊಡನೆ ವಿವಾಹ ಮಾಡುತ್ತಾಳೆ. ನಂತರ ಒಂದು ದಿನ ಮುತ್ತಿನ ಶೆಟ್ಟಿ ಒಂದು ವಸ್ತ್ರ ಮಾರಲು ಬಂದಾಗ ಅದು ಭಾರಿ ಬೆಲೆಯಾದ್ದರಿಂದ ಕರಿಯೋಬಿಗೆ ಅದನ್ನು ಕೊಳ್ಳಲಾಗಲಿಲ್ಲ. ಅದಕ್ಕಾಗಿ ಸೊಸೆಯಂದಿರು ಹಾಸ್ಯಮಾಡಿ ನಕ್ಕರು. ಇದರಿಂದ ಕರಿಯೋಬಿ ಹಾಗೂ ಆಕೆಯ ಮಕ್ಕಳು ಸೇರಿ ಆ ವಸ್ತ್ರವನ್ನು ಕದ್ದರು. ಇದಕ್ಕೆ ಪಾಳೇಗಾರ ಪಂಚಾಯ್ತಿ ಕರೆದು ದಂಡವಿಧಿಸಿದ ಆಗ ಕರಿಯೋಬಿ ತನ್ನ ಎಲ್ಲಾ ಸಂಪತ್ತು ಸುರಿದರೂ ದಂಡಕ್ಕೆ ಸಾಲದಾಯಿತು. ಆಗ ಚಿತ್ತಮುತ್ತಿ ಸೊಸೇರು ತಮ್ಮ ಮಾಂಗಲ್ಯ ತೆಗೆದುಕೊಟ್ಟು ದಂಡ ಕಟ್ಟಿದರು. ತಮ್ಮ ಮಾರುಮುತ್ತಿ ಮಾತ್ರ ಇದರಲ್ಲಿ ಭಾಗಿಯಾಗಲಿಲ್ಲ. ಹಾಗಾಗಿ ಮಾರುಮುತ್ತಿಯನ್ನು ಸಮುದಾಯದಿಂದ ಹೊರತಳ್ಳಿ ಮಾರ್ನಾರು ಗೊಲ್ಲರು ಎಂದು ಕರೆದರು. ಚಿತ್ತಮುತ್ತಿ ಕುಲದವರು ಅಂದು ತಾಳಿ ಬಿಚ್ಚಿಕೊಟ್ಟಿದ್ದರ ಪರಿಣಾಮ ಇಂದಿಗೂ ತಾಳಿಕಟ್ಟುವುದಿಲ್ಲ.(ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, ಪುಟ: 14-15, 1999) ಈ ಸಂಗತಿಯೂ ಸಹ ಕಾವ್ಯ ಎವರಿಸುವ ಬಾಳೆತ್ತಿನ ದಂಡದ ಬಗ್ಗೆ ಸರಿಯಾದ ವಿವರಣೆ ನೀಡುವುದಿಲ್ಲ. ಆದರೂ ಮಹಾರಾಜ ಹರತಿ ಪಾಳೇಗಾರನೆಂದು ಸೂಚಿಸುವುದು ಇಲ್ಲಿ ಮುಖ್ಯ. ಅದರಂತೆ, ಮಾರ್ನೋರು ಗೊಲ್ಲರ ಸಂತತಿಯೂ ಮಹಾರಾಜನ ಹೇರಿಕೆ ಕಾನೂನನ್ನು ನಿರಾಕರಿಸಿರುವುದು ಗಮನಾರ್ಹ ಸಂಗತಿ. ತನ್ನ ಹೆಂಡತಿಯ ತಾಳಿಯನ್ನೇ ಬಿಚ್ಚಿಕೊಡುವಂತೆ ಹೇಳಿದ ರಾಜನ ಕಾನೂನನ್ನು ಗೊಲ್ಲರ ಸಮುದಾಯ ಧೈರ್ಯವಾಗಿ ನಿರಾಕರಿಸಿ, ಕೊನೆಗೆ ತನ್ನ ಸಮುದಾಯದಿಂದಲೇ ದೂರವಾಗಿದ್ದು ಮಾತ್ರ ಇಲ್ಲಿ ಮಹತ್ವಪೂರ್ಣವಾಗಿ ಕಾಣುತ್ತದೆ. ಒಟ್ಟಾರೆ, ರಾಜನ ಕಾನೂನನ್ನು ನಿರಾಕರಿಸಿದ್ದು, ತಳಸಮುದಾಯಗಳ ರಾಜಕೀಯ ಪ್ರತಿರೋಧವನ್ನು ತೋರಿಸುತ್ತದೆ.
ಶಿರಾದ ಪಾಳೇಗಾರರು ಗಿ/ಖ ಜುಂಜಪ್ಪ
ಶಿರಾದ ಪಾಳೇಗಾರ ರಂಗಪ್ಪ ಎಂಬಾತನೊಡನೆ ಜುಂಜಪ್ಪ ನೇರ ಮುಖಾಮುಖ ನಡೆಸುತ್ತಾನೆ. ಇದಕ್ಕೆ ಕಾರಣ ಅತ್ಯಂತ ಕುತೂಹಲಕರವಾಗಿದ್ದು, ಅದು ಹೀಗಿದೆ: ಹೊನ್ನಟ್ಟಿ ಹಾಲೇಗೌಡನ ಹೆಂಡತಿ ದೊಡ್ಡಕ್ಕಜ್ಜಿಯಿಂದ ಅವರೇಕಾಯಿ ಬೇಡಿ, ಆಕೆ ಕೊಡಲು ಒಪ್ಪದಿದ್ದಾಗ ಮಿಡಿನಾಗರ ಬಿಟ್ಟು ಆಕೆಯನ್ನು ಸಾಯಿಸುತ್ತಾನೆ. ದೊಡ್ಡಕ್ಕಜ್ಜಿಯ ಈ ಸಾವು ಶಿರಾದ ಪಾಳೇಗಾರ ರಂಗಪ್ಪನಿಗೆ ಕೋಪ ತರಿಸುತ್ತದೆ. ಏಕೆಂದರೆ ರಂಗಪ್ಪ ಹಾಗೂ ದೊಡ್ಡಕ್ಕಜ್ಜಿಯ ನಡುವೆ ಲೈಂಗಿಕ ಸಂಬಂಧವುಂಟು. ಇದರಿಂದಾಗಿ ರಂಗಪ್ಪ ಜುಂಜಪ್ಪನ ಮೇಲೆ ಯುದ್ಧ ಸಾರುತ್ತಾನೆ.
ಎಲವ ಕಾಡುಗೊಲ್ಲ ಜುಂಜಪ್ಪ
ನಮ್ಮ ದೊಡ್ಡಿನ ಹಾವು ಬುಟ್ಟಿ ಸಾಯಿಸಿದ್ದೀಯಾ
ಸರಿ ನಿನ್ನ ಈ ತುರುಕುರ್ನೂ ನಾರಿಷ್ಟರ್ನು
ಎಲ್ಲಾ ದಂಡು ಕಟ್ಕಂಡು ಬಂದು
ನಿನ್ನ ಮೇಲೆ ಯುದ್ಧ ಮಾಡಿ
ನಿಮ್ಮ ಮೂರು ಜನ ಅಣ್ಣ ತಮ್ಮಗೋಳು ತಲೆಗೆ ಚಂಡಾಡಿಸಿ
ನಿನ್ನ ಸಂಪತ್ತನ್ನು
ನಾನು ನನ್ನೆಂಡ್ತಿಯರು ನೀರಡಿ ಕಂಬದ ಬಚ್ಚಲ ಕಲ್ಲಡಿಕೆ
ಕಡ್ಕಂಡು ತಿಂಬರಿಗೆ
ಗೇಯ್ಕಂಡುಂಬರಿಗೆ
ಕರ್ಕಂಡು ಕುಡಿಯೋರಿಗೆ
ಬಡುವುರಿಗೆ ಬಗ್ಗರಿಗೆಲ್ಲ
ದಾನದತ್ತು ಕೊಡಸ್ತಿನಿ ಕಣಲೇ ಕಾಡುಗೊಲ್ಲ
ಅಂದ ಪಾಳೇಗಾರ (ಜುಂಜಪ್ಪ, ಪುಟ: 634)
ಪಾಳೇಗಾರ ರಂಗಪ್ಪನ ಈ ಮಾತುಗಳು ಸಾಮಾಜಿಕ ಬದ್ಧತೆಯಿಂದ ಕೂಡಿವೆ ಎನಿಸಿದರೂ ಜುಂಜಪ್ಪನ ನೆಲೆಯಿಂದ ನೋಡಿದರೆ ಇವುಗಳಿಗೆ ಮಾನ್ಯತೆ ಸಿಗುವುದಿಲ್ಲ. ಜೊತೆಗೆ ರಂಗಪ್ಪ ಯುದ್ಧಸಾರಿರುವ ಆಶಯವೇ ಆತನ ಅಂಥ ಸಾಮಾಜಿಕ ಬದ್ಧತೆಯನ್ನು ನಿರಾಕರಿಸುತ್ತದೆ.
ವಿಶೇಷವೆಂದರೆ, ಜುಂಜಪ್ಪನ ಮೇಲೆ ಯುದ್ಧಕ್ಕೆ ಬಂದ ನಾಡಿನ ಜನ ಮನಃಪೂರ್ವಕವಾಗಿ ಬಂದಿರದೆ ಜುಂಜಪ್ಪನ ಸಂಪತ್ತಿನ ಆಸೆಗೆ ಬಂದಿರುತ್ತಾರೆ. ಇವರಿಗೆಲ್ಲ ಜುಂಜಪ್ಪನ ಸಂಪತ್ತು ಸಿಗುವುದಿಲ್ಲ. ಬದಲಿಗೆ ಜುಂಜಪ್ಪನ ಶಿಕ್ಷೆ ಸಿಗುತ್ತದೆ. ಆಗ ಕಾಲಿಗೆ ಅಡ್ಡಬಿದ್ದ ವ್ಯಕ್ತಿಗಳಿಗೆ ಜುಂಜಪ್ಪ ಹೇಳುವ ಮಾತುಗಳು ಅತ್ಯಂತ ಮಾಮರ್ಿಕವಾಗಿವೆ. ಅಂಥವುಗಳಲ್ಲಿ ವಡ್ರ ಹನುಮನಿಗೆ ಹೇಳಿದ ಮಾತೊಂದನ್ನು ಗಮನಿಸಬಹುದು. ವಡ್ರ ಹನುಮ ಪಾಳೇಗಾರನ ಆದೇಶದಂತೆ ಯುದ್ಧಕ್ಕೆ ಡಂಗೂರ ಸಾರಿದ್ದಾನೆ. ಅದಕ್ಕಾಗಿ ಜುಂಜಪ್ಪ ವಡ್ರ ಹನುಮನ ಇಡೀ ಕುಟುಂಬವನ್ನೇ ಸಾವಿನ ಮಡಿಲಿಗೆ ದೂಡಿದ್ದಾನೆ. ಇದರಿಂದ ತಲ್ಲಣಗೊಂಡ ಹನುಮ ಜುಂಜಪ್ಪನ ಪಾದಕ್ಕೆ ಬಿದ್ದಿದ್ದಾನೆ. ಅದಕ್ಕೆ ಜುಂಜಪ್ಪನ ಪ್ರಕ್ರಿಯೆ ಹೀಗಿದೆ:
ನನಗೆ ಬಂದು ಅಡ್ಡಬಿದ್ರೆ ನಿನಗೇನೋ ಬರತೈತೆ
ಹೋಗೋ ನಿನ್ನ ಪಾಳ್ಯಗಾರ್ಗೆ ಹಾಸ್ಯಾಸಿ ಅಡ್ಡಬಿದ್ರೆ
ನಿನ್ನೆಂಡ್ತಿ ಮಕ್ಕಳ ಎಬ್ಬಿಸಿಕೊಡ್ತಾನೆ ಅಂದ ಜುಂಜಪ್ಪ (ಜುಂಜಪ್ಪ, ಪುಟ: 637)
ಪಾಳೇಗಾರನಿಗೆ ಸಾಧ್ಯವಾಗದೇ ಇರುವ ಕೆಲಸ ತನ್ನಿಂದ ಸಾಧ್ಯ ಎಂಬ ಧ್ವನಿ ಜುಂಜಪ್ಪನಲ್ಲಿ ಹೊರಡುತ್ತದೆ. ಅಂದರೆ, ರಾಜನ ಶಕ್ತಿಗೆ ಸವಾಲಾಗಿ ನಿಲ್ಲಬಲ್ಲ ಶಕ್ತಿ ಜುಂಜಪ್ಪನಿಗಿದೆ. ಹೀಗೆ ಹೇಳುವಲ್ಲಿ ಪ್ರಭುತ್ವದ ನೆಲೆಗಳನ್ನೇ ಛಿದ್ರಗೊಳಿಸುವ ಬಯಕೆಯಿದೆ. ಇಂಥ ಶಕ್ತಿಯಿಂದಾಗಿಯೇ ಜುಂಜಪ್ಪ ತನ್ನ ವಿರುದ್ಧ ಯುದ್ಧಕ್ಕೆ ಬಂದ ಜನರೆಲ್ಲರನ್ನೂ ಸರಾಗವಾಗಿ ಶರಣಾಗತರನ್ನಾಗಿಸುತ್ತಾನೆ. ರಾಜನೂ ಕೂಡ ಸ್ವತಃ ತಾನೆ ಶರಣಾಗುತ್ತಾನೆ. ಶರಣಾಗುವ ಕ್ರಮಗಳನ್ನು ಗಮನಿಸುವುದಾದರೆ, ವಡ್ರ ಹನುಮ ಪಾಳೇಗಾರನ ಮಾತು ಕೇಳಿ ಡಂಗೂರ ಹಾಕಿ ನಿನ್ನ ಮೇಲೆ ದೈರ ಕಟ್ಟಿಕೊಂಡಿದ್ದು ನನ್ನ ಸರ್ವಂತ ತಪ್ಪು ಕಣಪ್ಪ ಎಂದರೆ, ಶಿರೇದ ಪಾಳೇಗಾರನ ತಾಯಿ ಜುಂಜಪ್ಪ ಅಂದ್ರೇನು ನೀನು ಅಂದ್ರೇನು ಬೆಂಕಿಗೆ ನೊಣ ಮುಸ್ರದುಂಟೇನೋ ಮಗನೆ ಎಂದು ಪಾಳೇಗಾರನನ್ನು ಯುದ್ಧದ ಆರಂಭಕ್ಕೆ ಎಚ್ಚರಿಸುತ್ತಾಳೆ. ಮುಸಲ್ಮಾನರೆಲ್ಲ ಅರೆ ಅಲ್ಲ, ಮಿಸ್ಮಿಲ್ಲರಂಗಣ್ಣ ನೀವು ದುಡ್ಡುಕೊಡ್ತೀವಂದ್ರು ನಾವು ಬರೋದಿಲ್ಲ, ಜುಂಜಪ್ಪನ ಮೇಲೆ ಯುದ್ಧಕ್ಕೆ ಎನ್ನುತ್ತಾರೆ. ಹಾಗೆಯೇ ಉಳಿದ ದಂಡೆಲ್ಲ ಜುಂಜಪ್ಪನ ಹೊಡೆತಕ್ಕೆ ತಾಳಲಾರದೆ ನಮ್ಮ ಹೆಂಡ್ರು ಮಕ್ಕಳ ಮಕ ನೋಡಿದ್ರೆ ಸಾಕಪ್ಪ ಇದೇನು ಗ್ರಾಚಾರ ಅಂತ ಓಡೋಗ್ತಾರೆ. ಇಷ್ಟೆಲ್ಲ ಆದ ಮೇಲೆ ಸ್ವತಃ ರಾಜನೆ ಸ್ವಾಮಿ ಸರ್ವಂತ ತಪ್ಪು ಕಣಪ್ಪ ನಾನು ವಂಶುಕೊಬ್ಬನೆ ಇರದು ಮುಚ್ಚುಳದ ನಾಯಕರು ಸ್ವಾಮಿ ನಾವು. ನಿನ್ನೆಡೆ ಮ್ಯಾಗಳ 'ಹೆಣೆಂಡೆ ಕೂಳು' ತಿಂತಿನಪ್ಪ ನಾನು. ನಿನಗೆ ಹಳೇ ಮಗನಾಗಿರ್ತೀನಿ ಸ್ವಾಮಿ ಬಿಟ್ಟುಬಿಡ್ರಿ ಎನ್ನುತ್ತಾನೆ.
ಮೇಲಿನ ಘಟನೆಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪ್ರಭುತ್ವದ ನೆಲೆಯೇ ಗುರುತಿಸುವಾಗ ಹಾಗೆ ಜುಂಜಪ್ಪ ಬೆಂಕಿ. ಬೆಂಕಿಗೆ ಯಾವುದಡ್ಡಿ? ಪಾಳೇಗಾರ ಹಾಗೂ ಅವನ ದಂಡು ದಳವೆಲ್ಲ ಬೆಂಕಿಗೆ ಮುತ್ತಿಗೆ ಹಾಕಿದ ನೊಣಗಳಂತಾದವು. ಬೆಂಕಿ ಮತ್ತು ನೊಣ ಈ ಎರಡು ಮಾಮರ್ಿಕವಾದ ಪ್ರತಿಮೆಗಳು. ಈ ಪ್ರತಿಮೆಗಳನ್ನು ಸೃಷ್ಟಿಸಿದ ಮನಸ್ಸುಗಳಲ್ಲಿ ಪ್ರಭುತ್ವದ 'ಪಾವಿತ್ರ್ಯನಾಶ' ಮಾಡುವ ಆಶಯವಿದೆ. ಅತ್ಯಂತ ಶಕ್ತಿವಂತರಾದ ಅರಸರನ್ನೇ ನೊಣಗಳಂತೆ ಕಾಣುವ ಈ ದೃಷ್ಟಿಯಲ್ಲಿ ನೊಂದ ಸಮುದಾಯಗಳ ಆಕ್ರೋಶವಿದೆ. ಒಟ್ಟಾರೆ ಪ್ರಭುತ್ವದ ಪಾವಿತ್ರ್ಯ ನಾಶ ಹಾಗೂ ತಮ್ಮನ್ನು ಮೌಲ್ಯೀಕರಣ ಮಾಡಿಕೊಳ್ಳುವ ಹಂಬಲ ಇಲ್ಲಿ ಎದ್ದು ಕಾಣುತ್ತದೆ.
ಜುಂಜಪ್ಪ ಹಾಗೂ ಆತನ ಸಮುದಾಯ ಇಂಥ ಅನೇಕ ಪಾಳೇಗಾರರೊಡನೆ ಬೇರೆ ಬೇರೆ ಕಾರಣಗಳಿಗಾಗಿ ಮುಖಾಮುಖಿಯಾಗಿದ್ದಾರೆ. ಇಂಥ ಮುಖಾಮುಖಿಯ ಜೊತೆ ಮತ್ತೊಂದು ಸ್ವರೂಪದ ಎದುರುಗೊಳ್ಳುವಿಕೆ ಸಂಘರ್ಷ ನಡೆಸಿರುವುದು ಜುಂಜಪ್ಪನ ಸಂಪ್ರದಾಯದಲ್ಲಿ ಕಂಡಬರುತ್ತದೆ. ಅದು ಧರ್ಮದ ವಿಚಾರಕ್ಕೆ ಸಂಬಂಧಿಸಿದ್ದು. ಜುಂಜಪ್ಪ ಹಾಗೂ ಕಾಡುಗೊಲ್ಲರು  ವಿವಿಧ ಧರ್ಮಗಳ ಜೊತೆಗೆ ಹೇಗೆ ಸಂವಾದ ಮಾಡಿದ್ದಾರೆ, ಸಂಘರ್ಷ ನಡೆಸಿದ್ದಾರೆ ಎಂಬುದನ್ನು ಈ ಹಿಂದಿನ 'ಪುರಾಣ'ದ ಅಧ್ಯಾಯದಲ್ಲಿ ವಿವರಿಸಲಾಗಿದೆ. ಆದರೂ ಅಲ್ಲಿ ವಿವರಿಸದೇ ಇರುವ ಕೆಲವು ಘಟನೆಗಳನ್ನು ಇಲ್ಲಿ ವಿವರಿಸಿಕೊಳ್ಳುವುದರ ಮೂಲಕ ಪ್ರಭುತ್ವದೊಡನೆ ಕಾಡುಗೊಲ್ಲರು ನಡೆಸಿರುವ ಧರ್ಮ ಸಂಬಂಧಿ ಸಂಘರ್ಷದ ಸ್ವರೂಪಗಳನ್ನು ಅರಿಯಬಹುದಾಗಿದೆ.
 ಬ್ರಾಹ್ಮಣರೊಡನೆ ಸಂಘರ್ಷ
ಗೊಲ್ಲರ ಮೂಲಪುರುಷರಾದ ಕಾಟಮುಲಿಂಗ-ಚಿತ್ತೂರಲಿಂಗರು ಶಿವನ ಭುಜದ ಬೆವರಿಂದ ಉದ್ಬವವಾಗಿ, ಪಂಚಕಳಸಗಳಿರುವ ಬಂಗಾರದ ರಥದಲ್ಲಿ ಭೂಲೋಕಕ್ಕೆ ಬಂದು, ಬ್ರಾಹ್ಮಣರ ಹೊಲದಲ್ಲಿ ರಥವನ್ನು ಇಳಿಸುತ್ತಾರೆ. ಆ ರಥವನ್ನು ಬ್ರಾಹ್ಮಣರ ಬೊಮ್ಮಯ್ಯಲಿಂಗ ನೋಡಿ ಹೀಗೆ ಹೇಳುತ್ತಾನೆ:
ನಮಗೆ ಬ್ರಾಹ್ಮಣರಿಗೆ ಈ ರಥ
ಸರಿ ಈ ಪಂಚೈದು ಕಳಸಗಳಿದ್ರೆ
ಪೂಜೆ ಮಾಡಿಕೊಂಬದಕ್ಕೆ ಬಹಳ ಚನ್ನಾಗೈತೆ
ಈ ಕಾಡುಗೊಲ್ಲರಿಗೆ ಇಂಥ ರಥ ಯಾಕೆ? (ಜುಂಜಪ್ಪ ಪುಟ : 13)
ಬೊಮ್ಮಲಿಂಗನ ಈ ಮಾತುಗಳು ಬ್ರಾಹ್ಮಣರು ಪರಂಪರಾಗತವಾಗಿ ಧಾರ್ಮಿಕ ಹಕ್ಕುದಾರಿಕೆ ಅನುಭವಿಸುತ್ತಾ ಬಂದಿರುವುದನ್ನು ಹಾಗೂ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲಾರದ ಮನಸ್ಥಿತಿಯನ್ನು ಬಿಂಬಿಸುತ್ತವೆ. ಬೊಮ್ಮಲಿಂಗನ ಈ ಯೋಚನೆ ಇನ್ನಷ್ಟು ವಿಸ್ತರಿಸಿಕೊಂಡು ಆ ರತವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತದೆ. ಅದರ ಪರಿಣಾಮ ಕವಡೆ ಆಟ ಆಡಬೇಕೆಂದು ಗೊಲ್ಲರನ್ನು ವಿನಂತಿಸುತ್ತಾನೆ. ಗೊಲ್ಲರಾದರೂ ನಮಗೆ ಕವಡೆ ಆಡಲು ಬರುವುದಿಲ್ಲವೆಂದು ನಿರಾಕರಿಸುತ್ತಾರೆ. ಬೊಮ್ಮಲಿಂಗ ಮಾತ್ರ ಬಿಡಲೊಲ್ಲ. ಕೊನೆಗೆ ಕವಡೆ ಆಡಲು ಒಪ್ಪಿಗೆಯಾಗುತ್ತದೆ. ಆಗ ಕಾಟಮುಲಿಂಗ-ಚಿತ್ತೂರಲಿಂಗ ಅವರು ಹೇಳುವ ಮಾತುಗಳು ಬ್ರಾಹ್ಮಣರ ಅಹಂಕಾರವನ್ನು ಕೆದಕುತ್ತವೆ. ಕಾಡುಗೊಲ್ಲರಾದ ನಾವು ಅತ್ಯಂತ ಮಡಿವಂತರಾಗಿದ್ದು, ನೀವು ನಮ್ಮಷ್ಟು ಮಡಿವಂತರಲ್ಲ, ನೀವು ಸಿದ್ಧಿಯಿಲ್ಲದೆ ನಮ್ಮ ಹತ್ತಿರ ಬಂದರೆ ಸೂತಕವಾಗುತ್ತೆ ಎನ್ನುತ್ತಾರೆ.
ಬಾರಯ್ಯ ಆಡೋಣ
ತಣ್ಣೀರು ತಡಿಬಟ್ಟೆ ಒಳಗೆ
ಹುಲ್ಕಚ್ಚಿ ಕಲ್ಕಚ್ಚಿ
ಗೋವು ಬೇವಾಕ್ಕೊಂಡು
ಹತ್ತುರುಕೆ ಬಂದು ಕುಂತಕಳಯ್ಯ ಬ್ರಾಹ್ಮಣ (ಜುಂಜಪ್ಪ ಪುಟ: 16)
ವಿಶೇಷವೆಂದರೆ, ಬ್ರಾಹ್ಮಣ ಬೊಮ್ಮಲಿಂಗ ಅವರು ಹೇಳಿದಂತೆಯೇ ಮಾಡುತ್ತಾನೆ. ಆಟದಲ್ಲಿ ಗೊಲ್ಲರು 'ಬಂಗಾರದ ರಥವನ್ನು' ಬ್ರಾಹ್ಮಣ ಬೊಮ್ಮಲಿಂಗ 'ತನ್ನ ತಂಗಿ' ಗಂಗಿಮಾಳವ್ವನನ್ನು ಪಣಕ್ಕಿಡುತ್ತಾರೆ. ಇಲ್ಲಿ ಪಣಕ್ಕಿಟ್ಟಿರುವ ವ್ಯಕ್ತಿ ಮತ್ತು ವಸ್ತುಗಳು ಕೇವಲ ತಾಂತ್ರಿಕವಾದಂತಹವು ಎನಿಸುವುದಿಲ್ಲ. ಇವು ಎರಡು ಸಮುದಾಯಗಳ ಮನದಾಳದ ನೋವು-ನಲಿವು, ಕನಸು-ಕನವರಿಕೆಗಳೆಂದು ಸ್ಪಷ್ಟವಾಗುತ್ತವೆ. ಬ್ರಾಹ್ಮಣರು, ಪೌರೋಹಿತ್ಯದ ಹಕ್ಕುದಾರಿಕೆಯನ್ನು ಗೊಲ್ಲರಿಗೆ ಬಿಟ್ಟುಕೊಡಬಾರದೆಂಬ ಯೋಚನೆಯಲ್ಲಿದ್ದರೆ; ಗೊಲ್ಲರು, ತಮಗೆ ದೈವಿಕವಾಗಿ ದಕ್ಕಿದ ಧಾರ್ಮಿಕ ಶಕ್ತಿಯ ಪರಿಕರಗಳನ್ನು ತಮ್ಮ ವಶದಲ್ಲಿಯೇ ಇರಿಸಿಕೊಳ್ಳಲು ಬಯಸಿದ್ದಾರೆ. ಜೊತೆಗೆ ಪರಂಪರಾಗತವಾಗಿ ಧಾರ್ಮಿಕ ಅಧಿಕಾರ ನಡೆಸಿದ ಸಮೂಹವೊಂದರ 'ಪಾವಿತ್ರ್ಯನಾಶ' ಮಾಡಿ, ಅದಕ್ಕಿದ್ದ ಶಕ್ತಿಯನ್ನು ತಾವು ಪಡೆಯಬೇಕೆಂಬ ಹಂಬಲಗಳು ಇಲ್ಲಿ ಕಂಡುಬರುತ್ತವೆ. ಅದಕ್ಕಾಗಿಯೇ ಗಂಗಿಮಾಳಮ್ಮ ಪಣಕ್ಕಿಟ್ಟ ವಸ್ತುವಾಗಿದ್ದಾಳೆ. ಇತಿಹಾಸದಲ್ಲಿ ಈವರೆಗೂ ನಡೆದಿರುವ ಸಂಘರ್ಷಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಒಂದು ಸಮುದಾಯದ ಪ್ರಭುತ್ವವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ಆ ಸಮುದಾಯದೊಂದಿಗೆ ವಿವಾಹ ಸಂಬಂಧ ಬೆಳೆಸುವುದು ಸಾಮಾನ್ಯ ಕ್ರಮ. ಇಂಥದ್ದೇ ಮನೋಧರ್ಮ ಬ್ರಾಹ್ಮಣ ಮತ್ತು ಗೊಲ್ಲರ ಈ ಪಗಡೆಯಾಟದಲ್ಲೂ ಕಂಡುಬರುತ್ತದೆ.
ಕೊನೆಗೆ ಪಗಡೆಯಾಟದಲ್ಲಿ ಬ್ರಾಹ್ಮಣರ ಬೊಮ್ಮಲಿಂಗನಿಗೆ ಸೋಲಾಗುತ್ತದೆ. ಅದಕ್ಕಾಗಿ ಗಂಗಿಮಾಳವ್ವನನ್ನು ಗೊಲ್ಲರಿಗೆ ಒಪ್ಪಿಸಬೇಕಾಗುತ್ತದೆ. ಆದರೆ ಬೊಮ್ಮಲಿಂಗ ತಂಗಿಯನ್ನು ಗೊಲ್ಲರಿಗೆ ಕೊಟ್ಟರೆ ನಾವು ಬತಗೆಡುತ್ತೇವೆಂದು ಭಾವಿಸಿಕೊಂಡು ಅಗ್ರಹಾರದೊಳಗೆ ಅವಿತುಕೊಳ್ಳುತ್ತಾನೆ. ಇದು ಗೊಲ್ಲರಿಗೆ ಕೋಪ ತರಿಸುತ್ತದೆ. ಕುಪಿತರಾದ ಕಾಟಮುಲಿಂಗ ಬ್ರಾಹ್ಮಣರು ಮಾತಿನಂತೆ ನಡೆದುಕೊಳ್ಳದೆ ಅವರ ಬತದ ಬಗ್ಗೆ ಯೋಚಿಸಿದ್ದಾರೆ. ಹಾಗಾಗಿ ಅವರ ಬತವನ್ನೇ ನಾವು ಹಾಳುಮಾಡಬೇಕೆಂದು ಹೇಳುತ್ತಾನೆ. ಬತಹಾಳುಮಾಡುವುದಕ್ಕೆ ಹೂಡವ ತಂತ್ರ ಅತ್ಯಂತ ವಿಶಿಷ್ಟವಾಗಿದೆ. ಒಂದು ಕುರಿಯನ್ನು ಕೊಯ್ದು ಅದರ ಕೊಬ್ಬನ್ನು ಕಾಯಿಸಿ ಅದು ತುಪ್ಪವೆಂದು ಬ್ರಾಹ್ಮಣರಿಗೆ ತಿನ್ನಿಸುವುದು. ಗೊಲ್ಲರ ಈ ತಂತ್ರಕ್ಕೆ ಬೊಮ್ಮಲಿಂಗ ಸುಲಭವಾಗಿ ಬಲಿಬೀಳುತ್ತಾನೆ. ಆಗ ಬೊಮ್ಮಲಿಂಗನನ್ನು ಕುರಿತು ಕಾಟಮುಲಿಂಗ, ಚಿತ್ತೂರಲಿಂಗರು ಕೇಳುವ ಪ್ರಶ್ನೆ ಮಾಮರ್ಿಕವಾಗಿದೆ.
ಅಯ್ಯೋ ಬ್ರಾಹ್ಮಣ
ನೀನು ನನಗೆ ತಂಗಿಕೊಟ್ಟು ಮದುವೆ ಮಾಡಿದ್ರೆ
ಮಾತ್ರ ನಿನಗೆ ಕುಲ ಕೆಡತೈತೆ
ಮಾಂಸತಿಂದ್ರೆ ಕುಲ ಕೆಡೋದಿಲ್ಲವೇನೋ? (ಜುಂಜಪ್ಪ, ಪುಟ: 21)
ಇದರಿಂದ ಬೊಮ್ಮಲಿಂಗನ ಆತ್ಮ ಸಾಕ್ಷಿಗೆ ದಕ್ಕೆಯಾಗುತ್ತದೆ. ತಾಳಲಾರದ ಬೊಮ್ಮಲಿಂಗ ತಂಗಿಯನ್ನು ಕಾಡುಗೊಲ್ಲರಿಗೆ ಕೊಟ್ಟು ಮದುವೆ ಮಾಡುತ್ತಾನೆ. ಬಂಗಾರದ ಪಂಚೈದು ಕಳಸಗಳುಳ್ಳ ರಥದ ಆಸೆಗೆ ಬಿದ್ದ ಬ್ರಾಹ್ಮಣ ಕೊನೆಗೆ ತನ್ನ ಕರುಳ ಸಂಬಂಧವನ್ನು ಕಳೆದುಕೊಂಡಿದ್ದು, ಆ ಮೂಲಕ ಧಾರ್ಮಿಕ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿದ್ದು ಉಲ್ಲೇಖಾರ್ಹವಾಗಿದೆ. ಒಟ್ಟಾರೆ ಚಿತ್ತೂರಲಿಂಗ ಕಾಟಮುಲಿಂಗರು ಬ್ರಾಹ್ಮಣರ ಹೆಣ್ಣನ್ನು ಲಗ್ನವಾಗುವುದರ ಮೂಲಕ ಬ್ರಾಹ್ಮಣರಲ್ಲಿದ್ದ ಧಾರ್ಮಿಕ ಹಕ್ಕುದಾರಿಕೆಯನ್ನು ವಶಪಡಿಸಿಕೊಳ್ಳುತ್ತಾರೆ. ಚಿತ್ತೂರಲಿಂಗ ಹೇಳುವ ಒಂದು ಮಾತು ಮೇಲಿನ ಸಂಗತಿಯನ್ನು ಸ್ಪಷ್ಟಪಡಿಸುತ್ತದೆ. ಮಾರುಮುತ್ತಣ್ಣನ ಮದುವೆಯ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರ ಹತ್ತಿರ ಶಾಸ್ತ್ರ ಕೇಳುವುದೆಂದು ಅಭಿಪ್ರಾಯ ಬಂದಾಗ, ಚಿತ್ತೂರಲಿಂಗ ಹೀಗೆ ನುಡಿಯುತ್ತಾನೆ.
ಲೇ ಆರೂರು ಬತುವ ಅಳುದು
ಅವರ ಮಗಳು ಗಂಗಿಮಾಳಮ್ಮ ನನ್ನ
ನಾನೇ ಮದುವೆ ಆಗಿದ್ದೀನಿ
ನಿವ್ಯಾಕೆ ಬಾಂಬ್ರ ಹತ್ತಿರಕೆ
ಪುರೋಹಿತರನ್ನ ಕೇಳಾದಕೆ ಹೋಗ್ತಿರೋ
---------------------------
ಹೋಗಬ್ಯಾಡ್ರಿ ಬ್ರಾಹ್ಮರತ್ತುರಕೆ ಅವ್ರತ್ತುರಕ್ಕೆ
ನಾನೇಳಿದಂಗೆ ಮಾಡಿರೆಂದು (ಜುಂಜಪ್ಪ, ಪುಟ: 43) ಅವರದೇ ಆದ ಶಾಸ್ತ್ರಪದ್ಧತಿಯನ್ನು ಸೂಚಿಸುತ್ತಾನೆ.
ಒಟ್ಟಾರೆ, ಹೇಳುವುದಾದರೆ ಬ್ರಾಹ್ಮಣರ ಅತಿಯಾಸೆಯನ್ನು ಬಯಲುಮಾಡುವ, ಬ್ರಾಹ್ಮಣ ಕುಲದ ಪಾವಿತ್ರ್ಯ ನಾಶಮಾಡಿ ತಾವು ಮೌಲ್ಯೀಕರಣಗೊಳ್ಳುವ ಗೊಲ್ಲ ಸಮುದಾಯದ ಕಥನ ಇಲ್ಲಿ ಸಿಗುತ್ತದೆ. ಈ ಸಂಘರ್ಷದಲ್ಲಿ ಗೊಲ್ಲರು ಬ್ರಾಹ್ಮಣ ಕೈಯಿಂದ ಧಾಮರ್ಿಕ ಅಧಿಕಾರವನ್ನು ಪಡೆದಿದ್ದು ಗಮನಾರ್ಹವಾದ ಸಂಗತಿ. ಇಲ್ಲೆಲ್ಲ ಪ್ರತಿ ಸಂಸ್ಕೃತಿ ನಿಮರ್ಾಣದ ಸಾಧ್ಯತೆಯ ನೆಲೆಗಳು ಕಂಡುಬರುತ್ತವೆ.
 ತಾಳೇದುರುಗಿಯೊಡನೆ ಸಂಘರ್ಷ
ಜುಂಜಪ್ಪನ ಪುರಾಣ ಶೈವ ಮತ್ತು ವೈಷ್ಣವ ಸಂಪ್ರದಾಯಗಳಿಂದ ಹುಟ್ಟಿದ ಮಿಶ್ರ ಪುರಾಣವಾಗಿದೆ(ತೀ.ನಂ. ಶಂಕರನಾರಾಯಣ, ಜಾನಪದ ಸಾಹಿತ್ಯ ದರ್ಶನ-9, ಜುಂಜಪ್ಪ, ಪುಟ: 77, 1982) ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರ ಅಭಿಮತ. ಇದರ ಜೊತೆಗೆ ಜುಂಜಪ್ಪನ ಕಾವ್ಯ ಸಂಪ್ರದಾಯದಲ್ಲಿ ಶೈವ, ವೈಷ್ಣವ ವಿರೋಧಿಯಾಗಿದ್ದಾನೆ. ಆದರೆ ಭಕ್ತರು ಮಾತ್ರ ಜುಂಜಪ್ಪನನ್ನು ವಿಷ್ಣುವಾಗಿ ಕಾಣುತ್ತಾರೆ (ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, ಪುಟ: 45, 1999) ಎನ್ನುವ ಅಭಿಪ್ರಾಯವೂ ಇದೆ. ಇಂಥ ಅಭಿಪ್ರಾಯ ಭೇದಗಳು ಏನೇ ಇದ್ದರೂ 'ಜುಂಜಪ್ಪನ ಕಾವ್ಯ' ಸಂಪ್ರದಾಯದಲ್ಲಿ ಶೈವ, ವೈಷ್ಣವ ಧರ್ಮಗಳ ಸಂಘರ್ಷ ಹೆಚ್ಚು ಕಾಣುವುದಿಲ್ಲ. ಬದಲಿಗೆ ಇವೆರಡೂ ಅರ್ಥಪೂರ್ಣ ಸಂಯೋಗವನ್ನು ಸಾಧಿಸಿಕೊಂಡಿವೆ. ತಮ್ಮ ಉಳಿವಿಕೆಗಾಗಿ ಇತರೆ ದೈವಗಳೊಡನೆ ಜತೆಗೂಡಿ ಹೋರಾಡಿವೆ. ಆ ಮೂಲಕ ಸಾಂಸ್ಥಿಕ ಧರ್ಮಗಳ ಅರ್ಥವನ್ನು ಮೀರಿದ ಧರ್ಮಕಲ್ಪನೆಯನ್ನು ಕಾಣಿಸುತ್ತದೆ. ಇಂಥ ಪ್ರಕ್ರಿಯೆಗೆ ಜುಂಜಪ್ಪನ ಕಾವ್ಯದ 'ತಾಳೇದುರುಗಿ ಸಂದು' ಅತ್ಯುತ್ತಮ ಉದಾಹರಣೆ.
ಕಾವ್ಯ ಚಿತ್ರಿಸಿರುವಂತೆ, ತಾಳೇದುರುಗಿ ಅಂದಿನ ಇಡೀ ಧಾರ್ಮಿಕ ವಲಯವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಸ್ತ್ರೀ ದೇವತೆ. ಆರು ತಿಂಗಳು ಮಲಗುವ, ಆರು ತಿಂಗಳು ಎದ್ದಿರುವ ವಿಚಿತ್ರ ರಾಕ್ಷಸ ಸ್ವಭಾವದವಳು. ಈ ದೇವತೆ ತನ್ನ ಭಕ್ತರು, ಭಕ್ತರಲ್ಲದವರು ಎಂಬ ಭೇದ-ಭಾವವಿಲ್ಲದೆ ಎಲ್ಲರನ್ನೂ ನುಂಗಿ ನೀರು ಕುಡಿಯುತ್ತಿದ್ದಳು. ಇದರ ಪರಿಣಾಮವಾಗಿ ಭಕ್ತರಿಂದ ಮೊದಲ ಪೂಜೆ ಅವಳಿಗೆ ದಕ್ಕಿತು. ಇದರಿಂದ ಲಿಂಗಪ್ಪ (ಶೈವ), ರಂಗಪ್ಪ (ವೈಷ್ಣವ) ಮತ್ತು ಮಾರಿಗಳಂತಹ ಹಲವು ದೈವಗಳಿಗೆ ಸೂಕ್ತ ಪ್ರಾತಿನಿದ್ಯ ಇಲ್ಲದಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜುಂಜಪ್ಪ ತಾಳೇದುರಿಗಿಯೊಡನೆ ಸಂಘರ್ಷ ನಡೆಸಬೇಕಾದ ಸಂದರ್ಭ ಒದಗಿಬರುತ್ತದೆ. ಆಗ ಜುಂಜಪ್ಪ ತಾಳೇದುರಿಗಿಯ ನಾಶಕ್ಕೆ ಲಿಂಗಪ್ಪ, ರಂಗಪ್ಪ, ಮಾರಿಯರನ್ನು ಸೇರಿಸಿಕೊಂಡು ದೊಡ್ಡ ಶಕ್ತಿ ಸಮೂಹ ನಿಮರ್ಾಣಮಾಡುತ್ತಾನೆ. ತಾಳೇದುರುಗಿಗೂ ಹಾಗು ಜುಂಜಪ್ಪನಿಗೂ ನಡೆಯಬೇಕಾದ ಸಂಘರ್ಷ ಈಗ ಸಮೂಹದ ಕಡೆ ತಿರುಗುತ್ತದೆ. ಈ ರೀತಿ ಒಗ್ಗಿಸಿಕೊಂಡಿದ್ದು ಜುಂಜಪ್ಪನ ವಿಶಿಷ್ಟ ಆಲೋಚನಾ ದೃಷ್ಟಿಯನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲ ಇದೇ ಸಂದರ್ಭಕ್ಕೆ ಲಿಂಗಪ್ಪಗಳು, ರಂಗಪ್ಪಗಳು ಮತ್ತು ಮಾರಿಯರು ಸೇರಿ ಒಂದು ಪರಿವಾರವನ್ನೇ ನಿರ್ಮಾಣ ಮಾಡಬೇಕೆಂಬ ಆಶಯ ಇಲ್ಲಿದೆ.
ಒಟ್ಟಾರೆ, ತಾಳೇದುರುಗಿಗೂ ಮತ್ತು ಜುಂಜಪ್ಪನ ಪರಿವಾರದ ದೇವತೆಗಳಿಗೂ ಸಂಘರ್ಷ ಏರ್ಪಟ್ಟು ಪುರ್ಲಳ್ಳಿ ಭೂತ ತಾಳೇದುರುಗಿಯನ್ನು ಕೊಲ್ಲುತ್ತಾನೆ. ಇದರಿಂದ ತಾಳೇದುರುಗಿಯ ಪ್ರಭಾವದಿಂದ ತಪ್ಪಿದ್ದ ಪೂಜೆ ಉಳಿದ ದೇವತೆಗಳಿಗೂ ಸಲ್ಲುವಂತಾಗುತ್ತದೆ. ಇದನ್ನು ಕಾವ್ಯ ಹೀಗೆ ಶ್ಲಾಘಿಸುತ್ತದೆ:
ಅವಳ್ನ ಮಹಾನುಭಾವ ಪುರ್ಲಳ್ಳಿ ಭೂತ ಹೊಡೆದಾ
ಅವನಿಂದ ನಾವೆಲ್ಲ ಪೂಜೆ ತಕಂಬಕೆ ಅವಕಾಶವಾಯ್ತು
ಇಲ್ಲ ಅಂದಿದ್ರೆ ಅವುಳು ಮುಂದೆ
ನಮ್ಮ ಬಾಲ ಏನೂ ನಡೀತಿರಲಿಲ್ಲ (ಜುಂಜಪ್ಪ, ಪುಟ: 594)
ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಗಮನಿಸಬಹುದು. ತನಗೆ ಅಲಕ್ಷೆ ಮಾಡಿದ್ದಕ್ಕೆ ಪುರ್ಲಳ್ಳಿ ಭೂತ ಸಾಕಷ್ಟು ಕುಪಿತಗೊಳ್ಳುತ್ತಾನೆ. ತಾಳೇದುರುಗಿಯ ವಿರುದ್ಧ ನಡೆದ ಹೋರಾಟದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ನಿರಾಕರಿಸುತ್ತಾನೆ. ಕೊನೆಗೆ ಪುರ್ಲಳ್ಳಿ ಭೂತನನ್ನು ಬಿಟ್ಟು ತಾಳೇದುರುಗಿಯ ವಿರುದ್ಧ ಹೋರಾಟ ಮಾಡಲಾಗುತ್ತದೆ. ಹೋರಾಟದಲ್ಲಿ ಜುಂಜಪ್ಪನಿಗೆ ಲಿಂಗಪ್ಪ, ರಂಗಪ್ಪ, ಮಾರಿಯರು ಕೂಡ ಸಹಾಯ ಮಾಡಲಾಗುವುದಿಲ್ಲ. ಬದಲಿಗೆ ತಾಳೇದುರುಗಿಯನ್ನು ಕೊಲ್ಲುತ್ತಾನೆ. ನಂತರ ಪುರ್ಲಳ್ಳಿ ಭೂತ, ಜುಂಜಪ್ಪನಿಗೆ ಮೋಸ ಮಾಡಿದ ಎಲ್ಲಾ ದೈವಗಳಿಗು ಬುದ್ಧಿಕಲಿಸುತ್ತಾನೆ.
ಮತ್ತೊಂದು ಸಂಗತಿ ಇಲ್ಲಿ ಅತಿ ಮುಖ್ಯವಾಗಿದೆ. ದುರುಗಿಯ ನಾಮಾವಶೇಷ ಮಾಡಬೇಕು ಎಂಬುದು. ಹಾಗೆ ಮಾಡುವುದೆಂದರೆ ದುರುಗಿಯನ್ನು ಹಾಗೂ ಅವಲ ಗುಡಿಯನ್ನು ನಾಶಮಾಡಿದರೆ ಸಾಲದು, ಇದಿಷ್ಟೇ ಆದರೆ ದುರುಗಿಯನ್ನು ಮತ್ತೆ ಮೂತರ್ಿರೂಪದಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ದುರುಗಿಯನ್ನು ಸಂಪೂರ್ಣ ನಾಶಮಾಡುವುದೆಂದರೆ, ಅದು ನೆಲೆಸಿದ ಇಡೀ ಊರನ್ನೇ ನಾಶಮಾಡಬೇಕೆಂದು ಪುರ್ಲಳ್ಳಿಭೂತ ಹಾಗೂ ಜುಂಜಪ್ಪ ತೀಮರ್ಾನಿಸುತ್ತಾರೆ. ತಮಗಾಗದ ಸ್ತ್ರೀ ದೇವತೆಯಾದ ತಾಳೇದುರುಗಿ ಮೂತರ್ಿರೂಪದಲ್ಲಿಯೂ ಇರಕೂಡದೆಂಬುದು ಇಲ್ಲಿಯ ಆಶಯ.
ಮೇಲಿನ ಎಲ್ಲಾ ಅಂಶಗಳು, ವಿವಿಧ ತತ್ವಗಳ ನೆಲೆಗಳಿಂದ ಬಂದ ದೈವಗಳು ಒಂದಾಗಲು ಆಗಿರಬಹುದಾದ ಒಕ್ಕೂಟದಂತೆ ಕಾಣಿಸುತ್ತದೆ. ಈ ಎಲ್ಲಾ ಒಕ್ಕೂಟ ಮತ್ತು ವೈರುಧ್ಯಗಳನ್ನು ಮೀರಿ ಒಂದಾಗುವುದು ಸಹ ಇಲ್ಲಿ ಗಮನಾರ್ಹ ಸಂಗತಿ.
ಪರಾಮರ್ಶನ ಗ್ರಂಥಗಳು
1. ಚಲುವರಾಜು, ಸಂ : ಜುಂಜಪ್ಪ,  1997, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ
2. ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, 1993
ಕನರ್ಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
3. ಕೇಶವಶರ್ಮ ಕೆ., ಶಬ್ದರೇಖೆ, 1998, ಅಭಿನವ ಪ್ರಕಾಶನ , ಬೆಂಗಳೂರು
4. ಮನೋಹರ ಚಂದ್ರಪ್ರಸಾದ್ ಡಿ., ಪ್ರತಿಸಂಸ್ಕೃತಿ ಆಂತೋನಿಗ್ರಾಂಶ್ಚಿಯ ಚಿಂತನೆಗಳು, 2002, ರಚನಾ ಪ್ರಕಾಶನ ಬೆಂಗಳೂರು
5. ರಾಜಾರಾಮ ಹೆಗಡೆ, ಲೌಕಿಕ-ಅಲೌಕಿಕ, 2001, ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
6. ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, 1999,ಸಿ.ವಿ.ಜಿ. ಪ್ರಕಾಶನ, ಬೆಂಗಳೂರು
7. ತೀ.ನಂ. ಶಂಕರನಾರಾಯಣ, ಜುಂಜಪ್ಪ(ಲೇಖನ) 
ಇದರಲ್ಲಿ: ಜಾನಪದ ಸಾಹಿತ್ಯ ದರ್ಶನ-9, 1982, ಪ್ರಸಾರಾಂಗ, ಕನರ್ಾಟಕ ವಿಶ್ವವಿದ್ಯಾಲಯ, ಧಾರವಾಡ

                                                                                                            ಡಾ.ಎಸ್.ಎಂ.ಮುತ್ತಯ್ಯ