Monday 1 October 2012

ಕನ್ನಡ ಜನಪದ ಸಂಸ್ಕೃತಿ-1 ಕನ್ನಡ, ಜನಪದ ಹಾಗೂ ಸಂಸ್ಕೃತಿ



'ಕನ್ನಡ ಜನಪದ ಸಂಸ್ಕೃತಿ' ವಿಷಯದ ಚಚರ್ೆಗೂ ಮುನ್ನ ಇಲ್ಲಿ ಬಳಸಲಾಗಿರುವ ಶಬ್ದಗಳ ಚರಿತ್ರೆ ಮತ್ತು ಅರ್ಥ ವಿಸ್ತಾರತೆಯನ್ನು ತಿಳಿಯುವುದು ಅಗತ್ಯ. 'ಕನ್ನಡ ಜನಪದ ಸಂಸ್ಕೃತಿ' ಎಂಬ ಶೀಷರ್ಿಕೆಯೊಳಗೆ 'ಕನ್ನಡ', 'ಜನಪದ' ಮತ್ತು 'ಸಂಸ್ಕೃತಿ' ಎಂಬ ಮೂರು ಶಬ್ದಗಳಿವೆ. ಇವುಗಳು ಬೆಳೆದು ನಿಂತಿರುವ ಬಗೆಯನ್ನು ಅವಲೋಕಿಸಿದರೆ ಈ ಮೂರು ಶಬ್ದಗಳು 'ಶಬ್ದ' ಎನ್ನುವ ಅರ್ಥದ ಆಚೆಗಿನ ಪರಿಭಾಷೆ, ಪರಿಕಲ್ಪನೆ ಎಂಬ ವಿಶಾಲ ನೆಲೆಯನ್ನು ಪಡೆದುಕೊಂಡಿವೆ. ಇವುಗಳನ್ನು ಕುರಿತಂತೆ ವಿದ್ವತ್ ವಲಯದಲ್ಲಿ ಮಾತ್ರವಲ್ಲ ಜನ ಸಾಮಾನ್ಯರ ವಲಯದಲ್ಲಿ ಕೂಡ ಭಿನ್ನ ಬಗೆಯ ಬೃಹತ್ ಪ್ರಮಾಣದ ಚಚರ್ೆಗಳು ನಡೆದಿವೆ. ಈ ಬಗೆಯ ವೈವಿಧ್ಯಮಯವಾದ ಚಚರ್ೆಗಳ ವಿಫುಲತೆ ಇವುಗಳ ಅರ್ಥ ಗ್ರಹಿಕೆಗೆ ಸಹಕಾರಿಯಾಗುವುದಕ್ಕಿಂತ ಓದುಗರಲ್ಲಿ ಗೊಂದಲ ಮೂಡಿಸುವಂತಾಗಿದೆ. ಹಾಗಾಗಿ ಈ ಪರಿಭಾಷೆಗಳ ಬಗೆಗೆ ಮಾತನಾಡುವಾಗ ಬಂದಿರುವ ವ್ಯಾಖ್ಯಾನಗಳ ವಿವಿಧ ನೆಲೆಗಳಲ್ಲಿ ಯಾವುದಾದರು ಒಂದು ನೆಲೆಯ ಜಾಡನ್ನು ಹಿಡಿದು ಸ್ಪಷ್ಟ ಅರ್ಥಕ್ಕೆ ಬದ್ಧವಾಗದೇ ಹೋದರೆ ಚಚರ್ೆ ನಿದರ್ಿಷ್ಟ ಹಾಗೂ ಸ್ಪಷ್ಟವಾದ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಾಗಲಾರದು. ಆದ್ದರಿಂದ ಇಲ್ಲಿ ಮೊದಲಿಗೆ ಈ ಪರಿಭಾಷೆ-ಪರಿಕಲ್ಪನೆಗಳ ಬಗೆಗೆ ನಡೆದಿರುವ ವಿಸ್ತಾರವಾದ ಚಚರ್ೆಗಳನ್ನು ಆಧರಿಸಿ ನಿದರ್ಿಷ್ಟವಾದ ಅರ್ಥಗಳನ್ನು ಕಂಡುಕೊಳ್ಳಬಹುದಾಗಿದೆ. 
ಕನ್ನಡ ಎಂಬುದು ಬರೀ ಹೆಸರಲ್ಲವೋ 
ಸಾಮಾನ್ಯವಾಗಿ ಇಂದು ನಾವೆಲ್ಲರೂ 'ಕನ್ನಡ'ವನ್ನು ಭಾಷಾವಾಚಿಕೆಯಾಗಿ, 'ಕನರ್ಾಟಕ'ವನ್ನು ಪ್ರದೇಶವಾಚಿಕೆಯಾಗಿ ಬಳಸುತ್ತಿದ್ದೇವೆ. ಆದರೆ ಕನ್ನಡ ಚಿಂತನಾ ಚರಿತ್ರೆಯೊಳಗೆ ಕನ್ನಡ ಮತ್ತು ಕನರ್ಾಟಕಕ್ಕೆ ಈ ರೀತಿಯ ಸ್ಪಷ್ಟ ವ್ಯತ್ಯಾಸಗಳಿದ್ದಂತೆ ಕಾಣುವುದಿಲ್ಲ. ಉದಾ: ಕವಿರಾಜಮಾರ್ಗಕಾರ ಕನ್ನಡ ಶಬ್ದವನ್ನು ಭಾಷೆ ಹಾಗೂ ಪ್ರದೇಶಗಳೆರಡಕ್ಕೂ ಬಳಸಿದ್ದಾನೆ. ಪÙಳಗನ್ನಡ' ಎಂದಾಗ ಭಾಷೆಯನ್ನು ಕುರಿತು ಹೇಳಿದರೆ; 'ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ', 'ಒಕ್ಕುಂದದ ನಡುವಣ ನಾಡೆ ಕನ್ನಡದ ತಿರುಳ್' ಎಂಬಲ್ಲಿ ಪ್ರದೇಶವನ್ನು ಹೇಳಿದ್ದಾನೆ. ಹಾಗೆಯೇ ಆಂಡಯ್ಯ ಹೇಳುವ 'ಕನ್ನಡಮೆನಿಪ್ಪ ನಾಡು ಚಲುವಾಯ್ತು' ಎಂಬಲ್ಲಿ ಪ್ರದೇಶ ಸೂಚಿತವಾದರೆ ಕನ್ನಡ, ಕಮ್ಮೆ, ತೆಲಗ, ತಿಗುಳ ಎಂಬ ನಿಜಗುಣ ಶಿವಯೋಗಿಗಳ ಪ್ರಯೋಗದಿಂದ ಕನ್ನಡ ಶಬ್ದ ಜನಾಂಗ ಅಥವಾ ಕುಲವನ್ನು ಸೂಚಿಸುತ್ತದೆ. ಮೇಲಿನ ಉಲ್ಲೇಖಗಳಿಂದ ಕನ್ನಡ ಎಂಬುದೊಂದೇ ಶಬ್ದ ಭಾಷೆ-ಪ್ರದೇಶ ಹಾಗೂ ಜನಾಂಗದ ಸೂಚಕವಾಗಿ ಬಳಕೆಯಾಗಿರುವುದು ಕಂಡುಬರುತ್ತದೆ. ಹಾಗಾದರೆ ಕನರ್ಾಟಕ ಶಬ್ದ ಬಳಕೆಯಾಗಿರುವ ಕ್ರಮ ಯಾವುದು? ಕನ್ನಡ, ಕನರ್ಾಟಕ ಶಬ್ದಗಳ ಪರಸ್ಪರ ಸಂಬಂಧವೇನು? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳು ಬಯಸುವ ಉತ್ತರಕ್ಕಾಗಿ ಕನ್ನಡ ಭಾಷೆಯ ಪ್ರಾಚೀನ ಇತಿಹಾಸಕ್ಕೆ ಹೋಗಬೇಕಾಗುತ್ತದೆ. ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಾಗ ಮಹಾಭಾರತದ ಸಭಾಪರ್ವ, ಭೀಷ್ಮಪರ್ವಗಳಲ್ಲಿ 'ಕನರ್ಾಟಕ' ಎಂಬ ಹೆಸರು ದೊರೆಯುತ್ತಾದರೂ ಮಹಾಭಾರತಕ್ಕಿಂತ ಮೊದಲಿನ ಪ್ರಾಚೀನ ತಮಿಳು ಶಾಸನ ಮತ್ತು ಕೃತಿಗಳಲ್ಲಿ ಕರುನಾಟರ್, ಕಣರ್ಾಟರ್, ಕನರ್ಾಡು ಎಂಬ ಪದಗಳು ದೊರೆಯುವುದರಿಂದ ಇವೇ ಈ ನಾಡಿನ ಭಾಷೆಯ ಮೂಲ ಹೆಸರುಗಳೆಂಬುದು ವಿದ್ವಾಂಸರ ಅಭಿಮತ. ಇದನ್ನು ಒಪ್ಪುವುದಾದರೆ ಕನರ್ಾಟಕ ಎಂಬ ಶಬ್ದ ರೂಪತಳೆದ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ 'ಕನ್ನಡದ ಹೆಸರುಗಳು ಕನ್ನಡ ಸಾಹಿತ್ಯದಲ್ಲಿ ಪ್ರಯೋಗ ಕಾಣುವುದಕ್ಕೂ ಮೊದಲು ಸಂಸ್ಕೃತ ಶಾಸನಗಳು ಹಾಗೂ ಸಾಹಿತ್ಯದಲ್ಲಿ ಸಂಸ್ಕೃತೀಕರಣವನ್ನು ಪಡೆದು ಗೋಚರವಾಗುತ್ತವೆ' ಎಂಬ ಕಾರಣವನ್ನು ಗಮನಿಸಿದರೆ ಉತ್ತರ ಸಿಗುತ್ತದೆ. ಯಾವುದೇ ಭಾಷೆ ಮೊದಲೋ ಅಥವಾ ಅದನ್ನು ಮಾತನಾಡುವ ಜನಾಂಗ ಮೊದಲೋ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬೇಕು. ಈ ಪ್ರಶ್ನೆಗೆ ಉತ್ತರ ಸುಲಭ. ಯಾವಾಗಲೂ ಜನಾಂಗ ಮೊದಲು ಆನಂತರ ಭಾಷೆ ಹಾಗಾಗಿ 'ಕನ್ನಡ' ಶಬ್ದ ಕನ್ನಡ ಕರುನಾಡರ್ ಎನ್ನುವ ಬಹುನಾಮಗಳಿಂದ ಜನಾಂಗವನ್ನು ಸೂಚಿಸುವ ಶಬ್ದವಾಗಿತ್ತು. ಮೇಲೆ ಹೇಳಿದಂತೆ ಈ ಶಬ್ದ ಸಂಸ್ಕೃತೀಕರಣದಿಂದಾಗಿ ಕಣರ್ಾಟಕ, ಕನರ್ಾಟಕ ಎಂಬ ಪ್ರದೇಶ ಸೂಚಕ ಶಬ್ದವಾಗಿ ಬಳಕೆಯಾಗಿದೆ ಎಂಬ ವಾದ ಸರಿ ಎನಿಸುತ್ತದೆ. ಈ ಶಬ್ದ ಈಚಿನ ದಿನಗಳಲ್ಲಿ ಹಿಂದಿಗಿಂತಲೂ ಇನ್ನೂ ವಿಶಾಲ ನೆಲೆಗೆ ತನ್ನ ಅರ್ಥವನ್ನು ವಿಸ್ತರಿಸಿಕೊಂಡಿದೆ. ಕನ್ನಡ ಮನಸ್ಸು, ಕನ್ನಡ ಸಂಸ್ಕೃತಿ, ಕನ್ನಡ ಪ್ರಜ್ಞೆ, ಕನ್ನಡತನ ಎಂಬಿತ್ಯಾದಿ ಶಬ್ದಗಳ ಬಳಕೆಯನ್ನು ಕಂಡರೆ ಇದು ಸ್ಪಷ್ಟವಾಗುತ್ತದೆ. ಒಟ್ಟಾರೆ ಕನ್ನಡ, ಕನರ್ಾಟಕ ಎಂಬ ಶಬ್ದಗಳು ಈ ನೆಲಕ್ಕೆ, ಈ ಭಾಷೆಗೆ ಇರುವ ಬರೀ ಹೆಸರುಗಳಲ್ಲ ಅದರಾಚೆಗಿನ ವಿಶಾಲ ನೆಲೆಯ ಭಾವನೆಗಳಾಗಿವೆ. ಹಾಗಾಗಿ ಇಲ್ಲಿ ಕನ್ನಡ ಎಂಬುದನ್ನು ಕೇವಲ ಭಾಷೆಯ ಹೆಸರೆಂದು ಭಾವಿಸದೆ ಕನ್ನಡ ಎಂದರೆ ಒಂದು ಮನಸ್ಸು, ಕುಲ, ಪ್ರಜ್ಞೆ, ವ್ಯಕ್ತಿತ್ವ ಎಂಬ ವಿಶಾಲ ಅರ್ಥವನ್ನು ಒಪ್ಪಿಕೊಳ್ಳಬಹುದಾಗಿದೆ. 
ಜನಪದ ಎಂಬ ಪರಂಪರೆಗಳು
ಈ ಪರಿಕಲ್ಪನೆ ಕನ್ನಡ ಸಂದರ್ಭದಲ್ಲಿ ಬಳಕೆಗೆ ಬಂದಿರುವ ಎರಡು ಪ್ರಮುಖ ಮಾರ್ಗಗಳಿವೆ. ಇವುಗಳಲ್ಲಿ ಒಂದು ಸಂಸ್ಕೃತ ಮಾರ್ಗ. ಮತ್ತೊಂದು ಜರ್ಮನ್ ಮತ್ತು ಇಂಗ್ಲಿಷ್ ಮೂಲದ ಪಾಶ್ಚಾತ್ಯಮಾರ್ಗ. ಸಂಸ್ಕೃತ ಭಾಷೆಯಲ್ಲಿ ಜನಪದ ಎಂಬ ಶಬ್ದ ಬಳಕೆಯಲ್ಲಿದ್ದು ಅಲ್ಲಿ ಅದರ ಅರ್ಥ ಗ್ರಾಮೀಣ, ಹಳ್ಳಿಗ ಎಂಬುದಾಗಿದೆ. ಸಂಸ್ಕೃತದ ಈ ಶಬ್ದ ಕೇವಲ ಒಂದು ಪದವೆಂಬಂತೆ ಮೇಲೆ ಸೂಚಿಸಿದ ಅರ್ಥಕ್ಕೆ ಸೀಮಿತಗೊಂಡು ಕನ್ನಡ ಸಾಹಿತ್ಯದಲ್ಲಿ ಬಳಕೆಗೊಂಡಿರುವಂತೆ ಕಂಡುಬರುತ್ತದೆ. ಉದಾ: ಕವಿರಾಜಮಾರ್ಗದಲ್ಲಿ ಬರುವ '................ ಭಾವಿಸಿದ ಜನಪದಂ' ಸಾಲನ್ನು ಗಮನಿಸಬಹುದು. ಒಟ್ಟಾರೆ ಸಂಸ್ಕೃತದ ಈ ಮಾರ್ಗದಲ್ಲಿ ಜನಪದ ಎಂಬ ಶಬ್ದಕ್ಕೆ ಹೆಚ್ಚಿನ ಅರ್ಥವ್ಯಾಪ್ತಿಯೇನೂ ದೊರೆಯದೆ ಸೀಮಿತ ಅರ್ಥದಲ್ಲಿ ಮಾತ್ರ ಮುಂದುವರೆಯುವಂತಾಯಿತು. 
ಪಾಶ್ಚಾತ್ಯ ಮಾರ್ಗದಲ್ಲಿ ಮಾತ್ರ 'ಜನಪದ' ಶಬ್ದ ಕೇವಲ ಶಬ್ದವಲ್ಲ. ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅರ್ಥಗಳನ್ನು ಕೊಡುವ ಕಠಿಣ ಶಬ್ದ ಮಾತ್ರವಲ್ಲ. ಇವುಗಳಾಚೆಗೆ ಒಂದು ಪರಿಭಾಷೆಯಾಗಿ ಅದರಾಚೆಗೆ ಒಂದು ಪರಿಕಲ್ಪನೆಯಾಗಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಕನ್ನಡದಲ್ಲಿ ಈಗ ಜಾನಪದ ಅಧ್ಯಯನಗಳ ಸಂದರ್ಭದಲ್ಲಿ ಜನಪದ ಎನ್ನುವ ಪರಿಭಾಷೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಕನ್ನಡಿಗ ಈ ಜನಪದ ಶಬ್ದ ಇಂಗ್ಲಿಷ್ ಭಾಷೆಯ ಈಠಟಞ ಎನ್ನುವ ಶಬ್ದ ಕನ್ನಡ ಅನುವಾದವಾಗಿದೆ. ಇಂಗ್ಲಿಷ್ನ ಈಠಟಞ ಎನ್ನುವ ಶಬ್ದಕ್ಕೆ ಜರ್ಮನ್ ಭಾಷೆಯ 'ಆಚಿ ಗಿಠಟಞ' ಎಂಬ ಶಬ್ದ ಮೂಲ. ಇದನ್ನು ರಮ್ಯ ರಾಷ್ಟ್ರೀಯವಾದದ ಪ್ರವರ್ತಕ ಗಾಟ್ ಪ್ರೀಡ್ಮನ್ ಹರ್ಡರ್ 18ನೇ ಶತಮಾನದ ಮಧ್ಯಯುಗದಲ್ಲಿ (1744-1802) ಬಳಸುತ್ತಾನೆ. ಹರ್ಡರ್ನ ಪ್ರಕಾರ 'ಆಚಿ ಗಿಠಟಞ' ಎಂದರೆ 'ಮಣ್ಣಿಗೆ ಹತ್ತಿರವಾಗಿ ಬದುಕುವ ಗ್ರಾಮೀಣ ಜನರ ಗುಂಪು'. ಇದನ್ನೇ ಮುಂದೆ ಇಂಗ್ಲೆಂಡಿನ ಡಬ್ಲ್ಯೂ.ಜೆ. ಥಾಮ್ಸ್ (1846) ಖಿಜ ಈಠಟಞ ಎಂದು ಕರೆದ. ಇವುಗಳ ಪ್ರಭಾವದಿಂದಾಗಿ ಜನಪದ ಎಂಬ ಶಬ್ದವನ್ನು ಬಳಕೆಗೆ ತಂದರು. ಈ ಶಬ್ದ ಬಳಕೆಯ ಚರಿತ್ರೆಯಲ್ಲಿ ಬಳಸಿದವರು ನೀಡಿದ ಅರ್ಥಗಳನ್ನು ಇಲ್ಲಿ ಗಮನಿಸಬೇಕು. ಈಗಾಗಲೇ ಹೇಳಿದಂತೆ ಜರ್ಮನಿಯ ಹರ್ಡರ್ 18ನೇ ಶತಮಾನದ ಮಧ್ಯೆಭಾಗದಲ್ಲಿ ಜರ್ಮನಿಯೊಳಗೆ ನಡೆದ 'ಜರ್ಮನಿ ಏಕೀಕರಣ'ದ ಸಲುವಾಗಿ 'ರಮ್ಯ ರಾಷ್ಟ್ರೀಯವಾದ' ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ ವಾದದಲ್ಲಿ 'ಯಾವ ಎರಡು ರಾಷ್ಟ್ರಗಳು ಭೌಗೋಳಿಕ ಮತ್ತು ಐತಿಹಾಸಿಕ ಗುಣವೂ ಕೂಡ ಒಂದೇ ಆಗಿರುವುದಿಲ್ಲ.... ಆಯಾ ರಾಷ್ಟ್ರದ ಸಾಂಸ್ಕೃತಿಕ ವೈಶಿಷ್ಟ್ಯ ಆ ದೇಶದ ಜನ ಸಾಮಾನ್ಯರ ಸಾಹಿತ್ಯದಲ್ಲಿ, ಆಚಾರ-ವಿಚಾರಗಳಲ್ಲಿ ವ್ಯಕ್ತವಾಗುತ್ತದೆ. ಇಂಥ ಜನ ಸಾಮಾನ್ಯರನ್ನೇ ಹರ್ಡರ್ 'ಆಚಿ ಗಿಠಟಞ' ಎಂದು ಕರೆದ. ಇದರ ನಂತರ ಡಬ್ಲ್ಯೂ.ಜೆ. ಥಾಮ್ಸ್ ಬಳಸಿದ ಖಿಜ ಈಠಟಞ ಎಂಬ ಪಯರ್ಾಯ ಶಬ್ದಕ್ಕೆ ಗ್ರಾಮೀಣ ವಲಯಕ್ಕೆ ಸೇರಿದ ಅವಿದ್ಯಾವಂತ, ಅನಕ್ಷರಸ್ಥ, ಕೆಳಸ್ಥರದ ಜನ ಎಂಬರ್ಥವಿದೆ. ಕನ್ನಡದಲ್ಲಿ  ಈಠಟಞ ಗೆ ಸಂವಾದಿಯಾಗಿ ಬಳಕೆಯಾದ ಜನಪದ ಶಬ್ದಕ್ಕೆ ಥಾಮ್ಸ್ ಅವರು ನೀಡಿದ ಅರ್ಥವೇ ಪ್ರಧಾನವಾಗಿತ್ತು. ಹಾಮಾನಾ ಅವರು ವಿವರಿಸಿದಂತೆ ಜನಪದವೆಂದರೆ ಗ್ರಾಮೀಣ ಅನಕ್ಷರಸ್ಥ ಮಣ್ಣಿಗೆ ಹತ್ತಿರವಾಗಿ, ಪ್ರಕೃತಿಯ ಭಾಗವಾಗಿ ಬದುಕುವ ಜನರ ಗುಂಪು. ಈ ವ್ಯಾಖ್ಯಾನಗಳು 20ನೇ ಶತಮಾನದ ಕೊನೆಯ ಹೊತ್ತಿಗೆ ಈಠಟಞ ಎನ್ನುವ ಈ ಪದ ಅಮೇರಿಕಾದ ವಿದ್ವಾಂಸರ ದೃಷ್ಟಿಕೋನದಲ್ಲಿ ತನ್ನ ಅರ್ಥ ವ್ಯಾಪ್ತಿಯನ್ನೂ ಬದಲಾಯಿಸಿಕೊಂಡಿರುವುದನ್ನು ಗುರುತಿಸಬಹುದು. ಉದಾ: ಅಲನ್ ಡಂಡಸ್ ಎಂಬ ಅಮೆರಿಕಾದ ಜಾನಪದ ವಿದ್ವಾಂಸ ಈಠಟಞ ಎಂಬುದಕ್ಕೆ ಕೊಡುವ ಅರ್ಥ ಹೀಗಿದೆ. 'ಒಂದು ಸಮಾನ ಅಂಶವುಳ್ಳ ಜನರ ಗುಂಪೇ ಜನಪದ. ಆ ಸಮಾನ ಅಂಶ ಭಾಷೆ, ವೃತ್ತಿ, ಧರ್ಮ, ವಯಸ್ಸು ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಅದಕ್ಕಿಂತ ಹೆಚ್ಚು ಅಂಶಗಳಾಗಿರಬಹುದು' ಈ ವ್ಯಾಖ್ಯಾನದ ಪರಿಣಾಮವಾಗಿ ಜನಪದ ಎಂದರೆ ಗ್ರಾಮೀಣರು, ಮಣ್ಣಿಗೆ ಹತ್ತಿರವಾಗಿ ಬದುಕುವ ಅನಕ್ಷರಸ್ಥ ಜನರು ಎಂಬ ಅಭಿಪ್ರಾಯಗಳ ಬದಲಾಗಿ ಆದಿವಾಸಿಗಳು, ನಗರವಾಸಿಗಳು, ಗ್ರಾಮವಾಸಿಗಳು ಎಲ್ಲರೂ ಜನಪದರು ಎಂಬ ಕಲ್ಪನೆ ರೂಪಗೊಂಡಿತು. ಈ ಬದಲಾವಣೆಯ ಪರಿಣಾಮ ನಗರ ಜಾನಪದ, ಕೈಗಾರಿಕಾ ಜಾನಪದ, ವಿದ್ಯಾಥರ್ಿ ಜಾನಪದ ಎಂಬಂತಹ ಚಚರ್ೆಗಳು ಶುರುವಾದವು. ಇಂದಿಗೆ ಮೇಲಿನ ಎಲ್ಲಾ ವ್ಯಾಖ್ಯಾನಗಳೂ ಬಳಕೆಗೊಳ್ಳುತ್ತಿದ್ದು, ಅರ್ಥಗ್ರಹಿಕೆಗೆ ಸಾಕಷ್ಟು ತೊಡಕುಂಟಾಗಿದೆ. ಭೂತ ಮತ್ತು ವರ್ತಮಾನಗಳನ್ನು ಭವಿಷ್ಯದ ದೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡುವ ಅಮೆರಿಕಾದ ವಿದ್ವಾಂಸರ ಹೊಸ ಕ್ರಮದಿಂದ ಈ ಕ್ಷೇತ್ರದ ಗೊಂದಲಗಳು ಇನ್ನೂ ಹೆಚ್ಚಾಗಿವೆ. ಹಾಗಾಗಿ ಈ ಬಗ್ಗೆ ನಡೆದ ಚಚರ್ೆಗಳಲ್ಲಿ ದೊರೆಯುವ ಮಾಹಿತಿಗಳಿಂದ ಜನಪದ ಎಂದರೆ ಹಳ್ಳಿಯ, ಮಣ್ಣಿನ ಮಕ್ಕಳ ಗುಂಪು; ಪರಂಪರೆಯನ್ನು ಮೌಲ್ಯಾಧಾರಿತವಾಗಿ ಮುಂದುವರೆಸಿಕೊಂಡು ಬಂದಿರುವ ಗುಂಪು. ಇಂಥ ಗುಂಪುಗಳು ಒಂದಲ್ಲ ಹಲವು ಎಂಬುದಾಗಿ ಅರ್ಥವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡು ಮುಂದುವರೆಯಬಹುದು. 
ಸಂಸ್ಕೃತಿ ಎಂಬ ಜೀವನ ವಿಧಾನ
'ಸಂಸ್ಕೃತಿ' ಎಂಬ ಶಬ್ದ ಬಳಕೆಗೆ ಬಂದಿದ್ದು 20ನೇ ಶತಮಾನದಲ್ಲಿ. ಆದರೆ ಇದನ್ನು ಬೇರೆ ಬೇರೆ ಹೆಸರಲ್ಲಿ ಕರೆಯುವ ಪ್ರಯತ್ನ ಆದಿಯಿಂದಲೂ ಚಾಲ್ತಿಯಲ್ಲಿತ್ತು. ಕನರ್ಾಟಕದ ಮಟ್ಟಿಗೆ ಹೇಳುವುದಾದರೆ ಕಳೆದ 85 ವರ್ಷಗಳ ಹಿಂದೆ ಸಂಸ್ಕೃತಿ ಎಂಬ ಶಬ್ದದ ಬಳಕೆ ಇರಲಿಲ್ಲ. ಬದಲಿಗೆ ಸಂಸ್ಕಾರ, ಸದಾಚಾರ, ಸೌಜನ್ಯ, ಸಾತ್ವಿಕತೆ, ಮಯರ್ಾದೆ ಎಂಬ ಪದಗಳು ಬಳಕೆಯಲ್ಲಿದ್ದವು. ಇವುಗಳನ್ನೆ ಮುಂದೆ ಸಂಸ್ಕೃತಿ ಎಂಬ ಪರಿಕಲ್ಪನೆ ಒಳಗೊಳ್ಳುತ್ತಾ ಸಾಗಿದೆ. ಹಾಗಾಗಿ ಸಂಸ್ಕೃತಿ ಶಬ್ದ ತನ್ನ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಇಂದು ಯಾವ ಅರ್ಥದಲ್ಲಿ ಬಳಕೆಗೊಳ್ಳುತ್ತಿದೆ ಎಂಬುದನ್ನು ಮುಂದಿನಂತೆ ಸ್ಥೂಲವಾಗಿ ವಿವೇಚಿಸಬಹುದು; ಈಗಾಗಲೇ ಹೇಳಿದಂತೆ ಸಂಸ್ಕೃತಿ ಎಂದರೆ ಬಹಳಷ್ಟು ವರ್ಷಗಳ ಕಾಲ ಮನುಷ್ಯನ ಮನಸ್ಸಿನ ಪರಿಪಕ್ವತೆಯ ಸ್ಥಿತಿಯನ್ನು ಸೂಚಿಸುವ ಪರಿಕಲ್ಪನೆಯಾಗಿತ್ತು. ಅದರಲ್ಲೂ ಈ ಮನಸ್ಥಿತಿಗೆ ಹಾಗೂ ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆಗೂ ನಿಕಟ ಸಂಬಂಧವಿದೆ ಎಂಬಂತೆ ಬಿಂಬಿಸಲಾಗಿತ್ತು. ಅಂದರೆ ಮೇಲ್ವರ್ಗಗಳ ಜನರ ಮನಸಲ್ಲಿ ಮಾತ್ರ ಪರಿಪಕ್ವತೆ ಇರುತ್ತೆ ಎಂಬ ಭಾವನೆ ಅಚಲವಾಗಿ ಬೇರೂರಿತ್ತು. ಇದರ ನಂತರ ಪ್ರಕೃತಿಯ ಸಾಮಾನ್ಯ ಸ್ಥಿತಿಯಿಂದ ಉನ್ನತ ಸ್ಥಿತಿಗೆ ತಲುಪಿದ ಭೌತಿಕ-ಭೌದ್ಧಿಕ ಸಂಗತಿಗಳೆಲ್ಲವೂ ಸಂಸ್ಕೃತಿ ಎಂಬ ಹೊಸ ವ್ಯಾಖ್ಯಾನ ಕಾಣಿಸಿಕೊಳ್ಳುತ್ತದೆ. ಈ ವ್ಯಾಖ್ಯಾನಕಾರರು ಹೇಳುವಂತೆ ಕಾಡಿನಲ್ಲಿರುವ ಕಲ್ಲು ಪ್ರಕೃತಿ; ಆ ಕಲ್ಲು ಶಿಲ್ಪಿಯ ಕೈಯಿಂದ ಪೆಟ್ಟು ತಿಂದು ಮೂತರ್ಿ ರೂಪ ಪಡೆದಾಗ ಅದು ಸಂಸ್ಕೃತಿ ಹಾಗೆಯೇ ಮನುಷ್ಯನ ಬರೀ ಮಾತು ಪ್ರಕೃತಿ; ಸಂಗೀತದಿಂದ ಕೂಡಿದ ಹಾಡು ಸಂಸ್ಕೃತಿ. ಇದರ ನಂತರದ ಸಂಸ್ಕೃತಿ ಅಧ್ಯಯನಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಮಾನವಶಾಸ್ತ್ರದ ಹಿನ್ನೆಲೆಯ ಚಿಂತನೆಗಳು. ಈ ಚಿಂತನೆಗಳು 'ಮನುಷ್ಯನು ಪರಂಪರೆಯಿಂದ ಪಡೆದ ಬದುಕಿನ ಮೌಲ್ಯಗಳ ಮೊತ್ತ' 'ಮನುಷ್ಯನ ಜೀವನ ವಿಧಾನವೇ ಸಂಸ್ಕೃತಿ' ಎನ್ನುವ ವ್ಯಾಖ್ಯಾನಗಳನ್ನು ನೀಡಿದವು. ಇಂಥ ಪ್ರಯತ್ನಗಳ ಫಲವಾಗಿ ಸಂಸ್ಕೃತಿ ಪರಿಕಲ್ಪನೆ ತನ್ನ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಿಕೊಂಡಿತು. ಇಲ್ಲಿನ 'ಜೀವನ ವಿಧಾನವೇ ಸಂಸ್ಕೃತಿ' ಎನ್ನುವುದನ್ನು ಒಪ್ಪುವುದಾದರೆ; ಪ್ರತಿಯೊಂದು ವ್ಯಕ್ತಿ, ಸಮೂಹ, ಕುಟುಂಬ, ಜಾತಿ, ಜನಾಂಗಗಳಿಗೆ ತನ್ನದೇ ಆದ ಜೀವನ ಕ್ರಮವಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಜೀವನ ಕ್ರಮ ಎಂದರೆ ಬದುಕಿನ ಧರ್ಮ, ಆಥರ್ಿಕತೆ, ವೃತ್ತಿಗಳು, ರೀತಿ-ನೀತಿಗಳು, ನಂಬಿಕೆ-ಸಾಂಪ್ರದಾಯ-ಆಚರಣೆಗಳು, ಆಹಾರ ಪಾನಿಯಾಗಳು, ಸಾಹಿತ್ಯಾದಿ ಕಲೆಗಳು ಇವುಗಳಿಗೆ ಪೂರಕವಾದ ಭೌತಿಕ ವಸ್ತುಗಳು, ಬೌದ್ಧಿಕ ಚಿಂತನೆಗಳು ಇವೆಲ್ಲವೂ ಸಂಸ್ಕೃತಿ ಎಂಬ ಪರಿಕಲ್ಪನೆಯೊಳಗೆ ಸೇರುತ್ತವೆ. 
ಇಲ್ಲಿಯವರೆಗೂ ಕನ್ನಡ, ಜನಪದ, ಸಂಸ್ಕೃತಿ ಎಂಬ ಪರಿಕಲ್ಪನೆಗಳ ಬಗ್ಗೆ ಈವರೆಗೂ ದೀರ್ಘವಾದ ಚಚರ್ೆಗಳು ನಡೆದಿದ್ದು ಅದರ ಆಧಾರದ ಮೇಲೆ ಇವುಗಳ ಅರ್ಥವ್ಯಾಪ್ತಿಯನ್ನು ಹೀಗೆ ಸಂಕ್ಷೇಪಿಸಬಹುದು:
ಕನ್ನಡ ಎಂದರೆ ಭಾಷೆ/ಪ್ರದೇಶಕ್ಕಿರುವ ಹೆಸರು ಮಾತ್ರವಲ್ಲ. ಬದಲಿಗೆ ಒಂದು ಪಾರಂಪರಿಕ ಕುಲ, ಒಂದು ಗುಣ ಒಂದು ಮನೋಧರ್ಮ, ಒಂದು ಮನಸ್ಸು, ಒಂದು ಪ್ರಜ್ಞೆ. ಇಂಥ ಪ್ರಜ್ಞೆಯುಳ್ಳ ಗ್ರಾಮೀಣ ಅಕ್ಷರಸ್ತರಲ್ಲದ, ದುಡಿಯುವ ಜನರ ಗುಂಪಿನ ಅಥವಾ ಗುಂಪುಗಳ ಜೀವನ ವಿಧಾನವೇ ಕನ್ನಡ ಜನಪದ ಸಂಸ್ಕೃತಿ. 
ಡಾ.ಎಸ್.ಎಂ. ಮುತ್ತಯ್ಯ