Wednesday 6 January 2016

ಬಯಲಾಟದ ಭವಿಷ್ಯ


PÀ£ÀßqÀ £Ár£À d£À¥ÀzÀ gÀAUÀ¨sÀÆ«ÄAiÀÄÄ ¥ÀæªÀÄÄRªÁV ªÀÄÆqÀ®¥ÁAiÀÄ zÉÆqÁØl, ¥ÀqÀĪÀ®¥ÁAiÀÄ AiÀÄPÀëUÁ£À, ¸ÀuÁÚl ªÀÄvÀÛ UÉÆA¨ÉAiÀiÁl JA§ £Á®ÄÌ §ºÀĪÀÄÄRåªÁzÀ «¨sÁUÀUÀ¼À°è, CzÀgÉƼÀUÉ ºÀvÁÛgÀÄ G¥À«¨sÁUÀUÀ¼À°è ºÀgÀrPÉÆArzÉ. GzÁºÀgÀuÉUÉ ªÀÄÆqÀ®¥ÁAiÀÄzÀ°è GvÀÛgÀ ¸ÀA¥ÀæzÁAiÀÄ ªÀÄvÀÄÛ zÀQët ¸ÀA¥ÀæzÁAiÀÄ §¼ÀPÉAiÀÄ°èzÀÄÝ, CªÀÅ PÀæªÀĪÁV zÉÆqÁØl ªÀÄvÀÄÛ §AiÀįÁl JAzÀÄ PÀgɹPÉÆArªÉ. ¥ÀqÀĪÀ®¥ÁAiÀÄ AiÀÄPÀëUÁ£À vÉAPÀwlÄÖ-§qÀUÀwlÄÖ JA§ JgÀqÀÄ ¥ÀæPÁgÀUÀ¼ÁV UÀÄgÀÄw¹PÉÆArzÉ. E£ÀÆß EªÉgÀqÀPÀÆÌ ©ü£ÀߪÁzÀ ¸ÀuÁÚl PÀ£ÁðlPÀzÀ GvÀÛgÀ ¨sÁUÀUÀ¼À°è  ¥ÀæZÀ°vÀzÀ°èzÀÄÝ, CzÀÄ ±ÉʪÀ ¸ÀuÁÚUÀ¼ÀÄ ªÀÄvÀÄÛ ªÉʵÀÚªÀ ¸ÀuÁÚlUÀ¼ÀÄ JA§ÄzÁV zsÀgÁäzsÁjvÀ «AUÀqÀuÉUÉ M¼ÀUÁVzÉ. ºÁUÉAiÉÄà UÉÆA¨ÉAiÀiÁlzÀ°è vÉÆUÀ®Ä UÉÆA¨ÉAiÀiÁl ªÀÄvÀÄÛ ¸ÀÆvÀæzÀ UÉÆA¨ÉAiÀiÁl JA§ JgÀqÀÄ «zsÀUÀ¼À£ÀÄß  PÁt§ºÀÄzÁVzÉ. MmÁÖgÉ EAxÀ ²æêÀÄAvÀ ¥ÀgÀA¥ÀgÉAiÀÄ£ÀÄß ºÉÆA¢zÀÝ d£À¥ÀzÀ gÀAUÀ¨sÀÆ«ÄAiÀÄ°è PÀgÁªÀ½ AiÀÄPÀëUÁ£ÀªÀ£ÀÄß ºÉÆgÉvÀÄ¥Àr¹zÀgÉ G½zÀ PÀqÉAiÀÄ J¯Áè ¥ÀæPÁgÀUÀ¼ÀÄ EwÛÃZÉV£À ºÉƸÀPÁ®zÀ §zÀ¯ÁªÀuÉUÀ½AzÁV vÀªÀÄä C¹ÛvÀéªÀ£ÀÄß PÀ¼ÉzÀÄPÉƼÀÄîwÛªÉ. §ºÀÄvÉÃPÀ PÀqÉUÀ¼À°è d£À¥ÀzÀ gÀAUÀ¥ÀæPÁgÀzÀ ¥ÀæzÀ±Àð£ÀUÀ¼ÀÄ ¸ÀA¥ÀÆtð ªÀÄgÉAiÀiÁVªÉ. E£ÀÄß PÉ®ªÀÅ PÀqÉ ¸Àé®àªÀÄnÖ£À fêÀ G½¹PÉÆAqÀÄ G¹gÁqÀÄwÛªÉ. EAxÀ ¥Àj¹ÜwAiÀÄ°è  d£À¥ÀzÀ gÀAUÀ¨sÀÆ«ÄAiÀÄ£ÀÄß G½¸ÀĪÀ aAvÀ£ÉUÀ¼ÀÄ DgÀA¨sÀªÁVªÉ. D ¢QÌ£À°è ¸ÁPÀµÀÄÖ ¥ÀæAiÀÄvÀßUÀ¼ÀÄ £ÀqÉ¢ªÉ; £ÀqÉAiÀÄÄwÛªÉ. EAxÀ ¥ÀæAiÀÄvÀßUÀ¼À ¨sÁUÀªÁV ªÀÄzsÉå PÀ£ÁðlPÀzÀ°è ¥ÀæZÀ°vÀ«gÀĪÀ §AiÀįÁlzÀ ¥ÀgÀA¥ÀgÉ, ¸ÀªÀÄPÁ°Ã£À ¹ÜwUÀw ºÁUÀÆ CzÀQÌgÀĪÀ ¸ÀªÁ®ÄUÀ¼À£ÀÄß UÀÄgÀÄw¹ CzÀ£ÀÄß ªÀÄÄA¢£À vÀ¯ÉªÀiÁgÀÄUÀ½UÉ G½¸ÀĪÀ ¸ÁzsÀåvÉUÀ¼À §UÉÎ ¥Àj²Ã°¸ÀĪÀ GzÉÝñÀ F ¯ÉÃR£ÀzÀÄÝ.
§AiÀįÁlzÀ ¥ÀgÀA¥ÀgÉ
       §AiÀįÁlPÉÌ 500 ªÀµÀðUÀ¼À ¸ÀàµÀÖ EwºÁ¸À«zÉ JA§ÄzÀÄ ºÀ®ªÀÅ «zÁéA¸ÀgÀ C©üªÀÄvÀ. F ªÀiÁvÀÄ §AiÀįÁlzÀ ¥ÀoÀåUÀ½UÉ ¸ÀA§A¢ü¹zÉÝà ºÉÆgÉvÀÄ ¥ÀæzÀ±Àð£ÀUÀ½UÉ C®è. ¥ÀæzÀ±Àð£ÀUÀ½UÉ ¸ÁPÀµÀÄÖ ¥ÁæaãÀvÉ EzÀÄÝ, CzÀÄ zÁæ«qÀ ªÀÄÆ®PÉÌ ºÉÆÃUÀÄvÀÛzÉ. zÀQët PÀ£ÁðlPÀzÀ d£À¥ÀzÀ gÀAUÀ¨sÀÆ«Ä PÀÄjvÀÄ CzsÀåAiÀÄ£À £ÀqɹgÀĪÀ r.PÉ. gÁeÉÃAzÀæ CªÀgÀÄ “ªÉÆzÀ®Ä zÁæ«qÀgÀ°è ‘§AiÀįÁl’ JA§ MAzÉà ºÉ¸Àj£À d£À¥ÀzÀ £ÁlPÀ gÀÆrüAiÀÄ°èzÀÄÝ, C£ÀAvÀgÀ ¨sÁ¶PÀªÁV ºÁUÀÆ ¥ÁæzÉòPÀªÁV zÁæ«qÀgÀÄ ZÀzÀÄjzÀAvÉ, F ªÀÄÆ® PÀ¯ÉAiÀÄÆ ¨ÉÃ¥ÀðnÖvÀÄ”      (r.PÉ.gÁeÉÃAzÀæ:1980:35)JA§ÄzÁV C©ü¥ÁæAiÀÄ¥ÀqÀÄvÁÛgÉ EzÀPÉÌ ¥ÀÆgÀPÀªÁV CªÀgÀÄ zÁæ«qÀ gÁdåUÀ¼ÁzÀ PÀ£ÁðlPÀzÀ §AiÀįÁl. DAzÀæzÀ «Ã¢ £ÁlPÀ, vÀ«Ä¼ÀÄ£Ár£À wgÀÄPÉÆvÀÄÛ, ªÀÄvÀÄÛ PÉÃgÀ¼À PÀxÀPÀ̽ ¥ÀæPÁgÀUÀ¼ÀÄ KPÀ¥ÀæPÁgÀªÁVzÀÄÝ MAzÀgÀ ¥ÀæwgÀÆ¥À ªÀÄvÉÆÛAzÀÄ JA§AvÉ PÁtÄwÛgÀĪÀ ¸ÀAUÀwAiÀÄ PÀqÉUÉ UÀªÀÄ£À¸É¼ÉAiÀÄÄvÁÛgÉ. F ªÁzÀUÀ¼À£ÀÄß £ÉÆÃrzÀgÉ §AiÀįÁl ¨sÀgÀvÀ£À £Álå±Á¸ÀÛçQÌAvÀ®Æ ªÉÆzÀ¯Éà d£À¥ÀzÀ ¸ÀªÀÄÄzÁAiÀÄUÀ¼À°è §¼ÀPÉAiÀÄ°èzÀÝ CA±À ¸ÀàµÀÖªÁUÀÄvÀÛzÉ.
§AiÀįÁlzÀ ¸ÀégÀÆ¥À ªÀÄvÀÄÛ ªÀĺÀvÀé
       §AiÀÄ®Ä ¥ÀæzÉñÀzÀ°è ClÖ ¤«Äð¹ DqÀĪÀ F DlPÉÌ C£ÀéxÀðPÀ £ÁªÀĪÁV §AiÀįÁl JA§ ºÉ¸ÀgÀÄ §A¢zÉ. F DlzÀ°è ¹ÛçÃAiÀÄgÀÄ ¨sÁUÀªÀ»¸ÀĪÀÅ¢®è. £ÁlPÀzÀ°è §gÀĪÀ ¹Ûçà ¥ÁvÀæUÀ¼À£ÀÄß ¥ÀÄgÀĵÀgÉà ¤ªÀð»¸ÀÄvÁÛgÉ. F £ÁlPÀzÀ°è ªÀĺÁ¨sÁgÀvÀ, gÁªÀiÁAiÀÄt, ¨sÁUÀªÀvÀ ªÉÆzÀ¯ÁzÀ ¥ËgÁtÂPÀ PÀxÉUÀ¼ÀÄ; PÀj¨sÀAl, PÀĪÀiÁgÀgÁªÀÄ, ¸ÁgÀAUÀzsÀgÀ ªÉÆzÀ¯ÁzÀ LwºÁ¹PÀ PÀxÉUÀ¼ÀÄ ¥ÀæzÀ±Àð£ÀUÉƼÀÄîvÀÛªÉ. F PÀxÉUÀ¼À°è PÁ¼ÀUÀ ªÀÄvÀÄÛ PÀ¯ÁåtzÀ PÀxÉUÀ¼Éà ºÉZÀÄÑ. GzÁºÀgÀuÉAiÀiÁV §AiÀįÁlzÀ PÉ®ªÀÅ ¥ÀoÀåUÀ¼À£ÀÄß £ÉÆÃqÀĪÀÅzÁzÀgÉ : gÀwPÀ¯Áåt, §§ÄæªÁºÀ£À PÁ¼ÀUÀ, EAzÀæfvÀÄ PÁ¼ÀUÀ, PÀuÁðdÄð£ÀgÀ PÁ¼ÀUÀ, ¸ÀÄzÀ£ÀéPÁ¼ÀUÀ C©üªÀÄ£ÀÄå PÁ¼ÀUÀ, d®AzsÀgÀ£À PÁ¼ÀUÀ, gÁªÀiÁAd£ÉÃAiÀÄ AiÀÄÄzÀÞ, WÀmÉÆÃvÀÌd£À PÁ¼ÀUÀ; gÀw PÀ¯Áåt, VjeÁ PÀ¯Áåt, ¸ÀĨsÀzÁæ ¥ÀjtAiÀÄ, ¹ÃvÁ ¸ÀéAiÀÄAªÀgÀ, zËæ¥À¢ ¸ÀéAiÀÄAªÀgÀ EvÁå¢. »ÃUÉ §gÀĪÀ J¯Áè PÀxÉUÀ¼ÀÄ ¥ÀÄgÁtzÀ ¢ÃWÀð PÀxÉUÀ¼À°è vÀªÀÄUÉ ªÀÄÄRåªÉ¤¹zÀ ¨sÁUÀUÀ¼À£ÀÄß d£ÀgÀ ªÀÄÄAzÉ ¥ÀæzÀ²ð¸ÀĪÀÅzÀgÀ ¸ÁªÀiÁfPÀ «ªÉÃPÀ ªÀÄvÀÄÛ eÁUÀÈwAiÀÄ£ÀÄß ¤ÃqÀĪÀ PÉ®¸ÀªÀ£ÀÄß ªÀiÁrzÁÝgÉ. “ §AiÀįÁl d£À¸ÁªÀiÁ£ÀågÀ zÀȶ֬ÄAzÀ PÉêÀ® MAzÀÄ PÀ¯ÉAiÀiÁUÀ° CxÀªÁ ªÀÄ£ÉÆÃgÀAd£ÉAiÀÄ ¸ÁzsÀ£ÀªÁUÀ° DVgÀzÉ ; CzÀÄ  CªÀjUÉ MAzÀÄ zÉÆqÀØ ¥ÁoÀ±Á¯ÉAiÉÄà DVzÉ. ........ ¤gÀPÀëPÀgÁzÀ CªÀgÀ£ÀÄß ºÉeÉÓ ºÉeÉÓUÀÆ JZÀÑgÀUÉƽ¸ÀÄvÁÛ ¤ÃwAiÀÄ ¥ÁoÀªÀ£ÀÄß ¨ÉÆâü¸ÀĪÀ°è ¸ÀªÀÄxÀð ¸ÁzsÀ£ÀªÉà DVvÀÄÛ” (r.PÉ. gÁeÉÃAzÀæ:1980: 43).
      §AiÀįÁl Erà gÁwæ ¥ÀæzÀ±Àð£À £ÀqÉAiÀÄÄvÀÛzÉ. UÁæªÀÄzÀ §AiÀÄ®Ä ¥ÀæzÉñÀzÀ°è UÁr ZÀPÀæUÀ¼À£ÀÄß ºÀÆvÀÄ CªÀÅUÀ½UÉ ¥ÉÆîÄUÀ¼À£ÀÄß PÀnÖ CzÀgÀªÉÄÃ¯É ºÀ®UÉUÀ¼À£ÀÄß ºÁ¸ÀÄvÁÛgÉ. EzÀ£ÀÄß ClÖ JAzÉà PÀgÉAiÀÄÄvÁÛgÉ. ClÖzÀªÀÄÄAzÉ ¥ÉæÃPÀëPÀgÀÄ PÀĽvÀÄ Erà gÁwæ £ÁlPÀ «ÃQë¸ÀÄvÁÛgÉ. ¸ÁªÀiÁ£ÀåªÁV F §AiÀįÁl ¨ÉùUÉ PÁ®zÀ ¢£ÀUÀ¼À°è ºÉZÁÑV £ÀqÉAiÀÄÄvÀÛzÉ. gÁwæ Erà £ÁlPÀ ¥ÀæzÀ²ð¸À®Ä ºÁUÀÄ «ÃQë¸À®Ä F PÁ® ¸ÀÆPÀÛ. CµÉÖà C®èzÉ F ¸ÀªÀÄAiÀÄ PÀȶPÀjUÉ ©qÀÄ«£À PÁ®ªÁVgÀÄvÀÛzÉ. CµÉÖà C®èzÉ UÁæªÀÄUÀ¼À ºÀ§â-eÁvÉæAiÀÄ ¢£ÀUÀ¼ÀAzÉà ¥ÀæzÀ±Àð£À«gÀÄvÀÛzÉ. ºÀ§â-eÁvÉæUÀ½UÉ ºÉÆgÀV¤AzÀ £ÉAljµÀÖgÀÄ §A¢gÀĪÀÅzÀÄ EzÀPÉÌ E£ÀßµÀÄÖ ªÉÄgÀUÀÄ PÉÆqÀÄvÀÛzÉ.  
§AiÀįÁlzÀ°è ªÀiÁvÀÄ ªÀÄvÀÄÛ ¥ÀzÀUÀ¼ÀÄ ¸ÀªÀÄ£ÁVzÀÄÝ EªÀÅUÀ¼ÉÆnÖUÉ PÀÄtÂvÀªÀÇ ¸ÉÃjPÉƼÀÄîvÀÛzÉ. F PÀ¯ÉAiÀÄ PÀ¯Á«zÀgÀÄ ªÀÈwÛ PÀ¯Á«zÀgÁVgÀzÉ ºÀªÁå¹ PÀ¯Á«zÀgÁVgÀÄvÁÛgÉ. UÁæªÀÄUÀ¼À°è PÀ¯Á¸ÀQÛ EgÀĪÀ MA¢µÀÄÖ d£À ¸ÉÃj PÀxÉAiÀÄ£ÀÄß DAiÉÄ̪ÀiÁrPÉÆAqÀÄ CzÀgÀ°è£À ¥ÁvÀæUÀ¼À£ÀÄß vÀªÀÄä vÀªÀÄä PÀ¯Á ¸ÁªÀÄxÀåðPÀÌ£ÀÄUÀÄtªÁV ºÀAaPÉ ªÀiÁrPÉÆAqÀÄ ¸ÁPÀµÀÄÖ ¢£À vÁ°ÃªÀÄÄ £Àqɹ ¤UÀ¢ü ¥Àr¸À¯ÁzÀ MAzÀÄ ¢£À Dl DqÀÄvÁÛgÉ. F ¥ÀæQæAiÉÄAiÀÄ°è ¨sÁUÀªÀvÀgÀzÀÄ ¥ÀæªÀÄÄR ¥ÁvÀæ. Erà £ÁlPÀzÀ ¤zÉÃð±ÀPÀ£ÁV F ¨sÁUÀªÀvÀ PÁAiÀÄ𠤪Àð»¸ÀÄvÁÛ£É. EªÀgÀ eÉÆvÉUÉ ªÀÄÄRåªÁV M§â ªÀÄÈzÀAUÀ PÀ¯Á«zÀ, M§â ºÁgÉÆääAiÀÄA PÀ¯Á«zÀgÀÄ EgÀÄvÁÛgÉ. EªÀgÀ eÉÆvÉUÉ vÁ¼À §rAiÀÄĪÀ ªÀÄvÀÄÛ »ªÉÄäüÀ PÀÆUÀĪÀ PÀ¯Á«zÀgÀÄ ¸Áxï PÉÆqÀÄvÁÛgÉ. £ÁlPÀzÀ ¥ÁvÀæzsÁjUÀ½UÉ ¨ÉÃPÁUÀĪÀ vÀ¯É ªÀÄvÀÄÛ ¨sÀÄdUÀ½UÉ vÉÆr¸ÀĪÀ QjÃlUÀ¼ÀÄ PÉÊ, JzÉ Q«UÀ½UÉ vÉÆr¸ÀĪÀ D¨sÀgÀtUÀ¼ÀÄ EªÉà ªÉÆzÀ¯ÁzÀ ªÉõÀ ¨sÀƵÀtUÀ¼À£ÀÄß ¨ÁrUÉUÉ ¥ÀqÉzÀÄ vÀgÀÄvÁÛgÉ. F ªÉõÀ ¨sÀƵÀtUÀ¼À£ÀÄß ¨ÁrUÉUÉ ¤ÃqÀ¯ÉAzÀÄ PÉ®ªÀÅ ªÀåQÛUÀ¼ÀÄ ¹zÀÞªÀiÁr ElÄÖPÉÆArgÀÄvÁÛgÉ. EªÀgÀÄ £ÁlPÀzÀ ¢£À vÀAzÀÄ ¥ÁvÀæzsÁjUÀ½UÉ §tÚºÁQ ªÉõÀ¨sÀƵÀt vÉÆr¸ÀÄvÁÛgÉ. ¥ÀæzÀ²ð¸ÀĪÀ ¥ÀoÀåPÉÌ ¨ÉÃPÁUÀĪÀ ªÉõÀ¨sÀĵÀtUÀ¼À£ÀÄß PÀgÁgÀĪÀPÁÌV vÀAzÀÄ £ÁlPÀzÀ AiÀıÀ¹ìUÉ PÁgÀtªÁUÀÄvÁÛgÉ.
¸ÀªÀĸÉåUÀ¼ÀÄ
§AiÀįÁl eÁ£À¥ÀzÀ gÀAUÀPÀ¯ÉUÀ¼À°è CvÀåAvÀ ªÀtðgÀAfvÀ ¥ÀæPÁgÀªÁVzÀÝgÀÆ, EzÉà UÀÄA¦£À°è §gÀĪÀ PÀgÁªÀ½ AiÀÄPÀëUÁ£À PÀ¯É EwÛÃZÉUÉ DzsÀĤPÀ PÁ®PÉÌ ¹zÀÝUÉÆAqÀÄ zÉñÀ «zÉñÀUÀ¼À°è vÀ£Àß bÁ¥À£ÀÄß ªÀÄÆr¹zÀAvÉ §AiÀįÁl CAxÀ ¸ÁzsÀåvÉUÀ¼À£ÀÄß ¥ÀqÉAiÀÄ°®è JA§ÄzÀÄ ªÁ¸ÀÛªÀ. EzÀPÉÌ EgÀĪÀ ¥ÀæªÀÄÄR PÁgÀtªÉAzÀgÉ §AiÀįÁl AiÀÄPÀëUÁ£ÀzÀAvÉ PÁ® ¸ÀAzÀ¨sÀðPÉÌ ºÉÆA¢PÉƼÀÄîªÀÅzÁUÀ° «zÁåªÀAvÀ AiÀÄĪÀ ¸ÀªÀÄÄzÁAiÀĪÀ£ÀÄß vÀ£ÀßvÀÛ ¸É¼ÉAiÀÄĪÀ°è ¸ÉÆÃwzÀÄÝ. AiÀÄPÀëUÁ£ÀzÀ ªÀiÁzÀjAiÀÄ°è ¸ÀªÀÄAiÀÄPÉÌ C£ÀÄUÀÄtªÁV ¸ÀAQë¥ÀÛUÉƼÀÄîªÀÅzÁUÀ°, Erà ¸ÀªÀÄUÀæ ¥ÀæPÁgÀzÀ°è PÀÄtÂvÀ, ¸ÀAVÃvÀ, ªÁzÀå ¸ÀAVÃvÀ «¨sÁUÀUÀ¼ÀÄ ¨ÉÃ¥ÀðlÄÖ ¥ÀæzÀ±Àð£ÀUÉƼÀÄîªÀÅzÁUÀ° ¸ÁzsÀå«®è. ºÁUÉAiÉÄà ¨sÁµÉAiÀÄ PÁptåvÉAiÀÄ£ÀÄß ©lÄÖ PÉÆqÀĪÀÅzÁUÀ° C¸ÁzsÀå JA§ÄzÀÄ F PÉëÃvÀæzÀ°è PÉ®¸À ªÀiÁrzÀ «zÁéA¸ÀgÀ ºÁUÀÆ ¸ÀévÀB PÀ¯Á«zÀgÀ C©ü¥ÁæAiÀĪÁVzÉ. EzÀÄ K£Éà EzÀÝgÀÄ F §AiÀįÁl PÀ¯É JAzÉA¢UÀÆ £ÀªÀÄä £ÀqÀÄªÉ EgÀ¨ÉÃPÁzÀ PÀ¯ÉAiÀiÁVzÉ. F PÁgÀtPÁÌV §AiÀįÁlzÀ ¨sÀ«µÀåzÀ §UÉÎ ¸ÁA¸ÀÌøwPÀ PÉëÃvÀæ UÀA©üÃgÀªÁV aAw¸À¨ÉÃQzÉ. EAxÀ ¥ÀæAiÀÄvÀßzÀ ¨sÁUÀªÁV, §AiÀįÁl  PÀ¯É JAzÀÄ JzÀÄj¸ÀÄwÛgÀĪÀ ¸ÀªÀĸÉåUÀ¼ÀÄ ºÁUÀÆ CªÀÅUÀ½VgÀĪÀ ¥ÀjºÁgÀUÀ¼À §UÉÎ F ªÀÄÄA¢£ÀAvÉ «ZÁgÀ ªÀiÁqÀ§ºÀÄzÁVzÉ.
·               ºÉƸÀ PÁ® d£ÀgÀ ªÀÄ£À¸À°è GAlĪÀiÁrgÀĪÀ ªÀåªÀºÁjPÀ zÀ馅 EAxÀ C£ÉÃPÀ PÀ¯ÉUÀ¼À£ÀÄß ¯Á¨sÀgÀ»vÀ CxÀªÁ C£ÀÄ¥ÀAiÀÄÄPÀÛ JAzÀÄ ¨sÁ«¸ÀĪÀAvÉ ªÀiÁrgÀĪÀÅzÀÄ §AiÀįÁl PÀ¯ÉAiÀÄ ªÉÄÃ®Æ ¥ÀjuÁªÀÄ ©ÃjzÉ.
·               §AiÀįÁlzÀ ¥ÀæzÀ±Àð£À Erà gÁwæ £ÀqÉAiÀÄĪÀ ¢ÃWÀð PÁ®zÀ ¥ÀæzÀ±Àð£ÀªÁVgÀĪÀÅzÀjAzÀ CµÀÄÖ ¸ÀªÀÄAiÀÄ vÁ¼Éä¬ÄAzÀ «ÃQë¸ÀĪÀ ªÀåªÀzsÁ£À ¥ÉæÃPÀëPÀgÀ°è E®èªÁVzÉ. ºÁUÉAiÉÄà PÀ¯Á«zÀgÁzÀgÀÆ ºÀUÀ°£À ¸ÀªÀÄAiÀÄzÀ°è ¥ÀæzÀ±Àð£À ¤ÃqÀªÀÅzÁUÀ° CxÀªÁ ¢ÃWÀð ¥ÀæzÀ±Àð£ÀªÀ£ÀÄß ¸ÀAQë¥ÀÛUÉƽ¸ÀĪÀÅzÁUÀ°  ªÀiÁqÀzÉà EgÀĪÀ ¥ÀjuÁªÀÄ §AiÀįÁl ¥Àæ¸ÀÄÛvÀ PÁ®PÉÌ ¸ÀÆPÀÛªÁzÀÄzÀ®è JA§ ªÁvÁªÀgÀt ¸ÀȶÖAiÀiÁVzÉ.  
·               §AiÀįÁlzÀ ¥ÀoÀåUÀ¼À ¨sÁµÉAiÀÄ CwAiÀiÁzÀ ±Á¹ÛçÃAiÀÄvÉ ªÀÄvÀÄÛ ¸ÀAQÃtðªÁVgÀĪÀ ¥ÀzÀ, ªÁPÀåUÀ¼À §¼ÀPÉAiÀÄ PÁgÀt¢AzÀ ¥ÀoÀåUÀ¼À PÀxÉUÀ¼ÀÄ ¸ÀgÀ¼ÀªÁV ¸ÀAªÀºÀ£ÀªÁUÀĪÀÅ¢®è. EzÀÄ §AiÀįÁl PÀ¯É d£ÀjAzÀ zÀÆgÀªÁUÀ®Ä MAzÀÄ ¥ÀæªÀÄÄR PÁgÀtªÉ¤¹zÉ.
·                §AiÀįÁlzÀ ¥ÀoÀåUÀ¼À ªÀ¸ÀÄÛ ¸ÀªÀÄPÁ°Ã£À ªÁVgÀzÉ ¥ÀÄgÁt ¨sÁUÀªÀvÀUÀ½UÉ ±ÀgÀuÁVzÀÄÝ, ¸ÀÆPÀÛªÁV EªÀÅ ¸ÀªÀÄPÁ°Ã£À ¸ÀàAzÀ£ÉAiÀÄ£ÀÄß ¤ÃqÀÄwÛ®è. EzÀjAzÀ ºÀ¼É PÁ®zÀ F PÀxÉUÀ¼ÀÄ £ÀªÀÄUÉÃPÉ ¨ÉÃPÀÄ JA§ ¥Àæ±Éß GzÀ㫹zÉ. EzÀjAzÀ F jÃwAiÀÄ ¸ÀªÀÄPÁ°Ã£À ¸ÀàAzÀ£É¬ÄgÀĪÀ £ÀªÀ ¸ÀªÀiÁdzÀ «µÀAiÀÄUÀ¼À PÀqÉ ¥ÉæÃPÀëPÀ ºÉZÀÄÑ D¸ÀPÀÛ£ÁUÀÄvÁÛ£É.
·                AiÀiÁªÀÅzÉà PÀ¯É AiÀiÁªÀ PÁ®PÀÆÌ CUÀvÀåªÁV PÁt¨ÉÃPÁzÀgÉ CzÀÄ PÀÆqÀ PÁ®zÀ CUÀvÀåPÀÌ£ÀÄUÀÄtªÁV §zÀ¯ÁUÀÄwÛgÀ¨ÉÃPÀÄ. CzÀPÉÌ PÀ¯ÉAiÀÄ£ÀÄß ¥ÉÆö¸ÀĪÀ PÀ¯Á«zÀgÀÄ CPÀëgÀ¸ÀÛgÁzÀgÉ ºÉZÀÄÑ C£ÀÄPÀÆ®. DzÀgÉ EA¢UÀÆ PÀÆqÀ F §AiÀįÁl PÀ¯Á¯ÉÆÃPÀzÉƼÀUÉ CPÀëgÀ¸ÀÛgÀ ¥ÀæªÉñÀ DVAiÉÄà E®è. C®à ¸Àé®à ¸ÁPÀëgÀvÉAiÀÄ£ÀÄß ¥ÀqÉzÀ PÀ¯Á«zÀgÀÄ ¥ÀoÀåUÀ¼À «µÀAiÀÄUÀ¼À£ÀÄß NzÀĪÀ ªÀÄlÖPÉÌ ªÀiÁvÀæ ¸ÀªÀÄxÀðjzÁÝgÉ. CzÀgÁZÉUÉ PÁ®PÉÌ C£ÀÄUÀÄtªÁV vÀªÀÄä PÀ¯ÉAiÀÄ£ÀÄß G£ÀßwÃPÀj¸ÀĪÀ ¥ÀæAiÀÄvÀßUÀ¼À£ÀÄß ªÀiÁqÀ¯ÁUÀÄwÛ®è. F PÁgÀt¢AzÁV §AiÀįÁl ºÀ¼ÉAiÀÄ PÁ®zÀ ¥À¼ÉAiÀÄĽPÉAiÀiÁV ªÀiÁvÀæ PÁtÄwÛzÉ.
¸ÁzsÀåvÉUÀ¼ÀÄ
       ªÉÄÃ¯É «ªÀj¹zÀAvÉ §AiÀįÁlzÀ ¸ÀªÀĸÉåUÀ¼ÀÄ ºÀ®ªÁgÀÄ. CªÀÅUÀ¼À£ÀÄß «ÄÃj F PÀ¯ÉAiÀÄ£ÀÄß ¨É¼É¸À®Ä ¸ÁzsÀåªÁzÀgÉ ªÀiÁvÀæ EA¢£À DzsÀĤPÀ ¸ÀªÀiÁdzÀ°è vÀ£Àß ¸ÁÜ£ÀªÀ£ÀÄß PÀAqÀÄPÉƼÀî®Ä ¸ÁzsÀå. F »£É߯ÉAiÀÄ°è §AiÀįÁl FUÀ JzÀÄj¸ÀÄwÛgÀĪÀ ¸ÀªÀĸÉåUÀ¼À ¥ÀjºÁgÀPÁÌV F PÉëÃvÀæzÀ vÀdÕgÀÄ ªÀÄvÀÄÛ PÀ¯Á«zÀgÀÄ, EªÀgÉ®ègÀ ¨ÉA§®PÉÌ ¸ÀPÁðgÀ ªÀÄvÀÄÛ ¸ÀAWÀ¸ÀA¸ÉÜUÀ¼ÀÄ ¸ÀºÀPÀj¸À¨ÉÃQzÉ. «±ÉõÀªÁV PÀ¯Á«zÀgÀÄ ªÀÄvÀÄÛ ¸ÁªÀðd¤PÀgÀÄ F ¸ÀªÀĸÉåUÀ¼À ¥ÀjºÁgÀPÉÌ ªÀiÁqÀ¯ÉèÉÃQgÀĪÀ PÁAiÀÄðUÀ¼À£ÀÄß F ªÀÄÄA¢£ÀAvÉ «ªÀj¸À§ºÀÄzÀÄ
·               §AiÀįÁlªÀ£ÀÄß G½¹ ¨É¼À¸ÀĪÀ PÁAiÀÄðPÉÌ ªÉÆzÀ°UÉ ¨ÉÃPÁVgÀĪÀÅzÀÄ F PÀ¯ÉAiÀÄ §UÉUÉ ¸ÀªÀiÁdzÀ J®ègÀ°è ¦æÃwAiÀÄ-C©üªÀiÁ£À-UËgÀªÀzÀ ¨sÁªÀ£É ªÀÄÆqÀ¨ÉÃPÀÄ. EzÀÄ ¸ÁzsÀåªÁUÀĪÀÅzÁzÀgÉ ªÀÄÄA¢£À J¯Áè PÉ®¸À PÁAiÀÄðUÀ¼ÀÄ ¸ÀÄUÀªÀĪÁV £ÀqÉAiÀÄÄvÀÛªÉ.
·               §AiÀįÁl PÀ¯É JzÀÄj¸ÀÄwÛgÀĪÀ ¸ÀªÀĸÉåUÀ¼À°è ¥ÉÆæÃvÁìºÀzÀ PÉÆgÀvÉ vÀÄA¨Á EgÀĪÀzÀjAzÀ, zÁ¤UÀ¼ÀÄ F PÀ¯ÉAiÀÄ ¨É¼ÀªÀtÂUÉUÉ ªÀÄÄAzÉ §gÀ¨ÉÃPÀÄ. PÀ¯ÉAiÀÄ C¹ÛvÀé G½AiÀÄ®Ä ¨ÉÃPÁzÀ vÀ£ÀÄ-ªÀÄ£À-zsÀ£À ¸ÀºÁAiÀÄ ªÀiÁqÀĪÀÅzÀgÀ ªÀÄÆ®PÀ §AiÀįÁlªÀ£ÀÄß G½¸À§ºÀÄzÁVzÉ.
·               §AiÀįÁl EA¢£À ¸ÀªÀiÁdzÀ°è G½zÀÄ ¨É¼ÉAiÀÄ ¨ÉÃPÁzÀgÉ CzÀÄ §zÀ¯ÁªÀuÉUÉ vÀgÉzÀÄPÉƼÀî¯É¨ÉÃPÀÄ. «±ÉõÀªÁV PÀxÉAiÀÄ£ÀÄß ¸ÀAQë¥ÀÛUÉƽ¹, ¸ÀgÀ¼ÀUÉƽ¹, ¸ÀªÀÄPÁ°Ã£ÀUÉƽ¹; AiÀiÁªÀ ¸ÀªÀÄAiÀÄzÀ°è JµÀÄÖ ºÉÆvÁÛzÀgÀÆ ¥ÀæzÀ±Àð£À ¤ÃqÀ®Ä ¹zÀݪÁUÀ¨ÉÃPÀÄ.
·               EAzÀÄ PÉêÀ® C£ÀPÀëgÀ¸ÀÛgÀ PÀ¯ÉAiÀiÁV G½¢gÀĪÀ F PÉëÃvÀæPÉÌ CPÀëgÀ¸ÀÜgÀ ¥ÀæªÉñÀ Cwà CUÀvÀåªÉ¤¹zÉ. AiÀiÁªÀÅzÉà ºÀAvÀzÀ ²PÀët ¥ÀqÉzÀ ªÀåQÛAiÀiÁzÀgÀÆ §AiÀįÁlzÀ PÀ¯Á«zÀgÁUÀ®Ä »AdjAiÀĨÁgÀzÀÄ. CPÀëgÀ¸ÀÛ AiÀÄĪÀ ¸ÀªÀÄÄzÁAiÀÄ F PÀ¯ÉAiÉƼÀUÉ ¥ÀæªÉñÀ ¥ÀqÉAiÀĨÉÃPÀÄ. vÁªÀÅ ¥ÀqÉzÀ G£ÀßvÀ eÁÕ£ÀzÀ §®zÀ°è D PÀ¯ÉAiÀÄ£ÀÄß CvÀÄå£ÀßvÀ ¹ÜwUÉ PÉÆAqÉÆAiÀÄå®Ä ¥ÁæªÀiÁtÂPÀ ¥ÀæAiÀÄvÀß ªÀiÁqÀ¨ÉÃPÀÄ.

·               §AiÀįÁlzÀ ¥ÀæzÀ±Àð£ÀzÀ°è ªÀÄÄ¥ÀÄàjUÉÆArgÀĪÀ ºÁqÀÄ ªÀiÁvÀÄ ªÀÄvÀÄÛ PÀÄtÂvÀªÀ£ÀÄß ¥ÀævÉåÃQ¹ ¥ÀæzÀ±Àð£ÀUÀ¼À£ÀÄß ¤ÃqÀĪÀ ¥ÀæAiÀÄvÀßUÀ¼À£ÀÄß ªÀiÁqÀ¨ÉÃQzÉ.

ಮ್ಯಾಸನಾಯಕರ ದೇವರ ಪದಗಳು


ಕರ್ನಾಟಕ ಜಾನಪದ ಅಧ್ಯಯನದ ಚರಿತ್ರೆಯ ಆರಂಭದ ದಿನಗಳಲ್ಲಿ ಜಾನಪದ ಸಂಪತ್ತಿನ ಸಂಗ್ರಹ-ಸಂಪಾದನಾ ಕಾರ್ಯಗಳಿಗೆ ಇದ್ದ ಆಸಕ್ತಿ ಹಾಗೂ ಮನ್ನಣೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲವಾಗಿದೆ. ಇದಕ್ಕೆ ಪ್ರಮುಖವಾದ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು : ಸಂಗ್ರಹ ಮತ್ತು ಸಂಪಾದನೆಯ ಕಾರ್ಯಗಳು ಹೆಚ್ಚಿನ ಮಾನವ ಶ್ರಮ, ಸಮಯ ಮತ್ತು ಹಣವನ್ನು ಬೇಡುವಂತಹದ್ದು. ಆದರೆ ಪ್ರಸ್ತುತ ಸಂದರ್ಭದೊಳಗೆ ಮನುಷ್ಯ ಇವುಗಳಲ್ಲಿ ಯಾವುದೊಂದನ್ನೂ ದಾರಾಳವಾಗಿ ಬಳಸುವ ಸ್ಥಿತಿಯಲ್ಲಿ ಇಲ್ಲದಿರುವುದು.  ಎರಡು:ಜನಪದ ಅಧ್ಯಯನ ಕ್ಷೇತ್ರದಲ್ಲಿ ಸಂಗ್ರಹ ಮತ್ತು ಸಂಪಾದನೆಯ ಕ್ಷೇತ್ರಗಳು ಸೃಜನಶೀಲ ಅಲ್ಲದವುಗಳು ಎಂಬುದಾಗಿ ಪರಿಗಣಿತವಾಗುತ್ತಿರುವುದು. ಹಾಗೆಯೇ ಕರ್ನಾಟಕ ಜಾನಪದ ಸಂಪತ್ತು ಈಗಾಗಲೇ ಸಾಕಷ್ಟು ಸಂಗ್ರಹ ಗೊಂಡಿದ್ದು ಸಂಗ್ರಹಿಸಬೇಕಾದ ಅಗತ್ಯವಿಲ್ಲ. ಅಷ್ಟೇ ಅಲ್ಲದೆ ಜಾನಪದ ಜೀವಂತ ಪಳಿಯುಳಿಕೆಯಾದ್ದರಿಂದ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುತ್ತದೆ. ಹಾಗಾಗಿ ಸಂಗ್ರಹಗಳು ನಿಜವಾದ ಅರ್ಥದಲ್ಲಿ ಈoಟಞಟoಡಿe ಎನಿಸದೆ ಆeಚಿಜಟoಡಿe ಎನಿಸುತ್ತವೆ ಎನ್ನುವ ಹೊಸ ಅಭಿಪ್ರಾಯಗಳು ರೂಪುಗೊಂಡಿದ್ದು. ಇವೆರಡು ಕಾರಣಗಳಲ್ಲಿ ಮೊದಲನೆಯದು ಮನುಷ್ಯನ ಸೋಮಾರಿತನ ಹಾಗೂ ಜಿಪುಣತನಕ್ಕೆ ಸಂಬಂಧಿಸಿದ ದೋಷವಾಗಿರುವುದರಿಂದ  ಅವುಗಳನ್ನು ತಿದ್ದುಕೊಳ್ಳುವುದು ಉತ್ತಮ. ಇನ್ನೂ ಎರಡನೇ ಕಾರಣದಲ್ಲಿ ಗುರುತಿಸಿರುವಂತೆ ಹೊಸಕಾಲದ ಜಾನಪದ ಅಧ್ಯಯನಗಳಲ್ಲಿ ರೂಪುಗೊಳ್ಳುತ್ತಿರುವ ಅಭಿಪ್ರಾಯಗಳು ಪೂರ್ಣ ಸತ್ಯವಲ್ಲ. ಜಾನಪದವನ್ನು ಪ್ರದರ್ಶನಾತ್ಮಕ ಸಿದ್ಧಾಂತದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ವಾಂಸರು ’ಯಾವುದೇ  ಜಾನಪದ ಪಠ್ಯ ಒಂದು ಪ್ರದರ್ಶನದಿಂದ ಇನ್ನೊಂದು ಪ್ರದರ್ಶನಕ್ಕೆ  ಭಿನ್ನವಾಗುತ್ತದೆ’ ಎಂಬುದನ್ನು ನಿರೂಪಿಸಿದ್ದಾರೆ. ಹಾಗೆಯೇ ಆಧುನಿಕ ಸಿದ್ಧಾಂತಿಗಳು ವಾದಿಸುವಂತೆ ಕಾಲದಿಂದ ಕಾಲಕ್ಕೆ ಸಮಯ-ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುವ ಜಾನಪದ, ಚರಿತ್ರೆಯ ನಿರೂಪಣೆಗಳಿಗೆ ಮಹತ್ವದ ಆಕರಗಳಾಗಬಲ್ಲವು.
ಕೋಲಾಟದ ಕಲೆ ಭಾರತದಾದ್ಯಂತ ಪ್ರಚಲಿತವಿರುವ ಕಲೆಯಾಗಿದೆ. ಇದು ಪ್ರದೇಶ ಜನಾಂಗ, ಜಾತಿ, ಲಿಂಗ ಇಂತಹ ಯಾವುದೇ ಒಂದು ವಲಯಕ್ಕೆ ಸೀಮಿತವಾಗದೇ ಸರ್ವವ್ಯಾಪಿ ಕಲೆಯೆನಿಸಿದೆ. ಹೀಗೆ ವ್ಯಾಪಕವಾದ ಭೂಪ್ರದೇಶದಲ್ಲಿ ವಿವಿಧ ಜನಸಮುದಾಯಗಳ ನಡುವೆ ಪ್ರಚಲಿತವಿರುವ ಈ ಕಲೆಗೆ ಅಷ್ಟೇ ವೈವಿಧ್ಯಮಯತೆ ಹಾಗೂ ವೈಶಿಷ್ಟ್ಯತೆಗಳು ಇರುವುದು ಕಂಡುಬರುತ್ತದೆ. ಕೋಲಾಟ ಆಟವೂ ಹೌದು ನೃತ್ಯವೂ ಹೌದು ಎಂಬುದು ಅತ್ಯಂತ ಕುತೂಹಲಕಾರಿಯಾದುದು. ಈ ಕಲೆಯಲ್ಲಿ ಸಾಹಿತ್ಯ ಮತ್ತು ನೃತ್ಯಗಳ ಸಾಮರಸ್ಯವನ್ನು ಕಾಣುತ್ತೇವೆ. ಕೋಲಾಟ ಕಲೆಯ ಬೆಳವಣಿಗೆಯ ಚರಿತ್ರೆಯಲ್ಲಿ ಕಂಡುಬರುವ  ಸ್ವಾರಸ್ಯದ ಸಂಗತಿಗಳೆಂದರೆ ಪ್ರಾಚೀನ ಕಲೆಯಾದ ಕೋಲಾಟವು ಮೊದಲು ರಾಜಾಸ್ಥಾನಗಳಿಗೆ ಮಾತ್ರ ಸೀಮಿತವಾಗಿದ್ದು ನಂತರ ಜನಸಾಮಾನ್ಯರ ಕಲೆಯಾಗಿ ಎಲ್ಲರನ್ನೂ ರಂಜಿಸುವ, ಅವರ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಅವಕಾಶವಾಗಿಯೂ ಬೆಳೆಯಿತು. ಹಾಗೆಯೇ ಆರಂಭಕ್ಕೆ ಪುರುಷರು ಮಾತ್ರ ಭಾಗವಹಿಸುತ್ತಿದ್ದ ಈ ಕಲೆ ಕಾಲ ಬದಲಾದಂತೆ ಸ್ತ್ರೀಯರಿಗೂ ಪ್ರವೇಶಾವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ ಮೊದಲು ಕೇವಲ ಮನೋರಂಜನೆಯ ಪ್ರಧಾನ ಉದ್ದೇಶ ಹೊಂದಿ ಲೌಕಿಕ ಕಲೆ ಎನಿಸಿದ್ದು ಮುಂದುವರಿದಂತೆ ಧಾರ‍್ಮಿಕ ಆಯಾಮವನ್ನು ಪಡೆದುಕೊಂಡಿದೆ. ವಿಶೇಷವಾಗಿ ವೈಷ್ಣವ ಧರಕ್ಕೂ ಕೋಲಾಟಕ್ಕೂ ನಿಕಟ ಸಂಬಂಧವಿರುವುದನ್ನು ಗುರುತಿಸಬಹುದು. ಗೋಪಿಕಾ ಸ್ತ್ರೀಯರು ಮತ್ತು ಶ್ರೀಕೃಷ್ಣನ ಮಧ್ಯೆದ ಕೋಲಾಟ ಧರ‍್ಮ ಪ್ರಚಾರದ ಉದ್ದೇಶಕ್ಕೆ ತಿರುಗಿರುವುದನ್ನು ಇಂದು ಕಾಣುತ್ತೇವೆ. ಮುಖ್ಯವಾಗಿ ಕೋಲಾಟದ ಪದ್ಯ ಸಾಹಿತ್ಯ ವೈಷ್ಣವ ಧರ‍್ಮ ಪ್ರಚಾರದ ಮಾಧ್ಯಮವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಂತಹ ಹಲವು ವೈಶಿಷ್ಟ್ಯತೆಗಳನ್ನೊಳಗೊಂಡ ಈ ಕಲೆ ಭಾರತದಾದ್ಯಂತ ನೂರಾರು ಬಗೆಗಳಲ್ಲಿ ಪ್ರಚಲಿತವಿರುವುದನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿಯೂ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದಿರುವಷ್ಟು ಕೋಲಾಟಗಳ ಸಂಖ್ಯೆ ಮತ್ತು ವೈವಿಧ್ಯತೆಯನ್ನು ಕಾಣಬಹುದು.ಸದ್ಯಕ್ಕೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೋಲಾಟ ಪ್ರಚಲಿತವಿದ್ದು ಇಲ್ಲಿ ಬಳಕೆಗೊಳ್ಳುತ್ತಿರುವ ಸುಮಾರು ೧೪೦ ಕ್ಕೂ ಹೆಚ್ಚಿನ ಕೋಲಾಟದ ವಿಧಗಳನ್ನು ಗುರುತಿಸಲಾಗಿದೆ.
ಇಷ್ಟೊಂದು ಶ್ರೀಮಂತ ಪರಂಪರೆಯಿರುವ ಕರ್ನಾಟಕದಲ್ಲಿ ಕೋಲಾಟ ಪದಗಳ ಸಂಗ್ರಹಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲವಾದರೂ ಪ್ರಯತ್ನಗಳೇನು ನಿರಾಶದಾಯಕವಾಗಿಲ್ಲ. ಕನ್ನಡದ ಸಂದರ್ಭದಲ್ಲಿ ಈವರೆಗೂ ಕೋಲಾಟದ ಪದಗಳ ಹಲವಾರು ಸಂಗ್ರಹಗಳು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಪ್ರೊ. ಮಳಲಿ ವಸಂತಕುಮಾರ ಅವರ ಕೋಲಾಟದ ಪದಗಳು, ಡಾ. ಎಸ್. ಪಿ. ಪದ್ಮಪ್ರಸಾದ್ ಅವರ ಕೋಲಾಟಗಳು ಮತ್ತು ಕೋಲು ಪದಗಳು, ಎಸ್.ವಿ. ರಂಗಣ್ಣ ಅವರ ಕೋಲ್ ಕೋಲ್ ಕೂಡಿಬರಲಿ, ಡಾ. ಬಸವರಾಜ ಮಲಶೆಟ್ಟಿ ಅವರ ಕೋಲಾಟದ ಪದಗಳು ಮುಖ್ಯವಾಗಿವೆ. ಈಚೆಗೆ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಮಾಲಿಕೆಯಲ್ಲಿ ಕರ್ನಾಟಕದ ಕೋಲಾಟದ ಪದಗಳ ಪ್ರಾತಿನಿಧಿಕ ಸಂಕಲನವನ್ನು ಹೊರತಂದಿದೆ. ಡಾ. ಸೋಮನಾಥ ನುಚ್ಚ ಅವರು ಸಂಪಾದಿಸಿದ್ದು ಇದರಲ್ಲಿ ಈವರೆಗೂ ಪ್ರಕಟವಾಗಿರುವ ಸಂಕಲನಗಳಲ್ಲಿ ಮುಖ್ಯವಾದ ಪದಗಳನ್ನು ಆಯ್ದು ಅವುಗಳ ಜೊತೆಗೆ ತಾವು ಸಂಗ್ರಹಿಸಿರುವ ಪದಗಳಲ್ಲಿ ಕೆಲವನ್ನು ಸೇರಿಸಿ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ೩೫೭ ಪದಗಳಿವೆ. ಇವುಗಳ ಜೊತೆಗೆ ಕೋಲಾಟಗಳನ್ನು ಕುರಿತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸಿರುವ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರ ಪ್ರಯತ್ನ ಮತ್ತು ಕರ್ನಾಟಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರು ಈ ಬಗೆಗೆ ನಡೆಸುತ್ತಿರುವ ಸಂಶೋಧನಾ ಅಧ್ಯಯನಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥ ಪ್ರಯತ್ನಗಳಿಗೆ ನಾನು ಈ ಸಂಕಲನದ ಮೂಲಕ ಕೈಜೋಡಿಸಿದ್ದೇನೆ ಎಂಬುದು ನನ್ನ ವಿನಮ್ರ ಭಾವನೆ. ಪ್ರಸ್ತುತ  ಸಂಕಲನದಲ್ಲಿ ೧೬೦ ಹಾಡುಗಳಿದ್ದು ಇವು ಯಾವುವು ಕೂಡ ಈವರೆಗೆ ಎಲ್ಲಿಯೂ ಪ್ರಕಟವಾಗದೇ ಇದೇ ಮೊದಲಬಾರಿಗೆ ಪ್ರಕಟಗೊಳ್ಳುತ್ತಿವೆ ಎಂಬುದು ಈ ಸಂಕಲನದ ಮಹತ್ವವನ್ನು ಹೆಚ್ಚಿಸಿದೆ ಎಂದು ಭಾವಿಸುತ್ತೇನೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಎಂಬ ಮ್ಯಾಸ ಬೇಡ ಬುಡಕಟ್ಟಿನ ಒಂದು ಹಟ್ಟಿ. ತೆಲಗು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಇವರು ಚನ್ನಕೇಶವ ಮತ್ತು ತಿಮ್ಮಪ್ಪನ ದೈವದ ಒಕ್ಕಲು. ಈ ಹಟ್ಟಿಯೊಳಗೆ ಮಕ್ಕಳು, ವಯಸ್ಕರು,ಗಂಡಸರು,ಹೆಂಗಸರು ಇಂಥ ಯಾವುದೇ ಬೇಧವಿಲ್ಲದೆ ಕೋಲಾಟವಾಡುತ್ತಾರೆ. ಇಲ್ಲಿ ಕೋಲಾಟ ಬರೀ ಮನೋರಂಜನೆಯಾಗಿರದೇ ಧಾರ್ಮಿಕ ಆಯಾಮದೊಳಗೂ ಬಳಕೆಯಾಗುತ್ತಿರುವುದು ಗಮನಾರ್ಹ. ಹಬ್ಬದ ದಿನಗಳಲ್ಲಿ ವಿಶೇಷ ಸಮವಸ್ತ್ರಗಳನ್ನು ಧರಸಿ ದೇವರಗುಡಿಯ ಮುಂದೆ ಆಡುವ ಕೋಲಾಟ ಮನೋರಂಜನೆಯಾದರೆ, ಅದೇ ದೇವರ ಗುಡಿಯ ಮುಂದೆ ಮಳೆ ಬರಲೆಂದು ದೇವರನ್ನು ಭಕ್ತಿಯಿಂದ ಧ್ಯಾನಿಸಿ ಆಡುವ ಕೋಲಾಟವು ಧಾರ್ಮಿಕವೆನಿಸುತ್ತದೆ. ಇಂಥ ವಿವಿಧ ರೀತಿಯ ಕಾರ್ಯಾಕಾರಣಗಳೊಂದಿಗೆ ಪ್ರಚಲಿತ ವಿರುವ ಇಲ್ಲಿನ ಕೋಲಾಟ ಒಂದು ಊರಿನಲ್ಲಿ ಬಳಕೆಗೊಳ್ಳುತ್ತದೆ ಆದರೂ ಈ ಊರಿಗೆ ಮಾತ್ರವೇ ಸೀಮಿತವಲ್ಲ. ಮಧ್ಯ ಕರ್ನಾಟಕದ ಅನೇಕ ಊರುಗಳಲ್ಲಿ ಬಳಕೆಯಲ್ಲಿವೆ. ಆದರೆ ಇಲ್ಲಿಯ ಸ್ವರೂಪ ಮಾತ್ರ ವಿಶಿಷ್ಟ. ಸ್ತುತಿ ಪದಗಳು, ತಾಳುಪುಕಡ್ಡಿ ಪದಗಳು, ಹೆಜ್ಜೆಕೋಲು ಪದಗಳು, ವಿಶಿಷ್ಟ ಕೋಲಾಟದ ಪದಗಳು, ಮುತ್ತಯ್ಯಗಳ ಕೋಲಾಟದ ಪದಗಳು,ಕೊಂಡಾಡುವ ಪದಗಳು-ಭಾಗ-೧,ಭಾಗ-೨, ಮಂಗಳಾರತಿ ಪದಗಳು ಇವೇ ಆ ಎಂಟು ವಿಭಾಗಗಳು. ಈ ಭೂ ಪ್ರದೇಶದ ಕೋಲಾಟದ ಸಾಮಾನ್ಯ ಸ್ವರೂಪವೆಂದರೆ ಪ್ರತೀ ಕೋಲಾಟದ ತಂಡದಲ್ಲಿ ಹೊರಗಿನ ಗುಂಪು ಒಳಗಿನ ಗುಂಪು ಎಂಬ ಎರಡು ಗುಂಪುಗಳು ಇರುತ್ತವೆ. ಇವರಡು ಗುಂಪುಗಳು ಕೋಲುಗಳನ್ನು ಬಡಿಯುತ್ತಾ ಮಂಡಲಾಕಾರದಲ್ಲಿ ನೃತ್ಯಮಾಡುತ್ತಾರೆ. ನೃತ್ಯದ ಜೊತೆಗೆ ಈ ಸಾಹಿತ್ಯವನ್ನು ಹಾಡುತ್ತಾರೆ.  ಕೋಲುಗಳನ್ನು ಪಡೆಯುವ ಕ್ರಮದಲ್ಲಿ ತಾಳುಪುಕಡ್ಡಿ, ಎತ್ತು ಕಡ್ಡಿ, ಗೀರ್ ಕಡ್ಡಿ, ಹೆಜ್ಜೆಕೋಲು ಕಡ್ಡಿ, ಮುತ್ತಯ್ಯಗಳ ಕೋಲು ಕಡ್ಡಿ ಎನ್ನುವ ಕ್ರಮಗಳಿವೆ. ಪ್ರತೀ ಕೋಲಾಟದ ನೃತ್ಯವು ತಾಳಪುಕಡ್ಡಿ ಹಾಡುಗಳಿಂದ ಆರಂಭಗೊಳ್ಳುತ್ತದೆ. ತಾಳುಪುಕಡ್ಡಿ ಕೋಲಾಟದಲ್ಲಿ ನಿಧಾನ ಗತಿಯ ನೃತ್ಯ ಹಾಗೂ ಹಾಡು ಇಲ್ಲಿ ಪ್ರಧಾನವಾಗಿರುತ್ತದೆ. ಇದರ ನಂತರ ನೃತ್ಯ ಹಾಗೂ ಹಾಡುಗಳು ವೇಗಪಡೆದು ತೀವ್ರಗತಿಯ ಸ್ಥಿತಿಯನ್ನು ತಲುಪುತ್ತವೆ. ಹಾಗೆಯೇ ವಿವಿಧ ರೀತಿಯ ಕೋಲು ಕ್ರಮಗಳು ಬಳಕೆಗೊಳ್ಳುತ್ತವೆ. ಇಲ್ಲಿ ಇರುವ ಒಟ್ಟು ಹಾಡುಗಳಿಗೆ  ೨೯ ಬಗೆಯ ವಿವಿಧ ನೃತ್ಯಗಳು ಮತ್ತು ಐದು ರೀತಿಯ ಕಡ್ಡಿ ಬಡಿಯುವ ಕ್ರಮಗಳು ಇವೆ. ಕೊಂಡಾಡುವ ಪದಗಳಲ್ಲಿ ಮಾತ್ರ ನೃತ್ಯ ಹಾಗೂ ಕಡ್ಡಿ ಬಡಿತಗಳಿರದೆ ಒಳ ಹೊರ ಗುಂಪುಗಳು ಎದುರುಬದುರಾಗಿ ನಿಂತು ಪರಸ್ಪರ ಪ್ರಶ್ನೋತ್ತರ ರೂಪದಲ್ಲಿ ಕೇವಲ ಹಾಡುಗಳನ್ನು ಮಾತ್ರ ಹಾಡುವುದುಂಟು.
ಈಗಾಗಲೇ ಹೇಳಿದಂತೆ ಈ ಹಟ್ಟಿಯ ಜನರ ಭಾಷೆ ಕನ್ನಡ ಮಿಶ್ರಿತ ತೆಲಗು. ಇದನ್ನು ಜಾನಪದ ತಜ್ಞರು, ಭಾಷಾ ವಿಜ್ಞಾನಿಗಳು ಕಂದೆಲಗು ಎಂದು ಕರೆದಿದ್ದಾರೆ. ಈ ಕಂದೆಲಗು ಭಾಷಿಕರು ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಇಲ್ಲಿನ ಹಾಡುಗಳನ್ನು ಹಾಡಿದ್ದಾರೆ. ಅವುಗಳನ್ನು ಯಾವುದೇ ಭಾಷಾಂತರವಿಲ್ಲದೆ ನೇರವಾಗಿ ಇಲ್ಲಿ ಮುದ್ರಿಸಲಾಗಿದೆ. ತೆಲಗಿನ ಹಾಡುಗಳು ಕನ್ನಡ ಭಾಷಿಕರ ಅರ್ಥಗ್ರಹಿಕೆಗೆ ಯಾವುದೇ ರೀತಿಯ ತೊಂದರೆಯಾಗಲಾರದು. ಇಲ್ಲಿ ಬರುವ ಪದಗಳು ಸಮುದಾಯಗಳೊಳಗಿಂದ ಮೂಡಿ ಬಂದ ಸೃಜನಶಿಲ ಸಂವೇದನೆಗಳಾಗಿವೆ. ಸ್ತುತಿ ಪದಗಳಲ್ಲಿ ಕಾಣುವಂತೆ ಗಣಪತಿ,ಗುರು,ಸೂರ್ಯ, ಚಂದ್ರ,ರಾಮ,ಲಕ್ಷ್ಮಣ,ಸೀತೆ,ಹನುಮಂತ ಇವೇ ಮೊದಲಾದ ದೈವಗಳನ್ನು ಸ್ತುತಿಸಲಾಗಿದೆ. ಈ ದೈವಗಳಿಗಿರುವ ಅಂತಃ ಶಕ್ತಿಗೆ ಸಲಾಂ ಮಾಡಲಾಗಿದೆ. ಎರಡನೇ ಭಾಗದಲ್ಲಿ ಬರುವ ತಾಳಪುಕಡ್ಡಿ ಪದಗಳಲ್ಲಿ ಹಲವಾರು ಪದಗಳು ದಾಸರ ಪದಗಳು, ತತ್ವಪದಗಳಗಿದ್ದು ಆ ಹಾಡುಗಳನ್ನು ತಮ್ಮ ತಾಳ-ಲಯಗಳಿಗೆ ಅನುಗುಣವಾಗಿ ಹೊಂದಿಸಿಕೊಂಡು ಹಾಡಲಾಗಿದೆ. ಕೋಲಾಟಕ್ಕೂ ಕೃಷ್ಣ ಸಂಪ್ರದಾಯಕ್ಕೂ ಇರುವ ನಂಟನ್ನು ಗಮನಿಸಿದರೆ ದಾಸರ ಹಾಡುಗಳನ್ನು ಇವರು ಕೋಲಾಟಕ್ಕೆ ಬಳಸಿಕೊಂಡಿರುವುದು ಕಾಕತಾಳಿಯವೇನಲ್ಲ ಎನಿಸುತ್ತದೆ. ಉಳಿದಂತೆ ಮಳೆರಾಯ, ತಿಪ್ಪೇಸ್ವಾಮಿ, ಹನುಮಂತ, ಮದಕರಿ ಮೊದಲಾದವರ ಗುಣಗಾನವಿದೆ. ಈ ಭಾಗದ ಪದಗಳಲ್ಲಿ ಪ್ರಣಯದ ಕಥೆಗಳು ಬಹಳಷ್ಟಿವೆ. ಬಳ್ಳಾರಿ, ನಾಯಕನಹಟ್ಟಿ ಮೊದಲಾದ ಊರುಗಳ ವರ್ಣನೆಯಿದೆ. ಕಥಾ ಪ್ರಧಾನವಾದ ಗುಣ ಈ ಭಾಗದ ಎಲ್ಲಾ ಹಾಡುಗಳಿಗೂ ಇದೆ. ಎತ್ತು ಕಡ್ಡಿ ಕೋಲು ಪದಗಳಲ್ಲಿ ಬಳಸಲ್ಪಡುವ ಹಾಡುಗಳು ಕಥಾ ಪ್ರಾಧಾನ್ಯತೆಗಿಂತ ಕುಣಿತದ ಲಯ ತಾಳಕ್ಕೆ ಹೆಚ್ಚಿನ ಮಾನ್ಯತೆ ಇದೆ. ಇನ್ನೂ ಕೊಂಡಾಡುವ ಪದಗಳಲ್ಲಿ ಮ್ಯಾಸಬೇಡರು, ಕಾಡುಗೊಲ್ಲರು ಮೊದಲಾದ ಬುಡಕಟ್ಟುಗಳ ಆರಾಧ್ಯ ದೈವಗಳ ಬಗೆಗಿನ ವಿವರಣೆಗಳಾಗಿವೆ.
ವಡೆಲು
ಮಿಕಿ ದಂಡು ಪೈಣಾಲಾನಾ ತೂರುಪುಂಡೆ ತುಮ್ಮೆತಾಲಾ, 
ಸ್ವಾಗಲೇಟೇ ನೌಲೇ ತಲ್ಲಿರಾ 
ಮೇಲೌರಾ ಜಾಣ, ಸಾಗಿದಾರಾ ಸುಗುಣಲೆತ್ತುರಾ 
ಮುಕ್ಕ ಸುಕ್ಕ ಬಲ್ಲರಾವೇ ಮುನ್ನೂರ‍್ವೇಯ್ಲು ಪಕ್ಕಲಾನಾ,
ತೊಡಸಾರ ಬಲ್ಲನಾವೇರಾ 
ಮೇಲೌರ ಜಾಣ, ತೊಂಬಯ್ವೇಲು ಪಕ್ಕಲಾನಾರಾ

ಕಂಪಳ ದ್ಯಾವರಿ
ಅದಿ ಮಲಾ ಈದೀ ಮಲಾ ನೊಡಿಮಿದಯ್ಯ ಸ್ವಾಮೀಮಲಾ, 
ಸ್ವಾಮಿ ಮಲಾ ಕಿಂದಿವಾಡುರಾ 
ಮೇಲೌರಾ ಜಾಣ, ಸನ್ನ ನಾಮಲು ಚಿನ್ನವಾಡುರಾ 
ಅಡ್ಡಕೊಟ್ಟು ವಡ್ರಿಸಿಂಬ ನೆತ್ತಿಮೀದ ಪೆಟ್ಟಿಕೋನಿ,
ದಂಡುಲಾಕಿ ತಾನೇ ವಚ್ಚೇರಾ
ಮೇಲೌರಾ ಜಾಣ, ಬುದ್ಧಿವಂತಡು ಭೂಮಿರಾಜುರಾ

ಸಿಂತಗುಟ್ಲು ಬೋರುವ
ಬೋರು ಬೋರು ಕಿನ್ನೀರಾಲು ಮಾಯಾಮಯ್ಯ ಮಾಯಗುರು, 
ವಾರಪಾರಪು ಜೆನ್ನೆ ಪಾಲುರಾ
ಮೇಲೌರಾ ಜಾಣಾ, ನ್ಯಾಲಪಾಲು ಸೇಸಿಕೊಂಟೀರಾ 
ಕೀಲು ಕಟ್ಲು ತೇರೂಮಿಂದ ಕಿನ್ನರಾಲೇ ಮೀಕಿ ಜಾಣಾ, ಕಿನ್ನರಾಲೇಕಾಯಲೊಂಪುರಾ
ಮೇಲೌರಾ ಜಾಣ, ಕನ್ನಲೆತ್ತಿ ಮಮ್ಮ ಚೂಡುರಾ

ನಲಗೇತಲು ಮುತ್ತೆಗಾರು 
ಗುಂಡುದಿರುಗ ಬಾರಾನಾವೆ ಗುಮ್ಮಡೇಲು ಸ್ವಾಗೆಲಾನ, 
ದಿಮ್ಮ ತಿರುಗಾ ಬಾರಾನಾವೇರಾ 
ಮೇಲೌರಾ ಜಾಣಾ, ಸೂರೆಗೊಮ್ಮುಲನ್ನಗಾರೂರಾ 
ಆಕಿಲ ಮಾಕಿಲ ಗಂಟೆ ರ‍್ವಾಕಾಲೆತ್ತಿ ದೊಂಚುಲೇದು 
ನೂಕ ಸೇಸಿನಿ ಗುಮ್ಮಲೊಚ್ಚೇರಾ
ಮೇಲೌರಾ ಜಾಣಾ, ರೊಂಡು ಸೇತುಲೆತ್ತ ಮುಕ್ಕುರಾ 

ಚನ್ನಯ್ಯ ಕ್ಯಾಸಯ್ಯ
ಕೂಡುನೌಡು ಕೂಡಿತಿಮ್ಮಯ್ಯ ಕುಂಡಾಲಾನಾ ವಂಡಿತಿಮಯ್ಯ, 
ಚನುಗನಪಲ್ಲಿ ಸೆರುವುಯನಕಾರಾ
ಮೇಲೌರಾ ಜಾಣ  ಪಾಲಕಾಯಿಲು ಇಸುಮುಲಾಯಾರಾ 
ಯಂಡಿ ಕಟ್ಲು ತೇರುಮಿಂದ ಯಾಡಾತಿರಿಗಿತಿಮೇಮಿ 
ಸೇತು ಪಾಲ ಮಕ್ಕುಲು ಕೂಡಾನವ್ಡುರಾ
ಮೇಲೌರಾ ಜಾಣಾ, ಪಾಲಪೋಗುಲು ಪೈನಾ ಪಾರೇರಾ 

ಕಾಟಪ್ಪಡು
ಕೋಟಿಲಿಂಗಾಲೊಡಿಕಟ್ಟೀಕೋನಿ ಕಲ್ಕಧರ್ಮರಾಜು ಯಡ್ಲೆ,
 ಜಂಬು ದೀಪಾಲು ಗಡ್ಡಮಿಂದಾರಾ
ಮೇಲೌರಾ ಜಾಣಾ, ಕೊಟಿ ಮೊಕ್ಕುಲು ಕಲಗ ಮೊಕ್ಕೇರಾ 
ಕುಂದಿಪೆ ಬಂಡಾಮಿಂದ ಏಸಿಂಡಾಡು ಶಾಸನಾಲು 
ಎಂಡಿ ಪತ್ತುರ‍್ಲು ಯಡ್ಲ ಸದುವೇರಾ 
ಮೇಲೌರ ಜಾಣ ದಾನ ಪತ್ರಲು ಸದುವೇರ

ನನ್ನಲು ಮುತ್ತೆಗಾರು
ಮಂಚಿದೀ ಮಲ್ಲೆಲುದಂಡಾ ಮಂಚಮಾಕಿ ತಗಲಾ ಏಸಿ ಮಂಚಿಮಗುಡೇ ದಂಡುಬೋಯೇರಾ 
ಮೇಲೌರಾ ಜಾಣಾ ಮಂಚಮೆಕೆ ಮನಸುರಾದೂರಾ 
ಮದಿರ ರ‍್ಯಾಗಟಿಗಡ್ಡಿ ಕುಸುವು ಸ್ವಾಮಾಲು ಬಂಡಾ ಸಲಮ ನೀಳು ಬೋಡಿಗೊಟ್ಟು ಈದುಲೋನಾ 
ಮೇಲೌರಾ ಜಾಣಾ ದುಂಡು ಮಲ್ಲೆಲು ದುಲ್ಲಬಾರೇರಾ 

ನಲಗೇತಲ ಮುತ್ತೆಗಾರು
ಚಿನ್ನದಯ್ನ ಕ್ವತ್ತಗುಡ್ಡಮು ಸೃಂಗಾರುಮೈನ ವನುಮುಲಾನಾ ತೂಗಿನಿಮ್ಮಲಯ್ಯಿ ತೂಗೇರಾ
ಮೇಲೌರಾ ಜಾಣಾ ಬೂದಿ ಬೆಳವಲಹಿಂಡೇ ಪೋಯೇರಾ
ನಲಗೇತುಲು ನೆಗುರುಮಿಂದ ದಿಮ್ಮದಿರಗ ಬಾರಾನಾವೆ ಮಕಮು ಪಲ್ಲ್ಲಿ ಮಾರಾ ಚಲುವಾಲು
ಮೇಲೌರಾ ಜಾಣ ಸಿಟಿ ಬೆಳವಲು ಹಿಂಡು ಮಡ್ಲೇರಾ 

ದಡ್ಡಿಸೂರನಾಯಕ
ಯರ್ರಮಂಚೀ ರೇವೋಲಾನಾ ಎದುರು ಎಕ್ಕೆ ರಾಜುಮೀನು 
ರಾಜುಮಾನ್ಯಲು ಕೂಡಾನೌಡೂರಾ 
ಮೇಲೌರಾ ಜಾಣಾ ಮಕಿನಿ ಮಕ್ಕಲು ನಾವೇ ಅನ್ನುರಾ 
ನಿಮ್ಮಪಂಡೆ ನಿರ್ವರ್ಣಾಲು ನೀಲದಟ್ಟಿ ಮಾನ್ಯಡುದಾರ
ನಿಡಗಂಟಿ ನ್ಯಾಲಾನಾನಾರಾ 
ಮೇಲೌರಾ ಜಾಣ ಮಕಿನಿ ಮಕ್ಕುಕಿ ತಾನೇ ವಚ್ಚೆರಾ 

ನರಸಿಂಹ ಓಬಿಳಿದ್ಯಾವರಿ
ಅಡ್ಡ ಕಟ್ಟು ವಡ್ರಿಸಿಂಬ ದಡ್ಡಿಲಾಕಿ ವಚ್ಚೆನಾವೇರಾ ಗುಬ್ಬಗುಡುಸುನಾನವಾಡೂರಾ 
ಮೇಲೌರಾ ಜಾಣಾ ಭೂಮಿರಾಜೂರಾ 
ಮುರ್ರಮಲಾ ವನುಮುಲಾನಾ ಯನುಗವೃಕ್ಷಲಾಯಿ ಪುಟ್ಟೇರಾ 
ಆಕ ಚೇಳಲಯ್ಯಿ ಪುಟ್ಟೇರಾ 
ಮೇಲೌರಾ ಜಾಣಾ ಅಡವಿ ಸಂಚಲು ಬತುಮು ಸೆಡಿಪೇರಾ 

ದೊಡ್ಡೋಬಳಿದ್ಯಾವರಿ  
ಉಟ್ಟು ಉಟ್ಟೂ ವಾನಾಲಾನ ವುಂಟೀರಾ ದಾನಿಂಟಿ ಯನಕ ಮುಂಡಸಾಕಿನಿ ಮುಚ್ಚು ಕುಕ್ಕರಾ 
ಮೇಲೌರಾ ಜಾಣ ಪೊಂಡ ಪೋತೆ ಪಕ್ಕಾಗರಿಸೇರಾ 
ಉಂಡಿ ಉಂಡಿ ಊಂಡ್ಯಾಲಾಕ ಪಂಡ್ಲು ದಾನ್ನಿ ಸೇಸುಕೊಂಟಿ ಜಲ್ಲು ತುರುಬೇ ಜಲ್ಲು ಗರಿಸೇರಾ 
ಮೇಲೌರಾ ಜಾಣಾ ನೈಯ್ಯಬೋತೇ ನೆತ್ತಿ ಕುಕ್ಕೆರಾ

ಯರಗಟ್ಟ ನಾಯಕ
ಏಸಿಂಡೆದಿ ವನುಮಲ್ಲೆಲು ದಂಡ ಪುಟ್ಟಿಂಡೇದಿ ಜಗು ಜಂಪುಲು 
ಗೊಡಗು ವಜ್ಜರಾಲೇ ವಾಕೇದುರು ಬೂರಾ
 ಮೇಲೌರ ಜಾಣಾ ತೆಲುವ ಚಪ್ಪಾನ ಜಾನಾಡೈತೀರಾ 
ಗೋಲು ಗರೀ ಕಟ್ಟಿನೊಮ್ಮು ಗುಂಡೆಲಾಕೆ ವಾಲೆನಾರಾ
ಪಂತಗರೀ ಕಟ್ಟೀನಮ್ಮಾರ 
ಮೇಲೌರಾ ಜಾಣ ಹೃದಯಮಾಕೆ ಬ್ರತಮೇ ಸೆಡಿಪೇರ

ಪದಿ ಮುತ್ತೆಗಾರು
ಸಿಂತಮಾನೂ ಸಿಲುಕಾಲಾರಾ ಚಿನ್ನವಾನ್ನಿ ಕಾನೇರೇಮಿ
ಮುರ್ರ ಮಲಾ ವನುಮುಲಾನಾರಾ  
ಮೇಲೌರ ಜಾಣ ಸನ್ನ ಮಲ್ಲೆಲು ದುಲ್ಲ ಬಾರೆರಾ 
ಪಾರಿ ಪಾರಿ ವಚ್ಚೀನಾವೇ ಪಾಲಪೋಗುಲ 
ಗವ್ವಾಲಾಲಾ ಮುರ್ರಮಾನು ವನುಮುಲಾನಾರ 
ಮೇಲೌರಾ ಜಾಣಾ ವಕ್ಕಮಾನೀಕಿ ಸಿಲುಕಲು ವಾಲೇರ

ಗಾದರಿ ದ್ಯಾವರಿ
ಉರುವಕೊಂಡ ಉರ್ತಪಿಲ್ಲಾ ಉಗ್ಗಿಪೋಸಿ ಸಾಕೂದಾಮು
ಪೆನಗೊಂಡ ಲಗುಡ ವಚೈರಾ 
ಮೇಲೌರಾ ಜಾಣಾ ಪಂತಲಾಡಿ ಕೊಂಡಪೋಯೇರಾ
ಉತ್ತರಾಲೆ ಉರುಮಾಲುರುಮೆ ನಾದರಾಲೆ 
ಮೆರಗ ನೆರಸೆ ಗಾದ್ರಯ್ಯ ಕನುವಲಾನಾರ
ಮೇಲೌರ ಜಾಣ ಸನ್ನ ಮುತ್ತುಲೆ ವಾನಗುರೇಸರಾ

ಬೋಸೇದೇವರು
ಎದ್ದುಮೆಟ್ಟೂ ಮೂಲಾನಾ ಉಬ್ಬನಾರಾ ಗುಬ್ಬಾಗೊಡುಗು ಕಿಂದಿವಾಡೂರಾ 
ಮೇಲೌರ ಜಾಣ ಗೆಜ್ಜೆಲೆ ಬ್ರಹ್ಮದಂಡವಾಡೂರ ಭೂಮಿರಾಜರಾ 
ನಲ್ಲಟಿ ನಲ್ಲಟೀವಾಡೂ ನಾಮಾಲೇ ಸಕ್ಕಾಳಿವಾಡು ಬ್ರಹ್ಮದಂಡವಾಡೂರ 
ಮೇಲೌರ ಜಾಣಾ ಗಂಡಿ ಕ್ವಾಟ ತಾಳೆಗಾಡೂರಾ

ದಡ್ಡಿ ಕಾಮನಾಯಕ
ಮುನ್ನೂರುಟ್ಲು ಮುದ್ದಾಬೋನಾ ಜಾರಾಮಡಿಸೆ ರಾಜೂಕಾಮು ಸಾಲಾ ಸಿಂತಾಲು ವನುಮುಲಾನಾರಾ
ಮೇಲೌರಾ ಜಾಣ ಸುತ್ತುಮಲ್ಲೆಲು ಸೆಡಮೊಕ್ಕೆರಾ 
ಪುಲಿ ಉಗುರೆ ಪಚ್ಚಡುಮುಗೊಪ್ಪಿ ಪಂಜರು 
ಬಾಕೇ ಸೇತುಲ ಪೆಟ್ಟಿ ಸಿಂತಗುಟ್ಲು ನೋಮೂಲಾನಾರಾ 
ಮೇಲೌರಾ ಜಾಣಾ ಮುತ್ತುಲೇ ಬಸುವಂತಲಾಡೇರಾ 

ಚಿತ್ತರು ದ್ಯಾವರಿ
ಎದ್ದು ದೊಕ್ಕಿನಿ ಎಜ್ಜೆನಾನಾ ಉಬ್ಬೆನಾರಾ ಗುಬ್ಬಾಗೊಡುಗುಲು ಕಿಂದಿ ವಾಡೂರಾ 
ಮೇಲೌರಾ ಜಾಣಾ ಅಡ್ಡ ಬೊಟ್ಟುಲು ದೊಡ್ಡವಾಡುರ 
ಊಟಕುಂಟಾ ವನುಮುಲಾನಾ ಯಾಡತಿರಿಗಿ ಮೇಮುಚೇತು ಮಿಕುಮಲೇನ ದೊಡ್ಡವನ್ನೇ ದಂಡೂನೆಸೇರಾ  
ಮೇಲೌರಾ ಜಾಣಾ ಆನೆಗಲ್ಲುಕಿ ಏಗಾಬೋಯೇರಾ 

ಮಲ್ಲಿನಾಯಕನ ಬೊಮ್ಮದೇವರು
ಸನ್ನ ಪಂಗು ಪಟ್ಟಿಕೋನಿ ಸಂದಮಾಮ ರಂಗ ಸಂದಮಾಮ 
ಜೆನ್ನಿವಾರಮೇಸಿಕೋನಿ ಸಂದಮಾಮ 
ಮುನ್ನೂರು ಗುಂಚೆಲು ಮುಜುಗುಲೋನಾ ಸಂದಮಾಮ ರಂಗಸಂದಮಾಮ
ಪಂಚಂಗಾಲೆ ಪಾರ ಸದುವೆ ಸಂದ ಮಾಮ

ಜಗಲೂರುಮುತ್ತೆ
ತೂರುಪಾಕಿಲಿ ತೋರಬಡಿಸೆ ಸಂದಮಾಮ ರಂಗ ಸಂದಮಾಮ
ಪಡುಮಟ್ವಾಕಿಲಿ ಪಾರಾಬಡಿಸೆ ಸಂದಮಾಮ 
ಗಂಗಿ ವಾಕಿಲಿ ಯಡ್ಲನವುಡು ಸಂದಮಮ ರಂಗ ಸಂದಮಾಮ 
ಜೋಗಿ ಚಕ್ಕುರ‍್ಲು ಅಡ್ಡಮಯ್ಯ ಸಂದಮಾಮ 

ಮಂದ ಬೊಮ್ಮದೇವರು
ಪುಟ್ಟಮಿಂದ ಚೆಟ್ಟುಪುಟ್ಟಿ ಸಂದಮಾಮ ರಂಗ ಸಂದಮಾಮ 
ಚಟ್ಟುಮಿಂದ ಚಂಡುಪುಟ್ಟಿ ಸಂದಮಾಮ
ಚಂಡುಮಿಂದ ಮುಳ್ಳ್ಳುಬುಟ್ಟಿ ಸಂದಮಾಮ ರಂಗ ಸಂದಮಾಮ
ಮುಳ್ಳುಮಿಂದ ಬಳ್ಳಿಪಾರೆ ಸಂದಮಾಮ

ಸೂರಪ್ಪಡು
ಏಟೆಗಡ್ಡ ಸೇನುವಾಡು ಸಂದಮಾಮ ರಂಗಸಂದಮಾಮ
ಏಡುಮಟ್ಲು ಮೋಜುಗಾಡು ಸಂದಮಾಮ 
ಎನ್ನ ಮಿಂದ ಗುವಲ್ವಾಲೆ ಸಂದಮಾಮ ರಂಗ ಸಂದಮಾಮ 
ಮರುಮುಮಿಂದ ನೇಯಬಾರೆ ಸಂದಮಾಮ

ಬಂಗಾರು ದೇವರು
ದಿನ್ನಮಿಂದ ದಾನಿನೆಗರು ಸಂದಮಾಮ ರಂಗ ಸಂದಮಾಮ
ದಿಯ್ಯಗಂಬಲೆತ್ತುಲಾನ ಸಂದಮಾಮ 
ಏಟುಪಡಿನ ಮಿಕುಮುತಲ್ಲೆ ಸಂದಮಾಮ ರಂಗ ಸಂದಮಾಮ
ಏಗದಂಕ ಗಂಟಬಾರೆ ಸಂದಮಾಮ???

ರಾಜಲು ದ್ಯಾವರಿ
ಸುಕ್ಕಬಟ್ಟು ಸುರೇನಾಲು ಸಂದಮಾಮ ರಂಗ ಸಂದಮಾಮ
ಎಮ್ರಪೆಟ್ರಿ ಕಂದನಾಲು ಸಂದಮಾಮ 
ರಾಜನಾಲು ದೊಂಚನವುಡು ಸಂದಮಾಮ ರಂಗ ಸಂದಮಾಮ
ಕಾಮರಾಜ ಕೊಡುಕು ಪುಟ್ಟೆ ಸಂದಮಾಮ

ನಲಗೇತು ಯರಗಯ್ಯ 
ಸೀಗಿಮಾನು ಸಿಕಳಗಂಟಿ ಸಂದಮಾಮಾ ರಂಗ ಸಂದಮಾಮಾ 
ಬಾಳಮಾನು ಟಿವ್ವಟಾಯ ಸಂದಮಾಮಾ 
ಗರುಡಾಳು ಮಾನುಕಿಂದ ಸಂದಮಾಮಾ ರಂಗಮಾಮಾ 
ದಕ್ಕಲೇದು ಮುಡುವಲಾಯ ಸಂದಮಾಮಾ 

ಕಂಬಲಯ
ಎದ್ದುಮಿಂದ ಆಮದಾಲು ಸಂದಮಾಮಾ ರಂಗ ಸಂದಮಾಮಾ 
ಎದ್ದು ಮಿಂದ ಏಸಿಕೋನಿ ಸಂದಮಾಮಾ 
ತಾನೆ ವಚ್ಚ್ಚೆ ಕ್ವಂಡಲಾಕಿ ಸಂದಮಾಮಾ ರಂಗ ಸಂದಮಾಮಾ 
ಸನ್ನ ಕಂಬಲೆತ್ತುಲಾಕಿ ಸಂದಮಾಮಾ

ದಡ್ಲು ಮಾರವ
ಚಂದ್ರಗಾವಿ ಸನ್ನಜೀರ ಸಂದಮಾಮಾ ರಂಗ ಸಂದಮಾಮಾ 
ಸೊನ್ನು ಪೆಟ್ಟಿದಕ್ಕನಿಯ್ಯ ಸಂದಮಾಮಾ 
ಸಂದಮಾಮಲಂತ ಗುಬ್ಬ ಸಂದಮಾಮಾ ರಂಗ ಸಂದಮಾಮಾ 
ಗೋರಿ ಪೆಟ್ಟಿ ಸದುವಲೇದು ಸಂದಮಾಮಾ

ರಾಗಿಮಾನು ಸೌಡವ
ರಾಗಿಮಾನು ಪುಟ್ಟನವುಡು ಸಂದಮಾಮಾ ರಂಗ ಸಂದಮಾಮಾ 
ನಾನು ಬಟ್ಟ ಕಟ್ಟನೆರಗು ಸಂದಮಾಮಾ 
ರಾಗಿಮಾನು ರಚ್ಚ ಕೊಚ್ಚೆ ಸಂದಮಾಮಾ ರಂಗ ಸಂದಮಾಮಾ 
ರಾಯ್ಲಿ ಮೆಚ್ಚಿನಾಟದೈತಿ ಸಂದಮಾಮಾ ಗಾಲಿಮಾರವ

ಗಾಳಿ ಮಾರವ
ಯರ್ರಗಟ್ಟು ಏಗುತಾದೆ ಸಂದಮಾಮಾ ರಂಗ ಸಂದಮಾಮಾ 
ಏಪಕ್ವಮ್ಮ ತೂಗುತಾದೆ ಸಂದಮಾಮಾ 
ಯನಕ ವಚ್ಚುನು ಯರ್ರ ಬುಡುಸು ಸಂದಮಾಮಾ ರಂಗ ಸಂದಮಾಮಾ 
ನಿದ್ದರೆಕ್ಕಿ ತೂಗುತಾದೆ ಸಂದಮಾಮಾ

ಗಾಳಿ ಮಾರವ
ಪುಟ್ಟಮಿಂದ ಕವಿಳಿ ಚಟ್ಟು ಸಂದಮಾಮಾ ರಂಗಸಂದಮಾಮಾ 
ಕಾಯಿಗಾಸಿ ಜಗ್ಗುತಾದೆ ಸಂದಮಾಮಾ 
ದೊಡ್ಡಿನಾನ ರೊಡ್ಡಿಬುಟುಸು ಸಂದಮಾಮಾ ರಂಗ ಸಮದಮಾಮಾ 
ನಿದ್ದರೆಕ್ಕಿ ತೂಗುತಾದೆ ಸಂದಮಾಮಾ

ಮುತ್ತೆಗಾರ ಮಾರವ
ಕ್ವಂಡಕಿ ಮಾಯಾವುಲರ್ರೆ ಸಂದಮಾಮಾ ರಂಗ ಸಂದಮಾಮಾ 
ಕೋಗಿಲ್ಯಾಲ ಕುಯ್ಯಲೇದು ಸಂದಮಾಮಾ 
ಕ್ವಂಟಮಿಂದ ಕ್ವಬರಿ ಬಡಸು ಸಂದಮಾಮಾ ರಂಗಸಂದಮಾಮಾ 
ಕೋಗಿಲಯ್ಯಿ ತಾನುಗಿಸೆ ಸಂದಮಾಮಾ 

ಕೆಂಚವ ಕಾಮವ
ಸಲ್ಲ ಕಡವ ಸಂಕದಾಡು ಸಂದಮಾಮಾ ರಂಗ ಸಂದಮಾಮಾ 
ಅರವಸೀಮ ಗೊಲ್ಲದಾಸಿ ಸಂದಮಾಮಾ 
ಮುದ್ರ ಮಾಲಡ ಕ್ಯಾದಿಗೆನ್ನು ಸಂದಮಾಮಾ ರಂಗ ಸಂದಮಾಮಾ
ಮುಡುವಲಕ್ಕೆ ಜಾಮುಲಯ್ಯ ಸಂದಮಾಮಾ


ದ್ಯಾವರಿಗುದ್ದ ಗಂಗವ
ಕಟ್ಟಮಿಂದ ಕವಿಳಿ ಚಟ್ಟು ಸಂದಮಾಮಾ ರಂಗ ಸಂದಮಾಮಾ
ಕಾಯಲೆಕ್ಕಿ ಜಗ್ಗುತಾದೆ ಸಂದಮಾಮಾ 
ಎದ್ದುಮಿಂದ ರೆಟ್ಟಿಬದುಸು ಸಮದಮಾಮಾ ರಂಗ ಸಂದಮಾಮಾ 
ನಿದ್ದರೊಚ್ಚಿ ತೋಗುತಾದೆ ಸಂದಮಾಮಾ 

ಸಂಗ್ರಹ ಮತ್ತು ವಿಶ್ಲೇಷಣೆ : ಡಾ.ಎಸ್.ಎಂ. ಮುತ್ತಯ್ಯ

ಆಗಲೇಬೇಕು ಶಿಕ್ಷಣ ಕ್ರಾಂತಿ*


                 ನಾನು ಈ ಸಭೆಯನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಬಳಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ  ಮೂರು ಮುಖ್ಯ ವಿಷಯಗಳ ಕಡೆ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. ಮೊದಲಿಗೆ ಇಂದು ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿರುವ ದೋಷಗಳ ಬಗ್ಗೆ ವಿವರಿಸುತ್ತೇನೆ. ನಂತರ ಈ ವ್ಯವಸ್ಥೆಗಿಂತ ಭಿನ್ನವಾದ ಪರ್ಯಾಯ ಮಾದರಿಗಳನ್ನು ಪರಿಚಯಿಸುತ್ತೇನೆ. ಕೊನೆಯದಾಗಿ ಈ ಹೊಸಮಾದರಿಗಳನ್ನು ನಾವು ಅಳವಡಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಪ್ರಸ್ತಾಪಿಸುತ್ತೇನೆ.
ಇಂದಿನ ನಮ್ಮ ಶಿಕ್ಷಣದ ಸ್ಥಿತಿ-ಗತಿ
ಭಯ ಮತ್ತು ಒತ್ತಡ - ನಾಲ್ಕು ಗೋಡೆಯ ಬಂಧನ, ಹೊರಲಾರದ ಪುಸ್ತಕದ ಚೀಲ, ಅರ್ಥವಾಗದ ವಿಷಯಗಳ ಬೋಧನೆ, ಎಡೆ ಬಿಡದ ಪರೀಕ್ಷೆಗಳ ಸರಮಾಲೆ, ಸಮವಸ್ತ್ರ-ವೇಳಾಪಟ್ಟಿ, ಹೋಮ್ ವರ್ಕ್, ಅತೀ ಹೆಚ್ಚು ಪಠ್ಯಕ್ರಮ, ಪೋಷಕರು ಮತ್ತು ಶಿಕ್ಷಕರ ಒತ್ತಡ
ಭವಿಷ್ಯದ ಅತಂಕ - ಉತ್ತಮ ಸಂಬಳ ತರುವ ಶ್ರಮವಿಲ್ಲದ ಉದ್ಯೋಗ ಪಡೆಯಲೇ ಬೇಕು. ಸ್ಪರ್ಧೆ ಹೆಚ್ಚು. ಅದಕ್ಕಾಗಿ ಉತ್ತಮ ಅಂಕಗಳನ್ನು ಪಡೆಯಬೇಕು. ಏನಾಗುತ್ತೋ ಎನ್ನುವ ಆತಂಕದೊಂದಿಗೆ ಶಾಲೆ ಪ್ರವೇಶ. ಕಛೇರಿ ಕಂಪನಿಯ ಉದ್ಯೋಗಗಳಾಚೆಗಿರುವ ಸಾವಿರಾರು ಉದ್ಯೋಗಗಳ ಬಗ್ಗೆ ಅಸಾಧ್ಯವಾದ ನಿರ್ಲಕ್ಷೆ
ಪಠ್ಯ ಮತ್ತು ಪರೀಕ್ಷಾ ಪ್ರಧಾನ್ಯತೆ : ಪಠ್ಯದಲ್ಲಿ ಇರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಕಂಠಪಾಠದ ರೂಪದಲ್ಲಿ ಒಪ್ಪಿಸುವುದು. ವಿಷಯದಿಂದ ಪಡೆಯಬಹುದಾದ ಲಾಭ ಅಂಕಗಳು. ಆನ್ವಯಿಕತೆ ಗೊತ್ತಿಲ್ಲ. ಗಣಿತದಲ್ಲಿ ೧೦೦ ಅಂಕ ಪುಸ್ತಕದಲ್ಲಿ ಯಾವುದೆ ಲೆಕ್ಕ ಕೊಟ್ಟರು ನಿಂತಲ್ಲೇ ಹೇಳುತ್ತಾರೆ. ಆದರೆ ಮನೆಯ ಸಣ್ಣ ಬಟಾವಡೆ ಲೆಕ್ಕ ಹೇಳಲ್ಲ. ಇನ್ನು ಸಾಮಾಜಿಕ ಕೌಟುಂಬಿಕ ಮೌಲ್ಯಗಳು ಕೂಡ ಕೇವಲ ಪರೀಕ್ಷೆ ಬರೆಯಲೆಂಬಂತೆ ಹೇಳಲ್ಪಡುತ್ತಿವೆ. ೧೦ ನೇ ತರಗತಿ ಒದುವ ಮಕ್ಕಳಿಗೆ ೨-೩ ನೇ ತರಗತಿ ಮಕ್ಕಳಿಗೆ ಇರಬೇಕಾದ ಜ್ಞಾನ ಇರುವುದಿಲ್ಲ.   
ಸ್ವಾತಂತ್ರ ಇಲ್ಲದಿರುವುದು : ಮಕ್ಕಳು ಕಲಿಯುವಂತಹವರು ಎಂಬ ಭಾವನೆಯಿಂದ ಅವರ ಒಳಗಿರುವ ಬೇರೆ ಬೇರೆ ಚಿಂತನೆಗಳಿಗೆ ಅವಕಾಶವಿಲ್ಲ. ನಮ್ಮ ಏಕ ಮುಖಿ ಬೋಧನೆ. ಎಲ್ಲರಿಗೂ ಒಂದೇ ವಿಷಯ ಒಂದೇ ಬೋಧನಾ ವಿಧಾನ. ಮಕ್ಕಳ ಇಷ್ಟಕ್ಕಿಂತ ಪೋಷಕರು ಮತ್ತು ಸಲಹೆಗಾರರ ಇಷ್ಟದಂತೆ  ಪಠ್ಯಗಳ ಆಯ್ಕೆ ಮತ್ತು ಅಭ್ಯಾಸ.
ಬಾಲ್ಯದ ಕಡೆಗಣನೆ : ಮಕ್ಕಳಿಗೆ ಬಾಲ್ಯದ ಆಟ, ಸಂಬಂಧಗಳ ಒಡನಾಟದಿಂದ ಕಲಿಯಬೇಕಾದ ಬದುಕಿನ ಪಾಠಗಳು ಇಲ್ಲವಾಗಿವೆ. ಇದರ ದುಷ್ಪರಿಣಾಮಗಳನ್ನು ಇಂದು ನೋಡುತ್ತಾ ಇದ್ದೇವೆ. ಸಮಾಜೀಕರಣ ಸಾದ್ಯವಾಗಿಲ್ಲ.
ಈ ಎಲ್ಲಾ ಸಂಗತಿಗಳಿಂದ ತಿಳಿದು ಬರುವುದೇನೆಂದರೆ ನಮ್ಮ ಶಿಕ್ಷಣ ಆಸಕ್ತಿ ಮತ್ತು ಅವಕಾಶಗಳಿಗೆ ಅನುಗುಣವಾಗಿ ಇರಬೇಕಿತ್ತು ಅದರೆ ಆಸೆ ಮತ್ತು ಅಗತ್ಯಗಳಿಗಾಗಿ ಇದೆ. ಇದರಿಂದ ನಮ್ಮ ಶಿಕ್ಷಣದ ಉದ್ದೇಶಗಳು ಪೂರ್ಣವಾಗಿ ಈಡೇರುತ್ತಿಲ್ಲ. ಶಿಕ್ಷಣದಿಂದ ಪಡೆಯಬೇಕಾದ ಲಾಭಗಳು ಯಾವ ದೃಷ್ಟಿಯಿಂದಲೂ ದೊರೆಯುತ್ತಿಲ್ಲ.   ಉದಾ : ಶಿಕ್ಷಣದಿಂದ ನಮಗೆ ಬದುಕಿನ ಕೌಶಲ್ಯಗಳು ದೊರೆತವೆ ಎಂದರೆ ಖಂಡಿತಾ ಇಲ್ಲ. ಹೆಚ್ಚು ಕಲಿತಿರುವ ವೃತ್ತಿ ಕೌಶಲ್ಯಗಳಿಂದ ಎಲ್ಲರಿಗೂ ಉದ್ಯೋಗ ಸಿಕ್ಕಿತೆ ಎಂದರೆ ಅದೂ ಇಲ್ಲ. ಉದ್ಯೋಗ ಸಿಕ್ಕ ಕೆಲವರಾದರೂ ಸುಖದ ಬದುಕನ್ನು ಬದುಕುತ್ತಾರೆಯೇ ಎಂದರೆ ಇಲ್ಲವೇ ಇಲ್ಲ. ಒಟ್ಟಾರೆ ನಮ್ಮ ಶಿಕ್ಷಣ ವ್ಯವಸ್ಥೆಯ ಮಕ್ಕಳ ಮತ್ತು ಪೋಷಕರು ಕೊನೆಯಲ್ಲಿ ಒಂದು ರೀತಿಯ ಹತಾಶೆ ಮತ್ತು ನಿರಾಸೆಗಳಿಗೆ ಒಳಗಾಗಿರುವುದನ್ನು ಕಾಣುವಂತಾಗಿದೆ.
ನನ್ನ ಈ ಅಭಿಪ್ರಾಯಗಳನ್ನು ಸಮರ್ಥಿಸಲು ಮೂರು ಮಹಾನ್ ವ್ಯಕ್ತಿಗಳ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತೇನೆ.
೧. ಪುಸ್ತಕದಲ್ಲಿರುವುದನ್ನು ಕಲಿಸುವುದು ಶಿಕ್ಷಣವಲ್ಲ. ಮಾನವನಲ್ಲಿ ಉದುಗಿರುವ ಜ್ಞಾನ ಪ್ರಜ್ವಲಿಸುವಂತೆ ಮಾಡುವುದೇ ಶಿಕ್ಷಣ- ಸ್ವಾಮಿ ವಿವೇಕಾನಂದ

೨. ವಿದ್ಯಾರ್ಥಿಗಳು ಭತ್ತ ತುಂಬುವ ಕಣಜಗಳಾಗದೆ ಬತ್ತ ಬೆಳೆಯುವ ಗದ್ದೆಗಳಾಗಬೇಕು- ಕುವೆಂಪು 
೩. ಮಾಹಿತಿಯನ್ನು ನೀಡುವುದು ಶ್ರೇಷ್ಟ ಶಿಕ್ಷಣವಲ್ಲ. ಶಿಕ್ಷಣದಲ್ಲಿ ಸ್ವಾತಂತ್ರ್ಯ ಮುಖ್ಯ. ಅಜ್ಞಾನದಿಂದ, ತೀವ್ರ ವ್ಯಾಮೋಹಗಳಿಂದ ಸ್ವತಂತ್ರಗೊಳಿಸುವುದು ನಿಜವಾದ ಶಿಕ್ಷಣ. ಜಗತ್ತಿನ ಎಲ್ಲಾ ಜೀವಿಗಳ ಜೊತೆ ಸಾಮರಸ್ಯದಿಂದ ಇರುವುದನ್ನು ಕಲಿಸುವುದೇ ಶಿಕ್ಷಣ - ರವೀಂದ್ರನಾಥ ಠ್ಯಾಗೂರ್

ಶಿಕ್ಷಣದಿಂದ ಇಂಥ ನಿಜವಾದ ಫಲಿತಗಳನ್ನು ಪಡೆಯಲು ಸಾಧ್ಯವಾಗಿಲ್ಲದಿರುವುದಕ್ಕೆ ಮೇಲೆ ವಿವರಿಸಿದಂತಹ ನಮ್ಮ ಶಿಕ್ಷಣ ಪದ್ಧತಿ. ಅದಕ್ಕೆ ಪೂರಕವಾದ ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಪ್ರಮುಖ ಕಾರಣವಾಗಿವೆ.
ಹಾಗಾದರೆ ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಅನುಸರಿಸಬೇಕಾಗಿರುವ ಮಾದರಿಗಳ್ಯಾವುವು?
’ಮನೆಯೇ ಮೊದಲ ಪಾಠ ಶಾಲೆ’, ’ಮಕ್ಕಳ ಸ್ಕೂಲ್ ಮನೇಲಿಲ್ಲವೆ’ ಎನ್ನುವ ಮಾತುಗಳನ್ನು ನಾವು ಕೇಳುತ್ತಾ ಬಂದಿದ್ದೇವೆ.
ಮಕ್ಕಳ ಕಲಿಕೆ ಎನ್ನುವುದು ಒತ್ತಡ-ಭಯ-ನಿರ್ಬಂಧದಲ್ಲಿ ಸಾಧ್ಯವಾಗುವುದಿಲ್ಲ. ಪಠ್ಯಗಳು ಅಂಕಗಳಿಸುವ ಮಾಹಿತಿ ಯಾಗುವುದಕ್ಕಿಂತ ಬದುಕನ್ನು ನಡೆಸಲು ಬೇಕಾಗುವ ವೃತ್ತಿ ಮತ್ತು ಜೀವನ ಕೌಶಲ್ಯಗಳನ್ನು ಕಲಿಸಬೇಕಿದೆ. ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರಗಳ ಕಡೆ ನಡೆಯಲು ಅವಕಾಶವಿರಬೇಕು. ಈಗಾಗಲು ಸಾಧ್ಯವಾಗಬೇಕಾದರೆ ಮನೆಯೆ ಮಕ್ಕಳಿಗೆ ಉತ್ತಮ ಪಾಠಶಾಲೆಯಾಗಬೇಕು. ಇಲ್ಲವೇ ಶಾಲೆಯೇ ಮನೆಯಾಗಬೇಕು. 
ಇದಕ್ಕೆ ಕೆಲವು ಮಾದರಿಗಳನ್ನು ಹೇಳುವುದಾದರೆ : ಮೊದಲಿಗೆ ಜಪಾನಿನ ಒಂದು ಉದಾಹರಣೆ
ಜಪಾನಿನ ‘ತೊಮೊಯೆ’ 
ಜಪಾನ್ ದೇಶದಲ್ಲಿ ವಸಾಹತುಶಾಹಿಯ ಕೊಡುಗೆಯಾದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಬಹಳಷ್ಟು ಕಟ್ಟುಪಾಡುಗಳ ನಡುವೆ ಕಲಿಯುತ್ತಿದ್ದಾಗ.  ಇದಕ್ಕೆ ಪರ್ಯಾಯವಾಗಿ ಶಾಲೆಯನ್ನು ರೂಪಿಸಲು ಶ್ರಮಿಸಿದವರು ’ಕೊಬಯಾಶಿ’. ಮಕ್ಕಳನ್ನು ಮಕ್ಕಳ ಹಾಗೆಯೇ ಬೆಳೆಸಬೇಕು, ರೇಸ್ ಕುದುರೆಗಳಂತಲ್ಲ! ಕಲಿಕೆ ಎಂಬುದು ಸ್ವಚ್ಚಂದವಾಗಿ ಮಕ್ಕಳು ಆಹ್ಲಾದಿಸಬೇಕೇ ಹೊರತು ಒತ್ತಾಯದಿಂದ ಓದುವುದಲ್ಲ ಎಂದು ನಂಬಿದ್ದ ಅವರು, ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಪಂಚದ ಅನೇಕ ಶಾಲೆಗಳಿಗೆ ಭೇಟಿ ನೀಡಿ, ತಮ್ಮ ಶಾಲೆ ಹೇಗಿರಬೇಕು? ಎಂಬುದರ ಬಗ್ಗೆ ಖಚಿತ ಅಭಿಪ್ರಾಯ ಹೊಂದಿ ‘ತೊಮೊಯೆ’ ಎಂಬ ಶಾಲೆಯನ್ನು ಪ್ರಾರಂಭಿಸುತ್ತಾರೆ. ‘ತೊಮೊಯೆ’ ಶಾಲೆಯ ಕಟ್ಟಡವೇ ಅತ್ಯಂತ ಸೊಗಸು. ರೈಲು ಗಾಡಿಗಳದ್ದು! ಇಂತಹ ಕಲ್ಪನೆಯಾದರೂ ನಮಗೆ ಬರಬಹುದೇ? ಪುಟ್ಟ, ಪುಟ್ಟ ಮಕ್ಕಳಿಗೆ ರೈಲಿನ ಪ್ರಯಾಣ ಎಂದರೆ ಬಹಳ ಇಷ್ಟವಲ್ಲವೇ? ಇನ್ನೂ ಅಂತಹ ರೈಲು ಗಾಡಿಯೇ ಶಾಲೆಯಾಗಿಬಿಟ್ಟರೆ? ಓದಿನ ಸುಖ! ಆಹಾ! ಮಧ್ಯಾಹ್ನದ ಆ ಮಕ್ಕಳ ಊಟವಂತೂ ನಿಜಕ್ಕೂ ಚಂದ. ‘ಒಂದಿಷ್ಟು ನೆಲದ್ದು, ಒಂದಿಷ್ಟು ಜಲದ್ದು’ ತೆಗೆದುಕೊಂಡು ಬರಬೇಕು ಮತ್ತು ಊಟಕ್ಕೂ ಮುನ್ನಾ ಅವರ ಪಾರ್ಥನೆ ‘ಅಗಿಯಿರಿ, ಅಗಿದು ತಿನ್ನಿರಿ’ ಎನ್ನುವ ಪುಟ್ಟ ಪದ್ಯವಾಗಿರುತ್ತದೆ. ಊಟವಾದ ನಂತರ ಮಕ್ಕಳ ಇಷ್ಟದ ಹಾಗೇ ವಾಕಿಂಗ್ ಅಥವಾ ಈಜುವುದೋ ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಮೇರಿಕಾದಿಂದ ಪುಟ್ಟ ಹುಡುಗನೊಬ್ಬ ಈ ಶಾಲೆಗೆ ಬಂದು ಸೇರುತ್ತಾನೆ. ಅವನಿಗೆ ಈ ಮಕ್ಕಳು ಜಪಾನೀಸ್ ಕಲಿಸುವುದು, ಆತನಿಂದ ಇಂಗ್ಲೀಷ್ ಭಾಷೆ ಕಲಿಯುತ್ತಾ ಹೋಗುತ್ತಾರೆ. ಅಂಗವಿಕಲರು, ಹೆಣ್ಣು ಮಕ್ಕಳು, ಗಂಡು ಮಕ್ಕಳು, ಜಪಾನೀಯರು, ಅಮೇರಿಕನ್ನರು ಎನ್ನುವ ಬೇಧಭಾವವಿಲ್ಲದೇ ಕಲಿಯುತ್ತಿದ್ದರು, ಯಾರಿಗೂ ಕೂಡ ಮುಜುಗರವಾಗದಂತಹ, ಎಲ್ಲರಲ್ಲೂ ಆತ್ಮವಿಶ್ವಾಸ ಉಕ್ಕುವಂತಹ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಸಂಗೀತ ಕಲಿಯುತ್ತಿದ್ದರು, ಬೇಸಿಗೆಯಲ್ಲಿ ಕ್ಯಾಂಪು ಹಾಕುತ್ತಿದ್ದರು, ಪ್ರವಾಸಕ್ಕೆ ಹೋಗುತ್ತಿದ್ದರು, ಶಾಲೆಯಲ್ಲಿಯೇ ‘ನೈಟ್ ಔಟ್’ ಮಾಡುತ್ತಿದ್ದರು, ಅಡುಗೆ ಮಾಡುತ್ತಿದ್ದರು, ಇಷ್ಟವಿದ್ದವರು ವಿಜ್ಞಾನ ಪ್ರಯೋಗಗಳಲ್ಲಿ ತೊಡಗುತ್ತಿದ್ದರು ಹೀಗೆ?.. ಮಗುವೊಂದು ‘ದೊಡ್ಡವ’ನಾಗಿ ಬೆಳೆಯಲು ಬೇಕಾದ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಮಕ್ಕಳು ಅದನ್ನೊಂದು ಶಿಕ್ಷೆ ಎಂಬಂತೆ ಅನುಭವಿಸದೇ, ಆನಂದದಿಂದ ‘ದೊಡ್ಡವ’ರಾಗುತ್ತಿದ್ದರು.
ಗುಜರಾತಿನ ‘ಬಾಲಮಂದಿರ’
ಗುಜರಾತಿನ ಮಹಾನ್ ಶಿಕ್ಷಣ ತಜ್ಜ ಹಾಗೂ ಮಕ್ಕಳ ಶಿಕ್ಷಕ ಗೀಜುಭಾಯಿ ಬಾಧೆಕಾ ೧೯೨೦ ರಲ್ಲಿ ಸ್ಥಾಪಿಸಿದ ಶಾಲೆ ಇದು. ಮಕ್ಕಳಿಗೆ ಸುತ್ತ-ಮುತ್ತಲಿನ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳುವಳಿಕೆ ಮೂಡಿಸದಂಥ ಯಾವ ಶಿಕ್ಷಕನೂ ಇರಲಾರ. ಆದರೆ ಶಾಲಾ ಸಂಸ್ಕೃತಿ ಹೇಗಾಗಿದೆಯೆಂದರೆ ಕ್ರಿಮಿ-ಕೀಟಗಳಿಂದ ಹಿಡಿದು ನಕ್ಷತ್ರಗಳವರೆಗಿನ ಎಲ್ಲ ವಸ್ತು-ವಿಷಯಗಳನ್ನು ತರಗತಿ ಹೊರಗಿನ ವಿಷಯಗಳೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ಶಿಕ್ಷಕ ತನ್ನ ಕೆಲಸ ಪಠ್ಯಕ್ರಮವನ್ನು ಮುಗಿಸುವುದು ಹಾಗೂ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದಕ್ಕೆ ಮಾತ್ರ ಸೀಮಿತವೆಂಬ ನಂಬಿಕೆಯನ್ನು ಹೊಂದಿರುತ್ತಾನೆ. ಮಕ್ಕಳ ಕುತೂಹಲ, ಉತ್ಸುಕತೆ, ಇವುಗಳನ್ನು ವಿಕಾಸಗೊಳಿಸುವುದು ತನ್ನ ಕೆಲಸವೂ ಅಲ್ಲ. ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪರಿಸ್ಥಿತಿಗಳೂ ಶಾಲೆಯಲ್ಲಿ ಇಲ್ಲವೆಂದು ತಿಳಿಯುತ್ತಾನೆ. ಆದರೆ ಶಿಕ್ಷಣದಲ್ಲಿ ಪರಿವರ್ತನೆ ತರುವ ಭಾಗವಾಗಿ ಶಿಕ್ಷಣ ಶಾಸ್ತ್ರದ ಸಾರವೆಂದರೆ ಮಕ್ಕಳಿಗೆ ಸ್ವಾತಂತ್ರ್ಯಹಾಗೂ ಸ್ವಾವಲಂಬನೆಯ ಪರಿಸ್ಥಿಯನ್ನು ಒದಗಿಸುವುದು ಎಂದು ನಂಬಿದ ಗೀಜುಬಾಯಿ ಅವರು ತಮ್ಮ ‘ಬಾಲಮಂದಿರ’ವನ್ನು ಸ್ಥಾಪಿಸಿ ತಮ್ಮ ಕನಸಿಗೆ ಒಂದು ಶಾಶ್ವತ ನೆಲೆಗಟ್ಟನ್ನು ಹಾಕಿದರು. 
ಬಾಲವನ, ಪುತ್ತೂರು
 ನಮ್ಮ ರಾಜ್ಯದಲ್ಲಿ ಇಲ್ಲಿಗೆ ೭೦ ವರ್ಷಗಳ ಹಿಂದೆಯೇ ಈ ರೀತಿಯ ಶಾಲೆಯನ್ನು ರೂಪಿಸುವ ಪ್ರಯತ್ನಮಾಡಿದರು. ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಸುತ್ತಿರುವ ಬಾಲಭವನ ಅಂಥದ್ದೊಂದು ಶಾಲೆ. ಮಕ್ಕಳಿಗೆ ಒಣ ಶಿಕ್ಷಣವನ್ನು ನೀಡದೆ ಜ್ಞಾನವಷ್ಟೇ ಅಲ್ಲದ ಅರಿವು ನೀಡುವ ಸಂವೇದನಾಶೀಲ ಶಿಕ್ಷಣ ಬೇಕೆಂದು ಕಾರಂತರ ನಂಬಿಕೆಯಾಗಿತ್ತು ಈ ಹಿನ್ನೆಲೆಯೊಳಗೆ ಬಾಲವನ ಶಾಲೆ ತೆರದು ಅಲ್ಲಿ ಮಕ್ಕಳ ಸ್ವಚ್ಛಂಧ ಕಲಿಕೆಗೆ ಅವಕಾಶ ಕಲ್ಪಿಸಿದ್ದರು. ವಿವಿಧ ಕ್ಷೇತ್ರಗಳ ಪರಿಣಿತರು, ಕಲಾವಿದರು ಅಲ್ಲಿಗೆ ಬಂದು ಹೋಗುತ್ತಿದ್ದರು. ಅವರ ಜೊತೆ ಬೆರತು ಪಠ್ಯದ ಆಚೆಗಿನ ಅನೇಕ ಸಂಗತಿಗಳನ್ನು ಕಲಿಯುತ್ತಿದ್ದರು.(ಕಾರಂತರ ಮಕ್ಕಳಾದ ಕ್ಷಮಾರಾವ್ ಮತ್ತು ಉಲ್ಲಾಸ್ ಕಾರಂತ ಕೂಡ ಕಲಿತದ್ದು ಇಲ್ಲಿಯೇ)
ಬಾಲಬಳಗ, ಧಾರವಾಡ
  ಧಾರವಾಡದ ಡಾ. ಸಂಜೀವ ಕುಲಕರ್ಣಿ ಅವರು ಮಕ್ಕಳ ಕೇಂದ್ರಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ೨೦೦೦ ದಲ್ಲಿ ಆರಂಭವಾಗಿರುವ ಶಾಲೆ ಇದು.  ೩ ಮಕ್ಕಳಿಂದ ಆರಂಭವಾಗಿ ಈಗ ೩೩೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ೫-೧೦ ನೇ ತರಗತಿ ಮಕ್ಕಳು ಇಲ್ಲಿ ಓದುತಿದ್ದಾರೆ. ಈ ಶಾಲೆಯ ರಚನೆಯೇ ಬೇರೆ- ಬಾಗಿಲಲ್ಲದ ಕೊಠಡಿಗಳು, ಜೋಕಾಲಿ, ಜಾರುಬಂಡೆ, ಬಯಲು ರಂಗಮಂದಿರ, ಮಕ್ಕಳೆ ಮಾಡಿದ ಗೊಂಬೆಗಳು, ಪಾಠಕ್ಕಿಂತ ಆಟಕ್ಕೆ ಇಲ್ಲಿ ಹೆಚ್ಚಿನ ಮಾನ್ಯತೆ. ರಾಜ್ಯ ಪಠ್ಯಕ್ರಮವನ್ನೇ ಅಳವಡಿಸಿಕೊಳ್ಳಲಾಗಿದ್ದು, ಬೋಧನಾ ವಿಧಾನದಲ್ಲಿ ಹೊಸತನವಿದೆ. ಇಲ್ಲಿ ಪಾಠ ಮಾಡುವ ಶಿಕ್ಷಕರು ಗುರುಗಳಿಗಿಂತ ಹೆಚ್ಚಾಗಿ ಮಾನವೀಯ ರಕ್ತ ಸಂಬಂಧದ ನೆಲೆಯಲ್ಲಿ ಅಕ್ಕ-ಅಣ್ಣ-ಮಾಮ-ಅಮ್ಮ ರಾಗಿಯೇ ಇರುತ್ತಾರೆ. ಶುದ್ಧ ಮನೆಯ ವಾತಾವರಣ. ಇಲ್ಲಿ ಸಮವಸ್ತ್ರದ ಕಟ್ಟುಪಾಡಿಲ್ಲ. ಪರೀಕ್ಷೆಗಳ ಭಯವಿಲ್ಲ, ಮನೆಗೆಲಸದ ಒತ್ತಡವಿಲ್ಲ, ಡೊನೇಷನ್ ಇಲ್ಲ. ಇಲ್ಲಿ ಹೊಸದಾಗಿ ಬರುವ ಶಿಕ್ಷಕರು ಮೊದಲು ಮೂರು ತಿಂಗಳು ಮಕ್ಕಳ ನಡುವೆ ಕುಳಿತು ತಾವು ಪಾಠ ಕೇಳಿಸಿಕೊಳ್ಳುತ್ತಾ ಕಲಿಸುವ ಕ್ರಮಗಳನ್ನು ಕಲಿತು ನಂತರ ಮಕ್ಕಳಿಗೆ ಬೋಧಿಸುತ್ತಾರೆ.
ಕಲಿಯುವ ಮನೆ, ಮೈಸೂರು 
 ಎಂ ಆರ್. ಅನಂತಕುಮಾರ್ ಅವರು ೨೦೦೫ರಲ್ಲಿ ಅರಂಭ ಮಾಡಿರುವ ಶಾಲೆ ಇದು. ೧೪ ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ  ಈಗ ೧೨೦ ವಿದ್ಯಾರ್ಥಿಗಳು. ಇಲ್ಲಿಯೂ ಕಲಿಕಾ ಮಾರ್ಗ ಭಿನ್ನ. ಮಗುವಿನ ಸಾಮರ್ಥ್ಯದ ಅನುಸಾರ ಬೋಧನೆ. ಇಲ್ಲಿ ತರಗತಿಗಳಿಲ್ಲ. ಬದಲಿಗೆ ಗುಂಪುಗಳಿವೆ. ಪಾಸು ಫೇಲಿನ ಕಿರಿ ಕಿರಿ ಇಲ್ಲ. ಅಂಕಗಳ ಗೊಡವೆ ಇಲ್ಲ. ಮಾಧ್ಯಮದ ಗೊಂದಲ ಇಲ್ಲ. ಪ್ರತೀ ಉತ್ತಮ ಕಲಿಕೆಗೆ ಬಹುಮನ ಸಿಗುತ್ತದೆ. ಶಿಕ್ಷೆಯ ಸುಳಿವಿಲ್ಲ. ಮಾತೃ ಭಾಷೆಯಲ್ಲಿಯೇ ಕಲಿಕೆ, ತರಗತಿಯಿಂದ ಇಂಗ್ಲೀಷ್‌ಗೆ ಒತ್ತು. ಇಲ್ಲಿ ಅನೌಪಚಾರಿಕ ಶಿಕ್ಷಣ ಪಡೆದು ನೇರವಾಗಿ ೧೦ ನೇ ತರಗತಿ ಪರೀಕ್ಷೆ. ಈ ವಿದ್ಯಾರ್ಥಿಗಳ ಫಲಿತಾಂಶ ೧೦೦% 
        ಇದೇ ಸ್ವರೂಪದಲ್ಲಿ ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂಥ ಸುಮಾರು ೧೫ ಶಾಲೆಗಳು ಕಾರ್ಯ ನಿರ್ವವಹಿಸುತ್ತಿವೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ : ಸೆಂಟರ್ ಫಾರ್ ಲರ್ನಿಂಗ್, ಬೆಂಗಳೂರು, ಆರೋಹಿ ಲೈಪ್ ಸ್ಕೂಲ್, ಬೆಂಗಳೂರು, ಪೂರ್ಣಪ್ರಜ್ಞಾ, ಮೈಸೂರು, ಶಿಭೂಮಿ, ಬೆಂಗಳೂರು, ದಿ ವ್ಯಾಲಿ ಸ್ಕೂಲ್, ಬೆಂಗಳೂರು, ಇತ್ಯಾದಿ.
ಈ ರೀತಿಯ ಮಕ್ಕಳ ಸ್ನೇಹಿ ಶಾಲೆಗಳನ್ನು ಎಲ್ಲ ಕಡೆಯೂ ತೆರೆಯುವುದು ಅಸಾಧ್ಯವಾಗಬಹುದು ಆದರೆ ಅಂಥ ಶಾಲೆಗಳ ಮೂಲ ತತ್ವಗಳೇನಿವೆ ಅವುಗಳನ್ನು ನಮ್ಮ ಸಾಂಪ್ರದಾಯಿಕ ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಗಲೇ ಬೇಕಿರುವ ಕ್ರಾಂತಿಗೆ ಕಾರಣರಾಗಬೇಕು. ಆ ಮೂಲಕ ಮಕ್ಕಳ ಕಲಿಕೆಯನ್ನು ಸುಗಮ ಹಾಗೂ ಅರ್ಥ ಪೂರ್ಣಮಾಡುವುದರ ಮೂಲಕ ನಿಜವಾದ ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ಹೀಗಾದರೆ ಮಕ್ಕಳು ಯಾವುದನ್ನೂ ಕಳೆದುಕೊಳ್ಳದೆ ಪಡೆಯ ಬೇಕಾದುದನ್ನು ನಿಸ್ಸಂಶಯವಾಗಿ ಪಡೆಯುತ್ತಾರೆ. ಆಗ ನಮ್ಮನ್ನು ಕಾಡುತ್ತಿರುವ ವರ್ತಮಾನದ ಸಂಕಟ ಮತ್ತು ಭವಿಷ್ಯದ ಆತಂಕ ಇಲ್ಲವಾಗುತ್ತದೆ. ಮಕ್ಕಳು ನೆಮ್ಮದಿಯ, ಸಮಾನತೆಯ ಸದೃಢಸಮಾಜದ ಸತ್ಪ್ರಜೆಗಳಾಗುತ್ತಾರೆ.  
            ಹೀಗೆ ಹೇಳುತ್ತಾ ಅಮೇರಿಕಾದ ಅಧ್ಯಕ್ಷರಾಗಿದ್ದ ಮಹಾನ್ ಮಾನವತಾವಾದಿ ಅಬ್ರಾಹಂ ಲಿಂಕನ್ ತನ್ನ ಮಗನ ಮೇಸ್ಟ್ರಿಗೆ ಬರದ ಪತ್ರದ ಕೆಲವು ಸಾಲಗಳನ್ನು ಮತ್ತು ಸಮಾನತೆಯ ಕನಸುಗಾರ ಸಿರಿಯಾದ ಕವಿ ಖಲೀಲ್ ಗಿಬ್ರಾನ್ ಅವರು ಬರೆದಿರುವ ಕವನದ ಒಂದೆರಡು ಸಾಲುಗಳನ್ನು ನಿಮ್ಮ ಮುಂದೆ ಓದಿ ನನ್ನ ಮಾತು ಮುಗಿಸುತ್ತೇನೆ.
 ಎಲ್ಲರೂ ಸತ್ಯವಂತರಲ್ಲ ಎಂಬುದನ್ನು ನಾನು ಬಲ್ಲೆ.
ಪ್ರತಿಯೊಬ್ಬ ಮುಠ್ಠಾಳನಿಗೆ ಪ್ರತಿಯಾಗಿ ಒಬ್ಬ ಧಿರೋದಾತ್ತ 
ಪ್ರತಿಯೊಬ್ಬ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತ ನಾಯಕ 
ಪ್ರತಿಯೊಬ್ಬ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರ ಇರುವನು ಎಂಬುದನ್ನು ಕಲಿಸು.
ಗಳಿಸಿದ ಒಂದು ಡಾಲರು ಸಿಕ್ಕ ಐದು ಡಾಲರುಗಳಿಗಿಂತ ಬೆಳೆಯುಳ್ಳದ್ದು ಎಂಬುದನ್ನು ಕಲಿಸು.
ಸೋಲುವುದನ್ನು ಕಲಿಸು, ಗೆಲುವಿನಲ್ಲಿ ಹರ್ಷಿಸುವುದನ್ನು ಕಲಿಸು.
ಪುಸ್ತಕಗಳ ಅದ್ಭುತವನ್ನು ಅವನಿಗೆ ಕಲಿಸು.
ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು ಧ್ಯಾನಿಸಲು ಅವನಿಗೆ ಬಿಡುವು ಮಾಡಿಕೊಡು.
ಶಾಲೆಯಲ್ಲಿ ವಂಚಿಸುವುದಕ್ಕಿಂತ ಫೇಲಾಗುವುದು ಹೆಚ್ಚು ಗೌರವಯುತ ಎಂಬುದನ್ನು ಕಲಿಸು.
ಎಲ್ಲರು ತಪ್ಪೆಂದಾಗ ತನ್ನ ವಿಚಾರಗಳಲ್ಲಿ ಅವನು ನಂಬಿಕೆ ಉಳಿಸಿಕೊಳ್ಳಲು ಕಲಿಸು.
ನಯದ ಜನರಲ್ಲಿ ವಿನಯದಿಂದ ಮತ್ತು ಒರಟರಲ್ಲಿ ಒರಟುತನದಿಂದ ನಡೆಯುವುದನ್ನು ಕಲಿಸು.
ಬೆವರು ಬುದ್ಧಿಗಳನ್ನು ಹೆಚ್ಚು ಬೆಲೆ ತೆರವುವನಿಗೆ ಮಾರುವುದನ್ನು
ತನ್ನ ಹೃದಯ ಮತ್ತು ಆತ್ಮಕ್ಕೆ ಬೆಲೆಯ ಚೀಟಿಯನ್ನು ಎಂದಿಗೂ ಅಂಟಿಸದಿರುವುದನ್ನು ಕಲಿಸು
ಬೇಸರಗೊಂಡಾಗ ನಗುವುದನ್ನು, ಕಣ್ಣೀರಿನಲ್ಲಿ ಅವಮಾನವಿಲ್ಲ ಎಂಬುದನ್ನು ಕಲಿಸು
                                                                               - ಅಬ್ರಹಾಂ ಲಿಂಕನ್ ಮಗನ ಮೇಷ್ಟ್ರಿಗೆ ಬರೆದ ಪತ್ರದ ಭಾಗ 
                                                                              (೧೮೫೮-೧೮೬೨ ರ ವರಗೆ ಅಮೇರಿಕಾದ ಅಧ್ಯಕ್ಷರಾಗಿದ್ದರು)
        ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ಜೀವನ ಸ್ವ-ಪ್ರೇಮದ ಪುತ್ರ-ಪುತ್ರಿಯರು
  ಅವರು ನಿಮ್ಮ ಜೊತೆಗೆ ಇರುವರಾದರೂ ನಿಮಗೆ ಸೇರಿದವರಲ್ಲ
  ಅವರಿಗೆ ನೀವು ನಿಮ್ಮ ಪ್ರೀತಿಯನ್ನು ನೀಡಬಹುದಾದರೂ ನಿಮ್ಮ ಆಲೋಚನೆಗಳನ್ನಲ್ಲ
        ಅವರಂತಿರಲು ನೀವು ಪ್ರಯತ್ನಿಸಬಹುದು. ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ 
        ಜೀವನದಿ ಹಿಮ್ಮುಖವಾಗಿ ಹರಿಯದಿರಲಿ 
                                                                                            - ಖಲೀಲ್ ಗಿಬ್ರಾನ್,   ಸಿರಿಯಾ ದೇಶದ ಕವಿ
  ಲಿಂಕನ್ ಅವರ ಮಾತುಗಳನ್ನು ಶಿಕ್ಷಕರು, ಗಿಬ್ರಾನ್ ಅವರ ಮಾತುಗಳನ್ನು ಪೋಷಕರು ಅನುಸರಿಸೋಣ ನಮ್ಮ ಮಕ್ಕಳ ನಿಜವಾದ ಭವಿಷ್ಯವನ್ನು ರೂಪಿಸೋಣ.

                                                                                                                                ಡಾ. ಎಸ್.ಎಂ. ಮುತ್ತಯ್ಯ