Monday 9 April 2012

ಬರಹಗಾರರ ಬೌದ್ಧಿಕ ಜವಾಬ್ದಾರಿ : ಕರ್ನಾಟಕದ ಅನುಭವಗಳು

            
                                                                                - ಡಾ.ಎಸ್.ಎಂ. ಮುತ್ತಯ್ಯ

ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು ಬರಹಗಾರನ ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು ಹೀಗೆ ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ ಅಭಿವ್ಯಕ್ತಿಮಾದ್ಯಮಗಳೊಂದಿಗೆ ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ   ಅಥವಾ           ಕೈಗೊಂಬೆಗಳಾಗಿ ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ.
2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ ಬಗ್ಗೆ         ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು.
3. ಸತ್ಯಾಂಶ ತಿಳಿಸುವುದು ಎಂದರೆ  ಕುಕೃತ್ಯಗಳನ್ನು  ಕೇವಲ  ಖಂಡಿಸುವುದು ಮಾತ್ರವಲ್ಲ ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ ಯಾವ ಮಹತ್ವವು ಇರುವುದಿಲ್ಲ.
4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು ಹೇಳಿ' ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ ಅವರಿಗೆ ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ ಸತ್ಯವನ್ನು ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು.
5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು  ಮುಚ್ಚಿಟ್ಟರೆ ಅಥವಾ ಸಮಥರ್ಿಸಿಕೊಂಡರೆ ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ ಟೀಕಿಸಿದರೆ ಅದಕ್ಕೆ ಯಾವ ಮಹತ್ವವು ಇರುವುದಿಲ್ಲ.
ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ ಈಸ್ಟ್ ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ ವಿದ್ಯಾಮಾನಗಳು) ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ  ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ, ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು ಮೆರೆಯುವಂತಹ ಸ್ಥಿತಿಯಾಗಿದೆ.
ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು ಕ್ರಿಮಿನಲ್ ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ ಕ್ರೂರ ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು  ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ, ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ  ನಮ್ಮ ನೆಲದ ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ.  ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು ವಿಚಾರಗಳನ್ನು ಗಮನಿಸಬಹುದಾಗಿದೆ.
1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು  ಕಾಣಬಹುದಾಗಿದೆ.   ಉದಾ : ನಮ್ಮ ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು ಆಸಕ್ತಿ ; ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ ಬಗ್ಗೆ ಇಲ್ಲ. ಹಾಗೆಯೇ ಸಮಸ್ಯೆಗಳನ್ನು  ಅವುಗಳ ಹೊರವಲಯದಲ್ಲಿ  ನಿಂತು ವಿಶ್ಲೇಷಿಸಿರುವುದೇ ಹೆಚ್ಚು. ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ ಅಪರೂಪವೆಂದೆ ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ.
2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ. ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು ಸಮಸ್ಯೆಗೆ ಪರಿಹಾರ ಸೂಚಿಸಬಾರದೆಂಬ ಚಚರ್ೆಗಳನ್ನು ನಾವಿಲ್ಲಿ ಸ್ಮರಿಸಬೇಕು.ಈ ಚರ್ಚೆಗಳೊಂದಿಗೆ ಚಾಮ್ಸ್ಕಿ ಅವರ ಮೇಲಿನ ಮಾತನ್ನು ಮುಖಾ-ಮುಖಿಗೊಳಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ.
ಇವುಗಳನ್ನು ಗಮನಿಸದ ನಂತರ ಕನ್ನಡ ಸಂದರ್ಭದೊಳಗೆ ನಾವು ಗಮನಿಸಲೇಬಾಕಾದ ಪ್ರಮುಖ ಅಂಶವೆಂದರೆ ನಮ್ಮ ಬಹುತೇಕ ಬರಹಗಳು ಸಮಸ್ಯೆಗಳನ್ನು ಚಚರ್ಿಸುವಾಗ ಪ್ರಭುತ್ವದ ಪಾತ್ರದ ಬಗ್ಗೆ ಹೆಚ್ಚಿನ ಗಮನಕೊಡದೇ ಇರುವುದು ಎದ್ದು ಕಾಣುತ್ತದೆ.ವಿಶೇಷವೆಂದೆ ಪತ್ರಿಕೆಗಳಲ್ಲಿ ಆಯಾ ಸಂದರ್ಭದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬರುವ ಲೇಖನಗಳನ್ನು ಹೊರತುಪಡಿಸಿದರೆ ಇನ್ನುಳಿದ ಬುದ್ಧಿಜೀವಿಗಳ ಬಹುತೇಕ ಬರಹಗಳು ತಾವು ಚಿಂತಿಸಿದ ಸಂಗತಿಗಳು ಸಮಕಾಲೀನ ಮಹತ್ವವನ್ನು ಕಳೆದುಕೊಂಡ ನಂತರ ಪ್ರಕಟಗೊಳ್ಳುತ್ತವೆ.ಇದಕ್ಕೆ ಚಾಮ್ಸ್ಕಿ ಹೇಳುವಂತೆ ಇದೊಂದು ಪ್ರಭುತ್ವದ ಹುನ್ನಾರ ಎಂದು ಹೇಳಲು ಬರುವುದಿಲ್ಲವೇನೋ.ಹಾಗಾಗಿ ಬರಹಗಾರ ಬುದ್ಧಿಜೀವಿಗಳು ಇದರ ನೇರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
                         ಕೊನೆಯದಾಗಿ ಹೇಳಬೇಕೆಂದರೆ ನಮ್ಮಲ್ಲಿ ಎಚ್ಚರದಿಂದ ಇರುವ ಕೆಲವು ಬುದ್ಧಿವಿಗಳು ನೇರವಾಗಿ ಪ್ರಭುತ್ವದ ಕ್ರೂರ ನಡೆಗಳ ಬಗ್ಗೆ ಖಂಡಿಸಿ ಬರೆಯುವವರು ಒಂದು ಕಡೆ ಇದ್ದಾರೆ.ಇನ್ನೋಂದು ಕಡೆ ಪ್ರಭುತ್ವದ ಪಾತಕಗಳನ್ನು ಅಭಿವೃದ್ಧಿಯ ನಡೆಗಳೆಂದು ಪ್ರಶಂಸಿ ಬರೆಯುವ ಮುಖವಾಡದ ಬುದ್ಧಿಜೀವಿಗಳುಇದ್ದಾರೆ.ಈ ಎರಡೂ ಗುಂಪಿನ ಬರಹಗಾರರಿಗೆ-ಸರಕಾರಗಳು ಮೊದಲನೇ ಗುಂಪಿನ್ನು ಮನಸ್ಸಿನ ಅಂತರಾಳದಲ್ಲಿ ಶತೃಗಳೆಂದು ಭಾವಿಸಿ ಅವರನ್ನು ಕಾನೂನಿನ ಬೆಂಬಲದಿಂದ ಶಿಕ್ಷೆಗಳ ಮುಖಾಂತರ ಮಟ್ಟಹಾಕುತ್ತಿವೆ.ಎರಡನೇ ಗುಂಪಿನ ಮುಖವಾಡದ ಬುದ್ಧಿಜೀವಿಗಳಿಗೆ ಹಾರ-ತುರಾಯಿ ಪದವಿ-ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿವೆ. ಇಂಥ ಸಂದರ್ಭದೊಳಗೆ ನಿಜವಾದ ಬುದ್ಧಿಜೀವಿಗಳಿಗೆ ತಮ್ಮ ಅಭಿವ್ಯಕ್ತಿ ಸಾಮಥ್ಯಕ್ಕೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂಥ ಈ ಕಾಲದೊಳಗೆ    ಚಾಮ್ಸ್ಕಿ ನಿರೀಕ್ಷಿಸುವ ಬೌದ್ಧಿಕ ಜವಾಬ್ದಾರಿಗಳನ್ನು ಪ್ರಕಟಪಡಿಸಲು ಇರುವ ಸವಾಲುಗಳ ಬಗ್ಗೆ ನಾವೆಲ್ಲರೂ ಮತ್ತೊಮ್ಮೆ ತಣ್ಣಗೆ ಚಿಂತಿಸುವ ಅಗತ್ಯವಿದೆ.
      



No comments:

Post a Comment