Saturday, 23 June 2012

ಪುರಾಣ ಪರಿಕಲ್ಪನೆ : ಶಿಷ್ಟ - ಪರಿಶಿಷ್ಟ ದೃಷ್ಟಿಕೋನಗಳು


ಡಾ.ಎಸ್.ಎಂ. ಮುತ್ತಯ್ಯ

                  ಪುರಾಣ ಎಂಬುದು ಬರೀ ಶಬ್ಧವಲ್ಲ. ಶಬ್ಧದಾಚೆಗೆ ಸಮಾಜದಲ್ಲಿ ತನ್ನ ಪ್ರಭಾವಳಿಯನ್ನು ಸೃಷ್ಟಿಸಿದ ಶಕ್ತಶಾಲಿಯಾದ ಒಂದು ಪರಿಕಲ್ಪನೆಯಾಗಿದೆ. ಹಾಗಾಗಿ ಪುರಾಣ ಎಂದರೇನು? ಅದರ ಸೃಷ್ಟಿಯ ಹಿಂದಿನ ಉದ್ದೇಶ ಯಾವುದು? ಅದರ ಬಗ್ಗೆ ಶಿಷ್ಟ - ಪರಿಶಿಷ್ಟ ಸಮುದಾಯಗಳಲ್ಲಿ ಪ್ರಚಲಿತವಿರುವ ಅರ್ಥ ಮತ್ತು ಬಳಕೆಯ ಸಾಧ್ಯತೆಗಳೇನು? ಎಂಬಿತ್ಯಾದಿ ವಿಷಯಗಳನ್ನು ವಿವರಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

 ಪುರಾಣದ ಅರ್ಥ ಮತ್ತು ಸ್ವರೂಪ

       'ಪುರಾಣ'ವು ಆಂಗ್ಲಭಾಷೆಯ 'Myth'ನ ಜೊತೆ ಸಮೀಕರಣಗೊಂಡಿದೆ. ಪುರಾಣವನ್ನು ಪುರಾ=ನವ=ಪುರಾಣ ಎಂಬುದಾಗಿ ವಿಭಜಿಸಿ ಅರ್ಥೈಯಿಸಲಾಗಿದೆ. 'ಪುರಾ' ಎಂದರೆ ಪುರಾತನವಾದುದು ಎಂತಲೂ 'ನವ' ಎಂದರೆ ನಿತ್ಯನೂತನವಾದುದು ಎಂತಲೂ ಹೇಳಲಾಗಿದೆ. ಹಾಗಾಗಿ ಪುರಾಣ ಎಂಬುದು ಭಾಷಿಕ ಅಭಿವ್ಯಕ್ತಿಗೆ ಒಳಪಟ್ಟ ಒಂದು ದೀರ್ಘನಿರೂಪಣೆ. ಪ್ರಾಚೀನ ಮಾನವ ತನ್ನ ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಹಾಗೂ ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಕಟ್ಟಿಕೊಂಡ ಕಾಲ್ಪನಿಕ ಕಥೆಗಳು ಇಲ್ಲಿವೆ. ಜೊತೆಗೆ ಪೂಜ್ಯ, ಗೌರವಯುತ ವ್ಯಕ್ತಿಗಳ, ದೈವಗಳ, ಸಾಂಸ್ಕೃತಿಕ ನಾಯಕರ ಜೀವನ ವಿವರಗಳು ಹಾಗೂ ಜನ ಸಮುದಾಯಗಳ ನಡುವೆ ಬದುಕಿರುವ ಧಾರ್ಮಿಕ ನಂಬಿಕೆಗಳು, ಆಚರಣೆ ಸಂಪ್ರದಾಯಗಳು ಪ್ರಧಾನವಾಗಿವೆ. ಇಂಥ ಸಂಗತಿಗಳನ್ನು ಅದ್ಭುತ ಶೈಲಿಯಲ್ಲಿ ವಿವರಿಸುವ ಮತ್ತು ಸಮರ್ಥಿಸುವ ಕಥನಗಳಾಗಿಯೂ ಪುರಾಣಗಳು ಕಾರ್ಯನಿರ್ವಹಿಸುತ್ತವೆ. ಒಂದು ದೃಷ್ಟಿಯಲ್ಲಿ ವಿಜ್ಞಾನ ಪೂರ್ವಯುಗದ ವಿಜ್ಞಾನಗಳು. 

   ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಊಹಾತ್ಮಕ ನೆಲೆಯಿಂದ ವಿವರಿಸುವಂತಹವು. ಈ ದೃಷ್ಟಿಯಿಂದ ನೋಡಿದಾಗ ಪುರಾಣಗಳ ವಸ್ತು ಏನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ವಿಚಾರದಲ್ಲಿ ಅಮರಕೋಶ ಹೇಳಿದ ಮಾತು ಗಮನಾರ್ಹ. 
                                                            ಸರ್ಗಶ್ಚ ಪ್ರತಿಸರ್ಗಶ್ಚವಂಶೋ ಮನ್ವಂತರಾಣಿ ಚ
                                                           ವಂಶಾನು ಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ      ಎನ್ನುತ್ತದೆ. 

  ಅಂದರೆ ಪುರಾಣವೆನ್ನುವುದು ಸ್ವರ್ಗ, ಪ್ರತಿಸ್ವರ್ಗ, ವಂಶ, ಮನ್ವಂತರ ಮತ್ತು ವಂಶಾನುಚರಿತೆ ಎಂಬ ಐದು ಲಕ್ಷಣಗಳುಳ್ಳದ್ದು. ಇವುಗಳಲ್ಲಿ ಸ್ವರ್ಗ ಎಂದರೆ ಜಗತ್ತಿನ ಮೂಲಸೃಷ್ಟಿ; ಪ್ರತಿಸ್ವರ್ಗ ಎಂದರೆ ಬ್ರಹ್ಮನಿಂದಾದ ಜಗತ್ಸೃಷ್ಟಿ; ವಂಶವೆಂದರೆ ಪ್ರಾಚೀನ ಕಾಲದಿಂದ ಬಂದ ದೇವತೆಗಳು, ಋಷಿಗಳು, ಮಾನವರು; ಮನ್ವಂತರ ಎಂದರೆ ಮನುಗಳ ಕಾಲ; ವಂಶಾನುಚರಿತ್ರೆ ಎಂದರೆ ಬೇರೆ ಬೇರೆ ವಂಶಗಳಲ್ಲಿ ಬಂದ ರಾಜಾಧಿರಾಜರ ಚರಿತ್ರೆ ಎಂದರ್ಥವಿದೆ. ಈ ಮೇಲಿನ ಐದು ಮುಖ್ಯ ನೆಲೆಗಳೇ ಪುರಾಣದ ವಸ್ತುಗಳು. 
                ಮೊದಲಿಗೆ, ಇಡೀ ಪುರಾಣಗಳನ್ನು ಲಿಖಿತ ಹಾಗೂ ಮೌಖಿಕವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವೆರಡೂ ಗುಂಪುಗಳು ಸ್ಪಷ್ಟವಾದ ಭಿನ್ನತೆಗಳನ್ನು ರೂಢಿಸಿಕೊಂಡಿರುತ್ತವೆ. ಇನ್ನು ಪುರಾಣಗಳಲ್ಲಿ ಸೃಷ್ಟಿಪುರಾಣಗಳು, ಆಕಾಶಕಾಯ ಮತ್ತು ಮನುಷ್ಯ ಚಟುವಟಿಕೆ ಕುರಿತ ಪುರಾಣಗಳು, ಸಾವಿನ ನಂತರದ ಜಗತ್ತನ್ನು ಕುರಿತ ಪುರಾಣಗಳು ಎಂಬಿತ್ಯಾದಿಯಾಗಿ ವಿಂಗಡಿಸಿಕೊಳ್ಳಬಹುದು. ಇದೇ ಹಿನ್ನೆಲೆಯಲ್ಲಿ ಎಲ್.ಆರ್. ಹೆಗಡೆಯವರು ಪುರಾಣದ ಬಗೆಗಳನ್ನು ಸೃಷ್ಟಿಕ್ರಮದ ಕಥೆಗಳು, ಮಾನವ ಹಾಗೂ ಪ್ರಾಣಿಗಳ ಉತ್ಪತ್ತಿ, ಆಕಾಶದ ನಕ್ಷತ್ರ-ಗ್ರಹಗಳ ಉತ್ಪತ್ತಿಗಳು ಮತ್ತು ವಿಧಿಕ್ರಮಗಳನ್ನು ರೂಪಿಸಿದ ಕಥೆಗಳು ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಹಿ.ಶಿ. ರಾಮಚಂದ್ರೇಗೌಡರ ಪ್ರಕಾರ ಪುರಾಣಗಳನ್ನು ಋತುಮಾನಕ್ಕೆ ಸಂಬಂಧಿಸಿದ, ನಿಸರ್ಗದ ಹುಟ್ಟ-ಸಂದರ್ಭಕ್ಕೆ ಸಂಬಂಧಿಸಿದ, ದೇವತೆಗಳ ಹುಟ್ಟು ಮನುಷ್ಯ ಪ್ರಾಣಿಗಳ ಹುಟ್ಟು-ರೂಪಾಂತರ, ಸಾಂಸ್ಕೃತಿಕ ನಾಯಕರ ಸಾಮಾಜಿಕ ಅನ್ವೇಷಣೆಗಳು, ಸಾವಿನ ನಂತರದ ಸ್ಥಳಗಳ ಕುರಿತ, ಚಾರಿತ್ರಿಕ ಘಟನೆಗಳ ಕುರಿತ ಪುರಾಣಗಳು ಎಂಬುದಾಗಿ ವರ್ಗೀಕರಿಸಬಹುದು 

               ಅನೇಕ ವಿದ್ವಾಂಸರು ಹೇಳಿರುವಂತೆ, 'ಆದಿ ಮಾನವನ ಲೋಕದೃಷ್ಟಿಯ ಅಭಿವ್ಯಕ್ತಿಯೇ ಪುರಾಣ. ಅದೊಂದು ನಿರೂಪಣೆ, ಮನುಷ್ಯ ತಾನು ಪರಿಸರಕ್ಕೆ ಹೊಂದಿಕೊಂಡು ಬಾಳಲಾರಂಭಿಸಿದ ಕಾಲಕ್ಕೆ ಪರಿಸರದ ಭೌತಿಕ ಜಗತ್ತು ಹಾಗೂ ಪಕ್ಷಿ, ಪ್ರಾಣಿ ಪರಿಸರಗಳ ಹುಟ್ಟು-ಸಾವಿನ ಬಗೆಗೆ ತಳೆದ ಊಹಾತ್ಮಕ ವಿಚಾರಗಳ ಮೊತ್ತ. ಮೊದಲು ಪ್ರಾಚೀನ ಘಟನಾವಳಿಗಳು, ಪಳಗತೆಗಳು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಇವು ನಂತರದ ಕಾಲಕ್ಕೆ ಪುರಾಣ ಎಂಬುದಾಗಿ ಕರೆಸಿಕೊಂಡಿವೆ'. ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ಕುರಿತಂತಿರುವ ಆದಿ ಮಾನವನ ಕಲ್ಪನೆಗಳೇ ಪುರಾಣಗಳು. ಇವುಗಳ ಪ್ರಧಾನ ಉದ್ದೇಶ ವಿವರಣೆ, ಸಮರ್ಥನೆ, ಶಿಕ್ಷಣ, ಪುನರ್ ನವೀಕರಣ ಮತ್ತು ಸ್ಪೂರ್ತಿಯನ್ನು ಹುಟ್ಟಿಸುವುದು. ಈ ಮಾತನ್ನು ಇನ್ನಷ್ಟು ವಿವರಿಸುವುದಾದರೆ, ಜಗತ್ತು ಹೀಗೇ ಯಾಕೆ ಇದೆ ಎಂಬ ಸಹಜ ಕುತೂಹಲಕ್ಕೆ ಇರುವ ಉತ್ತರಗಳೇ ಪುರಾಣಗಳು. ಇವು ತಾವು ಮಂಡಿಸುವ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಇವುಗಳನ್ನು ಪುರಾಣಗಳಿಗಿರುವ ಅಧಿಕಾರ ಹಾಗೂ ಗೌರವದ ಸ್ಥಾನಮಾನಗಳು ಸತ್ಯವೆನ್ನುವಂತೆ ನಂಬಿಸುತ್ತವೆ. ಹೀಗೆ ಜನರಿಗೆ ಜಗತ್ತಿನ ಚರಾಚರ ವಸ್ತು ವಿಷಯಗಳ ಉಗಮ-ವಿಕಾಸವನ್ನು ಕುರಿತು ಹೇಳುವುದರಿಂದ ಇದು ಶಿಕ್ಷಣದ ಒಂದು ಕ್ರಮವೂ ಹೌದು. ಮಾನವ ಒಂದು ಕಾಲಕ್ಕೆ ತಾನು ಊಹಿಸಿದ ಸಂಗತಿಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗು ರವಾನಿಸುವ ಮೂಲಕ ಜಗತ್ತಿನ ಬಗ್ಗೆ ಒಂದು ಬಗೆಯ ತಿಳುವಳಿಕೆಯನ್ನು ನೀಡುತ್ತಾನೆ. ಈ ಊಹಾತ್ಮಕ ಸಂಗತಿಗಳು ಎಲ್ಲಾ ಕಾಲ, ಧರ್ಮ, ಜಾತಿ, ಜನಾಂಗಗಳಲ್ಲಿ ಒಂದೇ ರೀತಿ ಇರಲಾರವು. ಕಾಲಕ್ಕೆ ತಕ್ಕಂತೆ ಆದಿಮಾನವನ ಕಲ್ಪನೆಗಳು ಬದಲಾವಣೆಯಾಗುತ್ತಾ ಬರುತ್ತವೆ. ಇವೆಲ್ಲವುಗಳ ಜೊತೆಗೆ ಪುರಾಣಗಳು ಲೋಕದ ನಡುವೆ ಬದುಕುವ ಮನುಷ್ಯನಿಗೆ ಈ ಮತ್ರ್ಯಲೋಕದಲ್ಲಿ ಇನ್ನಷ್ಟು ಕಾಲ ಬದುಕುವ, ಬರೀ ಬದುಕುವ ಅಲ್ಲ; ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ  ಸ್ಪೂರ್ತಿಯನ್ನು  ನೀಡುತ್ತವೆ. ವಿಶೇಷವಾಗಿ ಸಾಂಸ್ಕೃತಿಕ ನಾಯಕರನ್ನು ಕುರಿತ ಪುರಾಣಗಳು ಸಾಂಸ್ಕೃತಿಕ ನಾಯಕನ ಶೌರ್ಯ-ಸಾಹಸಗಳನ್ನು ವಿವರಿಸುವುದರ ಮೂಲಕ ಕೇಳುವವರಲ್ಲಿ ಆಸಕಿ ಮತ್ತು  ಸ್ಪೂರ್ತಿಯನ್ನು  ತುಂಬುತ್ತವೆ. 

               ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಊಹಾತ್ಮಕ ವಿವರಣೆ ನೀಡುವುದಷ್ಟೇ ಅಲ್ಲ, ಅದರಾಚೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತವೆ. ತಮ್ಮ ಬುದ್ಧಿಗೆ ನಿಲುಕದಿರುವ ವಿಷಯಗಳಿಗೂ ಕಾರ್ಯ ಕಾರಣ ಸಂಬಂಧವನ್ನು ಸೂಚಿಸುತ್ತವೆ. ಜೊತೆಗೆ ಕೆಲವು ಸತ್ಯ ಸಂಗತಿಗಳನ್ನೂ ಪುರಾಣೀಕರಿಸುತ್ತವೆ. ಪ್ರಸಿದ್ಧ ರಚನಾವಾದಿ ಲೆವಿಸ್ಟ್ರಾಸ್ ಹೇಳುವ ಹಾಗೆ ಪುರಾಣ ಎನ್ನುವುದು ಒಂದು ಭಾಷೆ. ಮಾನವನ ಸುಪ್ತ ಅಭೀಪ್ಸೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಿದ ರಚನೆಗಳಿವು. ಹೀಗೆಂದಾಕ್ಷಣ ಸಾಹಿತ್ಯಕ ಪ್ರಕಾರಗಳೆಲ್ಲವೂ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಈ ಎಲ್ಲಾ ಪ್ರಕಾರಗಳಲ್ಲಿ ಪುರಾಣಗಳ ಆಶಯಗಳಿರುತ್ತವೆ. ಹೀಗೆ ಪ್ರಾಚೀನಕಾಲದಿಂದಲೂ ಮಾನವ ತನ್ನ ಪರಿಸರದ ಸ್ವರೂಪ ಹಾಗೂ ಚಟುವಟಿಕೆಗಳಿಗೆ ಕಾರ್ಯಕಾರಣ ಸಂಬಂಧಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಹುಟ್ಟಿದ ಈ ಪುರಾಣಗಳ ಸೃಷ್ಟಿ ಅಲ್ಲಿಗೇ ನಿಂತಿಲ್ಲ. ಈ ರೀತಿಯ ರಚನೆಗಳು ಆಧುನಿಕ ಕಾಲದವರೆಗೂ ಮುಂದುವರೆದಿದೆ. ಈ ಮುಂದುವರಿಕೆ ಹೊಸ ಪುರಾಣಗಳ ಸೃಷ್ಟಿಗಿಂತ ಹಳೆಯ ಪುರಾಣಗಳನ್ನು ಹೊಸ ಅರ್ಥ ಹಾಗೂ ಆಶಯಗಳಿಗೆ ಒಗ್ಗಿಸುವ ಕಡೆ ಗಮನ ಹರಿಸುತ್ತದೆ. ಸಮಾಜದಲ್ಲಿ ಹೊಸ ದರ್ಶನಗಳು ಮೂಡಿದಾಗ ಅವುಗಳನ್ನು ಜನಪ್ರಿಯಗೊಳಿಸಲು ಸಂಪೂರ್ಣ ಹೊಸದೇ ಆದ ಪುರಾಣ ರಚನೆಯಾಗುವುದು ಅಪರೂಪ. ಏಕೆಂದರೆ ಜನ ಹೊಸದನ್ನು ಅಷ್ಟು ಸುಲಭವಾಗಿ ಶೀಘ್ರವಾಗಿ ಸ್ವೀಕರಿಸಲಾರರು. ಇಂಥ ಸಂದರ್ಭದಲ್ಲಿ ತಮ್ಮ ಮೂಲ ಆಕಾರವನ್ನು ಕಳೆದುಕೊಳ್ಳದೇ ಹೊಸ ದರ್ಶನಗಳನ್ನು ಹೇಳಲಾಗುತ್ತದೆ.

         ಹೀಗೆ ರೂಪಗೊಂಡಿರುವ ಪುರಾಣಗಳು ಯಾವಗ ರಚಿತವಾದವು ಎಂಬುದು ಮುಖ್ಯವಾದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಆಲೋಚಿಸುತ್ತಿರುವ ಹಲವು ವಿದ್ವಾಂಸರು ಕ್ರಿ.ಶ. ಆರಂಭದ ಹೊತ್ತಿಗಾಗಲೇ ಪುರಣಾಗಳು ಅಸ್ತಿತ್ವದಲ್ಲಿದ್ದವು. ವಿಶೇಷವಾಗಿ ವೈದಿಕ ಸಮುದಾಯಗಳಲ್ಲಿ ರಾಜಾಯಣ-ಮಹಾಭಾರತಗಳು ರಚನೆಯಾಗುತ್ತಿದ್ದ ಕಾಲಕ್ಕೆ ಮತ್ತೊಂದು ಕಡೆ ಪುರಾಣಗಳು ರಚನೆಯಾಗುತ್ತಿದ್ದವು. ಅವುಗಳನ್ನೇ ನಾವು ಇಂದು 18 ಮಹಾಪುರಾಣಗಳು 18 ಉಪ-ಪುರಾಣಗಳು ಎಂಬುದಾಗಿ ಕರೆದುಕೊಳ್ಳುತ್ತಿದ್ದೇವೆ. ಆ ಕಾಲಕ್ಕೆ ವೇದಗಳು ಪ್ರಧಾನ ಸಾಹಿತ್ಯ ಸಾಮಗ್ರಿಗಳಾಗಿ ನೆಲೆನಿಂತಿದ್ದರೂ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ಸು ಕಂಡಿರಲಿಲ್ಲ. ಕಾರಣ ಸಾಮಾನ್ಯ ಜನ ಹಾಗೂ ವಿಶೇಷವಾಗಿ ಕೆಳಜಾತಿಯ ಜನ ವೇದಗಳನ್ನು ಓದಲು ಅರ್ಹರಲ್ಲ ಎಂಬ ಹೇರಿಕೆ ಇತ್ತು. ಜೊತೆಗೆ ಸ್ವತಃ ವೇದಗಳೇ ಕಠಿಣ ರಚನೆಗಳಾಗಿದ್ದವು. ಈ ಕಾರಣಕ್ಕಾಗಿ ವೇದಗಳು ಜನರಿಂದ ದೂರವಾಗಲಾರಂಭಿಸಿದವರು. ಈ ಅಭಿಪ್ರಾಯವನ್ನು ತಪ್ಪಿಸುವ ಸಲುವಾಗಿ ವೇದಗಳನ್ನೇ ಅತ್ಯಂತ ಸರಳವಾದ ಜನಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಲಾಯಿತು. ಅದರ ಫಲವೇ 18 ಮಹಾಪುರಾಣಗಳು, 18 ಉಪಪುರಾಣಗಳ ಸೃಷ್ಟಿ. ಈ ಕಾರಣಕ್ಕಾಗಿಯೇ ಇರಬೇಕು, ಪುರಾಣಗಳನ್ನು ಐದನೇ ವೇದ ಎಂಬುದಾಗಿ ಕರೆಯಲಾಗಿದೆ. ಇವುಗಳಲ್ಲಿ ಆದಿಮಾನವನ ಕಲ್ಪನೆಗಳಿದ್ದು ಇವು ಒಂದು ರೀತಿಯಲ್ಲಿ ಪುರಾಣದ ಆಶಯ-ಸ್ವರೂಪಗಳನ್ನು ಪಡೆದಿವೆ ಎಂಬುದು ಗಮನಾರ್ಹ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಜನಪದರಲ್ಲಿ ಅವರವೇ ಆದ ನಂಬಿಕೆ-ಸಂಪ್ರದಾಯ-ಹಾಡು-ಕಥೆಗಳಿದ್ದವು. ಈ ಹೊತ್ತಿಗೂ ಜನಪದರಲ್ಲಿ ಪ್ರಚಲಿತವಿರುವ ಆಚರಣೆಗಳಲ್ಲಿ ಅಂತಹ ಆಶಯಗಳನ್ನು ಗುರುತಿಸಬಹುದಾಗಿದೆ. 

          ಮುಖ್ಯವಾಗಿ, ಪುರಾಣಗಳಿಗೆ ವ್ಯವಸ್ಥಿತ ರೂಪ ಕೊಟ್ಟು ತಮ್ಮ ಉದ್ದೇಶಗಳ ಈಡೇರಿಕೆಗೆ ಬಳಸಿಕೊಂಡಿದ್ದು ಮಾತ್ರ ವೈದಿಕ ಧಮ್. ತದನಂತರ ಈ ತಂತ್ರವನ್ನು ಎಲ್ಲಾ ಧರ್ಮಗಳು ಉಪಯೋಗಿಸಿಕೊಂಡು ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಂಡವು. ಜೈನಧರ್ಮದ ತೀರ್ಥಂಕರ ಚರಿತೆಗಳು, ಶೈವಸಂತರ ಚರಿತ್ರೆಗಳು ವಿಶೇಷವಾಗಿ ಸೃಷ್ಟಿಯಾಗಿರುವುದನ್ನು ನೋಡಬಹುದು. ಹೀಗೆ ಧರ್ಮ ಪ್ರಚಾರದ ಆಶಯವನ್ನೇ ಕೇಂದ್ರವಾಗಿಸಿಕೊಂಡ ಪುರಾಣಗಳಿಗೆ ಸಂಕೀರ್ಣತೆ ಬಂದೊದಗಿತು. ಇದನ್ನು ರಾಜಾರಾಮ ಹೆಗಡೆಯವರು ಹೀಗೆ ವಿವರಿಸುತ್ತಾರೆ: ಪುರಾಣಗಳು ವೈದಿಕ ಅವೈದಿಕ ಧಾರೆಗಳೆರಡರಲ್ಲಿ ಸಮ್ಮಿಶ್ರ ರೂಪಗಳಿರುತ್ತವೆ. ಯಾವೊಂದು ಗುಂಪಿನ ಪುರಾಣಗಳು ಕೂಡಾ ತನ್ನಷ್ಟಕ್ಕೆ ತಾನೇ ಸ್ವಯಂಭೂ ಆಗಿರುವುದಿಲ್ಲ. ಏಕೆಂದರೆ ಇದೊಂದು ಸಾಂಸ್ಕೃತಿಕ ಉತ್ಪನ್ನ. ಹಾಗಾಗಿ ಇತಿಹಾಸದ ವಿಭಿನ್ನ ಸಂದರ್ಭಗಳನ್ನು ಹೊಂದುತ್ತ, ಹಿಗ್ಗುತ್ತಾ, ರೂಪಾಂತರಗೊಳ್ಳುತ್ತಾ ಹೋಗುತ್ತವೆ. ಹಾಗಾಗಿ, ಈ ಪುರಾಣಲೋಕ ಒಂದು ಸಮ್ಮಿಶ್ರ ಸಂಪ್ರದಾಯವಾಗಿ ಕಂಡುಬರುತ್ತದೆ. ಆದ್ದರಿಂದ ಪುರಾಣಗಳು ಇಡಿಯಾಗಿ ಯಾವುದೇ ಒಂದು ಧರ್ಮದ ಸಂಪ್ರದಾಯವನ್ನು ಪ್ರತಿಪಾದಿಸಬೇಕೆಂದೇನೂ ಇಲ್ಲ. ಕೂರ್ಮ ಪುರಾಣದಲ್ಲಿ ರುದ್ರನೇ ಶೈವ ಸಂಪ್ರದಾಯದಲ್ಲಿ ಸೇರಿದ ಕಾಪಾಲಕರನ್ನು ಹಳಿಯುವಂತೆ ಚಿತ್ರಿಸಲಾಗಿದೆ. ವೃಷ್ಣವ ಸಂಪ್ರದಾಯ ಶಿವನನ್ನು ವಿಷ್ಣುವಿನ ಅಧೀನಕ್ಕೆ ತಂದು ದಂತ ಕಥೆಗಳನ್ನು ಸಷ್ಟಿಸಿದರೆ; ಅದೇ ದಂತ ಕಥೆಯಲ್ಲಿ ಶಿವನನ್ನು ಎತ್ತಿ ಹಿಡಿಯುವ ಶೈವ ಪಾಠವೊಂದು ಬಂದಿರುತ್ತದೆ. ಪುರಾಣಗಳಲ್ಲಿ ಇಂಥ ಹಲವು ದಂತಕಥೆಗಳನ್ನು ನೋಡಬಹುದು. ಶಿಷ್ಟಪರಂಪರೆಯ ಪಂಡಿತರಿಂದ ವ್ಯಕ್ತವಾಗುವ ವಿಚಾರಗಳಿವು. ಈ ಪರಂಪರೆಗಿಂತ ಭಿನ್ನವಾದ ದೃಷ್ಟಿ - ಧೋರಣೆಗಳಿರುವ ಜನಪದರು ಇದೇ ಪರಂಪರೆಯ ಪುರಾಣಗಳನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ? ಹಾಗೂ ಅವರು ಕಟ್ಟಿಕೊಂಡಿರುವ ಜನಪದ ಪುರಾಣಗಳ ಸ್ವರೂಪವೇನು ಎಂಬುದು ವಿಚಾರಾರ್ಹ. ಹಾಗಾಗಿ, ಮೊದಲಿಗೆ ಜನಸಾಮಾನ್ಯರು ಪುರಾಣಗಳನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು. 

           ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಹುತೇಕ ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಆಶ್ರಯಿಸಿದ್ದು ಅರಣ್ಯವಾಸಿ ಮತ್ತು ಕೃಷಿಕರಂಥ ಶ್ರಮಸಂಸ್ಕೃತಿಯ ಜನರನ್ನೇ. ಈ ಪ್ರಕ್ರಿಯೆಯೊಳಗೆ ಹಲವಾರು ಸಮುದಾಯಗಳು ತಮ್ಮ ಅನನ್ಯತೆಯನ್ನು ಕಳೆದುಕೊಂಡವು. ಮತ್ತೆ ಕೆಲವು ಅನನ್ಯತೆಯ ಉಳಿವಿಗಾಗಿ ಹೋರಾಡಿದವು. ಈ ಹೋರಾಟಗಳು ಯಾವ ಸ್ವರೂಪದಲ್ಲಿದ್ದವು ಎಂಬುದಕ್ಕೆ ನಿಖರವಾದ ಯಾವ ಆಧಾರಗಳೂ ಇಲ್ಲ. ಆದರೂ ಭಾಷಾಭಿವ್ಯಕ್ತಿಗಳಿಂದ ಪ್ರತಿಭಟನೆ ಮಾಡಿದ್ದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕೆ ಇಂದಿಗೂ ಸಮುದಾಯಗಳಲ್ಲಿ ಪ್ರಚಲಿತವಿರುವ ಪುರಾಣಗಳು ಸಮರ್ಥ ಉದಾಹರಣೆಯಾಗಬಲ್ಲವು. ಈ ಕಾಲದ ಜನಪದ ಪುರಾಣಗಳು ಶಾಸ್ತ್ರೀ ಪುರಾಣಗಳ ಅನುಕರಣೆ ಎಂಬಂತೆ ಇವೆ. ಆದರೆ ಅವುಗಳ ಆಳದಲ್ಲಿ ಶಾಸ್ತ್ರೀಯ ಧಾರೆಯ ಮೌಲ್ಯಗಳನ್ನು ಟೀಕಿಸುವ, ಅವುಗಳನ್ನು ಮೀರುವ ಪ್ರಯತ್ನಗಳಿವೆ. ಜೊತೆಗೆ ಆ ಮೌಲ್ಯಗಳ ಸ್ಥಾನದಲ್ಲಿ ಅವರದೇ ಜಗತ್ತಿನೊಳಗೆ ಚಾಲ್ತಿಯಲ್ಲಿದ್ದ ಮೌಲ್ಯಗಳು ತುಂಬಿಕೊಂಡಿವೆ. ಜನಪದ ಪುರಾಣಗಳು ಇಂಥ ರೂಪಾಂತರ ಕಂಡ ಕಾಲ ಯಾವುದು? ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ಸದ್ಯ ನಮಗೆ ಲಭಿಸಿರುವ ಐತಿಹ್ಯ ಪುರಾಣಗಳ ಸ್ವರೂಪವನ್ನು ಗಮನಿಸಿದರೆ 15, 16, 17ನೇ ಶತಮಾನದಿಂದಲೇ ಸೃಷ್ಟಿಯಾದಂತೆ ತೋರುತ್ತದೆ. .......................... ಇದನ್ನು ಒಪ್ಪಿಕೊಂಡರೆ, 15, 16, 17ನೇ ಶತಮಾನದ ಸಾಮಾಜಿಕ, ಆಥರ್ಿಕ, ಧಾಮರ್ಿಕ ಸಂರಚನೆಗಳು ಐತಿಹ್ಯ ಮತ್ತು ಪುರಾಣಗಳ ಸೃಷ್ಟಿಗೆ ಕಾರಣವಾಗಿರಬೇಕೆಂದು ಊಹಿಸಬಹುದು. ಇದಕ್ಕೆ ಪುಷ್ಟಿನೀಡುವಂತೆ ಅನೇಕ ಜನಪದ ಮಹಾಕಾವ್ಯಗಳ ಹುಟ್ಟು ಇದೇ ಕಾಲಮಾನದಲ್ಲಿ ಓಡಾಡುತ್ತಿರುವುದು ಗಮನಾರ್ಹ. ಈ ಕಾಲ ಭಕ್ತಿ ಪಂಥದ ಕಾಲ, ಈ ಭಕ್ತಿಪಂಥ ಮಾಡಿದ ಮುಖ್ಯ ಕೆಲಸವೆಂದರೆ ಆದಿವಾಸಿ, ಕೆಳಜಾತಿಗಳ ಮೂಲಧರ್ಮದ ನಿರಾಕರಣೆ. ಇದಕ್ಕೆ ಕಾರಣ ಕಲ್ಲು, ಮರ, ಮೊದಲಾದ ಕ್ಷುದ್ರ ದೇವತೆಗಳು ಇವರವೆಂಬುದು. ಹೀಗೆ ಕೆಳಜಾತಿಗಳ ದೈವಗಳನ್ನು ನಿರಾಕರಿಸಿ, ಹೊಸ ರೀತಿಯ ಧರ್ಮದ ಪ್ರತಿಷ್ಠಾಪನೆಗೆ ಪ್ರಯತ್ನಿಸಿತು ಪರಿಣಾಮ, ಕೆಳ ಜಾತಿಗಳು ತಮ್ಮ ಮೂಲ ಧರ್ಮ, ದೇವತೆಗಳನ್ನು ಕಾಯ್ದಿಟ್ಟುಕೊಳ್ಳುವ ತಂತ್ರವಾಗಿ ಇಂಥ ಪುರಾಣ ಕಾವ್ಯಗಳನ್ನು ಕಟ್ಟಿಕೊಂಡಿರಬಹುದೆಂದು ಊಹಿಸಬಹುದಾಗಿದೆ.

          'ಪುರಾಣ'ವನ್ನು ಕುರಿತ ಹಾಗೆ ಪ್ರಾಚೀನ ಕಾಲದಿಂದಲೂ ಇರುವ ವಿವಿಧ ರೀತಿಯ ಅರ್ಥಗ್ರಹಿಕೆಗಳಲ್ಲಿ ಜನಪದರ ಗ್ರಹಿಕೆಯೊಂದಿದೆ ಎಂಬುದು ವಿಶೇಷ. ಸಾಮಾನ್ಯ ಜನತೆಯ ಪುರಾಣದ ವ್ಯಾಖ್ಯಾನ ಅತ್ಯಂತ ಕುತೂಹಲಕರವಾದುದು. ಇವರು ಪುರಾಣದ ಹಿನ್ನೆಲೆ ಮುನ್ನೆಲೆಗಳನ್ನು ತಾತ್ವಿಕವಾಗಿ ಗ್ರಹಿಸದೇ ಹೋದರೂ, ಅವು ಅರ್ಥವಾದಷ್ಟನ್ನು ಸ್ಪಷ್ಟವಾಗಿ ಹೇಳಬಲ್ಲರು. ಈ ಹಿನ್ನೆಲೆಯಲ್ಲಿ ಪ್ರಚಲಿತವಿರುವ ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಗಮನಿಸುವುದರ ಮೂಲಕ ಪುರಾಣದ ಬಗ್ಗೆ ಜನಸಾಮಾನ್ಯರಿಗಿರುವ ದೃಷ್ಟಿಕೋನವನ್ನು ನೋಡಬಹುದು. 
                             1) ಪುರಾಣ ಹೇಳೋಕೆ; ಬದನೆಕಾಯಿ ತಿನ್ನೋಕೆ 
                             2) ಪುರಾಣ ಕೇಳಿ ಪರಾಣ (ಪ್ರಾಣ) ಹೋಯಿತು 
                             3) ಪುರಾಣ ಹೇಳ್ಬೇಡ
                             4) ರಾತ್ರಿಯೆಲ್ಲ ರಾಮಾಯಣ ನೋಡಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕೆಂದನಂತೆ 
                             5) ಪೂರ್ವಿಕರು ಹೇಳಿದ್ದು ಪುರಾಣ; ಊರ್ವಿಕರು ಹೇಳಿದ್ದು ಗಾದೆ 
         ಮೇಲಿನ ನುಡಿಗಟ್ಟುಗಳಲ್ಲಿ, ಮೊದಲನೆಯ ನುಡಿಗಟ್ಟು ಪುರಾಣಗಳನ್ನು ವಾಸ್ತವ, ಅವಾಸ್ತವ ಎಂಬೆರಡು ನೆಲೆಗಳಿಂದ ವಿವರಿಸುತ್ತದೆ. ಇಲ್ಲಿ ಪುರಾಣ ಹೇಳೋಕೆ ಮಾತ್ರ ಎಂಬ ಮಾತಿನಿಂದ ಅದೊಂದು ಅವಾಸ್ತವತೆಯಿಂದ ಕೂಡಿದ್ದು, ಬರೀ ನುಡಿ, ತಾತ್ವಿಕ ದೃಷ್ಟಿ ಎಂಬರ್ಥ ಹೊರಡುತ್ತದೆ. ಮುಂದಿನ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವ ನೆಲೆಯುಳ್ಳದ್ದು. ಎರಡನೇ ನುಡಿಗಟ್ಟು ಪುರಾಣವೆಂದರೆ, ದೀರ್ಘವಾದುದು ಆದರೆ, ಜೀವನ ಮಾತ್ರ ಅಲ್ಪಕಾಲಾವಧಿಯುಳ್ಳದ್ದು. ಮನುಷ್ಯನ ಜೀವಿತಾವಧಿ ಮುಗಿದರೂ ಪುರಾಣ ಮುಗಿಯಲಾರದು ಎಂಬರ್ಥ ಸ್ಫುರಿಸುತ್ತದೆ. ಇದೇ ನೆಲೆಯಲ್ಲಿ ಮೂರನೇ ನುಡಿಗಟ್ಟನ್ನು ಗಮನಿಸಬಹುದಾಗಿದೆ. ಅದರಲ್ಲಿಯೂ ಕೂಡ ಪುರಾಣ ದೀರ್ಘವಾದುದು ಎಂಬರ್ಥ ಬರುವಂತೆ ಹೇಳಲಾಗಿದೆ. ಹಾಗೆಯೇ ಅವಾಸ್ತವ ಎಂಬರ್ಥ ಹೊಳೆಯುತ್ತದೆ. ಇನ್ನು ನಾಲ್ಕನೇ ನುಡಿಗಟ್ಟು ಪುರಾಣದ ಸಂಕೀರ್ಣತೆಯ ಕಡೆಗೆ ಗಮನಕೊಡುತ್ತದೆ. ರಾತ್ರಿಯೆಲ್ಲ ರಾಮಾಯಣ ಕಥೆ ನೋಡಿದರೂ ರಾಮ ಸೀತೆಯರ ಸಂಬಂಧಗಳು ಅರ್ಥವಾಗದೇ ಉಳಿಯುತ್ತವೆ. ಹಾಗಾಗಿ ಪುರಾಣವೆಂಬುದು ಅಷ್ಟೊಂದು ಸಂಕೀರ್ಣ ಸ್ಥಿತಿಯದ್ದು. ಐದನೇ ನುಡಿಗಟ್ಟಾದರೂ ಪುರಾಣದ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಆದಿ ಮಾನವನ ಕಲ್ಪನೆ ಅಥವಾ ಊಹೆಯ ಅಭಿವ್ಯಕ್ತಿಯಾಗಿ ಪುರಾಣಗಳನ್ನು; ಅನುಭವದ ಮಾತಾಗಿ ಗಾದೆಯನ್ನು ಪರಿಭಾವಿಸಿರುವುದು ಸ್ಪಷ್ಟವಾಗುತ್ತದೆ. 

      ಒಟ್ಟಾರೆ, ಪುರಾಣವೆಂದರೆ ಪುರಾತನವಾದುದು, ಪುರಾತನ ಮಾನವನ ಊಹಾತ್ಮಕ ಮಾತು, ಧೀರ್ಘವಾದುದು, ಸಂಕೀರ್ಣವಾದುದು ಎಂಬರ್ಥದಲ್ಲಿ ಸಾಮಾನ್ಯ ಜನತೆ ಅರ್ಥೈಸಿರುವುದು ಸ್ಪಷ್ಟವಾಗಿದೆ. ಇದರ ಜೊತೆಗೆ ಸೂಕ್ಷ್ಮವಾಗಿ ಗಮನಿಸಿದರೆ ಪುರಾಣದ ಬಗೆಗೆ ಮೇಲಿರುವ ಜನಸಾಮಾನ್ಯರ ಹೇಳಿಕೆಗಳು ಪುರಾಣಗಳನ್ನು ನೇತ್ಯಾತ್ಮಕವಾಗಿ ನೋಡಿರುವುದು ಸ್ಪಷ್ಟವಾಗುತ್ತದೆ. ಶಿಷ್ಟ ಪರಂಪರೆಗಳು ಸೃಷ್ಟಿಸಿ ಇವರ ನಡುವೆ ಚಲಾವಣೆಗೆ ಬಿಟ್ಟಿದ್ದ ಪುರಾಣಗಳನ್ನು ಹೀಗೆ ನೋಡಿದ ಈ ಮನಸ್ಸುಗಳು ತಾವು ಸೃಷ್ಟಿಸಿದ ಪುರಾಣಗಳಿಗೆ ಯಾವ ಸ್ವರೂಪ ನೀಡಿವೆ ಎಂಬುದು ಕುತೂಹಲಕರವಾದುದು. ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

  ಜನಪದ - ಶಿಷ್ಟ ಪುರಾಣಗಳು

 ಪುರಾಣಗಳನ್ನು ಶಿಷ್ಟ-ಜಾನಪದ ಎಂಬುದಾಗಿ ವಿಂಗಡಿಸಿ ನೋಡುವುದು ಅಂತಿಮವಾಗಿ ಯಾವುದೇ ಬಹುದೊಡ್ಡ ಫಲಿತ ನೀಡಲಾರದು. ಆದರೂ ಎರಡು ವಿಭಿನ್ನ ಗುಂಪುಗಳ ಸೃಷ್ಟಿಗಳನ್ನು ಸೂಕ್ಷ್ಮ ಅಧ್ಯಯನಕ್ಕೊಳಪಡಿಸುವ ಕಾರಣಕ್ಕಾಗಿ ಇಂಥ ವಗರ್ೀಕರಣ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ: ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳೆರಡರ ಮೂಲ ಸಾಮಗ್ರಿಗಳು ಮನೋಬಿಂಬಗಳು, ಪ್ರತಿಮೆಗಳಂಥ ಸ್ವಪ್ನ ಪ್ರತೀಕಗಳೇ ಆಗಿವೆ. ಎರಡರಲ್ಲಿಯೂ ಹೇರಳವಾದ ಬ್ರಾಮಕಗಳಿರುತ್ತವೆ. ಅಪ್ಪ-ಅಮ್ಮ, ಗಂಡ-ಹೆಂಡತಿ, ಮಗ-ಮಗಳು, ಕಾಮ-ಪ್ರೇಮ, ಹುಟ್ಟು-ಸಾವು, ಲೌಕಿಕ-ಅಲೌಕಿಕ ಪ್ರತೀಕಗಳು ಎರಡರಲ್ಲಿಯೂ ಇರುತ್ತವೆ. ಎರಡರಲ್ಲಿಯೂ ಸಂಸ್ಕೃತಿಯ ವೀರನೊಬ್ಬನ ಮೂಲಕ ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ಕೆಲವು ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

        ಲಿಖಿತ ಅಥವಾ ಶಿಷ್ಟಪುರಾಣಗಳು ಅಧಿಕಾರದ ನೆಲೆಯ ಸೃಷ್ಟಿಗಳು. ಇವುಗಳಲ್ಲಿ ಬಹುತೇಕ ಸುಖಾಂತ ನಿರೂಪಣೆಯುಳ್ಳವು. ಇಲ್ಲಿಯ ನಾಯಕ ಹುಟ್ಟುತ್ತಲೇ ಮಹಾನ್ ವ್ಯಕ್ತಿಯಾಗಿದ್ದು, ಕೊನೆಗೆ ಅಮರನಾಗುತ್ತಾನೆ. ಸಾವು ಈತನ ಹತ್ತಿರ ಸುಳಿಯುವುದಿಲ್ಲ. ಇಲ್ಲಿ ಬರುವ ಹೋರಾಟಗಳು ರಕ್ಷಣಾತ್ಮಕವಾಗಿರುತ್ತವೆ. ಸಾಮ್ರಾಜ್ಯ ಉಳಿಸಿಕೊಳ್ಳುವಿಕೆ, ಸಮರ್ಥವಾಗಿ ಮೂಡಿಬಂದರೆ ಮಾತ್ರ ಸಮೂಹದ ಪ್ರತಿಬಿಂಬಗಳಾಗುತ್ತವೆ. ಮೌಖಿಕ ಅಥವಾ ಜನಪದ ಪುರಾಣಗಳಾದರೋ ಸಮಾಜದ ನೊಂದ ಜನತೆಯ ದನಿಗಳು. ಬಹುತೇಕ ಜನಪದ ಪುರಾಣಗಳು ದುಃಖಾಂತ ನಿರೂಪಣೆಗಳಾಗಿವೆ. ಸಾಮಾನ್ಯವಾಗಿ ಇಲ್ಲಿಯ ಹೆಚ್ಚಾನುಹೆಚ್ಚು ನಾಯಕರು ಮಧ್ಯೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಕಾರಣ ಇಲ್ಲಿಯ ನಾಯಕರು ಸಾಮಾನ್ಯ ಜನತೆಯ ಸ್ವರೂಪದಲ್ಲಿ ಬಂದವರು. ಶಿಷ್ಟನಾಯಕರಿಗಿದ್ದಂತಹ ದೈವತ್ವ ಇಲ್ಲಿಯ ನಾಯಕರಿಗಿಲ್ಲ. ಹಾಗಾಗಿ ಇಲ್ಲಿಯ ನಾಯಕರು ಸಾಧನೆಯಿಂದ ಮೇಲೇರುತ್ತಾರೆ. ಇಡೀ ಪುರಾಣಗಳಲ್ಲಿ ನಾಯಕರ ಹೋರಾಟದ ನೆಲೆ ಸೃಷ್ಟ್ಯಾತ್ಮಕ ನೆಲೆಯುಳ್ಳದ್ದು. ಇಲ್ಲಿ ಯಾವುದೇ ಸಾಮ್ರಾಜ್ಯದ ಅಥವಾ ಅಧಿಕಾರದ ವಿಸ್ತರಣೆ ಅಥವಾ ಉಳಿವಿಗಾಗಿ ಹೋರಾಟ ನಡೆಯುವುದಿಲ್ಲ. ಬದಲಿಗೆ ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಡುತ್ತಾರೆ. ಅಧಿಕಾರ ಪಡೆಯುವ ಆಸಕ್ತಿಯೂ ಕೆಲವೊಮ್ಮೆ ಇದ್ದಿರಬಹುದು. ಒಟ್ಟಾರೆ ಸಾಮೂಹಿಕ ಅಭಿವ್ಯಕ್ತಿಯಾಗಿರುವ ಇವು ಸಮುದಾಯಗಳ ಅನುಭವಗಳಿಂದ ಮೂಡಿಬಂದವುಗಳು. 

ಪುರಾಣ ಮತ್ತು ಚರಿತ್ರೆ 

ಜಗತ್ತಿನ ಸಂಗತಿಗಳ ಬಗ್ಗೆ ಮಾನವ ಊಹಿಸಿ ಕಟ್ಟಿದ ಕಥೆಗಳೇ ಪುರಾಣಗಳಾದವು. ಜೊತೆಗೆ ಚರಿತ್ರೆಯ ಘಟನೆಗಳೂ ಕಾಲಾನಂತರ ಪುರಾಣಗಳಾದವು. ಇವೆರಡು ಮಾತುಗಳು ಪುರಾಣ ಮತ್ತು ಚರಿತ್ರೆಯ ಸಂಬಂಧಗಳ ಕುರಿತು ವಿವೇಚಿಸಲು ಹಚ್ಚುತ್ತವೆ. ನಮ್ಮಲ್ಲಿ ಪುರಾಣಗಳನ್ನು ಎರಡು ಅತಿರೇಖದ ನೆಲೆಗಳಲ್ಲಿ ಗ್ರಹಿಸಲಾಗಿದೆ.

 1. ಪುರಾಣಗಳು ಆದಿಮಾನವನ ಊಹೆಗಳು. ಧಾಮರ್ಿಕ ಪುಣ್ಯ ಕಥೆಗಳು
 2. ಪುರಾಣಗಳು ಚರಿತ್ರೆಗಳೇ ಆಗಿವೆ. 

 ಇವುಗಳಲ್ಲಿ ಮೊದಲನೆಯದು ಭಕ್ತರನ್ನು ಕೇವಲ ಕೇಳುವ ಭಕ್ತರನ್ನಾಗಿಸುವ ಪ್ರಯತ್ನ ಮಾಡಿದರೆ; ಎರಡನೆಯದು ಪುರಾಣಗಳ ಅನೇಕ ಕಲ್ಪನೆಗಳನ್ನು ಚರಿತ್ರೆಯ ಘಟನೆಗಳೆಂದೇ ನಂಬಿಸುವ ಮನೋಭಾವ ಹೊಂದಿದೆ. ಹಾಗಾದರೆ ಪುರಾಣ ಮತ್ತು ಚರಿತ್ರೆಗಳ ಸಂಬಂಧ ಎಂಥದ್ದು? ಎಂಬುದು ಇಲ್ಲಿಯ ಪ್ರಶ್ನೆ. ಪುರಾಣ ಮತ್ತು ಚರಿತ್ರೆ ಸಂಪೂರ್ಣ ಪ್ರತ್ಯೇಕ ಅಸ್ತಿತ್ವ ಹೊಂದಿರುವಂಥವು. ಆದರೆ ತೀರಾ ಹತ್ತಿರದ ಸಂಬಂಧಗಳನ್ನೂ ಪಡೆದಿರುವುದು ಸಹ ಅಷ್ಟೇ ಸತ್ಯ. ಪುರಾಣದೊಳಗೆ ಚರಿತ್ರೆ ಇರುವುದನ್ನು ವಿವರಿಸುತ್ತಾ ಬರಗೂರು ರಾಮಚಂದ್ರಪ್ಪ ಹೀಗೆನ್ನುತ್ತಾರೆ. ಪುರಾಣಗಳ ವಿವರಗಳೆಲ್ಲ ನಿಜವಾಗಿ ನಡೆದ ಘಟನೆಗಳಲ್ಲ. ಪುರಾಣದ ಪಾತ್ರಗಳೆಲ್ಲ ಹಿಂದೆ ಜೀವಂತವಿದ್ದ ವ್ಯಕ್ತಿಗಳಲ್ಲ. ಆದರೆ ಪುರಾಣಗಳಲ್ಲಿ ಸಮಾಜ ಹಾಗೂ ಸಾಂಸ್ಕೃತಿಕ ಚಾರಿತ್ರಿಕ ವಿನ್ಯಾಸಗಳು ಇರುತ್ತವೆ. ಪುರಾಣದ ಪಾತ್ರಗಳು ಬದುಕಿನ ವ್ಯಕ್ತಿ ರೂಪಕಗಳಾಗಿರುತ್ತವೆ. ನಿದರ್ಿಷ್ಟ ಸ್ವಭಾವ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ಅರ್ಥಪೂರ್ಣವಾಗಿದೆ. 

          ಜನಪದ ಪುರಾಣಗಳು ಆಳುವ ವರ್ಗ ಮತ್ತು ಆಳುವ ವರ್ಗ ಪ್ರತಿಪಾದಿಸಿರುವ ಮೌಲ್ಯಗಳನ್ನು ಪ್ರಬಲವಾಗಿ ವಿರೋಧಿಸಿವೆ. ಹಾಗೂ ಹೊಸ ಮೌಲ್ಯ ಪ್ರಪಂಚದ ಕನಸ್ಸೊಂದನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ ಜನಪದ ಪುರಾಣ ಹಾಗೂ ಶಿಷ್ಟ ಪುರಾಣಗಳ ನಡುವೆ ಕೆಲ ಮುಖಾಮುಖಿಗಳಿವೆ. ಹಿಂದಿನ ಭಾಗದಲ್ಲಿ ವಿಶ್ಲೇಷಿಸಿರುವಂತೆ, ಪುರಾಣಗಳ ಮೂಲ ಮಾದರಿಗಳು ಜಾನಪದದಲ್ಲಿಯೇ ಇದ್ದವು. ಆದರೆ ಅಂಥ ವಿಚಾರಗಳ ಆಧಾರದ ಮೇಲೆ ವೈದಿಕಾದಿ ಸಾಂಸ್ಥಿಕ ಧರ್ಮಗಳು ಹೊಸ ಮಾದರಿಯ ಅಂದರೆ ಧರ್ಮ ಪ್ರಚಾರಕ್ಕೆ ಯೋಗ್ಯವಾದ ಪುರಾಣಗಳನ್ನು ಸೃಷ್ಟಿಸಿದವು. ಇವುಗಳನ್ನು ಮತ್ತೆ ಜನಪದದ ಕ್ರಿಯಾಶೀಲ ಮನಸ್ಸುಗಳು ತಮ್ಮ ಅಸ್ತಿತ್ವ-ಅನನ್ಯತೆಗಳ ಪ್ರಕಟಣೆಗೆ ಬಳಸಿಕೊಂಡವು. ಹಾಗಾಗಿಯೇ ಶಿಷ್ಟ ಹಾಗೂ ಮೌಖಿಕ ಧಾರೆಗಳ ಪುರಾಣಗಳಲ್ಲಿ ಹಲವಾರು ಸಾಮ್ಯತೆಗಳಿವೆ. ನಾಯಕರ ಗುಣ-ಲಕ್ಷಣಗಳು ಮತ್ತು ವಿವಿಧ ಪಾತ್ರಗಳ ಆಳದಲ್ಲಿ ಇಂಥ ಸಂಬಂಧವಿದೆ. ಇಂಥ ಹೋಲಿಕೆಯಿಂದ ಸ್ಪಷ್ಟವಾಗುವ ಸಂಗತಿಗಳು ಹಲವಾರು. 

           ಈ ದಿಕ್ಕಿನಲ್ಲಿ ಆಲೋಚಿಸಿರುವ ವಿದ್ವಾಂಸರು ಜನಪದ ಪುರಾಣಗಳು ಒಂದಲ್ಲ ಒಂದು ರೀತಿಯಲ್ಲಿ ಶಿಷ್ಟ ಪುರಾಣಗಳಿಂದ ಪಾತ್ರಗಳನ್ನು, ಘಟನೆಗಳನ್ನು ಪರಿಕಲ್ಪನೆಗಳನ್ನು ಕಾಣಬಹುದು............... ಆ ಮೂಲಕ ಶಿಷ್ಟ ಪರಂಪರೆಯ ಕಡೆಗೆ ಸಾಗುವ ಪ್ರಯತ್ನ ನಡೆಸಿರುವುದನ್ನು ಗುರುತಿಸಬಹುದು. ಸಣ್ಣ ಸಣ್ಣ ಸಮುದಾಯಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೀರರ ಚರಿತ್ರೆಗಳು ಆ ಸಮುದಾಯಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದವು. ಪ್ರಬಲ ಸಂಸ್ಕೃತಿಯ ಪ್ರಭಾವ ಪ್ರೇರಣೆಗಳಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ವೀರರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಲು ಹವಣಿಸಿದವು. ಆಳುವ ವರ್ಗದಲ್ಲಿ ಹುಟ್ಟುವ ಅನೇಕ ಪುರಾಣಗಳ ವಿಷಯಗಳನ್ನು ಎತ್ತಿಕೊಂಡು ತನ್ನ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಡಿಸಿಕೊಂಡವು. ಪ್ರಬಲ ಕೋಮಿನ ಬೆನ್ನು ಹತ್ತಿದ ನಮ್ಮ ಕಾವ್ಯಗಳಲ್ಲಿನ ವೀರರು ತಮ್ಮ ತನವನ್ನು ಕಳೆದುಕೊಂಡರು ಎನ್ನುತ್ತಾರೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈಗಿರುವ ಜನಪದ ಪುರಾಣಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ದೃಷ್ಟಿ ಮೂಲತಃ ಶಾಸ್ತ್ರೀಯ ಸಂಪ್ರದಾಯಗಳಿಂದ ಪ್ರೇರಿತವಾದುದು. ಹಾಗೂ ತಮ್ಮ ಉದ್ದೇಶಕ್ಕೆ ತಕ್ಕ ಹಾಗೆ ರೂಪಗೊಂಡಂತಹವು. ಮೇಲಿನ ವಿದ್ವಾಂಸರ ಮಾತುಗಳಲ್ಲಿರುವ ಆತಂಕವೆಂದರೆ ಕೆಳ ಎನಿಸಿಕೊಂಡಿರುವ ಸಂಸ್ಕೃತಿಗಳು ಮೇಲ್ವರ್ಗ ಅಥವಾ ಅಧಿಕಾರದ ನೆಲೆಯ ಸಂಪ್ರದಾಯಗಳನ್ನು ಅನುಕರಿಸುವುದರ ಮೂಲಕ ತಮ್ಮ ತನವನ್ನು ಕಳೆದುಕೊಂಡರು ಎಂಬುದು. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಮೇಲೆ ಉಲ್ಲೇಖಿಸಿರುವ ವಿದ್ವಾಂಸರ ಮಾತುಗಳಲ್ಲಿನ ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಮಾರ್ಪಡಿಸಿದರು ಎಂಬಲ್ಲಿಯೇ ಅ ಸಮುದಾಯಗಳ ಅನನ್ಯತೆ ಇದೆ. ಯಾವುದೋ ಒಂದು ಸಂಸ್ಕೃತಿ ಪ್ರಬಲವಾದ ಮತ್ತೊಂದು ಸಂಸ್ಕೃತಿ ಜೊತೆ ಮುಖಾಮುಖಿಯಾದಾಗ ನೇರ ಹಾಗೂ ಖಚಿತವಾಗಿ ಪ್ರತಿಭಟನೆ ಮಾಡದೆ ಹೋದರೂ ಅಂರ್ತಮುಖಿಯಾದ ವಿರೋಧ ಇದ್ದೆ ಇರುತ್ತದೆ. ಜೊತೆಗೆ ವಿರೋಧಿಸಿದ ಮೌಲ್ಯ ಪ್ರಪಂಚಕ್ಕಿಂತ ಆರೋಗ್ಯಪೂರ್ಣ ಎನಿಸಿದ ಮತ್ತೊಂದು ಮೌಲ್ಯ ಪ್ರಪಂಚವನ್ನು ಕಟ್ಟುವ ಆಶಯಗಳಿರುತ್ತವೆ. ಸಮುದಾಯಗಳ ಇಂಥ ಪ್ರಕ್ರಿಯೆಯನ್ನು ಪ್ರತಿಸಂಸ್ಕೃತಿಯ ನಿರ್ಮಾಣ ಎನ್ನಬಹುದು. ಈ ನೆಲೆಯಲ್ಲಿ ಅದರ ಸ್ವರೂಪ ಮತ್ತು ಸಾಧ್ಯತೆಗಳ ಪ್ರಧಾನ ಚರ್ಚೆಯನ್ನು ಹೀಗೆ ಬೆಳೆಸಬಹುದು. 

        ಪುರಾಣಗಳೆಂದರೆ ವ್ಯಕ್ತಿಗಳ ಅಥವಾ ಸಮೂಹಗಳ ಸುಪ್ತ ಮನಸ್ಸಿನ ಅಭಿವ್ಯಕ್ತಿಗಳಲ್ಲದೆ ಮತ್ತೇನು ಅಲ್ಲ. ಇಂಥ ಅಭಿವ್ಯಕ್ತಿಗಳ ಸಂದರ್ಭಗಳಲ್ಲಿ ಸಹಜವಾಗಿ ಪರಂಪರೆ ಪ್ರಭುತ್ವ ಸಾಧಿಸಿದೆ. ಹಾಗೂ ಈಗಲೂ ಸಾಧಿಸುತ್ತಿದೆ. ಜೊತೆಗೆ ಇಂಥ ಪುರಾಣಗಳ ಬಗೆಗೆ ನಿರ್ಲಕ್ಷಿತ ಸಮುದಾಯದಲ್ಲಿ ಸಮ್ಮಿಶ್ರವಾದ ಅಭಿಪ್ರಾಯಗಳೂ ಇರಲು ಸಾಧ್ಯ. ಇವುಗಳಲ್ಲಿ ಪ್ರತಿಷ್ಠೆಯ ಪುರಾಣಗಳ ಬಗ್ಗೆ ಮೋಹಗೊಂಡು ಅವುಗಳನ್ನು ಅನುಕರಿಸುವ ಹಂಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ಅಂಥವುಗಳಿಂದ ನಾನೇನು ಕಡಿಮೆ? ಎನ್ನುವ ಮನೋಧರ್ಮದೊಡನೆ ಪರ್ಯಾಯ ನೆಲೆಯಲ್ಲಿ ಸೃಜಿಸುವ ಧೈರ್ಯಮಾಡುತ್ತವೆ. ಇಂತ ಸಂದರ್ಭಗಳೇ ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಗಳನ್ನು ತೋರ್ಪಡಿಸುತ್ತವೆ.

 ಕೊನೆ ಟಿಪ್ಪಣಿಗಳು 
  •  ವಿವರಗಳಿಗೆ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 4-5, 1987 
  •  ಉದ್ಧೃತ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 5, 1987
  •  ಎಲ್.ಆರ್. ಹೆಗಡೆ, ಪುರಾಣಜಿಜ್ಞಾಸೆ, ಪುಟ: 71, 1976 
  •  ಸೋಮಶೇಖರ ಇಮ್ರಾಪುರ, (ಸಂ) ಜಾನಪದ ಸಾಹಿತ್ಯ ದರ್ಶನ-15, ಪುಟ: 49-50, 1994
  •  ಓ.ಎಲ್. ನಾಗಭೂಷಣಸ್ವಾಮಿ, ಪುರಾಣ, ಪುಟ: 13,
  •  1993 ರಾಜರಾಮ ಹೆಗಡೆ, ಭಾರತೀಯ ಮೂರ್ತಿಶಾಸ್ತ್ರ......, ಅರಿವು ಬರಹ-4, ಪುಟ: 86,
  •  1993 ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ-101, 1997
  •  ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪುಟ-60, 2000 
  •  ಹಿ.ಶಿ. ರಾಮಚಂದ್ರೇಗೌಡ ಅವರ ವಿಚಾರಗಳಿಗೆ ಋಣಿ ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ: 99, 1997
  •  ಬರಗೂರು ರಾಮಚಂದ್ರಪ್ಪ,ಪುರಾಣದೊಳಗೆ ಚರಿತ್ರೆಯ ಚಡಪಡಿಕೆ,ಪ್ರಜಾವಾಣಿ (ಸಾ.ಪು),ಪುಟ:8, 25-08-2002 
  •  ತೀ.ನಂ. ಶಂಕರನಾರಾಯಣ, ಜನಪದ ಮಹಾಕಾವ್ಯ, ಪುಟ: 55, 1996
  •  ಗಂಗಾಧರ ದೈವಜ್ಞ, ಮಾಳಿಂಗರಾಯನ ಕಾವ್ಯ, ಪುಟ: 12, 1999





Wednesday, 20 June 2012

ಭಾರತದಲ್ಲಿ ಉನ್ನತ ಶಿಕ್ಷಣ : ಇತ್ತೀಚಿನ ಹೊಸ ಆಯಾಮಗಳು




  ಬೇರೆ ಯಾವುದೇ ರಾಷ್ಟ್ರಗಳಿಗಿಂತ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶಿಕ್ಷಣದ ಅಗತ್ಯತೆ ಹೆಚ್ಚಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಸಮಾಜಗಳ ಸರ್ವ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಶಿಕ್ಷಣ ಪಡೆಯುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ಸರ್ಕಾರಕ್ಕೆ ತನ್ನ ಪ್ರಜೆಗಳಿಗೆ ಶಿಕ್ಷಣ ನೀಡುವುದು ಮೂಲಭೂತ ಕರ್ತವ್ಯವಾಗಿದೆ. ಇಂಥ ಪ್ರಜ್ಞೆಯೊಳಗೆ ನಮಗೆ ಎಂತಹ ಶಿಕ್ಷಣ ಬೇಕು ಎಂಬುದರ ಬಗ್ಗೆ ಸರ್ಕಾರಗಳು ಮತ್ತು ಪ್ರಜೆಗಳು ಸಾಕಷ್ಟು ಗಂಭೀರವಾಗಿ ಚಿಂತನ-ಮಂಥನ, ಪ್ರಯೋಗ -ಪ್ರಯತ್ನಗಳು ನಡೆಯುತ್ತಲೇ ಇವೆ

ಭಾರತದ ಶಿಕ್ಷಣ ವ್ಯವಸ್ಥೆ ಅನೇಕ ಹಂತಗಳನ್ನು ಹೊಂದಿದ್ದು , ಅವುಗಳಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಅಧ್ಯಯನ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಪದವಿಪೂರ್ವ ಅಂದರೆ 12 ನೇ ತರಗತಿಯ ನಂತರದ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಶಿಕ್ಷಣದ ಹಂತ ಎಂಬುದಾಗಿ ಭಾರತೀಯ ಜ್ಞಾನ ಆಯೋಗವು ವ್ಯಾಖ್ಯಾನಿಸಿದೆ.ಭಾರತದ ಶೈಕ್ಷಣಿಕ ಚರಿತ್ರೆಯನ್ನು ಗಮನಿಸಿದ ಯಾರಿಗಾದರೂ ತಟ್ಟನೆ ಹೊಳೆಯುವ ಸಂಗತಿ ಎಂದರೆ ಭಾರತ ಸರ್ಕಾರ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತಕ್ಕೆ ನೀಡಿದಷ್ಟು ಮಹತ್ವವನ್ನು ಉನ್ನತ ಶಿಕ್ಷಣಕ್ಕೆ ನೀಡಿಲ್ಲ. ಇದಕ್ಕೆ ಅದರದೇ ಆದ ಅನೇಕ ಕಾರಣಗಳಿವೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನೀಡುವುದು ಮಾತ್ರ  ಸರ್ಕಾರದ ಜವಾಬ್ಧಾರಿ ಉನ್ನತ ಶಿಕ್ಷಣ ಪಡೆಯುವುದು ಪ್ರಜೆಗಳ ಜವಾಬ್ಧಾರಿ ಎಂಬ  ಸರ್ಕಾರದ ಧೋರಣೆ ಪ್ರಮುಖ ಕಾರಣವಾಗಿದೆ. ಈ ಪರಿಸ್ಥಿತಿ 2005 ರಿಂದ ಬದಲಾಯಿತು ಇದಕ್ಕೆ ಕಾರಣವಾಗಿದ್ದು ಭಾರತೀಯ ಜ್ಞಾನ ಆಯೋಗದ ರಚನೆ. ಪ್ರಧಾನ ಮಂತ್ರಿಗಳ ಅತ್ಯುನ್ನತ ಮಟ್ಟದ ಶೈಕ್ಷಣಿಕ ಸಲಹಾ ಮಂಡಳಿಯಾದ ಇದು ಭಾರತದ ಉನ್ನತ ಶಿಕ್ಷಣದ ಸ್ಥಿತಿಗತಿಗಳನ್ನು ಅಧ್ಯಯನಮಾಡಿ, ಇಷ್ಟು ದೊಡ್ಡ ರಾಷ್ಟದ ಜನಸಂಖ್ಯೆಯಲ್ಲಿ  ಕೇವಲ ಶೇ. 7 ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆದವರಿದ್ದಾರೆ ಎಂಬ ವಾಸ್ತವವನ್ನು ಬಿಚ್ಚಿಟ್ಟಿತು. ಅಷ್ಟೆ ಅಲ್ಲದೇ ಇನ್ನು ಹದಿನೈದು ವರ್ಷಗಳಲ್ಲಿ ಅಂದರೆ 2020 ರ ವೇಳೆಗೆ ಉನ್ನತ ಶಿಕ್ಷಣದ ಪ್ರಮಾಣವನ್ನು ಕನಿಷ್ಟ ಶೇ.20 ಕ್ಕೆ ಹೆಚ್ಚಿಸಬೇಕೆಂದು ಸಲಹೆಮಾಡಿತು. ಇದರ ಪರಿಣಾಮ ಕೇಂದ್ರ ಸಕರ್ಾರ ತನ್ನ ಮೂಲ ನಿಲುವನ್ನು ಸಡಿಲಗೊಳಿಸಿ ಯುಜಿಸಿ ಯ ಮೂಲಕ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪ್ರಮಾಣ ಮತ್ತು ಪರಿಮಾಣದಲ್ಲಿ ಉನ್ನತೀಕರಿಸುವ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನಗಳ ಭಾಗವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗಗಳು ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದೆ . ಅದರಲ್ಲಿ ಮುಖ್ಯವಾಗಿ NAAC, CPE- UPE, Autonomous stetas, Innovative university, Deemed Universities  ಗಮನಿಸಬೇಕಾದ ಸಂಗತಿಗಳಾಗಿವೆ. ಇವುಗಳಲ್ಲಿAutonomous status, Innovative university  ಎನ್ನುವ ಹೊಸ ಪರಿಕಲ್ಪನೆಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯಬಹುದಾಗಿದೆ.

   ಅ. ಪದವಿ ಕಾಲೇಜುಗಳಿಗೆ ಸ್ವಾಯತ್ತತೆಯ ಸ್ಥಾನಮಾನ

        ಪ್ರಸ್ತುತ  ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳ ಅಂಗಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಮತ್ತು ಶೈಕ್ಷಣಿಕವಾದ ಎಲ್ಲಾ ಜವಾಬ್ದಾರಿಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳದ್ದಾಗಿದೆ. ಇತ್ತೀಚೆಗೆ ಈ ಕ್ಷೇತ್ರದಲ್ಲಿ 'ಸ್ವಾಯತ್ತತೆ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದರೆ, ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯದ ಅನೇಕ ಪದವಿ ಕಾಲೇಜುಗಳು ಶೈಕ್ಷಣಿಕ ಸ್ವಾಯತ್ತತೆ ಪಡೆದು ಮಿನಿ ವಿಶ್ವವಿದ್ಯಾಲಯಗಳಂತೆ ಕಾರ್ಯ ನಿರ್ವಹಿಸಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ, ಸ್ವಾಯತ್ತತೆ ಎಂದರೇನು? ಅದರ ಸ್ವರೂಪವೇನು? ಇದನ್ನು ಹೇಗೆ ಮತ್ತು ಯಾಕೆ ಜಾರಿಗೆ ತರಲಾಗುತ್ತೆ. ಜಾರಿಗೆ ತರುವಲ್ಲಿ ಎದುರಿಸಬೇಕಾದ ಸವಾಲುಗಳು ಯಾವುವು? ಇದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಎಂಬಿತ್ಯಾದಿ ಸಂಗತಿಗಳನ್ನು ಕುರಿತು ಚಚರ್ಿಸುವ ತುತರ್ು ನಮ್ಮೆಲ್ಲರ ಮುಂದಿದೆ.

           ಇಲ್ಲಿ ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ, ಪದವಿ ಕಾಲೇಜುಗಳು ಇನ್ನು ಪಡೆಯಲಿರುವ ಸ್ವಾಯತ್ತತೆ ಕೇವಲ ಶೈಕ್ಷಣಿಕ ಸ್ವಾಯತ್ತತೆ. ಉಳಿದಂತೆ ನೇಮಕಾತಿ, ನೌಕರರ ಜವಾಬ್ದಾರಿ ಇವೇ ಮೊದಲಾದ ಹಲವು ಜವಾಬ್ದಾರಿಗಳು ಎಂದಿನಂತೆ ಸಕರ್ಾರ ಮತ್ತು ವಿಶ್ವವಿದ್ಯಾಲಯಗಳ ಕೈಯಲ್ಲೇ ಉಳಿಯಲಿವೆ. ಶೈಕ್ಷಣಿಕ ಸ್ವಾಯತ್ತತೆ ಪಠ್ಯಕ್ರಮ ರಚನೆ, ಬೋಧನಕ್ರಮ ನಿಗಧಿ, ಪರೀಕ್ಷೆ ನಡೆಸುವುದು ಮೌಲ್ಯಮಾಪನ ಮಾಡಿಸುವುದು, ಅಂಕಪಟ್ಟಿ ನೀಡುವುದು ಹೀಗೆ ಶೈಕ್ಷಣಿಕವಾದ ಸರ್ವ ಅಧಿಕಾರಗಳನ್ನು ಕಾಲೇಜುಗಳಿಗೆ ನೀಡಲಿದೆ. 

       ಈ ಶೈಕ್ಷಣಿಕ ಸ್ವಾಯತ್ತತೆಯ ಬಗ್ಗೆ 1976 ರಲ್ಲಿಯೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೀತಿಯೊಂದನ್ನು ರೂಪಿಸಿತ್ತು. ಅದರಂತೆ ಕನರ್ಾಟಕದ ಮೈಸೂರು ಮತ್ತು ಬೆಂಗಳೂರು ನಗರಗಳ ಒಂದೆರಡು ಕಾಲೇಜುಗಳು ಸೇರಿದಂತೆ ದೇಶದ ಹಲವಾರು ಕಾಲೇಜುಗಳು ಸ್ವಾಯತ್ತತೆ ಪಡೆಯುವ ಪ್ರಯತ್ನ ನಡೆಸಿ ಅನುಮತಿಯನ್ನು ಕೂಡ ಪಡೆದಿದ್ದರು. ಆದರೆ ಎಲ್ಲಿಯೂ ಈ ವ್ಯವಸ್ಥೆ ಪೂರ್ಣ ಯಶಸ್ಸು ಕಾಣಲಿಲ್ಲ. ಸ್ವಾಯತ್ತತೆಯ ಬಗ್ಗೆ ಇದ್ದ ಹುಸಿ ಭಯಗಳೇ ಯಶಸ್ಸು ಕಾಣದಿರುವುದಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. . ಈಗ ಮತ್ತೆ ಭಾರತದ ಹಲವು ಕಾಲೇಜುಗಳು ಆ ಕಡೆ ಮುಖಮಾಡುವಂತಹ ವಾತಾವರಣವನ್ನು ನಿಮರ್ಾಣಮಾಡಲಾಗಿದೆ.  ವಿಶೇಷ ಸಂಗತಿ ಎಂದರೆ ಉತ್ತರ ಭಾರತದಲ್ಲಿ ಸ್ವಾಯತ್ತ ವ್ಯವಸ್ಥೆ ಈಗಲೂ ಯಶಸ್ವಿಯಾಗಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳು ಅದೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕನರ್ಾಟಕದ ಬೆಂಗಳೂರು, ಮಂಗಳೂರು, ಕುವೆಂಪು ವಿಶ್ವವಿದ್ಯಾನಿಲಯಗಳ ಕೆಲವು ಕಾಲೇಜುಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿವೆ. ದೇಶದಲ್ಲಿ ಪ್ರಸ್ತುತ ಸುಮಾರು 255 ಸ್ವಾಯತ್ತ ಕಾಲೇಜುಗಳಿವೆ. ಅದರಲ್ಲಿ ತಮಿಳುನಾಡು 86 ಸ್ವಾಯತ್ತ ಕಾಲೇಜುಗಳನ್ನು ಹೊಂದಿ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದರ ನಂತರ ಆಂದ್ರಪ್ರದೇಶ 34 ಕಾಲೇಜುಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ ಕನರ್ಾಟಕ 31 ಕಾಲೇಜುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಸ್ವಾಯತ್ತತೆ ಪಡೆಯುವುದು ಹೇಗೆ?
ಯು.ಜಿ.ಸಿ.ಯು ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಹಾಗೂ ಪದವಿ ಕಾಲೇಜುಗಳಿಗೆ ಅನೇಕ ಷರತ್ತುಗಳನ್ನು ವಿಧಿಸಿದ್ದು, ಉತ್ತಮ ಗುಣಮಟ್ಟ ಹಾಗೂ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ನಿದರ್ೇಶಿಸುತ್ತಿದೆ. ಇವುಗಳ ಗುಣಮಟ್ಟವನ್ನು ಅಳೆಯಲು ಯು.ಜಿ.ಸಿ ಅನೇಕ ಸಮಿತಿಗಳನ್ನು ನೇಮಿಸಿದೆ. ಇತ್ತೀಚೆಗೆ ಕಾಲೇಜುಗಳೀಗೆ ಬೇಟಿ ನೀಡುತ್ತಿರುವ 'ನ್ಯಾಕ್' ಅಂಥ ಒಂದು ಸಮಿತಿ. ಇಂಥ ಸಮಿತಿಗಳ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ಶೈಕ್ಷಣಿಕ ಸ್ವಾಯತ್ತತೆ ಪಡೆಯಲು ಅರ್ಹವಾಗಿರುತ್ತವೆ. ಉದಾ: ಯು.ಜಿ.ಸಿ.ಯ 12ಬಿ ಮತ್ತು ಅದಕ್ಕಿಂತ ಮೇಲಿನ ಗುಂಪಿಗೆ ಸೇರಿರುವ ಕಾಲೇಜುಗಳು ಸ್ವಾಯತ್ತತೆ ಬಯಸಿ ಅಜರ್ಿ ಸಲ್ಲಿಸಬಹುದಾಗಿದೆ.

ಸ್ವಾಯತ್ತತೆ ಪಡೆಯುವುದು ಅಷ್ಟು ಸರಳವೇನಲ್ಲ. ಅರ್ಹ ಕಾಲೇಜುಗಳು ತಮ್ಮ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯ - ಸಾಧನೆ, ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಇವೇ ಮೊದಲಾದ ಮೂಲಭೂತ ಸೌಕರ್ಯಗಳ ಲಭ್ಯತೆ: ಸಾಂಸ್ಕೃತಿಕ ಸಂಘ, ಕ್ರೀಡೆ, ಎನ್.ಸಿ.ಸಿ, ಎನ್ಎಸ್ಎಸ್ ಮೊದಲಾದ ಸಹಪಠ್ಯ ಚಟುವಟಿಕೆಗಳ ಸಾಮಥ್ರ್ಯ ಹಾಗೂ ಸಾಧನಗಳೇನು? ಎಂಬೆಲ್ಲಾ ವಿವರಗಳೊಂದಿಗೆ, ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಮೂಲಕ ಯು.ಜಿ.ಸಿಗೆ ಅಜರ್ಿ ಸಲ್ಲಿಸುತ್ತವೆ. ಆ ಅಜರ್ಿಯನ್ನು ಪರಿಶೀಲಿಸಿ ಪರಿಗಣಿಸುವಂತಿದ್ದರೆ ಯುಜಿಸಿಯು ಅಂಥ ಕಾಲೇಜುಗಳನ್ನು ಪರೀಕ್ಷಿಸಲು 'ಪರಿಣಿತ ಸಮಿತಿ' ಯನ್ನು ನೇಮಿಸುತ್ತದೆ. ಪರಿಣಿತ ಸಮಿತಿಯಲ್ಲಿ ಯು.ಜಿ.ಸಿ.ಯ ಉನ್ನತ ಅಧಿಕಾರಿಗಳು, ಈಗಾಗಲೇ ಸ್ವಾಯತ್ತತೆ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಈ ಸಮಿತಿ ಅಜರ್ಿ ಸಲ್ಲಿಸಿದ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ಅರ್ಹತೆ, ಶಕ್ತಿ -ಸಾಮಥ್ರ್ಯಗಳನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ ಸ್ವಾಯತ್ತತೆ ಕೊಡಬೇಕೆ? ಬೇಡವೇ? ಎಂಬುದರ ಬಗ್ಗೆ ವರದಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಕರ್ಾರಕ್ಕೆ ನೀಡುತ್ತದೆ. ಅಂಥ ವರದಿಯನ್ನಾಧರಿಸಿ ವಿಶ್ವವಿದ್ಯಾನಿಲಯ ಮತ್ತು ಸಕರ್ಾರದ ಅಭಿಪ್ರಾಯಗಳ       ಅನ್ವಯ ಯುಜಿಸಿ ಸ್ವಾಯತ್ತ ಸ್ಥಾನಮಾನವನ್ನು ಘೋಷಣೆಮಾಡುತ್ತದೆ. 

ಸ್ವಾಯತ್ತ ಕಾಲೇಜಿನ ಕಾರ್ಯ ಸ್ವರೂಪ

ಸ್ವಾಯತ್ತತೆ ಪಡೆದ ಕಾಲೇಜು ಶೈಕ್ಷಣಿಕ ಭಾಗದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊರಬೇಕಾಗುತ್ತದೆ. ಈ ವಿಷಯದಲ್ಲಿ ತಾನೇ ಒಂದು ವಿಶ್ವವಿದ್ಯಾಲಯವಾಗುತ್ತದೆ. ಹಾಗಾಗಿ ಕಾಲೇಜು ವಿವಿಧ ರೀತಿಯ ಕಾರ್ಯನಿರ್ವಹಣೆಗೆ ಈಗ ವಿಶ್ವವಿದ್ಯಾನಿಲಯಗಳಲ್ಲಿರುವಂತೆ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ, ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ, ಮೊದಲಾದ ಸಮಿತಿಗಳನ್ನು ರಚಿಸುತ್ತದೆ. ಈ ಎಲ್ಲಾ ಮಂಡಳಿಗಳೂ ಸಕರ್ಾರ, ಕುಲಪತಿ, ಪ್ರಾಂಶುಪಾಲರು ನಿಯೋಜಿಸಿದ ತಜ್ಞರು, ಕಾಲೇಜಿನ ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಒಂದು ವಿಶೇಷವೆಂದರೆ ಕಾಲೇಜಿನ ಹಾಲಿ ವಿದ್ಯಾಥರ್ಿ, ಹಳೆಯ ವಿದ್ಯಾಥರ್ಿಗಳಿಗೂ ಕೆಲವು ಮಂಡಳಿಗಳಲ್ಲಿ ಅವಕಾಶವಿರುತ್ತದೆ.

ಮೇಲ್ಕಾಣಿಸಿದ ಮಂಡಳಿಗಳಲ್ಲಿ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತವೆ. ಅಧ್ಯಯನ ಮಂಡಳಿ ಪಠ್ಯ ನಿಯೋಜನೆಯ ಮುಖ್ಯಕಾರ್ಯವನ್ನು ನಿರ್ವಹಿಸುತ್ತದೆ. ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿಸುತ್ತದೆ. ಹಣಕಾಸು ಮಂಡಳಿ ಕಾಲೇಜಿನ ಅಭಿವೃದ್ಧಿಯೋಜನೆಗಳನ್ನು ರೂಪಿಸುತ್ತದೆ. ಇವು ರೂಪಿಸಿದ ನೀತಿ ನಿಯಮಗಳಿಗೆ ಶೈಕ್ಷಣಿಕ ಮಂಡಳಿ ಅನುಮತಿ ನೀಡುತ್ತದೆ. ಒಟ್ಟಾರೆ ಸ್ವಾಯತ್ತತೆ ಕಾಲೇಜು ಪ್ರವೇಶ ನೀತಿ, ಶುಲ್ಕ ನೀತಿ, ಪಠ್ಯ ನಿಯೋಜನೆ, ಬೋಧನಾಕ್ರಮ, ಪರೀಕ್ಷೆಗಳ ಕ್ರಮ, ಮೌಲ್ಯಮಾಪನ ಪದ್ಧತಿ, ಅಂಕಪಟ್ಟಿ ನೀಡುವ ಕ್ರಮ ಹೀಗೆ ಶೈಕ್ಷಣಿಕವಾಗಿ ಸ್ವತಂತ್ರ ಪಡೆಯುತ್ತದೆ.

ಹಾಗಾಗಿ ಕಾಲೇಜಿನ ವಿವಿಧ ಸಮಿತಿಗಳ ದೃಷ್ಟಿ-ಧೋರಣೆಗಳು, ಶಕ್ತಿ-ಸಾಮಥ್ರ್ಯಗಳು ಹೇಗಿರುತ್ತವೆಯೋ ಅಂಥ ಶಿಕ್ಷಣ ಲಭ್ಯವಾಗಲಿದೆ. ಕಾಲೇಜು ತನ್ನಲ್ಲಿ ಪದವಿ ಮುಗಿಸಿದ ಅಭ್ಯಥರ್ಿಗಳಿಗೆ ಅಂಕಪಟ್ಟಿ ನೀಡುತ್ತದೆ. ನಂತರ ಕಾಲೇಜಿನ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾನಿಲಯ ಪದವಿ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಕಾಲೇಜುಗಳು ನಿರಂತರವಾದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರತಿ ಐದು ವರ್ಷಗಳಿಗೊಮ್ಮೆ ಯು.ಜಿ.ಸಿ ಸ್ವಾಯತ್ತ ಕಾಲೇಜನ್ನು ಕಾರ್ಯಸ್ವರೂಪ, ಫಲಿತಗಳು ಮೊದಲಾದ ವಿಷಯಗಳಲ್ಲಿ ಪರೀಕ್ಷೆಗೊಳಪಡಿಸುತ್ತದೆ. ಏನಾದರೂ ಅಸಮರ್ಥತೆ, ಕಾರ್ಯದೋಷಗಳು ಕಂಡುಬಂದಲ್ಲಿ ಅಂಥ ಕಾಲೇಜಿನ ಸ್ವಾಯತ್ತತೆಯನ್ನು ರದ್ದುಪಡಿಸುತ್ತದೆ. ಆದ್ದರಿಂದಲೇ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಕಾಲೇಜು ಸದಾ ಶ್ರಮಿಸಬೇಕಾಗುತ್ತದೆ.
  • ಕಾಲೇಜುಗಳಿಗೆ ಸ್ವಾಯತ್ತತೆ ನೀಡುವುದರಿಂದ ವಿದ್ಯಾಥರ್ಿಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಡೀ ಸಮಾಜಕ್ಕೆ      ಸಾಕಷ್ಟು ಅನುಕೂಲಗಳಾಗಲಿವೆ.
  • ಅತೀ ವಿಸ್ತಾರದ ವ್ಯವಸ್ಥೆಯೊಂದರಲ್ಲಿ ಎಲ್ಲಾ ಪ್ರದೇಶದ ಜನರ ಆಸೆಗಳು ಸಾಧ್ಯವಾಗುವುದು ಕಷ್ಟ. ಇಂಥ ಕಷ್ಟಗಳನ್ನು ಸಾಧ್ಯವಾಗಿಸುವಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕಾಲೇಜು ಸಮಾಜದ ನಿರೀಕ್ಷಿತ ಕ್ಷೇತ್ರಗಳಿಗೆ ಬೇಕಾದ ಕೌಶಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ, ವಿದ್ಯಾಥರ್ಿಗಳನ್ನು ಸ್ಪಧರ್ಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಬಹುದಾಗಿದೆ.
  • ಕಾಲೇಜಿನಲ್ಲಿ ಆಡಳಿತವನ್ನು ಹಾಗೂ ಅಧ್ಯಾಪಕ ಕಾರ್ಯದಕ್ಷತೆಯನ್ನು ಇವುಗಳ ಜೊತೆಗೆ ವಿದ್ಯಾಥರ್ಿಗಳಲ್ಲಿ ಶ್ರಮದಾಯಕ ಮನೋಭಾವವನ್ನು ಹೆಚ್ಚಿಸಲು ಸಾಧ್ಯ.
  • ಕಾಲೇಜಿನ ಶೈಕ್ಷಣಿಕ, ಸಂಶೋಧನಾತ್ಮಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ದೊರೆಯಲಿದೆ. ಈಗ ಯುಜಿಸಿಯ ಮಾನ್ಯತೆ ಗಳಿಸಿರುವ ಕಾಲೇಜುಗಳು ಐದು ವರ್ಷದ ಒಂದು ಯೋಜನೆಯಲ್ಲಿ 5 ಲಕ್ಷ ಮಾತ್ರ ಪಡೆಯಲಿವೆ. ಸ್ವಾಯತ್ತತೆ ಪಡೆದರೆ ಒಂದು ವರ್ಷಕ್ಕೆ 10 ರಿಂದ 15 ಲಕ್ಷ ಅನುದಾನ ಪಡೆಯಬಹುದಾಗಿದೆ. ಸ್ವಾಯತ್ತತೆಯಲ್ಲಿ ಸಾಕಷ್ಟು ಯಶಸ್ಸುಕಂಡರಂತೂ ವರ್ಷಕ್ಕೆ 1 ಕೋಟಿ ಅನುಧಾನ ಪಡೆಯಲಿಕ್ಕೆ ಸಾಧ್ಯವಿದೆ.
  • ಅಧ್ಯಾಪಕರು ಸಂಶೋಧನ ಯೋಜನೆಗಳ ಮೂಲಕ ತಾವು ಸ್ವಂತ ಬೆಳವಣಿಗೆ ಕಾಣುವುದಕ್ಕೆ ಈ ವ್ಯವಸ್ಥೆಯಲ್ಲಿ ವಿಪುಲ ಅವಕಾಶಗಳಿವೆ.

       ಇಂಥ ಒಳ್ಳೆಯ ಅನುಕೂಲಗಳ ಜೊತೆಗೆ ಕೆಲವು ಅನಾನುಕೂಲಗಳು ಆಗಲಿವೆ ಎಂಬುದೇ ವಿದ್ಯಾಥರ್ಿಗಳನ್ನು ಪೋಷಕರನ್ನು ಆತಂಕಕ್ಕೆ ಒಳಗುಮಾಡಿದೆ. ಇದರಿಂದಾಗುವ ಅನಾನುಕೂಲಗಳಲ್ಲಿ ಕೆಲವನ್ನು ಹೇಳುವುದಾದರೆ ಅವು ಹೀಗಿವೆ.
  • ಸ್ವಾಯತ್ತತೆ ಪಡೆಯಲಿರುವ ಕಾಲೇಜುಗಳಲ್ಲಿ ಖಾಸಗೀ ಕಾಲೇಜುಗಳೇ ಹೆಚ್ಚಾಗಿರುತ್ತವೆ. ಕಾರಣ ಸಕರ್ಾರಿ ಕಾಲೇಜುಗಳಿಗಿಂತ ಹೆಚ್ಚು ಸಮರ್ಥವಾಗಿರುವುದು ಖಾಸಗಿ ಕಾಲೇಜುಗಳೇ. ಖಾಸಗಿಯವರಿಗೆ ಇಂಥ ಅಧಿಕಾರಗಳು ಲಭ್ಯವಾದರೆ ಪದವಿ ಶಿಕ್ಷಣವೂ ಕೂಡ ಬಡಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗುವ ಸಂಭವವಿದೆ. ಸಕರ್ಾರಿ ಕಾಲೇಜುಗಳೂ ಕೂಡ ಸ್ವಾಯತ್ತತೆಯನ್ನು ಪಡೆದ ಮೇಲೆ ಖಾಸಗೀ ಕಾಲೇಜುಗಳ ಮೊತ್ತೊಂದು ಮುಖ ಆಗುವುದರಲ್ಲಿ ಸಂಶಯವಿಲ್ಲ.
  • ಪರೀಕ್ಷೆ-ಮೌಲ್ಯಮಾಪನ ಮೊದಲಾದ ಮಹತ್ವಕೆಲಸ-ಕಾರ್ಯಗಳ ಜವಾಬ್ದಾರಿ ಕಾಲೇಜಿನದೇ ಆಗಿರುವುದರಿಂದ ಜಾತಿವ್ಯಾಮೋಹ, ಸ್ವಜನ ಪಕ್ಷಪಾತಗಳು ಮತ್ತಿತರ ಭ್ರಷ್ಟಾಚಾರಗಳು ನಡೆಯುವುದಿಲ್ಲ ಎಂದು ನಂಬುವುದಾದರೂ ಹೇಗೆ?
  • ಒಂದೊಂದು ಕಾಲೇಜಿಗೆ ಒಂದೊಂದು ಪಠ್ಯಕ್ರಮ ಇರುವುದರಿಂದ ಪಠ್ಯಗಳ ಅಲಭ್ಯತೆ, ಹೊಸ ಹೊಸ ಪಠ್ಯಗಳಾದರೆ ಅಧ್ಯಾಪಕರ ಅಸಮರ್ಥತೆಗಳನ್ನು ಬಗೆಹರಿಸುವುದು ಕಷ್ಟ ಸಾಧ್ಯವಾಗುತ್ತದೆ.
  • ಇಂಥ ಸಾಧಕ-ಬಾಧಕಗಳ ನಡುವೆಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆ ಸಾಧ್ಯವಾಗಬೇಕಾದರೆ ಅಧ್ಯಾಪಕರ ಕಾರ್ಯನಿಷ್ಠತೆ, ಜವಾಬ್ದಾರಿಗಳು ಹಾಗೂ ಒಟ್ಟು ವ್ಯವಸ್ಥೆಯ ಪಾರದರ್ಶಕತೆಗಳು ಅತೀ ಮುಖ್ಯವಾಗುತ್ತವೆ. ಆ ಗುಣಗಳನ್ನು ಕಾಲೇಜುಗಳ ಮೈಗೂಡಿಸಿಕೊಳ್ಳಬೇಕಷ್ಟೇ.


ಆ. ಮಾದರಿ ವಿಶ್ವವಿದ್ಯಾಲಯಗಳ (Innovative Universities)  ರಚನೆ

         ಇಂದು ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಹಲವಾರು ಆಂತರಿಕ ದೋಷಗಳು ಹಾಗೂ ವಿಪರೀತ ರಾಜಕೀಯ ಹಸ್ತಕ್ಷೇಪದ ಕಾರಣದಿಂದಾಗಿ ರೋಗಗ್ರಸ್ಥ ವ್ಯವಸ್ಥೆಯಾಗಿ ಮಾಪರ್ಾಡಾಗಿದೆ. ಇದೇ ಸಂದರ್ಭಕ್ಕೆ ಶಿಕ್ಷಣ, ಉದಾರೀಕರಣ ನೀತಿಗಳಿಗೊಳಗಾದ ಪರಿಣಾಮವಾಗಿ ವಿದೇಶಿ ವಿಶ್ವವಿದ್ಯಾಲಯಗಳು ಭಾರತದೊಳಕ್ಕೆ ಪ್ರವೇಶ ಪಡೆಯಲಾರಂಭಿಸಿವೆ. ಹಾಗಾಗಿ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪುನರ್ರಚಿಸುವ ಅಗತ್ಯತೆಯನ್ನು ಭಾರತದ ಜ್ಞಾನ ಆಯೋಗ ಒತ್ತಿ ಹೇಳಿದೆ. ಈ ಹಿನ್ನೆಲೆಯೊಳಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಗಂಭೀರವಾಗಿ ಆಲೋಚಿಸಿದ ಪರಿಣಾಮ ಮಾದರಿ ವಿಶ್ವವಿದ್ಯಾಲಯಗಳ (ಟಿಟಿಠತಚಿಣತಜ ಗಟಿತಜಡಿಣಥಿ) ಕಲ್ಪನೆ ಒಡಮೂಡಿದೆ. ಭಾರತದಲ್ಲಿ ಇಂಥ ಪ್ರಯತ್ನದ ಫಲವಾಗಿ ಸುಮಾರು 14 ವಿಶ್ವವಿದ್ಯಾಲಯಗಳು ಹಳೆಯ ಪದ್ಧತಿಗಳಿಂದ ಬಿಡುಗಡೆಗೊಂಡು ನವೀನಾತ್ಮಕ ವಿಶ್ವವಿದ್ಯಾಲಯಗಳ ರೂಪವನ್ನು ಪಡೆಯುವ ಪ್ರಯತ್ನದಲ್ಲಿವೆ. ಕನರ್ಾಟಕದಲ್ಲೂ ಆ ರೀತಿಯ ಪ್ರಯತ್ನಗಳು ಆರಂಭಗೊಂಡಿದ್ದು ಮೈಸೂರು ಹಾಗೂ ಕನರ್ಾಟಕ ವಿಶ್ವವಿದ್ಯಾಲಯಗಳು ನವೀನ ರೂಪ ಪಡೆಯುವ ಅಂತಿಮ ಹಂತದಲ್ಲಿವೆ.
ಮಾದರಿ ವಿಶ್ವವಿದ್ಯಾಲಯಗಳ ಉದ್ದೇಶ-ಗುರಿಗಳಿಗನುಗುಣವಾಗಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು ಅವು ಹಳೆಯ ಕಾಯ್ದೆಗಿಂತ ಭಿನ್ನವಾಗಿವೆ. ಇಲ್ಲಿ ಮೊದಲಿಗೆ ಹೊಸ ರೂಪದಲ್ಲಿ ಹೊರಹೊಮ್ಮುವ ವಿಶ್ವವಿದ್ಯಾಲಯಗಳಿಗೆ ಬೇಕಾಗಿರುವ ಉದ್ದೇಶ-ಗುರಿಗಳನ್ನು ಪ್ರಸ್ತಾಪಿಸಿದ್ದು ಅವು ಈ ಮುಂದಿನಂತಿವೆ.
  • ಸಮಕಾಲೀನ ಸ್ಪಧರ್ಾತ್ಮಕ ಪರಿಸರದಲ್ಲಿ ಸಮರ್ಥವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವುದು.
  • ಇಂದು ಕುಸಿಯಲಾರಂಬಿಸಿರುವ ಶೈಕ್ಷಣಿಕ, ಆಡಳಿತಾತ್ಮಕ, ಸಂಶೋಧನೆಯ ಗುಣಮಟ್ಟವನ್ನು ನಿಯಂತ್ರಿಸುವುದು.
  • ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಬೇರ್ಪಡಿಸುವ ಮತ್ತು ಅಧಿಕಾರಗಳನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ಬೇಕಾಗಿರುವ ಸ್ವಾಯತ್ತತೆಯನ್ನು ನೀಡುವುದು.
  • ಅಂತರ್ ಶಿಸ್ತೀಯ ಹಾಗೂ ಬಹು ಶಿಸ್ತೀಯ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂರಚನೆಗಳಲ್ಲಿ ಮಹಾನ್ ನಮನೀಯತೆಯನ್ನು (ಈಟಜಥಛಟಣಥಿ) ತರುವುದು.
  • ನೀತಿ-ನಿಯಮಗಳು ಹಾಗೂ ಕಾರ್ಯಕ್ರಮಗಳ ಮೂಲಕ ಮಾನವೀಯ ವ್ಯಕ್ತಿತ್ವದ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದು.

        ಈ ಪ್ರಧಾನ ಉದ್ದೇಶಗಳ ಜೊತೆಗೆ ವಿಶ್ವವಿದ್ಯಾಲಯಗಳು ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿರಬೇಕು. ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಮೊದಲಾದ ಸಮಾಜಿಕ ದುರ್ಬಲರಿಗೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು ನೀಡುವ ಗುರಿಗಳನ್ನು ನಿಗದಿಪಡಿಸಲಾಗಿದೆ.

    ಇಂಥ ದೊಡ್ಡ ಪ್ರಮಾಣದ ಧೇಯ್ಯೋದ್ದೇಶಗಳು ಸಾಕಾರಗೊಳಿಸಲು ವಿಶ್ವವಿದ್ಯಾಲಯಗಳು ನಿದರ್ಿಷ್ಟವಾದ ಪ್ರಾಧಿಕಾರಗಳನ್ನು ಹಾಗೂ ಅವುಗಳ ಮುಖ್ಯಸ್ಥ ಅಧಿಕಾರಿಗಳನ್ನು ಸ್ಥಾನೀಕರಣಗೊಳಿಸಲಾಗಿದೆ. ಇಡೀ ವಿಶ್ವವಿದ್ಯಾಲಯಕ್ಕೆ ಉನ್ನತಾಧಿಕಾರಿಯಾಗಿ ಸವರ್ೋಚ್ಚ ಅಧಿಕಾರವುಳ್ಳ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಹಳೆಯ ಪದ್ಧತಿಯಲ್ಲಿ ರಾಜ್ಯಪಾಲರಿಗಿದ್ದ ಎಲ್ಲಾ ಅಧಿಕಾರಗಳು ಇವರಿಗಿರುತ್ತವೆ. ವಿ.ವಿ.ಗೆ ಕುಲಪತಿಗಳನ್ನು ನೇಮಿಸಿರುವುದರಿಂದ ಹಿಡಿದು ಹಲವು ಅಧಿಕಾರಿಗಳನ್ನು ನೇಮಿಸುವ ಹಾಗೂ ಅವರನ್ನು ನಿಯಂತ್ರಿಸುವ ಅಧಿಕಾರ ಇವರಿಗೆ ಇರತ್ತದೆ. ಇಂಥ ಅಧ್ಯಕ್ಷರನ್ನು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭಾಪತಿ, ವಿರೋಧಪಕ್ಷದ ನಾಯಕರು, ರಾಜ್ಯದ ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಗಳನ್ನೊಳಗೊಂಡ ಸಮಿತಿ ಆಯ್ಕೆಮಾಡುತ್ತದೆ. ಅಧ್ಯಕ್ಷರ ಆಯ್ಕೆಗೆ ಇರುವ ಪ್ರಮುಖ ಮಾನದಂಡಗಳೆಂದರೆ: ಅಧ್ಯಕ್ಷರಾಗುವವರಿಗೆ ಶಿಕ್ಷಣ/ಸಂಶೋಧನೆ/ಉಧ್ಯಮ/ಕಾನೂನು ಈ ಕ್ಷೇತ್ರಗಳಲ್ಲಿ ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದ್ಲಲಾಗಲಿ ಅತ್ಯುತ್ತಮ ಸಾಧನೆ ಮಾಡಿರಬೇಕು. ಈ ಕಾಯ್ದೆಯನ್ನು ಅಳವಡಿಸಿಕೊಂಡ ಪ್ರತೀ ವಿಶ್ವವಿದ್ಯಾಲಯಕ್ಕೂ ಪ್ರತ್ಯೇಕವಾಗಿ ಅಧ್ಯಕ್ಷರು ಇರುತ್ತಾರೆ. ಅಧ್ಯಕ್ಷರು ನೇಮಕವಾದ ತಕ್ಷಣ ರಾಜ್ಯಪಾಲರು ಹಾಗೂ ಸಕರ್ಾರ ವಿಶ್ವವಿದ್ಯಾಲಯದ ಆಡಳಿತಕ್ಕೆ ಕೇವಲ ಸಲಹೆಗಾರರಾಗಿ, ಪ್ರವರ್ತಕರಾಗಿರುತ್ತಾರೆ. ಅಧ್ಯಕ್ಷ ಹುದ್ದೆ ವಿಶ್ವವಿದ್ಯಾಲಯಕ್ಕೆ ಹೊಸ ಸೃಷ್ಟಿಯಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಯುವ ಉದ್ದೇಶಕ್ಕೆ ಪೂರಕವಾದ ಬೆಳವಣಿಗೆಯಾಗಿದೆ. 

       ಪ್ರಸ್ತುತ ನವೀನಾತ್ಮಕ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ಪುನರ್ ರಚನೆಗೊಳುವ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ಮೂರು ಹಂತಗಳಲ್ಲಿ ರೂಪುಗೊಳ್ಳುತ್ತವೆ. ಆ ಮೂರು ಹಂತಗಳೆಂದರೆ ಸಾಮಾನ್ಯ ವ್ಯವಸ್ಥೆ, ಏಕೀಕೃತ ವ್ಯವಸ್ಥೆ. ಸಂಯೋಜಿತ ವ್ಯವಸ್ಥೆ ಈ ವ್ಯವಸ್ಥೆಗಳಲ್ಲಿ ನಿಧರ್ಿಷ್ಟವಾದ ಅಧಿಕಾರಿಗಳು ಹಾಗೂ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ವ್ಯವಸ್ಥೆಗಳ ರಚನೆಗಳನ್ನು ಮುಂದಿನಂತೆ ವಿವರಿಸಬಹುದು.

1. ಸಾಮಾನ್ಯ ವ್ಯವಸ್ಥೆ (General  System)
ಪ್ರಸ್ತತ ವ್ಯವಸ್ಥೆಯಲ್ಲಿ ಅಧ್ಯಕ್ಷರು, ಕುಲಪತಿಗಳು, ಕುಲಸಚಿವರು, ಹಣಕಾಸು ಅಧಿಕಾರಿಗಳು, ಓಂಬಡ್ಸ್ಮನ್ ಮೊದಲಾದ ಅಧಿಕಾರಿಗಳು; ಆಡಳಿತ ಮಂಡಳಿ, ಓಂಬಡ್ಸ್ಮನ್ ಸಮಿತಿ, ಹಣಕಾಸು ಮತ್ತು ಲೆಕ್ಕಪತ್ರ ಸಮಿತಿ ಮುಂತಾದ ಪ್ರಾಧಿಕಾರಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ. ಇದರಲ್ಲಿ ಅಧ್ಯಕ್ಷರು ಹಾಗೂ ಓಂಬಡ್ಸ್ಮನ್ ಕಲ್ಪನೆಗಳು ನವೀನಾತ್ಮಕವಾದವು. ಹಾಗೆಯೇ ಆಡಳಿತ ಮಂಡಳಿ ಹಳೆಯ ಪದ್ಧತಿಯ ಸಿಂಡಿಕೇಟ್ನ ಮರುನಾಮಕರಣವಾಗಿದೆ.

2. ಏಕೀಕೃತ ವ್ಯವಸ್ಥೆ (Unitary System)  
ಇದರಲ್ಲಿ ಶೈಕ್ಷಣಿಕ ಮಂಡಳಿ, ನೇಮಕಾತಿ ಮಂಡಳಿ ಈಚಿಛಿಣಟಣಥಿ ಅಠಣಟಿಛಿಟ, ಖಜಜಚಿಡಿಛಿ ಚಿಟಿಜ ಟಿಟಿಠತಚಿಣಠಟಿ ಅಠಣಟಿಛಿಟ ಮೊದಲಾದ ಪ್ರಾಧಿಕಾರಗಳು; ಸಮ ಕುಲಾಧಿಪತಿ, ವಿವಿಧ ನಿಕಾಯಗಳ ಡೀನರು, ಜ್ಞಾನ ಸಂಪನ್ಮೂಲ ನಿರದ್ಏಶಕರು, ದೈಹಿಕ ಶಿಕ್ಷಣ ಹಾಗೂ ವಿದ್ಯಾಥರ್ಿ ಕ್ಷೇಮಪಾಲನಾ ನಿದರ್ೇಶಕರು, ಸಂಶೋಧನಾ ಗುಣಮಟ್ಟ ಮತ್ತು ನವೀನತೆಯ   ನಿರ್ದೇಶಕರು  ಮೊದಲಾದ ಅಧಿಕಾರಿಗಳು ಸ್ಥಾನೀಕರಣಗೊಂಡಿರುತ್ತಾರೆ. ಇಲ್ಲಿ ಹಲವಾರು ಹುದ್ದೆಗಳು ಮತ್ತು ಪ್ರಾಧಿಕಾರಗಳು ಹೊಸ ಸೃಷ್ಠಿಗಳಾಗಿವೆ. ಮುಖ್ಯವಾಗಿ ಸಮಕುಲಾಧಿಪತಿ ಹುದ್ದೆ ಇದಕ್ಕೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರನ್ನು ನೇಮಿಸಲಾಗುತ್ತದೆ. ಇಡೀ ಏಕೀಕೃತ ವ್ಯವಸ್ಥೆಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಈವರೆಗೆ ದೈಹಿಕ ಶಿಕ್ಷಣ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗಗಳು ಬೇರೆಯಾಗಿದ್ದು ಪ್ರಸ್ತುತ ವ್ಯವಸ್ಥೆಯಲ್ಲಿ ಒಂದೇ ವಿಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಂಶೋಧನೆಯಲ್ಲಿ ನವೀನತೆತಂದು ಅದರ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಒಂದು ವಿಭಾಗ ಮತ್ತು ಅದಕ್ಕೊಂದು  ನಿರ್ದೇಶಕರ ಹುದ್ದೆಯನ್ನು ಸೃಜಿಸಿರುವುದು ವಿಶೇಷವಾಗಿದೆ. 

3. ಸಂಯೋಜಿತ ವ್ಯವಸ್ಥೆ (Affiliation System)
ಇಲ್ಲಿ ನಿರ್ವಹಣಾ ಮಂಡಳಿ, ಸಂಯೋಜನೆ ಮತ್ತು ಪರೀಕ್ಷಾ ಮಂಡಳಿ, ಮುಕ್ತ ಮತ್ತು ದೂರ ಶಿಕ್ಷಣ ಮಂಡಳಿ, ಅಧ್ಯಯನ ಮಂಡಳಿ ಇತ್ಯಾದಿ ಪ್ರಾಧಿಕಾರಗಳು ಅಸ್ತಿತ್ವದಲ್ಲಿದ್ದು ಇವುಗಳನ್ನು ನಿರ್ವಹಿಸಲು ಪ್ರತೀ ವಿಭಾಗಕ್ಕೆ ಒಬ್ಬೊಬ್ಬ ನಿರ್ದೇಶಕರು ಇರುತ್ತಾರೆ. ಇವರೆಲ್ಲರನ್ನು ಮೇಲ್ವಿಚಾರಣೆ ಮಾಡಲು ಮತ್ತೊಬ್ಬ ಸಮಕುಲಾಧಿಪತಿ ಇರುತ್ತಾರೆ.

ವಿಮರ್ಶೆ

ಉದ್ದೇಶಿತ ಮಾದರಿ ವಿಶ್ವವಿದ್ಯಾಲಯಗಳ ಸ್ಥಾಪನೆ ಅಥವಾ ಮರು ರೂಪಣೆಯ ಹಿಂದೆ ಇರುವ ಉದ್ದೇಶ-ಗುರಿಗಳನುಸಾರವಾಗಿ ಮೇಲಿನಂತೆ ಹಳೆಯ ವ್ಯವಸ್ಥೆಯನ್ನು ಮಾಪರ್ಾಡು ಮಾಡಲಾಗಿದೆ. ಮೇಲು ನೋಟಕ್ಕೆ ಆಕರ್ಷಕವಾಗಿ ಕಾಣುವ ಈ ನಿಯಮಗಳು ನಿಜವಾಗಿ ಮೂಲ ಉದ್ದೇಶಗಳನ್ನು ಈಡೇರಿಸುತ್ತವೆಯೆ? ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು ಇದರಿಂದ ಸಾಧ್ಯವೇ? ಶಿಕ್ಷಣ ಹಾಗೂ ಸಂಶೋಧನೆಗಳ ಗುಣಮಟ್ಟ ಪ್ರಸ್ತುತ ವ್ಯವಸ್ಥೆಯಿಂದ ಸುಧಾರಿಸಬಲ್ಲ್ಲುದಾ? ವಿಕೇಂದ್ರಿಕರಣದಿಂದ ಆಡಳಿತ ಶಕ್ತಿಶಾಲಿಯಾಗಬಲ್ಲದಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಕೇಳಿಕೊಳ್ಳಬೇಕು. ಇಂಥ ಪ್ರಶ್ನೆಗಳು ಪ್ರಸ್ತುತ ಮಸೂದೆಯನ್ನು ವಿಮಶರ್ಾತ್ಮಕವಾಗಿ ನೋಡಲು ಪ್ರೇರೇಪಿಸುತ್ತವೆ. ಈ ಹಿನ್ನೆಲೆಯೊಳಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದು.
  • ಉದ್ದೇಶಿತ ಸದರಿ ಮಸೂದೆಯು ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು, ಅಧಿಕಾರ ವಿಕೇಂದ್ರಿಕರಣಗೊಳಿಸುವ ಉದ್ದೇಶದಿಂದ ಕಂಡುಕೊಂಡಿರುವ ಹೊಸ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ನೀಡಿರುವ ಅಧಿಕಾರಗಳು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತವೆ. ಅಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಇದೆಯಾದರೂ ಅದು ಸಮಕಾಲೀನ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದು ನಮಗೆ ಎದುರಾಗುವ ಮೊದಲ ಪ್ರಶ್ನೆ. ಅಧ್ಯಕ್ಷರ ಹುದ್ದೆಗೆ ಬರುವವರು ಕೇವಲ ಶೈಕ್ಷಣಿಕ ವಲಯದಿಂದಲೇ ಬರಬೇಕಿಲ್ಲ. ಕೈಗಾರಿಕಾ ಉದ್ಯಮಿಗಳು ಕೂಡ ಈ ಸ್ಥಾನಕ್ಕೆ ಅರ್ಹವಾದ್ದರಿಂದ ಅಂಥ ಹಿನ್ನಲೆಯಿಂದ ಬಂದವರು ಶಿಕ್ಷಣಪದ್ಧತಿಯನ್ನು ಒಂದು ಉದ್ಯಮವೆಂಬಂತೆ ನೋಡುವುದರಲ್ಲಿ ಅನುಮಾನವಿಲ್ಲ. ಹೀಗಾದರೆ ಅದರ ದುಷ್ಪರಿಣಾಮಗಳು ಅಗಾಧವಾಗಿರುತ್ತವೆ. ಇನ್ನೂ ಅಧಿಕಾರ ವಿಕೇಂದ್ರಿಕರಣ ನೆಪದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥೆಯೊಳಗೆ ಸೃಷ್ಟಿಯಾಗಲಿರುವ ಓಂಬಡ್ಸ್ಮನ್, ಸಮಕುಲಾದಿಪತಿಗಳು, ಆಡಳಿತ ಮಂಡಳಿ ಈ ವಿಭಾಗಗಳ ಮಧ್ಯೆ ವೃತ್ತಿ ಕಲಹಗಳು ಹೆಚ್ಚಾಗುವ ಸಂಭವವೇ ಹೆಚ್ಚಾಗಿದೆ. ಇದೆಲ್ಲದರ ನಡುವೆ  ಸರ್ಕಾರದ ಪಾತ್ರ ನಗಣ್ಯವೆ? ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಸರ್ಕಾರದಿಂದಲೇ ನೇಮಕಗೊಳ್ಳುವವರಾದ್ದರಿಂದ ಇವರು ರಾಜಕಾರಣದ ಮುಖವಾಡವಾಗಿ ಕೆಲಸ ಮಾಡುತ್ತಾರೆಂಬುದು ಈಗಿನ ಕಲುಷಿತ ರಾಜಕೀಯ ವ್ಯವಸ್ಥೆಯನ್ನು ಗಮನಿಸಿ ಯಾರಿಗೂ ಅರ್ಥವಾಗುವ ಸಂಗತಿಯಾಗಿದೆ. 
  • ಜಾಗತೀಕ ಮಟ್ಟಕ್ಕೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ಗುಣಮಟ್ಟವನ್ನು ಎತ್ತರಿಸುವ ಆಶಯವುಳ್ಳ ಈ ಮಸೂದೆಯಲ್ಲಿ, ಅಂಥ ಬೆಳವಣಿಗೆಗೆ ಬೇಕಾದ ನಿರ್ದಿಷ್ಟ ಕಲ್ಪನೆಗಳು ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಆಶಯ ಈಡೇರುವುದಕ್ಕೆ ಶಿಕ್ಷಕರ ಬೆಳವಣಿಗೆ ಹಾಗೂ ವೃತ್ತಿಕೌಶಲಗಳು, ಇವುಗಳಿಗಿಂತ ಹೆಚ್ಚಾಗಿ ಕೆಲಸ ಮಾಡುವ ಮನಸ್ಸು ಬೇಕಾಗುತ್ತದೆ. ಶಿಕ್ಷಕರಲ್ಲಿ ಇಂಥ ಮನಸ್ಥಿತಿಯನ್ನು ತರುವುದಕ್ಕೆ ವಿಶ್ವವಿದ್ಯಾಲಯ ಮಾಡಬೇಕಾದ ಪ್ರಯತ್ನ ಎಂಥದ್ದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. 
  • ವಿಶ್ವವಿದ್ಯಾಲಯದಲ್ಲಿ ಉನ್ನತಮಟ್ಟದ ಸಂಶೋಧನೆಗಳು ನಡೆಯಬೇಕೆಂಬುದರ ಬಗ್ಗೆ ಯಾರದು ಭಿನ್ನಾಭಿಪ್ರಾಯಗಳು ಇರಲಾರವು. ಆದರೆ ಪ್ರಶ್ನೆ ಇರುವುದು ಅದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳು ಮತ್ತು ಹಣಕಾಸಿನ ಸೌಲಭ್ಯಗಳು ಎಲ್ಲಿಂದ ದೊರೆಯುತ್ತವೆ. ಸಕರ್ಾರಗಳು ಯಾವುದೇ ಯೋಜನೆಗಳ ತತ್ವಗಳನ್ನು ಒಪ್ಪಿಕೊಂಡಷ್ಟು ಸುಲಭವಾಗಿ  ಆರ್ಥಿಕ ಸಹಾಯವನ್ನು ನೀಡಲು ಒಪ್ಪಲಾರವು. ಸರ್ಕಾರಗಳ ಇಂಥ ಇಬ್ಬಗಿಯ ನೀತಿಗಳು ಉದ್ದೇಶಿತ ಗುರಿಗಳನ್ನು ತಲುಪುವದಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯೊಳಗೆ ವಿಶ್ವವಿದ್ಯಾಲಯಗಳು ಹಠಕ್ಕೆ ಬಿದ್ದರೆ ವಿದ್ಯಾರ್ಥಿಗಳ ಶುಲ್ಕವನ್ನು ಏರಿಸಿಕೊಳ್ಳಬಹುದು. ಇದು ಕೂಡ ಮತ್ತೊಂದು ದೊಡ್ಡ ಸಮಸ್ಯೆಗೆ ನಮ್ಮೆಲ್ಲರನ್ನು ಸಿಲುಕಿಸುತ್ತದೆ.
  • ಈ ಮಸೂದೆಯ ಹಿಂದಿರುವ ಗುಪ್ತ ಅಜೆಂಡಗಳೆಂದರೆ ಭಾರತಕ್ಕೆ ಪ್ರವೇಶಿಸುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನ ಕಲ್ಪಿಸಿಕೊಡುವುದು ಮತ್ತು ಸ್ವಾಯತ್ತತೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದೇ ಆಗಿದೆ. ಇದಕ್ಕೆ ಬೇಕಾಗಿರುವ ನಿಯಮಗಳು ಮಸೂದೆಯಲ್ಲಿ ಸೇರ್ಪಡೆಯೂ ಆಗಿವೆ. ಹಾಗಾಗಿ ಮಸೂದೆಯ ಈ ಮುಖದ ಬಗೆಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ.
  • ಪ್ರಸ್ತುತ ಮಸೂದೆಯಲ್ಲಿ ಕಂಡುಬರುವ ಮತ್ತೊಂದು ದೋಷವೆಂದರೆ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರಗಳನ್ನಷ್ಟೇ ಅಲ್ಲದೆ ಕೈಗಾರಿಕೋದ್ಯಮಗಳು, ಖಾಸಗೀ ಸಂಘ-ಸಂಸ್ಥೆ-ವ್ಯಕ್ತಿಗಳು ಅಷ್ಟೇ ಅಲ್ಲದೆ ವಿದೇಶಿ ಮೂಲಗಳಿಂದಲೂ ಸಹಾಯ ಪಡೆದುಕೊಳ್ಳಬಹುದಾಗಿದೆ. ಹೀಗೆ ಮಾಡುವುದರಿಂದ ನಾವು ಅಂದು ಕೊಂಡಿರುವ ಗುರಿಗಳನ್ನು ತಲುಪಲು ಹಲವಾರು ರೀತಿಯ ಅಡಚಣೆಗಳು ಎದುರಾಗುತ್ತವೆ.
  • ನೇಮಕಾತಿಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಗುಣಮಟ್ಟ ಇವೆರಡು ಸಮಾನವಾಗಿ ಪರಿಗಣಿತವಾಗಬೇಕಾಘಿದೆ. ಇದು ಕೂಡ ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಕಷ್ಟಸಾಧ್ಯ ಎನ್ನಬೇಕಾಗುತ್ತದೆ.
  • ಇನ್ನೂ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ದೇಶೀಯ ಹಾಗೂ ವಿದೇಶಿಯ ವಿದ್ಯಾರ್ಥುಗಳ ಪ್ರವೇಶಕ್ಕೆ ಇಲ್ಲಿ ಅವಕಾಶವಿರುವುದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತವೆ. ದೇಶೀಯ ವಿಧ್ಯಾರ್ಥಿಗಳು ಹೊರಗಿನವರ ಜೊತೆ  ಸ್ಪರ್ಧೆ ಮಾಡಬೇಕಾದ ಒತ್ತಡಕ್ಕೆ ಒಳಗಾಗುತ್ತಾರೆ.

      ಇಂಥ ಹತ್ತಾರು ಸವಾಲುಗಳು ಪ್ರಸ್ತುತ ರೂಪುಗೋಳ್ಳುತ್ತಿರುವ ನವೀನಾತ್ಮಕ ವಿಶ್ವವಿದ್ಯಾಲಯಗಳಿಗೆ ಇರುತ್ತವೆ. ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ನಮ್ಮ ನೆಲದ ಸ್ಥಿತಿ-ಗತಿಗಳಿಗನುಗುಣವಾಗಿ ರೂಪುಗೊಂಡರೆ ಉತ್ತಮ ಬೆಳವಣಿಗೆಯೇ ಆಗುತ್ತದೆ. 

ಪರಾಮರ್ಶನ
  • ಎಸ್.ಎಂ. ಮುತ್ತಯ್ಯ,ಕರ್ನಾಟಕ ನವೀನಾತ್ಮಕ ವಿಶ್ವವಿದ್ಯಾಲಯಗಳ ಮಸೂದೆ-2011- ಸ್ವರೂಪ ಸಾಧ್ಯತೆಗಳು, (ಲೇಖನ), ಇದರಲ್ಲಿ : ಹೊಸತು ಮಾಸ ಪತ್ರಿಕೆ, ಏಪ್ರಿಲ್-2012
  •  ಎಸ್.ಎಂ ಮುತ್ತಯ್ಯ, ಲಿಖಿತ-ಅಲಿಖಿತ;2005;ಸೃಷ್ಟಿ ಪ್ರಕಾಶನ;ಬೆಂಗಳೂರು
  • CONCEPT NOTE ON INNOVATION UNIVERSITIES AIMING AT WORLD CLASS               STANDARDS,.mhrd.gov.in/sites/upload_files/mhrd/files/Universitiesconcep 
  • THE KARNATAKA STATE INNOVATIVE UNIVERSITIES  BILL, 2011
  • Presentation: “Decade of Innovations: 2010-2020 Roadmap”; Report by CII & INSEAD, “The Global Innovation Index Report 2009-2010”; http://www.globalinnovationindex.org/gii/ main/home.cfm
  •   XI Plan Guidelines ,Scheme of Autonomous College, www.ugc.ac.in  
  • http://www.knowledgecommission.gov.in/focus/higher.asp
  • UGC and the tale of two promotions, Economic Times, 15 November 2005
  •  'Regulating Higher Education' ( published in three parts),  Indian Express, New Delhi
  •  Edition on July 14th, 15th and 16th, 2005- also posted online in   www.indianexpres.com).
  •  India on Top in US Varsity enrolments, Hindustan Times, 8 November 2005
  •  India's Higher Education needs Policy, Hindustan Times, 28 November 2005

  ಡಾ. ಮುತ್ತಯ್ಯ ಎಸ್.ಎಂ

Monday, 9 April 2012

ಬರಹಗಾರರ ಬೌದ್ಧಿಕ ಜವಾಬ್ದಾರಿ : ಕರ್ನಾಟಕದ ಅನುಭವಗಳು

            
                                                                                - ಡಾ.ಎಸ್.ಎಂ. ಮುತ್ತಯ್ಯ

ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು ಬರಹಗಾರನ ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು ಹೀಗೆ ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ ಅಭಿವ್ಯಕ್ತಿಮಾದ್ಯಮಗಳೊಂದಿಗೆ ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ   ಅಥವಾ           ಕೈಗೊಂಬೆಗಳಾಗಿ ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ.
2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ ಬಗ್ಗೆ         ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು.
3. ಸತ್ಯಾಂಶ ತಿಳಿಸುವುದು ಎಂದರೆ  ಕುಕೃತ್ಯಗಳನ್ನು  ಕೇವಲ  ಖಂಡಿಸುವುದು ಮಾತ್ರವಲ್ಲ ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ ಯಾವ ಮಹತ್ವವು ಇರುವುದಿಲ್ಲ.
4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು ಹೇಳಿ' ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ ಅವರಿಗೆ ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ ಸತ್ಯವನ್ನು ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು.
5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು  ಮುಚ್ಚಿಟ್ಟರೆ ಅಥವಾ ಸಮಥರ್ಿಸಿಕೊಂಡರೆ ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ ಟೀಕಿಸಿದರೆ ಅದಕ್ಕೆ ಯಾವ ಮಹತ್ವವು ಇರುವುದಿಲ್ಲ.
ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ ಈಸ್ಟ್ ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ ವಿದ್ಯಾಮಾನಗಳು) ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ  ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ, ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು ಮೆರೆಯುವಂತಹ ಸ್ಥಿತಿಯಾಗಿದೆ.
ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು ಕ್ರಿಮಿನಲ್ ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ ಕ್ರೂರ ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು  ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ, ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ  ನಮ್ಮ ನೆಲದ ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ.  ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು ವಿಚಾರಗಳನ್ನು ಗಮನಿಸಬಹುದಾಗಿದೆ.
1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು  ಕಾಣಬಹುದಾಗಿದೆ.   ಉದಾ : ನಮ್ಮ ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು ಆಸಕ್ತಿ ; ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ ಬಗ್ಗೆ ಇಲ್ಲ. ಹಾಗೆಯೇ ಸಮಸ್ಯೆಗಳನ್ನು  ಅವುಗಳ ಹೊರವಲಯದಲ್ಲಿ  ನಿಂತು ವಿಶ್ಲೇಷಿಸಿರುವುದೇ ಹೆಚ್ಚು. ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ ಅಪರೂಪವೆಂದೆ ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ.
2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ. ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು ಸಮಸ್ಯೆಗೆ ಪರಿಹಾರ ಸೂಚಿಸಬಾರದೆಂಬ ಚಚರ್ೆಗಳನ್ನು ನಾವಿಲ್ಲಿ ಸ್ಮರಿಸಬೇಕು.ಈ ಚರ್ಚೆಗಳೊಂದಿಗೆ ಚಾಮ್ಸ್ಕಿ ಅವರ ಮೇಲಿನ ಮಾತನ್ನು ಮುಖಾ-ಮುಖಿಗೊಳಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ.
ಇವುಗಳನ್ನು ಗಮನಿಸದ ನಂತರ ಕನ್ನಡ ಸಂದರ್ಭದೊಳಗೆ ನಾವು ಗಮನಿಸಲೇಬಾಕಾದ ಪ್ರಮುಖ ಅಂಶವೆಂದರೆ ನಮ್ಮ ಬಹುತೇಕ ಬರಹಗಳು ಸಮಸ್ಯೆಗಳನ್ನು ಚಚರ್ಿಸುವಾಗ ಪ್ರಭುತ್ವದ ಪಾತ್ರದ ಬಗ್ಗೆ ಹೆಚ್ಚಿನ ಗಮನಕೊಡದೇ ಇರುವುದು ಎದ್ದು ಕಾಣುತ್ತದೆ.ವಿಶೇಷವೆಂದೆ ಪತ್ರಿಕೆಗಳಲ್ಲಿ ಆಯಾ ಸಂದರ್ಭದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬರುವ ಲೇಖನಗಳನ್ನು ಹೊರತುಪಡಿಸಿದರೆ ಇನ್ನುಳಿದ ಬುದ್ಧಿಜೀವಿಗಳ ಬಹುತೇಕ ಬರಹಗಳು ತಾವು ಚಿಂತಿಸಿದ ಸಂಗತಿಗಳು ಸಮಕಾಲೀನ ಮಹತ್ವವನ್ನು ಕಳೆದುಕೊಂಡ ನಂತರ ಪ್ರಕಟಗೊಳ್ಳುತ್ತವೆ.ಇದಕ್ಕೆ ಚಾಮ್ಸ್ಕಿ ಹೇಳುವಂತೆ ಇದೊಂದು ಪ್ರಭುತ್ವದ ಹುನ್ನಾರ ಎಂದು ಹೇಳಲು ಬರುವುದಿಲ್ಲವೇನೋ.ಹಾಗಾಗಿ ಬರಹಗಾರ ಬುದ್ಧಿಜೀವಿಗಳು ಇದರ ನೇರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
                         ಕೊನೆಯದಾಗಿ ಹೇಳಬೇಕೆಂದರೆ ನಮ್ಮಲ್ಲಿ ಎಚ್ಚರದಿಂದ ಇರುವ ಕೆಲವು ಬುದ್ಧಿವಿಗಳು ನೇರವಾಗಿ ಪ್ರಭುತ್ವದ ಕ್ರೂರ ನಡೆಗಳ ಬಗ್ಗೆ ಖಂಡಿಸಿ ಬರೆಯುವವರು ಒಂದು ಕಡೆ ಇದ್ದಾರೆ.ಇನ್ನೋಂದು ಕಡೆ ಪ್ರಭುತ್ವದ ಪಾತಕಗಳನ್ನು ಅಭಿವೃದ್ಧಿಯ ನಡೆಗಳೆಂದು ಪ್ರಶಂಸಿ ಬರೆಯುವ ಮುಖವಾಡದ ಬುದ್ಧಿಜೀವಿಗಳುಇದ್ದಾರೆ.ಈ ಎರಡೂ ಗುಂಪಿನ ಬರಹಗಾರರಿಗೆ-ಸರಕಾರಗಳು ಮೊದಲನೇ ಗುಂಪಿನ್ನು ಮನಸ್ಸಿನ ಅಂತರಾಳದಲ್ಲಿ ಶತೃಗಳೆಂದು ಭಾವಿಸಿ ಅವರನ್ನು ಕಾನೂನಿನ ಬೆಂಬಲದಿಂದ ಶಿಕ್ಷೆಗಳ ಮುಖಾಂತರ ಮಟ್ಟಹಾಕುತ್ತಿವೆ.ಎರಡನೇ ಗುಂಪಿನ ಮುಖವಾಡದ ಬುದ್ಧಿಜೀವಿಗಳಿಗೆ ಹಾರ-ತುರಾಯಿ ಪದವಿ-ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿವೆ. ಇಂಥ ಸಂದರ್ಭದೊಳಗೆ ನಿಜವಾದ ಬುದ್ಧಿಜೀವಿಗಳಿಗೆ ತಮ್ಮ ಅಭಿವ್ಯಕ್ತಿ ಸಾಮಥ್ಯಕ್ಕೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂಥ ಈ ಕಾಲದೊಳಗೆ    ಚಾಮ್ಸ್ಕಿ ನಿರೀಕ್ಷಿಸುವ ಬೌದ್ಧಿಕ ಜವಾಬ್ದಾರಿಗಳನ್ನು ಪ್ರಕಟಪಡಿಸಲು ಇರುವ ಸವಾಲುಗಳ ಬಗ್ಗೆ ನಾವೆಲ್ಲರೂ ಮತ್ತೊಮ್ಮೆ ತಣ್ಣಗೆ ಚಿಂತಿಸುವ ಅಗತ್ಯವಿದೆ.
      



ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ

ಸಾರಲೇಖ

ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ 
          (ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ)              

ಊರಿನಲ್ಲಿ ಶಾಲೆಯೊಂದು ತೆರೆದರೆ ಅಲ್ಲಿನ ಜಾನಪದ ಸಂಪತ್ತು ಸಂಪೂರ್ಣ ನಾಶವಾಯಿತೆಂದೆ ಅರ್ಥ
ಡಾ. ಚಂದ್ರಶೇಖರ ಕಂಬಾರ
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಕಂಬಾರರ ಮೇಲಿನ ಮಾತು ನಮಗೆ ವಿಚಿತ್ರವಾಗಿ ಕಂಡರು ಸತ್ಯವಾದುದು. ಅಂದರೆ ಶಾಲೆಗಳಲ್ಲಿ ಹೇಳಿಕೊಡುವ ಶಿಕ್ಷಣ ನಮ್ಮ ಜಾನಪದ ಬದುಕಿಗೆ ಮಾರಕ. ಉದಾಹರಣೆಗೆ ಶಾಲೆಗಳಿಗೆ ಹೋಗಿ ಕಲಿತ ಹೆಣ್ಣು ಪಾರಂಪರಿಕವಾಗಿ ಅವರ ತಾಯಿ ಹೇಳಿಕೊಂಡು ಬಂದಿರುವ ಸೋಬಾನೆ ಪದಗಳನ್ನು ಹಾಡಲಾರಳು. ಕಾರಣ ಸೋಬಾನೆ ಪದ ಹಾಡುವುದು ಅವಮಾನದ, ಮುಜುಗರದ  ಸಂಗತಿ. ಅದೇ ಚಿತ್ರ ಗೀತೆಯನ್ನೋ , ಭಾವಗೀತೆಯನ್ನೋ ಯಾವುದೇ ಎಗ್ಗಿಲ್ಲದೇ  ಹಾಡಬಲ್ಲಳು. ಇದು ಗೌರವದ ಸಂಗತಿ.ಹಾಗೆಯೇ ಶಾಲೆಯಲ್ಲಿ ಕಲಿತ ಒಬ್ಬ ಹುಡುಗ ಹೊಲದಲ್ಲಿ ಕೆಲಸ ಮಾಡುವುದಿಲ್ಲ.ಪೇಟೆಯಲ್ಲಿ ಯಾರದಾದರೂ ಪಾದ ಸೇವೆ ಬೇಕಾದರೆ ಮಾಡಬಲ್ಲ. ಹೊಲದಲ್ಲಿ ಕೆಲಸ ಮಾಡುವುದು ಅಥವಾ ಯಾವುದಾದರು  ನಮ್ಮ ಪಾರಂಪರಿಕ ವೃತ್ತಿಯನ್ನು ಮಾಡುವುದಕ್ಕಿಂತ ಪೇಟೆಯಲ್ಲಿ ಮಾಡುವ ಕೆಲಸ ಶ್ರೇಷ್ಟ ಎಂಬುದಾಗಿ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮೆಲ್ಲರನ್ನು ನಂಬಿಸಿದೆ.ಇನ್ನೂ ಮುಂದುವರಿದು ಹೇಳುವುದಾದರೆ ದೇಹ ಶ್ರಮವಿಲ್ಲದೆ ಹೆಚ್ಚು ಸಂಪಾದಿಸುವ ವೃತ್ತಿಗಳ ಕಡೆ ಮನುಷ್ಯನ ಮನಸ್ಸನ್ನು ತಿರುಗಿಸಿದ ಕೀರ್ತಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಸಲ್ಲಬೇಕು.ಇದರ ಪರಿಣಾಮವಾಗಿಯೇ ಆಧುನಿಕ ಶಿಕ್ಷಣ ವ್ಯವಸ್ಥೆ ಪಾರಂಪರಿಕ ಬದುಕು ಮತ್ತು ಅದರ ಜ್ಞಾನಗಳಿಗೆ ಮಾರಕವಾಗಿದೆ.ಮೂಲಭೂತವಾಗಿ ಶಿಕ್ಷಣ ಎನ್ನುವುದು ಬದುಕಿಗೆ ಅಗತ್ಯವಿರುವ ವೃತ್ತಿ ಕೌಶಲ್ಯಗಳನ್ನು,ಜೀವನ ಕುಶಲತೆ,ಮೌಲ್ಯಗಳನ್ನು ಅದೆಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ವಿವೇಕವನ್ನು ನೀಡುವಂತಹದ್ದು  ಆಗಿರಬೇಕಿತ್ತು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಬೇಕಿತ್ತು. ಹಾಗಾಗದಿರುವುದು ನಮ್ಮ ಸಮಾಜದ ದುರಂತವೇ ಸರಿ. ಇಲ್ಲಿ ಗಮನಿಸಬೇಕಾಗಿರುವ ಅಂಶ ಯಾವುದೆಂದರೆ ಇಂದು ಶಿಕ್ಷಣ ವ್ಯವಸ್ಥೆ ಎಂದಾಕ್ಷಣ ಔಪಚಾರಿಕ ಶಾಲಾ ಶಿಕ್ಷಣ ಮಾತ್ರ ನೆನಪಿಗೆ ಬರುತ್ತದೆ.ಪಾರಂಪರಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅನೌಪಚಾರಿಕ ಶೈಕ್ಷಣಿಕ ಪದ್ಧತಿಗಳು ವಿಸ್ಮೃತಿಗೊಳಗಾಗಿವೆ.ಇದರಿಂದ ನಮಗೆ ಅನೇಕ ರೀತಿಯ ನಷ್ಟಗಳುಂಟಾಗಿವೆ. ಹಾಗಾಗಿ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಜಾಗೃತಗೊಳಿಸುವ ಕೆಲಸವು ಆಗಬೇಕಿದೆ.
                       ಇಂದಿನ ಶಿಕ್ಷಣ ವ್ಯವಸ್ಥೆಗೆ ಇರುವ ಬಹು ದೊಡ್ಡ ಸವಾಲೆಂದರೆ ಬುಡಕಟ್ಟುಗಳು ಏಕಕಾಲಕ್ಕೆ ಒಂದು ಕೈಯಲ್ಲಿ ಕೋಲು ಇನ್ನೊಂದು ಕೈಯಲ್ಲಿ ಪುಸ್ತಕವನ್ನು ಹಿಡಿಯುವಂತೆ ಮಾಡಬೇಕಾಗಿರುವುದು. ಅಂದರೆ  ಪರಂಪರೆಯನ್ನು ಸಂಪೂರ್ಣ ಕಳೆದುಕೊಳ್ಳದೇ ಹೊಸತನಕ್ಕೆ ಹೊಂದಿಕೊಳ್ಳುವ ಪರಿಜ್ಞಾನವನ್ನು ಶಿಕ್ಷಣ ನೀಡಬೇಕಿದೆ. ಇಂಥ ಆಲೋಚನೆಯ ಹಿನ್ನಲೆಯಲ್ಲಿ ಕನರ್ಾಟಕದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆನಿಂತಿರುವ ಬುಡಕಟ್ಟುಗಳಾದ ಕಾಡುಗೊಲ್ಲರು,  ಮ್ಯಾಸ ಬೇಡರು, ಲಂಬಾಣಿಗರು, ಮೊಂಡರು ಮೊದಲಾದ ಸಮುದಾಯಗಳಲ್ಲಿ ಆಧುನಿಕ ಶಿಕ್ಷಣ ಉಂಟುಮಾಡಿರುವ ಧನಾತ್ಮಕ ಹಾಗು ಋಣಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳುವುದು  ಹಾಗೆಯೆ ಈ ಬುಡಕಟ್ಟುಗಳ ನಿಜವಾದ ಅಭಿವೃದ್ಧಿ ಸೂತ್ರ ಯಾವುದು?ಹಾಗು ಅವುಗಳಿಗೆ ಬೇಕಿರುವ ನಿಜವಾದ ಶಿಕ್ಷಣದ ಸ್ವರೂಪ ಎಂಥದ್ದು?ಅವರಲ್ಲಿರುವ ಪಾರಂಪರಿಕ ಜ್ಞಾನಗಳನ್ನು ಹಾಗೂ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುವುದು ಹೇಗೆ ? ಎಂಬುದನ್ನು ಕಂಡುಕೊಳ್ಳುವುದು ಈ ಪ್ರಬಂಧದ ಪ್ರಧಾನ ಉದ್ದೇಶವಾಗಿದೆ.
ಪ್ರಸ್ತುತ ಸಮುದಾಯಗಳು ಹಾಗೂ ಸಂಬಂಧಿಸಿದ ಪರಿಕಲ್ಪನೆಗಳ ಬಗ್ಗೆ ಈಗಾಗಲೇ ಪ್ರಕಟವಾಗಿರುವ ಬರೆಹಗಳಿಂದ ಹಾಗೂ ಸಮುದಾಯಗಳ ಬದುಕಿನ ಅವಲೋಕನದಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ದೇಸೀವಾದದ ವಿಭಿನ್ನ ಆಯಾಮದ ಚಿಂತನೆಗಳ ಮೂಲಕ ವಿಶ್ಲೇಷಿಸಲಾಗುವುದು.ಸಮುದಾಯಗಳ ಅಭಿವೃದ್ಧಿ ಪರಿಕಲ್ಪನೆಗಳಿಗೆ ಒಂದು ರೀತಿಯ ಸ್ಪಷ್ಟಿಕರಣವನ್ನು ಪಡೆಯುವ ಹಂಬಲವುಳ್ಳ ಈ ಅಧ್ಯಯನಕ್ಕೆ ಸಮಕಾಲೀನ ಮಹತ್ವವಿದೆ.


* ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,

ಮ್ಯಾಸಬೇಡರ ಮಳೆ ಜ್ಞಾನ

 ಫಾಸಿಲ್ಸ್ ನ 19 ನೇ ಅಖಿಲ ಭಾರತೀಯ ವಾರ್ಷಿಕ ಸಮ್ಮೇಳನ, 2012 ಜನವರಿ 27, 28, 29
ಪ್ರಬಂಧದ ವಿಷಯ : ಮ್ಯಾಸಬೇಡರ ಮಳೆ ಜ್ಞಾನ *
 ಸಾರಲೇಖ
                      
                    'ಮ್ಯಾಸಬೇಡ' ಎನ್ನುವುದು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನೆಲೆಂತಿರುವ ವಿಶಿಷ್ಟವಾದ ಒಂದು ಬುಡಕಟ್ಟಾಗಿದೆ. ಇದು ತನ್ನದೇ ಆದ ಸಂಸ್ಕೃತಿಯ ವೈಲಕ್ಷಣಗಳೊಂದಿಗೆ ಎಲ್ಲರ ಗಮನ ಸೆಳೆಯುವ ಮೂಲಕ ಇಂದಿಗೂ ಬುಡಕಟ್ಟಿನ ಮೂಲ ಗುಣಗಳನ್ನು ಬಿಟ್ಟುಕೊಡದೇ ಬದುಕುತ್ತಿದೆ. ಆಧುನಿಕತೆಯ ಆರ್ಭಟಗಳ ನಡುವೆಯೂ ತನ್ನ ಪರಾಂಪರಿಕ ಜ್ಞಾನಗಳನ್ನು ನಂಬಿ ನಿರ್ವಸಾಹತೀಕರಣ ಪ್ರಕ್ರಿಯೆಯಲ್ಲಿ ಮುನ್ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮ್ಯಾಸಬೇಡ ಸಮುದಾಯದ ಒಡಲಲ್ಲಿ ಉಸಿರಾಡುತ್ತಿರುವ ಇಂಥ ಪಾರಂಪರಿಕ ಜ್ಞಾನಗಳ ಬಗ್ಗೆ ಈವರೆಗೂ ಈ ಸಮುದಾಯದ ಬಗ್ಗೆ ನಡೆದಿರುವ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಸ್ತಾಪಗಳು ಇಲ್ಲದೇ ಇರುವುದು ಕಂಡುಬರುತ್ತದೆ.ಈ ಹಿನ್ನೆಲೆಯೊಳಗೆ ಪ್ರಸ್ತುತ ಪ್ರಬಂಧದಲ್ಲಿ ಮ್ಯಾಸಬೇಡರ ಪಾರಂಪರಿಕ ಜ್ಞಾನಗಳಲ್ಲಿ ಪ್ರಮುಖ ಶಾಖೆಯಾಗಿರುವ ಮಳೆ ಬಗೆಗಿನ ಜ್ಞಾನದ ಬಗ್ಗೆ ತಿಳಿಯುವ ಪ್ರಯತ್ನಮಾಡಲು ಉದ್ದೇಶಿಸಲಾಗಿದೆ.
                      ಮ್ಯಾಸಬೇಡರ ಬುಡಕಟ್ಟು ಅತೀ ಪ್ರಾಚೀನ ಪರಂಪರೆಯನ್ನು ಹೊಂದಿದ್ದು , ಅಂಥ ದೀರ್ಘಕಾಲದ ಬದುಕಿನಲ್ಲಿ ಅನೇಕ ರೀತಿಯ ಅವಸ್ತಾಂತರಗಳನ್ನು ಕಂಡಿದೆ. ವೃತ್ತಿಯಲ್ಲಿ ಆರಂಭಕ್ಕೆ ಬೇಟೆಗಾರರಾಗಿದ್ದ ಇವರು ನಂತರ ಪಶುಪಾಲಕರಾಗಿದ್ದರೆ, ತದನಂತರ ಕೃಷಿಕರಾಗಿ ಪರಿವರ್ತನೆಗೊಂಡಿದ್ದಾರೆ. ಈ ಮೂರು ವೃತ್ತಿಗಳಿಗೂ ಮತ್ತು ಮಳೆಗೂ ನಿಕಟ ಸಂಬಂಧವಿದ್ದು ನಿರಂತರವಾಗಿ ಮಳೆಯ ಅವಶ್ಯಕತೆಯಲ್ಲಿ ಜೀವನ ಸಾಗಿಸಿರುವ ಈ ಸಮುದಾಯ, ಮಳೆಯನ್ನು ಕುರಿತಂತೆ ತನ್ನದೇ ಆದ ಜ್ಞಾನವನ್ನು ಹೊಂದಿದೆ. ಈ ಜ್ಞಾನದಲ್ಲಿ ಸ್ವಲ್ಪಭಾಗ ಕಾಲ್ಪನಿಕವಾಗಿದ್ದರೆ, ಹೆಚ್ಚಿನ ಭಾಗ ಅನುಭವ ಜನ್ಯವಾದುದಾಗಿದೆ. ಇಲ್ಲಿ ಮುಖ್ಯವಾಗಿ ಮಳೆ ಹೇಗೆ ಬರುತ್ತದೆ? ಮಳೆ ಬರುವ,ಹೋಗುವ ಸೂಚನೆಗಳೇನು? ವಿವಿಧ ಮಳೆಗಳ ಗುಣಗಳು ಮತ್ತು ಅವುಗಳು ನೀಡಿರುವ ಹಾಗೂ ನೀಡುತ್ತಿರುವ ಅನುಭವಗಳೇನು?ಮಳೆ ಬರದೇ ಹೋದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಬೇಡವೆಂದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಸಂಬಂಧೀ ಸಾಹಿತ್ಯ, ನಂಬಿಕೆ ಮತ್ತಿತರ ನಿರೂಪಣೆಗಳೇನು ಎಂಬಿತ್ಯಾದಿ ಅಂಶಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ.
                                ಈ ಸಮುದಾಯ  ಮಳೆಬರುವ ಸೂಚನೆಗಳನ್ನು ಹವಾಮಾನದ ಲಕ್ಷಣಗಳ ಮೂಲಕ ಮತ್ತು ಕನಸಿನಲ್ಲಿ ಕಂಡ ಸಂಗತಿಗಳ ಮೂಲಕ ಗುರುತಿಸುತ್ತದೆ.ಸೂರ್ಯ ಹುಟ್ಟುವ ಜಾಗದಲ್ಲಿ ಮಿಂಚಿದರೆ ಮಳೆಬರುತ್ತದೆ ಎಂಬುದು ಅನಭವದ ಸೂಚನೆಯಾದರೆ,ಕನಸಿನಲ್ಲಿ ಕುರಿಗಳು,ಪೊಲೀಸರು ಕಂಡರೆ ಮಳೆಬರುತ್ತದೆ ಎಂಬುದು ಅನುಭಾವದ ಸೂಚನೆಯಾಗಿದೆ.ಹಾಗೆಯೇ ಮಳೆ ಬರದೇ ಹೋದಾಗ ದೇವರನ್ನು ಕೇಳುವ,ಕೋಲಾಟದ ಮೂಲಕ ಪರಮಾತ್ಮನ ಗಮನ ಸೆಳೆಯುವ,ಪುರಾಣ ಓದುವ ದೇವರನ್ನು ಬೇಡುವ ಕಾರ್ಯಗಳ ಹಿಂದೆ ಅಡಗಿರುವ ಈ ಸಮುದಾಯದ ಲೋಕದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ವರ್ಷದ ಆರಂಭದಲ್ಲೇ ಮಳೆ ಬಗ್ಗೆ ದೇವರಲ್ಲಿ ಭವಿಷ್ಯ ಕೇಳುವ ದೃಷ್ಟಿಯಿಂದ ದೇವಸ್ಥಾನ ಮುಂದೆ ಕೊಡಹಿಡಿಯುವ,ಕೊಳಲೂದುವ ಆಚರಣೆಗಳು ನಿಜವಾಗಿಯೂ ಕತೂಹಲದಾಯಕವಾಗಿದ್ದು ಇವೆಲ್ಲವುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.ಸಮುದಾಯದ ಒಳಗೆ ಇಂಥ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲ್ಲಿದ್ದು ಇಂಥ ಎಲ್ಲಾ ಅಂಶಗಳನ್ನು ಕ್ಷೇತ್ರಕಾರ್ಯ ಹಾಗೂ ಆನುಷಂಗಿಕ ಆಕರಗಳ ಮೂಲಕ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಪ್ರಯತ್ನದಿಂದ ಹೊರಹೊಮ್ಮುವ ಫಲಿತಗಳು ಪ್ರಸ್ತುತ ಸಮುದಾಯಕ್ಕೆ ಒಂದು ಗೌರವವನ್ನು , ಹೊರಗಿನ ಸಮುದಾಯಗಳಿಗೆ ಅನುಸರಣಾ ಯೋಗ್ಯ ಸ್ಥಿತಿಯನ್ನು,ಸಮುದಾಯ ಅಧ್ಯಯನಗಳಿಗೆ ಒಂದು ಹೊಸ ಆಯಾಮವನ್ನು ತಂದು ಕೊಡಬಲ್ಲವು ಎಂಬುದು ಪ್ರಸ್ತುತ ಅಧ್ಯಯನದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
 * ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,

Sunday, 29 January 2012

ಜುಂಜಪ್ಪ ಜನಪದಮಹಾಕಾವ್ಯ : ಪ್ರಭುತ್ವದ ನೆಲೆಗಳು

                                         ಜನಪದ ಮಹಾಕಾವ್ಯಗಳು ಆಳುವ ವರ್ಗದ ಪುರಾಣಗಳನ್ನು ಭಂಜಿಸಿ, ತಮ್ಮ ಪರವಾದ ಪುರಾಣಗಳನ್ನು ಕಟ್ಟಿಕೊಳ್ಳುವಲ್ಲಿ ಪ್ರಯತ್ನಿಸಿವೆ.ಇದನ್ನು ಕಂಡಾಕ್ಷಣ ಒಂದೆರೆಡು ಸರಳ ಹಾಗೂ ಸಹಜವಾದ ಪ್ರಶ್ನೆಗಳು ಎದುರಾಗುತ್ತವೆ. ಮೂಲತಃ ಪುರಾಣಗಳು ಆಳುವ ವರ್ಗ ಅಥವಾ ಪ್ರಭುತ್ವದ ನಿರ್ಮಾಣಗಳು. ಇಂಥ  ಪುರಾಣಗಳ ಜೊತೆ ಹೀಗೆ ಗುದ್ದಾಡುವ ಸಮುದಾಯಗಳು ವಾಸ್ತವವಾಗಿ ಪ್ರಭುತ್ವಗಳೊಡನೆ ಯಾವ ತರಹದ ಸಂಬಂಧವಿರಿಸಿಕೊಂಡಿರುತ್ತವೆ? ಮತ್ತು ಅವುಗಳ ಅಧಿಕಾರದ ಬಗ್ಗೆ ಇವುಗಳ ದೃಷ್ಟಿ ಧೋರಣೆಗಳೇನು? ಎಂಬಿತ್ಯಾದಿ. ಇವು ಪ್ರಭುತ್ವ ಹಾಗೂ ದುಡಿಯುವ ಸಮುದಾಯಗಳ ಅಂತರ್ ಸಂಬಂಧಗಳನ್ನು ಕಂಡುಕೊಳ್ಳುವ ದಿಕ್ಕಿನತ್ತ ಬೆರಳು ಮಾಡುತ್ತವೆ.ಹಾಗಾಗಿ ಪ್ರಸ್ತುತ ಅಧ್ಯಾಯದಲ್ಲಿ ಪುರಾಣಗಳನ್ನು ಪ್ರಶ್ನಿಸುವ ಜನಪದ ಮಹಾಕಾವ್ಯಗಳ ಸೃಷ್ಟಿಶೀಲ ಮನಸ್ಸುಗಳು,ಪುರಾಣಗಳ ಸೃಷ್ಟಿಶೀಲ ನೆಲೆಗಳಾದ ಪ್ರಭುತ್ವವನ್ನು ಹೇಗೆ ಮುಖಾ-ಮುಖಿಯಾಗುತ್ತವೆ ಎಂಬುದನ್ನು ಜನಪದ ಮಹಾಕಾವ್ಯಗಳ ಮೂಲಕ ಶೋಧಿಸುವ ಪ್ರಯತ್ನ ಮಾಡಲಾಗಿದೆ.
ಪ್ರಭುತ್ವದ ಪರಿಕಲ್ಪನೆ
 ಇಲ್ಲಿಯವರೆಗೆ ಪ್ರಭುತ್ವ ದ ಪರಿಕಲ್ಪನೆಯನ್ನು ಕುರಿತು ಸಾಕಷ್ಟು ಚಚರ್ೆಗಳು ನಡೆದಿವೆ. ಇವುಗಳಿಂದ ತಿಳಿದುಬರುವ ಮುಖ್ಯ ಸಂಗತಿ ಎಂದರೆ - ಇಲ್ಲಿ ಪ್ರಭುತ್ವ ಎಂಬುದನ್ನು ಇಣಚಿಛಟಟಜಟಿಣ, ಖಣಚಿಣಜ, ಕಠತಿಜಡಿ, ಕಠಟಣಛಿ ಎನ್ನುವ ಅರ್ಥದಲ್ಲಿಯೇ ಹೆಚ್ಚಾಗಿ ಗುರುತಿಸಲಾಗಿದೆ. ಆದ್ದರಿಂದ ಪ್ರಭುತ್ವಕ್ಕೆ ರಾಜ್ಯ-ರಾಜ, ಸಾಮ್ರಾಜ್ಯ-ಸಾಮ್ರಾಟ, ಪುರ - ಪಟೇಲ ಎನ್ನುವ ರಾಜ್ಯತ್ವದ ನೆಲೆಯೇ ಪ್ರಧಾನವಾಗಿದೆ. ಆದರೆ ಪ್ರಭುತ್ವ ವಾಸ್ತವವಾಗಿ ಇಷ್ಟಕ್ಕೆ ಸೀಮಿತವಾಗಬೇಕಿಲ್ಲ. ಇಟಲಿಯ ಪ್ರಸಿದ್ಧ ಚಿಂತಕ ಆಂತೋನಿ ಗ್ರಾಂಶ್ಚಿ ಹಾಗೂ ಆತನ ಅನುಯಾಯಿಗಳು,ಪ್ರಭುತ್ವಕ್ಕಿರುವ ಇಂಥ ಸೀಮಿತ ಅರ್ಥವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.ಮುಖ್ಯವಾಗಿ ಅವರು ಪ್ರಭುತ್ವವನ್ನು ಊಜರಠಟಠಟಿಥಿ ಎನ್ನುವ ಪರಿಕಲ್ಪನೆಯಡಿಯಲ್ಲಿ ವಿವರಿಸುತ್ತಾರೆ.  ಊಜರಠಟಠಟಿಥಿ ಎನ್ನುವುದು ಇಣಚಿಛಟಟಜಟಿಣ, ಖಣಚಿಣಜ, ಕಠತಿಜಡಿ, ಕಠಟಣಛಿ ಗಿಂತ ಹೇಗೆ ಭಿನ್ನ ಎಂಬುದನ್ನು ವಿವರಿಸಿಕೊಳ್ಳುವುದಾದರೆ, ಮೇಲಿನ ಪರಿಕಲ್ಪನೆಗಳು ರಾಜಕೀಯ ನೆಲೆಯ ಚಿಂತನೆಯೊಳಗೆ ಬೃಹತ್ ವ್ಯವಸ್ಥೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿರುವುದು ಕಂಡುಬರುತ್ತದೆ. ಆದರೆ ಪ್ರಭುತ್ವ(ಊಜರಠಟಠಟಿಥಿ)  ಎನ್ನುವ  ಪದದ ಅರ್ಥದಲ್ಲಿ ಅಲ್ಪಮಟ್ಟಿಗೆ 'ಅಧಿಕಾರದೊಂದಿಗೆ ಅಂಕಿತದಲ್ಲಿಟ್ಟುಕೊಳ್ಳುವುದು' ಎಂಬರ್ಥ ಬರುತ್ತದೆ. ಹೀಗೆ ಅಂಕಿತ ಸಾಧಿಸುವಲ್ಲಿ ಪ್ರಭುತ್ವದ ಪ್ರತಿನಿಧಿ ಮತ್ತು ಅಂಕಿತಕ್ಕೆ ಒಳಪಡುವವರ ಮಧ್ಯೆ ಅನ್ಯೋನ್ಯವಾದ ಒಂದು ಸಂಬಂಧವಿರುತ್ತದೆ. ಇದನ್ನು ತೀರಾ ಸಮಾನ್ಯಗೊಳಿಸಿದರೆ ಹೆಂಡತಿಯ ಮೇಲಿನ ಗಂಡನ ಪ್ರಭುತ್ವ, ಸೊಸೆಯ ಮೇಲಿನ ಅತ್ತೆಯ ಪ್ರಭುತ್ವ ಇಲ್ಲಿಯವರೆಗೂ ಪ್ರಭುತ್ವದ ವ್ಯಾಪ್ತಿಯನ್ನು ಹರಿಸಬಹುದಾಗಿದೆ.(ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪುಟ: 207, 1993)  ಗ್ರಾಂಶ್ಚಿಯಂತೂ ಪ್ರಧಾನವಾಗಿ ಪ್ರತಿಪಾದಿಸಿದ ಸಿದ್ಧಾಂತವಿದು. ಅವರು ಹೇಳುವ ಹಾಗೆ ಇಡೀ ಜೀವನವೇ ಯಜಮಾನ್ಯಗಳ ಸಂಕೀರ್ಣ. ಜೀವನದ ಯಾವ ಭಾಗವು ಈ ಯಜಮಾನ್ಯದಿಂದ ಮುಕ್ತವಾಗಿಲ್ಲ. ಹೀಗೆ ಸರ್ವವ್ಯಾಪಿಯಾದ ಯಜಮಾನ್ಯವನ್ನು ಎರಡು ಗುಂಪುಗಳಾಗಿ ವಿಭಜಿಸಬಹುದು. ಅವುಗಳೆಂದರೆ ಒಂದು ಘನ' ಮತ್ತೊಂದು 'ಕಿರಿ' ಇವುಗಳಲ್ಲಿ ಮೊದಲನೆಯದು ಸೃಜನಶೀಲವಾದುದು. ಅದಕ್ಕೆ ಒಂದು 'ಖಣಚಿಣಜ' ನ ಪರಿಕಲ್ಪನೆ ಇರುತ್ತದೆ. ವ್ಯಾಪ್ತಿಯಲ್ಲಿ ಹಿರಿದಾದ ಇದು ಯಾಂತ್ರಿಕವೂ ಅನ್ನಿಸಬಹುದು. ಎರಡನೆಯದು ದೈವಿಕವಾದುದು. ಕೆಳಗಿನ ರಾಜಕಾರಣವಿದ್ದು. ವ್ಯಕ್ತಿಗತ ಸಂಬಂಧಗಳನ್ನು ನಿರ್ವಚಿಸುವುದು ಇಲ್ಲಿ ಮುಖ್ಯ. ಹೀಗೆ ಹೇಳುವಾಗಲೂ ಇವೆರಡನ್ನು ಸಂಪೂರ್ಣ ಭಿನ್ನ ಎಂದು ಭಾವಿಸಬೇಕಿಲ್ಲ.ಬದಲಿಗೆ ಒಂದರಿಂದ ಮತ್ತೊಂದು ಅವಲಂಬಿತವಾಗಿರುತ್ತದೆ(ಕೇಶವಶರ್ಮ ಕೆ.,ಶಬ್ದರೇಖೆ,ಪುಟ:80-81,1998). ಗ್ರಾಂಶ್ಚಿಯ ಪ್ರಕಾರ ಊಜರಠಟಠಟಿಥಿ/ಅಧಿಕಾರ ಎಂಬುದು ದುರ್ಬಲರನ್ನು ಆಳುವ ಪ್ರಬಲ ಶಕ್ತಿಯಾಗಿದೆ.(ಮನೋಹರ ಚಂದ್ರಪ್ರಸಾದ್ ಡಿ.,ಪ್ರತಿಸಂಸ್ಕೃತಿ ಆಂತೋನಿಗ್ರಾಂಶ್ಚಿಯ ಚಿಂತನೆಗಳು, ಪುಟ: 50, 2002) ಸಮಾಜದ ಉಪ ವ್ಯವಸ್ಥೆಗಳಾದ ಜಾತಿ, ಧರ್ಮ, ವರ್ಗ, ಜನಾಂಗ, ರಾಜ್ಯ ಮೊದಲಾದವು ಅಂಥ ಶಕ್ತಿಗಳಾಗಿ ಕಂಡುಬರುತ್ತವೆ.ಹೀಗೆ ಉಪವ್ಯವಸ್ಥೆಗಳು ಹಿಂದುಳಿದ ಗುಂಪುಗಳನ್ನು ಆಳುತ್ತಿರುತ್ತವೆ. ಈ ಆಳ್ವಿಕೆಗಳಲ್ಲಿ ಬಡವ-ಶ್ರೀಮಂತ, ಬ್ರಾಹ್ಮಣ-ಶೂದ್ರ, ಪುರೋಹಿತ-ಭಕ್ತ, ಆರ್ಯ-ದ್ರಾವಿಡ, ರಾಜ-ಪ್ರಜೆ ಇವೇ ಮೊದಲಾದ ಶ್ರೇಣೀಕರಣಗಳು ಕಂಡುಬರುತ್ತವೆ.ಇವೆಲ್ಲಕ್ಕೂ ಆಳುವ ಮತ್ತು ಆಳಿಸಿಕೊಳ್ಳುವ ತತ್ವವೇ ತಳಪಾಯವಾಗಿರುತ್ತದೆ.ಒಟ್ಟಾರೆ ಹೇಳುವುದಾದರೆ ಯಜಮಾನ್ಯತೆ ಅಥವಾ ಪ್ರಭುತ್ವಕ್ಕೆ ತೋಳ್ಬಲ ಹಾಗೂ ಬುದ್ಧಿಬಲಗಳೆರಡೂ ಸೇರಿಕೊಳ್ಳುತ್ತವೆ.ಇದರ ಜೊತೆಗೆ ಊಳಿಗಮಾನ್ಯ ಪದ್ಧತಿ,ಬಂಡವಾಳಶಾಹಿತ್ವ ಸಾಮಾಜಿಕ ಶ್ರೇಣೀಕರಣಗಳು ಕೂಡಾ ಸಮಾವೇಶಗೊಳ್ಳುತ್ತವೆ.ಆಳುವ ಶಕ್ತಿಯಾದ ಪ್ರಭುತ್ವ/ಯಜಮಾನ್ಯತೆ ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಇದಕ್ಕೆ ಪ್ರಮುಖವಾದ ಎರಡು ಮುಖಗಳಿರುತ್ತವೆ. ಒಂದು; ಸಮಾಜದ ಬೇರೆ ಬೇರೆ ಪಂಗಡಗಳ ಒಳಿತನ್ನು ಸಮನ್ವಯಗೊಳಿಸುವ ಏಪರ್ಾಡು, ಇತರೆ ದುರ್ಬಲ ವರ್ಗಗಳನ್ನು ತುಳಿಯುವ ಅಸ್ತ್ರ ಇದನ್ನು ಹೆಚ್.ಎಸ್. ಶಿವಪ್ರಕಾಶ್ ಅವರು ಎರಡು ಸುಂದರ ರೂಪಕಗಳ ಮೂಲಕ ವಿವರಿಸುತ್ತಾರೆ. ಅವುಗಳೆಂದರೆ ಒಂದು ಅನ್ನಪೂಣರ್ೆಯದು. ಮತ್ತೊಂದು ದುಗರ್ಿಯದು.ಇವುಗಳಲ್ಲಿ ಮೊದಲನೆಯದು ಸಮಾಜವನ್ನು ಕಾಪಾಡುವ ಬದ್ಧತೆಯಿಂದ ಕೂಡಿದ್ದಾಗಿದೆ.(ಬರಗೂರು ರಾಮಚಂದ್ರಪ್ಪ(ಪ್ರ.ಸಂ.)ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ ಪುಟ:1,1993)ನಮ್ಮಸಾಂಸ್ಕೃತಿಕಚರಿತ್ರೆಯನ್ನು ಅವಲೋಕಿಸಿದರೆ ಪ್ರಭುತ್ವ ಅನ್ನಪೂಣರ್ೆಯಾಗಿರವಷ್ಟೆ ದುಗರ್ಿಯೂ ಆಗಿದೆ. ಇತಿಹಾಸದಲ್ಲಿ ಆಳುವವರ ಸ್ವಜನ ಪಕ್ಷಪಾತ, ಸ್ವಾರ್ಥ, ಭ್ರಷ್ಟ ಮನೋಭಾವಗಳು ಹೆಚ್ಚಾಗಿವೆ.ಇವು ಪ್ರಭುತ್ವದ ದುಗರ್ಿಯ ಮುಖದಲ್ಲಿ ಪರಿಣಾಮಕಾರಿಯಾಗಿ ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ.ಸಮಾಜದಲ್ಲಿ ಪ್ರಭುತ್ವವನ್ನು ಎಲ್ಲಾಕಡೆ ಕಾಣಲು ಸಾಧ್ಯ.ಹಾಗೆ ಕಾಣುವ ಪ್ರಭುತ್ವಗಳಲ್ಲಿ ಪ್ರಧಾನವಾದವುಗಳೆಂದರೆ : ರಾಜ ಪ್ರಭುತ್ವ. ಧಾರ್ಮಿಕ ಪ್ರಭುತ್ವ. ಆರ್ಥ ಪ್ರಭುತ್ವ. ಸಾಮಾಜಿಕ ಪ್ರಭುತ್ವ. ಹೀಗೆ ಪ್ರಭುತ್ವವು ಹಲವಾರು ಹಂತಗಳಲ್ಲಿ ತನ್ನ ಛಾಯೆಯನ್ನು ಒತ್ತಿರುತ್ತದೆ.ಮೇಲೆ ಉಲ್ಲೇಖಿಸಿರುವ ಪ್ರಭುತ್ವದ ಮಾದರಿಗಳು ಅಧ್ಯಯನದ ಅನುಕೂಲಕ್ಕೆ ಮಾಡಿಕೊಂಡ ವಿಭಾಗ ಕ್ರಮ ಮಾತ್ರ. ಇವು ಮೇಲ್ನೋಟಕ್ಕೆ ವಿಭಿನ್ನ ಎನಿಸಿದರೂ ಆಂತರ್ಯದಲ್ಲಿ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುತ್ತವೆ.ಅದು ಎಷ್ಟರ ಮಟ್ಟಿಗೆ ಎಂದರೆ,ಒಂದನ್ನೊಂದು ಬಿಟ್ಟು ಇರಲಾರವು. ಉದಾಹರಣೆಗೆ ರಾಜಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳನ್ನು ತೆಗೆದುಕೊಂಡರೆ ಧರ್ಮ ಎಂಬುದು ಪ್ರಭುತ್ವದಿಂದ ಪ್ರತ್ಯೇಕವಲ್ಲ.ಅದು ನಾಸ್ತಿಕ ಬೌದ್ಧಧರ್ಮವಾಗಿರಬಹುದು.ಇಲ್ಲಿ ಆಸ್ತಿಕ ಸಂಪ್ರದಾಯಗಳ ವಣರ್ಾಶ್ರಮಧರ್ಮವಾಗಿರಬಹುದು. ಅದು ಪ್ರಭುತ್ವಕ್ಕೆ ಆಕರವಾಗಿರುತ್ತದೆ.ಹಾಗೂ ಪ್ರಭುತ್ವಕ್ಕೆ ಮಾನ್ಯತೆಯನ್ನು ಸೃಷ್ಟಿಸುತ್ತದೆ. (ರಾಜಾರಾಮ ಹೆಗಡೆ, ಲೌಕಿಕ-ಅಲೌಕಿಕ, ಪುಟ: 7, 2001) ಹೀಗಿರುವುದರಿಂದ ಒಂದರಿಂದ ಮೊತ್ತೊಂದರ ಅಸ್ತಿತ್ವ ಸಾಧ್ಯವಾಗಿದೆ. ಈ ಅಂಶ ಉಳಿದ ಎಲ್ಲಾ ರೀತಿಯ ಪ್ರಭುತ್ವಗಳಿಗೂ ಅನ್ವಯವಾಗುತ್ತದೆ. ಇವುಗಳಲ್ಲಿ ಕೆಲವೊಮ್ಮೆ ಸಂಘರ್ಷವೂ ನಡೆಯುತ್ತದೆ. ಹೀಗೆ ಸಂಘರ್ಷ ಏರ್ಪಟ್ಟಾಗ ಯಾವುದರ ಅಸ್ತಿತ್ವವೂ ಸ್ಪಷ್ಟವಾಗಿರುವುದಿಲ್ಲ.
ಧರ್ಮ ಮತ್ತು ರಾಜ್ಯತ್ವ ಇವರೆಡನ್ನು ಗಮನದಲ್ಲಿಟ್ಟುಕೊಂಡು ಚಚರ್ೆಯನ್ನು ಇನ್ನಷ್ಟು ಬೆಳೆಸುವುದಾದರೆ: ರಾಜ, ಪ್ರಜೆಗಳಿಗೆ ದೇವರಾಗಿ ಕಾಣುತ್ತಾನೆ. ಏಕೆಂದರೆ ರಾಜ್ಯದಲ್ಲಿ ಪ್ರಜೆಗಳ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವತ್ತ ಮತ್ತು ಅವರನ್ನು ಕಾಪಾಡುವತ್ತ ಕಾಳಜಿವಹಿಸಿರುವುದರಿಂದ ಹೀಗೆ ಪ್ರಜೆಗಳ ಕಣ್ಣಿನಿಂದ ರಾಜ ದೇವತೆಯಾಗುತ್ತಾನೆ. ಆದರೂ ರಾಜ ಸರ್ವಸ್ವತಂತ್ರವೆನಿಸುವುದಿಲ್ಲ. ಮತ್ತೊಂದು ಕಡೆ ರಾಜ ಧರ್ಮದ ಚೌಕಟ್ಟಿನಿಂದ ಬಂಧಿತನಾಗಿರುತ್ತಾನೆ. ಧರ್ಮದ ಸ್ಥಾನದಲ್ಲಿ ಧರ್ಮಶಾಸ್ತ್ರಗಳು, ಪುರಾಣಗಳು, ಪುರೋಹಿತರು ನಿಂತಿರುತ್ತಾರೆ. ಹಾಗಾಗಿಯೇ ರಾಜ ಪ್ರಜೆಗಳನ್ನು ಕಾಪಾಡುವುದು ಎಷ್ಟು ಮುಖ್ಯವೋ ಧರ್ಮದ ರಕ್ಷಣೆಯೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. 'ಧಮರ್ೊ ರಕ್ಷಿತಿಃ ರಕ್ಷತಾ' ಎನ್ನುವ ಜನಪ್ರಿಯ ಮಾತು ಇಲ್ಲಿ ಪ್ರಭಾವಿಸಿರುತ್ತದೆ.
ಒಟ್ಟಾರೆ, ರಾಜ್ಯದಲ್ಲಿ ಆಥರ್ಿಕತೆ, ಧಾರ್ಮಿಕತೆ ಮತ್ತು ಮೊದಲಾದವು ಒಟ್ಟು ಸಂಘಟಿತ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾಗಿರುತ್ತವೆ. ಆ ಮೂಲಕ ಆಳುವ ವ್ಯವಸ್ಥೆಯೊಂದು ರೂಪಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಆಳಿಸಿಕೊಳ್ಳುವ ವರ್ಗಗಳು ಅಧಿಕಾರದ ಕ್ರೂರ ಶಕ್ತಿಯ ಬಗ್ಗೆ ಕೋಪಗೊಳ್ಳುತ್ತಲೇ ಅದರಿಂದ ಬಿಡುಗಡೆಗೊಳ್ಳಲು ಅನೇಕ ರೀತಿಯ ಪ್ರಯತ್ನಗಳನ್ನು ಮುಂದುವರಿಸುತ್ತವೆ. ಅಷ್ಟೇ ಅಲ್ಲದೆ ಇವೂ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತವೆ. ಅಂಥ ಪ್ರಯತ್ನಗಳನ್ನು ಅರಿಯಲು ಆಳಿಸಿಕೊಂಡ ಸಮುದಾಯಗಳ ಕಲೆ, ಸಾಹಿತ್ಯ, ಸಂಪ್ರದಾಯ-ಆಚರಣೆಗಳನ್ನು ಗಮನಿಸಬೇಕಾಗುತ್ತದೆ. ಈ ಹಿನ್ನೆಲೆಯಿಂದ 'ಜನಪದ ಮಹಾಕಾವ್ಯ'ಗಳಲ್ಲಿ ಶೂದ್ರ ಸಮುದಾಯಗಳು ಪ್ರಭುತ್ವವನ್ನು ಮುಖಾಮುಖಿಗೊಂಡ ಬಗೆ ಯಾವುದು? ಅವುಗಳಿಂದ ಬಿಡುಗಡೆಗೊಳ್ಳುವ ರೀತಿ ಯಾವುದು? ಇಂಥ ಎಲ್ಲಾ ಸಂಗತಿಗಳನ್ನು ಮುಂದಿನ ಭಾಗದಲ್ಲಿ ವಿಶ್ಲೇಷಿಸಬಹುದಾಗಿದೆ.
 ಜುಂಜಪ್ಪನ ಕಾವ್ಯವನ್ನು ಕಟ್ಟಿ ಹಾಡುತ್ತಿರುವ ಕಾಡುಗೊಲ್ಲರು ಮೂಲತಃ ಪಶುಪಾಲಕರಾಗಿದ್ದು, ಒಂದೇ ಒಂದು ಭೂ ಪ್ರದೇಶಕ್ಕೆ ಒಳಗಾದವರಾಗಲಿ, ಒಂದೇ ಪ್ರಭುತ್ವವದಡಿಯಲ್ಲಿ ಬದುಕಿದವರಾಗಲೀ ಆಗಿಲ್ಲ. ಇದು ಈವರೆಗಿನ ಅಧ್ಯಯನಗಳಿಂದ ಸ್ಪಷ್ಟ. ಈ ಕಾಡುಗೊಲ್ಲರಿಗೆ ಪಶುಗಳೇ ಸಂಪತ್ತು. ದೈವ, ಬದುಕು ಎಲ್ಲವೂ ಹೌದು. ಅಂತಹ ಪಶುಗಳ ಪಾಲನೆ ಅಷ್ಟು ಸರಳವಾದ ಕೆಲಸವಲ್ಲ. ಪಶುಗಳ ಆಹಾರಕ್ಕೆ ಬೇಕಾದ ಯಾವುದೇ ರೀತಿಯ ಹುಲ್ಲುಗಾವಲುಗಳು ಇವರ ವಶದಲ್ಲಿಲ್ಲ. ಅವು ಏನಿದ್ದರು ಆಥರ್ಿಕವಾಗಿ ಪ್ರಬಲರಾಗಿದ್ದ ಪ್ರಭುಗಳ ಕೈವಶದಲ್ಲಿವೆ. ಕಾವ್ಯ ವಿವರಿಸುವ ಹಾಗೆ ಮುತ್ತು ರತ್ನ ವ್ಯಾಪಾರ ಮಾಡುವ ಸೇಳೂರು ದೊರೆಗಳು, ಸಾಣೇಕೆರೆ ಪುಟ್ಟಣ್ಣನಂಥ ಪ್ರಭುಗಳು ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವ ಎತ್ತುಗಳ ನಿರ್ವಹಣೆಗೆ, ಇದ್ದ ಹುಲ್ಲುಗಾವಲುಗಳೆಲ್ಲವನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕಾಡುಗೊಲ್ಲರ ಸ್ಥಿತಿ ಚಿಂತಾಜನಕ.ಇವರಿಗಿರುವ ಒಂದೇ ಒಂದು ದಾರಿ.ಅದು ಹುಲ್ಲುಗಾವಲಿನ ಒಡೆಯರ ಜೊತೆ ಸಂಘರ್ಷಕ್ಕಿಳಿಯುವುದು ಜುಂಜಪ್ಪ ಮಾಡಿರುವ ಇಂಥ ಹಲವಾರು ಸಂಘರ್ಷಗಳನ್ನು ಕಾವ್ಯ ಅರ್ಥಪೂರ್ಣವಾಗಿ ವಿವರಿಸುತ್ತದೆ.
 ಸೇಳೂರು ದೊರೆಗಳೊಡನೆ ಸಂಘರ್ಷ
 ಜುಂಜಪ್ಪ ಹಾಗೂ ಅವನ ಸಹೋದರರು ಸಾಕಷ್ಟು ದನಗಳುಳ್ಳ ಪಶುಪಾಲಕರು. ಇವರ ನಾಡಿಗೆ ಒಮ್ಮೆ ಕ್ಷಾಮ ಬಂದು ಹುಲ್ಲು-ನೀರಿಗೆ ಸಾಕಷ್ಟು ಬರ ಬರುತ್ತದೆ. ದನಗಳೆಲ್ಲವೂ ಆಹಾರವಿಲ್ಲದೆ ಹೊಟ್ಟೆಹತ್ತಿಸಿಕೊಂಡು ಮಲಗುತ್ತವೆ. ಪಶುಗಳ ಈ ಕಷ್ಟವನ್ನು ನೋಡಲಾಗದೆ ಹುಲ್ಲು ನೀರು ಹುಡುಕಲು ಜುಂಜಪ್ಪನ ಸಹೋದರರು ಹೊರಡುತ್ತಾರೆ. ಆಗ ಅವರಿಗೆ ಸೇಳೂರು ದೊರೆಗಳ ಹಲ್ಲುಗಾವಲು ಕಾಣಿಸುತ್ತದೆ.ಆ ಸೇಳೂರು ದೊರೆಗಳು ಹಾಗೂ ಅವರ ಹುಲ್ಲುಗಾವಲಿನ ಸ್ವರೂಪವನ್ನು ಕಾವ್ಯ ಹೀಗೆ ಚಿತ್ರಿಸುತ್ತದೆ.ಸೇಳೂರು ದೊರೆಗಳು ಮೂಲತಃ ಮುತ್ತು ರತ್ನದ ವ್ಯಾಪಾರಸ್ತರು.ಎತ್ತುಗಳ ಮೇಲೆ ಮುತ್ತು ರತ್ನ ಹೇರಿಕೊಂಡು ಪಟ್ಟಣಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಈ ಉದ್ದೇಶಕ್ಕಾಗಿ ದೊರೆಗಳು ನೂರಾ ಒಂದು ಜೊತೆ ಎತ್ತುಗಳನ್ನು ಸಾಕಿದ್ದರು. ಎತ್ತುಗಳ ಮೇವಿಗಾಗಿ 168 ಎಕರೆ ಹುಲ್ಲುಗಾವಲನ್ನು ಹೊಂದಿದ್ದರು. ಹುಲ್ಲುಗಾವಲನ್ನು ಕಾಯಲು ನೂರಾರು ಜನ ಗುರಿಕಾರರನ್ನು ನೇಮಿಸಿದ್ದರು. ಕಾವಲಿಗೆ ಗಾಜಿನ ಗೋಡೆ ಹಾಕಿಸಿ ಭದ್ರ ಮಾಡಿದ್ದರು (ಜುಂಜಪ್ಪ ಪುಟ: 335). ಇಂಥ ಭದ್ರಕೋಟೆಯನ್ನು ಭೇದಿಸಿದ ಜುಂಜಪ್ಪ ಹಾಗೂ ಅವರ ಸೋದರರು ತಮ್ಮ ದನಗಳನ್ನು 168 ಎಕರೆ ಹುಲ್ಲುಗಾವಲಲ್ಲಿ ಬಿಟ್ಟು ಮೇಯಿಸುತ್ತಾರೆ. ಈ ಮಧ್ಯೆ ಜುಂಜಪ್ಪನಿಗೂ ಹಾಗೂ ದೊರೆಗಳಿಗೂ ನಡೆದ ಸಂಭಾಷಣೆ, ಸಂಘರ್ಷಗಳು ತುಂಬಾ ಮಹತ್ವದ ಅಂಶಗಳನ್ನು ಬಿಂಬಿಸುತ್ತವೆ. ಮೊದಲಿಗೆ ಜುಂಜಪ್ಪ ಕಾವಲಿನ ಕಾವಲುಗಾರರ ಜೊತೆ ಮುಖಾ-ಮುಖಿಯಾಗುತ್ತಾನೆ. ಆ ಸಂದರ್ಭದಲ್ಲಿ ಜುಂಜಪ್ಪ ಕಣ್ಣು ಕಾಣದ ಕುರುಡನಂತೆ,ಕಿವಿ ಕೇಳಿಸಿದ ಕಿವುಡನಂತೆ ನಟಿಸಿ ನಿಮ್ಮ ದೊರೆಗಳನ್ನು ನನ್ನ ಹತ್ತಿರವೇ ಕಳುಹಿಸಿರಯ್ಯಾ ಎಂದು ಕೇಳುತ್ತಾನೆ. ಇದರಿಂದ ಕುಪಿತಗೊಂಡ ಕಾವಲುಗಾರರು
  ಇವನಿರೋ ಜಾಗಕ್ಕೆ ನಮ್ಮ ಸೇಳೂರು ದೊರೆ
  ದೊರೆ ಅಂದ್ರೇನು ನೀನು ಅಂದ್ರೇನು
  ನಿನ್ಹತ್ರಕೆ ದೊರೆ ಬರಬೇಕೇನೂ ದಗಡಿ ಮಗನೆ (ಜುಂಜಪ್ಪ. ಪುಟ: 341)
 ಎಂಬುದಾಗಿ ಹೇಳುತ್ತಾರೆ. ಇಲ್ಲಿಯ ಮಾತುಗಳು ಪ್ರಭುತ್ವಮುಖೀನೆಲೆಯುಳ್ಳವು. ಕಾವಲುಗಾರರ ಈ ಮಾತುಗಳಿಗೆ ಜುಂಜಪ್ಪ ಕಾವಲುಗಾರರೇ ನೀವು ಸಂಬಳದಾಳುಗಳು ನಿಮಗೇಕೆ ಈ ಕೆಲಸ ಸುಮ್ಮನಿರಿ ಎಂಬ ಸೂಕ್ತ ಪ್ರತಿವಾದವನ್ನು ಒಡ್ಡುತ್ತಾನೆ. ಇದರಿಂದ ಕಾವಲುಗಾರರಿಗೆ ವಿಪರೀತ ಸಿಟ್ಟು ಬಂದು ಜುಂಜಪ್ಪನನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಆದರೆ ಜುಂಜಪ್ಪ ಅವರಿಗೆ ಕೊಡುವ ಶಿಕ್ಷೆಯನ್ನು ತಾಳಲಾರದೆ ಅವರು, ಸಂಬಳ ಕೊಡುವ ದೊರೆಗಳೇ ನಮಗೆ ಒಮ್ಮೆಯೂ ಇಂಥ ಕಷ್ಟಕೊಡಲಿಲ್ಲ. ಈ ಕಾಡುಗೊಲ್ಲ ನಮಗೆ ಎಷ್ಟೊಂದು ಕಷ್ಟಕೊಟ್ಟ ಎಂದು ಹೇಳುವ ಮಾತುಗಳು ಅತ್ಯಂತ ಮಾಮರ್ಿಕವಾಗಿವೆ. ದೊರೆಗಳಿಗೆ ಇಲ್ಲದ ಅದ್ಬುತ ಶಕ್ತಿ ಜುಂಜಪನಲ್ಲಿತ್ತೆಂದು ಕಾವ್ಯ ಸಾದರಪಡಿಸುತ್ತದೆ. ಇಷ್ಟಾದ ನಂತರವೂ ಜುಂಜಪ್ಪನ ಶಿಕ್ಷೆಯನ್ನು ತಾಳಲಾರದೆ ನಮ್ಮ ದೊರೆ ಕೊಡೋ ಮೂರು ಕಾಸಿನ ಸಂಬ್ಳಾನು ಬೇಡ ಈ ಶಿಕ್ಷೆನೂ ಬೇಡ. ನಮ್ಮ ಹೆಂಡ್ರು ಮಕ್ಕಳ್ನ ನೋಡಿದರೆ ಸಾಕೆಂದು ಓಡಿಹೋಗುವ ಪ್ರಸಂಗವಂತೂ ಧ್ವನಿಪೂರ್ಣವಾಗಿದೆ. ದೊರೆ ಹಾಗೂ ಸಂಬಳಗಾರರ ನಡುವೆ ಇಷ್ಟವಿಲ್ಲದ ಅನಿವಾರ್ಯತೆಯ ನಂಟಿನ ಸ್ವರೂಪ ಇಲ್ಲಿ ಬಯಲಾಗಿದೆ.
 ತದನಂತರ ಜುಂಜಪ್ಪ ನೇರವಾಗಿ ದೊರೆಗಳೊಡನೆ ಸಂಘರ್ಷಕ್ಕಿಳಿಯುತ್ತಾನೆ. ಆಗ ಆರಂಭಕ್ಕೆ ದೊರೆಗಳು ಈ ಕೆಳಗಿನಂತೆ ಶರಣಾಗುತ್ತಾರೆ.
  ತಂದೆ ಧನ್ಯನಾದೆನು ಸ್ವಾಮಿ ನಾನು
  ಯಾರೋ ನರಮನುಷ್ಯರೆಂದು
  ದುರಹಂಕಾರಪಟ್ಟು ಓಡಿ ಬಂದೆನು ತಂದೆ
  ನೀನೆಂಬುದು ನಾನರಿಯೇ ಸ್ವಾಮಿ (ಜುಂಜಪ್ಪ ಪುಟ: 346)
 ಹೀಗೆ, ಶರಣಾದ ದೊರೆಗಳು ಅಲ್ಲಿಗೆ ನಿಲ್ಲುವುದಿಲ್ಲ. ಜುಂಜಪ್ಪನ ಇಂಥ ಪರಾಕ್ರಮಕ್ಕೆ ಆತನ ಬಡ ಮೈಲನೆಂಬ ಎತ್ತೇ ಕಾರಣ ಎಂಬುದನ್ನು ಅರಿತು, ಅದನ್ನು ಕ್ರಯಕ್ಕೆ ಪಡೆಯಲು ಮುಂದಾಗುತ್ತಾರೆ. ಆಳುವ ವರ್ಗಗಳು ದುಡಿಯುವ ಸಮುದಾಯಗಳ ಚೈತನ್ಯ ಶಕ್ತಿಗಳನ್ನು ವಶಪಡಿಸಿಕೊಂಡು ಈ ಮೂಲಕ ಅವರನ್ನು ಅಸಮರ್ಥರನ್ನಾಗಿಸುವ ಹುನ್ನಾರ ಇಲ್ಲಿ ಕಂಡುಬರುತ್ತದೆ. ಆಗ ಜುಂಜಪ್ಪ ದೊರೆಗಳ ಈ ತಂತ್ರವನ್ನು ಸರಿಯಾಗಿಯೇ ಅರ್ಥಮಾಡಿಕೊಳ್ಳುತ್ತಾನೆ.
 ನೋಡಯ್ಯ
 ನೀನು ಅಟೈಸ್ವರವಂತನಾಗಿರಬಹುದು
 ವಜ್ರ ವೈಡೂರ್ಯ ಸಂಪಾದನೆ ಮಾಡಿರಬಹುದು
 ಬಸುವನ ಪೂಜೆ ಮಾಡೋ ಯೋಗ್ಯತೆ ನಿನಗಿಲ್ಲಕಣಯ್ಯ (ಜುಂಜಪ್ಪ ಪುಟ: 348)
ಎಂದು ದೊರೆಗಳ ತಂತ್ರಕ್ಕೆ ಪ್ರತಿಕ್ರಿಯಿಸುತ್ತಾನೆ. ಪ್ರಭುತ್ವ ಅಂದಾಕ್ಷಣ ಅದಕ್ಕೆ ಎಲ್ಲಾತರಹದ ಶಕ್ತಿ ಇರುತ್ತದೆ ಎಂಬುದು ಸುಳ್ಳು. ಇದನ್ನು ವಾದಿಸುತ್ತ ಪ್ರಭುತ್ವವು ದುಡಿಯುವ ಸುಮದಾಯಗಳ ಶಕ್ತಿಯನ್ನು ಪಡೆಯಲಾಗದು ಎಂಬುದನ್ನು ಜುಂಜಪ್ಪ ಮನವರಿಕೆ ಮಾಡಿಸುತ್ತಾನೆ. ಜುಂಜಪ್ಪನ ಈ ಆತ್ಮವಿಶ್ವಾಸವು ಪ್ರಭುತ್ವಕ್ಕೆ ನೇರ ಸವಾಲಾಗುತ್ತದೆ. ಇಲ್ಲಿ ವಿಫಲರಾದ ದೊರೆಗಳು ತಮ್ಮ ತಂತ್ರವನ್ನು ಮತ್ತೊಂದು ರೀತಿ ರೂಪಿಸುತ್ತಾರೆ. ಅದರ ಪ್ರಕಾರ ಕವಡೆ ಆಟ ಆಡುವುದು. ಆಟದಲ್ಲಿ ದೊರೆಗಳು ರಾಜ್ಯವನ್ನು, ಕಾಡುಗೊಲ್ಲರು ಬಡಮೈಲನೆಂಬ ಎತ್ತನ್ನು ಪಣಕ್ಕಿಡುವುದು ಎಂದಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ರಾಜರ ರಾಜ್ಯಕ್ಕೆ ಬಡಮೈಲನೆಂಬ ಎತ್ತು ಸಮತೂಕವಾಗುವುದು. ಕವಡೆ ಆಟ ಆಡಲು ಬರುವುದಿಲ್ಲವೆಂದ ಜುಂಜಪ್ಪ ಕೊನೆಗೆ ಒಪ್ಪಿ ದೊರೆಗಳೊಡನೆ ಕವಡೆ ಆಟ ಆಡಿ ಪಣವನ್ನು ಗೆದ್ದುಬಿಡುತ್ತಾನೆ. ನಿಯಮದಂತೆ ರಾಜ್ಯ ಜುಂಜಪ್ಪನಿಗೆ ದೊರೆಯುತ್ತದೆ. ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಜುಂಜಪ್ಪ ದೊರೆಗಳಿಗೆ ಹೀಗೆ ಆದೇಶಿಸುತ್ತಾನೆ.
  ಬಿಚ್ಚಿರೋ ನಿಮ್ಮ
  ಜೋತ್ರ ಪಂಚೆಗಳಾ
  ತಗ್ದುಹಾಕಿರಲೇ
  ಕೋಟು ರುಮಾಲುಗಳ
  ಇಕ್ಕಳಿರೋ ಪುಟಗೋಸಿಗಳ
  ತಗಳಿರೋ ಸಲಿಕೆ ಗುದ್ಲಿ
  ನಡಿರಲೇ ಸೇಳೂರು ಕೆರೆಯ
  ಕಟ್ಟನು ಎಂದನು ಜುಂಜಪ್ಪಶಿವ್ನಿಗೋ (ಜುಂಜಪ್ಪ ಪುಟ: 399)
 ಜುಂಜಪ್ಪನ ಈ ಆದೇಶ ದುಡಿಯುವ ಸಮುದಾಯಗಳ ಪ್ರತಿಸಂಸ್ಕೃತಿ ನಿರ್ಮಾಣದ ಗಟ್ಟಿ ಆಶಯವನ್ನು ಬಿಂಬಿಸುತ್ತದೆ. ಇನ್ನೊಬ್ಬರ ನಾಶಕ್ಕೆ ತಮ್ಮ ಪ್ರಭುತ್ವವನ್ನು ಬಳಸಿಕೊಳ್ಳುವ ಅರಸರು ಅನೇಕ. ಅಂಥ ಅರಸರ ಅಧಿಕಾರವನ್ನೇ ಕಿತ್ತುಕೊಳ್ಳುವುದು ಸಮುದಾಯಗಳ ಮನಸ್ಸಿನ ಆಳದ ಪ್ರಜ್ಞೆಯಾಗಿದೆ ಎನ್ನುವುದು ತಿಳಿದುಬರುತ್ತದೆ.
 ಪ್ರತಿಸಂಸ್ಕೃತಿ ನಿರ್ಮಾಣದಲ್ಲಿ ಬಹುಮುಖ್ಯವಾಗುವ ಅಪವಗರ್ೀಕರಣ ಮತ್ತು ಮೌಲ್ಯೀಕರಣದ ಪ್ರಕ್ರಿಯೆಗಳು ಮೇಲಿನ ಪ್ರಸಂಗದಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ರಾಜಮುದ್ರಿಕೆ, ಉಂಗುರ, ಕೋಟು, ರುಮಾಲುಗಳ ಧರಿಸಿ ರಾಜ್ಯವಾಳುತ್ತಿದ್ದ ದೊರೆಗಳು ಪುಟಗೋಸಿ ತೊಟ್ಟು ಸಲಿಕೆ-ಗುದ್ಲಿ ಕೈಯಲ್ಲಿಡಿದು ಅರಮನೆಯಿಂದ ಕೆರೆಯ ಏರಿಗೆ ನಡೆಯುವುದು ಅಪವಗರ್ೀಕರಣವಾಗಿದೆ. ಅದೇ ಪುಟಗೋಸಿ ತೊಟ್ಟು ಕೈಯಲ್ಲಿ ಕೋಲುಹಿಡಿದಿದ್ದ ಜುಂಜಪ್ಪ ರಾಜಮುದ್ರಿಕೆ, ಉಂಗುರ ಧರಿಸಿ ಕಾಡಿನಿಂದ ಅರಮನೆಗೆ ನಡೆಯುವುದು ಮೌಲ್ಯೀಕರಣವಾಗುತ್ತದೆ.
 ಇನ್ನೂ ವಿಶೇಷವೆಂದರೆ, ರಾಜನಾದ ಜುಂಜಪ್ಪ ಮತ್ತೆ ರಾಜತ್ವದ ಯಥಾ ಸ್ಥಿತಿಯನ್ನು ಮುಂದುವರಿಸುವುದಿಲ್ಲ. ಬದಲಿಗೆ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾನೆ. ಸೇಳೂರಿನಲ್ಲಿ ಕೆರೆಯೊಂದನ್ನು ಕಟ್ಟಿಸುವ ಕಾಯಕ ಈ ಸಂಗತಿಯನ್ನು ಸರಿಯಾಗಿ ಸಪಷ್ಟಪಡಿಸುತ್ತದೆ. ಪಶುಗಳನ್ನು ಸಾಕಿಸಲುಹುತ್ತ ಹುಲ್ಲು - ನೀರಿಗಾಗಿ ಸಾಕಷ್ಟು ಕಷ್ಟಪಟ್ಟ ಸಮುದಾಯ ಮನಸ್ಸೊಂದು ಕೆರೆಯ ನಿರ್ಮಾಣದಂತಹ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅತ್ಯಂತ ಸಹಜವಾಗಿದೆ. ಇಂಥಲ್ಲಿ ದೊರೆಗಳನ್ನೇ ಕೆರೆ ಕಟ್ಟಲು ಹಚ್ಚಿದ್ದು ಗಮನಾರ್ಹ. ಅದರಂತೆ ಇದು ದೊರೆಗಳ ಬಗ್ಗೆ ದುಡಿಯುವ ಸಮುದಾಯಗಳು ಇಟ್ಟುಕೊಂಡಿರುವ ಮನೋಭಾವವನ್ನು ತಿಳಿಸುತ್ತದೆ. ಕೊನೆಗೆ ಒಪ್ಪಂದದ ಸಮಯ ಮುಗಿದಾಗ ಜುಂಜಪ್ಪ ರಾಜ್ಯ ತೆಗೆದುಕೊಂಡು ನಾನೇನು ಮಾಡಲಿ ಎಂದು, ರಾಜತ್ವನ್ನು ನಿರಾಕರಿಸಿ ತನ್ನ ಸಮುದಾಯದ ಮೂಲ ವೃತ್ತಿಗೆ ಹೊರಡುತ್ತಾನೆ. ಇದ್ದಷ್ಟು ಕಾಲ ರಾಜತ್ವವನ್ನು ಆಥರ್ಿಕ ಶ್ರೀಮಂತಿಕೆಯನ್ನು ಹೇಗೆ ಜನಪರವಾಗಿ ಬಳಸಿಕೊಳ್ಳಬೇಕೆಂದು ಸೂಚಿಸಿದ ಜುಂಜಪ್ಪನ ಕ್ರಮ ವಿಶೇಷವಾಗಿದೆ.
 ಸಾಣೇಕೆರೆ ಪುಟ್ಟಣ್ಣನೊಡನೆ ಜಗಳ
 ಸೇಳೂರು ದೊರೆಗಳಂತೆ ಹುಲ್ಲುಗಾವಲನ್ನು ಪಡೆದಿದ್ದ ಮೊತ್ತಬ್ಬ ವ್ಯಕ್ತಿ ಸಾಣೇಕೆರೆ ಪುಟ್ಟಣ್ಣ. ಈತ ಆತಿ ಶ್ರೀಮಂತ. ಮುತ್ತು-ರತ್ನ ವ್ಯಾಪಾರ ಮಾಡುವುದರ ಜೊತೆಗೆ ಮಾಟ, ಶೂನ್ಯ ಮಾಡುವುದನ್ನು ಕಲ್ತಿದ್ದ. ಈತನು ಕೂಡ ಮುತ್ತು-ರತ್ನದ ವ್ಯಾಪಾರಕ್ಕೆ ಅನುಕೂಲವಾಗುವ ಎತ್ತುಗಳಿಗೆಂದು ನೂರಾರು ಎಕರೆ ಹುಲ್ಲುಗಾವಲನ್ನು ಹೊಂದಿ, ಅದಕ್ಕೆ ಬಂಗಾರದ ಬೇಲಿ ಹಾಕಿಸಿದ್ದ. ಇದನ್ನು ಕೂಡ ಜುಂಜಪ್ಪ ಹಾಗೂ ಆತನ ಸೋದರರು ಭೇದಿಸಿ ತಮ್ಮ ಎತ್ತುಗಳನ್ನು ಮೇಯಿಸುತ್ತಾರೆ. ಸಾಣೇಕೆರೆ ಪುಟ್ಟಣ್ಣನಿಗೆ ಕೆಲವು ಅಹಂಕಾರಗಳಿದ್ದವು. ಅವು ಆಕ್ರಮಣಾಕಾರಿಯಾದವು. ಅವುಗಳಲ್ಲಿ.
  ಸುತ್ತ ಹದಿನಾರಳ್ಳಿ ಒಳಗಿರ್ತಕ್ಕಂತ ಗಂಡುಸ್ರುನನ್ನೆಲ್ಲ
ಮಾಟ ಶೂನ್ಯ ಮಾಡಿ ಸಾಯ್ಬಡುದು
ಅವುರೆಂಡ್ತಿರ್ನೆಲ್ಲ ತಂದು ಇಟ್ಕಂಡಿದ್ದೀಯ (ಜುಂಜಪ್ಪ ಪುಟ: 433)
 ಮಾಟ ಶೂನ್ಯ ಮಾಡಿಸೋದು ಹಾಗೂ ಪರರ ಹೆಂಡತಿಯರನ್ನು ತಾನು ಇಟ್ಟುಕೊಳ್ಳುವುದು ಇವೆರಡನ್ನು ಸಾಣೇಕೆರೆ ಪುಟ್ಟಣ್ಣನ ಹೆಂಡತಿಯರ ಮೂಲಕವೇ ಆತನ ಎಲ್ಲಾ ಮಾಟ-ಶೂನ್ಯದ ಪುಸ್ತಕಗಳನ್ನು ತರಿಸಿಕೊಂಡು ಅವುಗಳನ್ನು ಸುಟ್ಟು ಹಾಕುತ್ತಾನೆ. ವಿಶೇಷವೆಂದರೆ ಮಾಟದ ಪುಸ್ತಕದ ಜೊತೆಗಿದ್ದ ಬಾಲಗ್ರಹದ ಪುಸ್ತಕಗಳಂಥ ಆಕಾರಗಳನ್ನು ಸಂರಕ್ಷಿಸುತ್ತಾನೆ. ಹಾಗಾಗಿ ಇಲ್ಲಿ ಜುಂಜಪ್ಪ ಶ್ರೀಮಂತಿಕೆಯ ಕ್ರೂರ ಮುಖವನ್ನು ಕಳಚಿ, ಉಪಯುಕ್ತವೆನಿಸುವ ಮುಖವನ್ನು ಉಳಿಸಿದ್ದಾರೆ.
 ಮೇಲೆ ವಿವರಿಸಿದ ಎರಡು ಸಂಗತಿಗಳಲ್ಲಿ ಕಾಡುಗೊಲ್ಲರು ತಮ್ಮ ಪಶುಪಾಲನೆಗೆ ತೊಡಕಾಗಿದ್ದ ಆಥರ್ಿಕ ಪ್ರಭುತ್ವಗಳನ್ನು ಎದುರಿಸಿ ತಮ್ಮ ಅಸ್ತಿತ್ವಗಳನ್ನು ಸ್ಥಾಪಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ಆಥರ್ಿಕ ಪ್ರಭುತ್ವಗಳ ಅಹಂಗಳನ್ನು ನಾಶಮಾಡಿ, ಅವುಗಳ ಶಕ್ತಿ ಕುಂದುವಂತೆ ಮಾಡಿರುವುದು ಕಂಡುಬರುತ್ತದೆ. ಒಟ್ಟಾರೆ, ಕಾಡುಗೊಲ್ಲರು ಹುಲ್ಲುಗಾವಲು ಒಡೆಯರೊಡನೆ ಮಾಡಿದ ಸಂಘರ್ಷ ಒಂದು ಮಾದರಿಯದಾದರೆ, ನೇರವಾಗಿ ರಾಜತ್ವವನ್ನು ಮುಖಾ-ಮುಖಿಯಾದುದು ಮತ್ತೊಂದು ಮಾದರಿ ಅಂಥವುಗಳಲ್ಲಿ ಕಾವ್ಯ ವಿವರಿಸುವ ಮೂರು ಪ್ರಸಂಗಗಳನ್ನು ಇಲ್ಲಿ ವಿಶ್ಲೇಷಿಸಬಹುದಾಗಿದೆ.
ರಾಜತ್ವದ ಅವಾಹನೆ 
 ಮನುಷ್ಯ ನಿಜ ಜೀವನದಲ್ಲಿ ಸಾಧಿಸಲಾಗದ್ದನ್ನು ಕನಸಿನ ರೂಪದಲ್ಲಿ ಕಾಣುತ್ತಾನೆ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಇದು ಮನುಷ್ಯನ ಆಸೆಗೆ ಸಂಬಂಧಿಸಿದ ಸಂಗತಿ. ಆಸೆ ಎಂಬುದು ಪ್ರಜೆಗೇ ಆಗಲಿ ಪ್ರಭುವಿಗೇ ಆಗಲಿ ಬಿಟ್ಟಿದ್ದಲ್ಲ. ಹೀಗಾಗಿ ರಾಜತ್ವದಿಂದ ದೂರ ಉಳಿದಿರುವ ಕಾಡುಗೊಲ್ಲರು ತಮ್ಮ ಸಾಂಸ್ಕೃತಿಕ ನಾಯಕರನ್ನು ಅನೇಕ ಸಲ ರಾಜರನ್ನಾಗಿ ಪರಿಭಾವಿಸುತ್ತಾರೆ. ಕಾವ್ಯದಲ್ಲಿ ಇದಕ್ಕೆ ಹಲವಾರು ಪೂರಕ ಆಕರಗಳು ದೊರೆಯುತ್ತವೆ. ಈಗಾಗಲೇ ವಿವರಿಸಿದಂತೆ ಜುಂಜಪ್ಪಸೇಳೂರು ದೊರೆಗಳ ರಾಜ್ಯವನ್ನು ಏಳು ವರ್ಷ ಆಳುವುದು. ಕುಂಚಿಟಿಗ ಒಕ್ಕಲಿಗರ ಆಲೇಗೌಡನಿಂದ ಅರಮನೆ ಪಡೆಯುವುದು. ಇವೆಲ್ಲವುಗಳನ್ನು ರಾಜತ್ವದ ಆವಾಹನೆ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪರಿಭಾವಿಸಬೇಕಾಗುತ್ತದೆ.
 ಜುಂಜಪ್ಪನ ಕಾವ್ಯದಲ್ಲಿ ಹೇಳಿರುವ ಮತ್ತೊಂದು ಪ್ರಸಂಗ ಅವಾಹಗನೆಗೆ ಅತ್ಯುತ್ತಮ ಉದಾಹರಣೆ. ಜುಂಜಪ್ಪ ಮತ್ತು ತಾಯಿ ಚಿನ್ನಮ್ಮನ ನಡುವೆ ಸಣ್ಣ ಜಗಳವೊಂದು ನಡೆಯುತ್ತದೆ. ಈ ವಿವಾದವನ್ನು ಬಗೆಹರಿಸಲು ಜುಂಜಪ್ಪ ಐವತ್ತಾರು ದೇಶಗಳ ರಾಜರುಗಳನ್ನು ಆಹ್ವಾನಿಸುತ್ತಾನೆ. ಅದೆಂಥ ಆಹ್ವಾನವೆಂದರೆ
 ಐವತ್ತಾರು ದೇಶದ ದೊರಿಗಾಳು
 ದೇವಾನೆ ಪ್ರಜೆಗಳು ಬರಬಹುದು (ಜುಂಜಪ್ಪ, ಪುಟ: 222)
 ಇಲ್ಲಿ ಎಲ್ಲರೂ ಬರಲೇಬೇಕೆಂಬ ಕಡ್ಡಾಯವಾದ ಕರೆಯಿಲ್ಲ. ಬರಬಹುದೆಂಬ ಸ್ವಾತಂತ್ರ್ಯದ ಕರೆಗೆ ಮರು ಮಾತನಾಡದೆ ಐವತ್ತಾರು ದೇಶದ ಅರಸರು ಜುಂಜಪ್ಪನ ಮನೆಬಾಗಿಲಿಗೆ ಬರುತ್ತಾರೆ. ಹಾಗೆ ಬಂದ ಅರಸರಿಗೆ ವಿಶೇಷವಾದ ಮಾನ್ಯತೆಗಳಾಗಲಿ, ಆತಿಥ್ಯಗಳಾಗಲಿ ಇಲ್ಲ. ಎಲ್ಲರಂತೆ ಅವರೂ ಸಮಾನರು. ಗಮನಾರ್ಹ ಸಂಗತಿ ಎಂದರೆ ಅರಸರು ಮತ್ತು ಅವರ ರಾಜತ್ವ ಜುಂಜಪ್ಪನ ಮುಂದೆ ಗೌಣ. ಹೋಗುವ ಮೊದಲು ಅರಸರು
 ನಾವು ಧನ್ಯರಾದೆವು ತಂದೆ
 ಧನ್ಯರಾದೆವು ನಾವಂದು
 ಐವತ್ತಾರು ದೇಶದ ದೊರೆಗಳೇಳಿ
 ಅವ್ರರವ್ರ ಊರಿಗವ್ರುರೊರುಟಾರಯ್ಯಗಳಿಗೋ (ಜುಂಜಪ್ಪ ಪುಟ: 240)ಎಂಬ ಮಾತು ಆ ಸಂಗತಿಯನ್ನು ಶ್ರುತಪಡಿಸುತ್ತದೆ.
ಇಲ್ಲಿ ರಾಜರನ್ನು ಸಾಮಾನ್ಯರನ್ನಾಗಿರಿಸಿಕೊಂಡ ಜುಂಜಪ್ಪ ತಮ್ಮ ಮನೆಗೆ ಕರೆಸಿಕೊಂಡು ಅವರ ಮುಂದೆ ತಾನೂ ರಾಜನಂತೆ ವತರ್ಿಸುವುದು; ರಾಜರಾದರೂ ಸ್ವತಃ ತಾವೇ ಸಾಮಾನ್ಯ ಪ್ರಜೆಗಳಂತೆ ತಿಳಿಯುವುದು ಪುರಾಣಲೋಕದ ಆಚೆಗಿನ ಸತ್ಯಗಳನ್ನು ಹೇಳುತ್ತವೆ. ಆಳಿಸಿಕೊಳ್ಳುವ ಸಮುದಾಯಗಳು ಹೀಗೆ ತಮ್ಮ ನಾಯಕನನ್ನು ರಾಜನನ್ನಾಗಿಸಿ, ರಾಜರನ್ನು ಸಾಮಾನ್ಯರಾಗಿಸಿ ನೋಡುವ ಕ್ರಮ ಗಮನಾರ್ಹವಾಗಿದೆ. ಇದು ಆಳಿಸಿಕೊಂಡು ನಲುಗಿದ ಸಮುದಾಯಗಳು ತಮ್ಮ ಆತ್ಮ ವಿಶ್ವಾಸವನ್ನು ಮೇಲ್ಮುಖವಾಗಿ ತುಂಬಿಕೊಳ್ಳುವ ತಂತ್ರವಾಗಿದೆ. ಇಲ್ಲಿ ತಮಗೆ ಜೈಜ ಜೀವನದಲ್ಲಿ ಅಸಾಧ್ಯವಾದುದನ್ನು ತಮ್ಮ ಕಲ್ಪನಾ ಲೋಕದಲ್ಲಿ ಸಾಧ್ಯವಾಗಿಸಿಕೊಳ್ಳುತ್ತಾರೆ. ಇದು ಅಧಿಕಾರಸ್ಥರನ್ನು ಶ್ರೀಮಂತರನ್ನು ನೋಡಿ ಜನ ಹೊಟ್ಟೆಕಿಚ್ಚಿನಿಂದ ಗೈಯುವ ಕೆಲಸವಲ್ಲ. ಬದಲಾಗಿ ತಾವು ಹಾಗೆ ಸುಖವಾಗಿರಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತ, ತಮ್ಮ ಈ ಸ್ಥಿತಿಗೆ ಕಾರಣರಾದ ಆ ಜನರನ್ನು ಪ್ರತಿಭಟಿಸುವ ಮನೋಸ್ಥಿತಿಯನ್ನು ನಾವು ಇಲ್ಲಿ ಕಾಣಬಹುದಾಗಿದೆ. (ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪುಟ: 209, 1993)
ಒಟ್ಟಾರೆ ಈ ರೀತಿಯ ಆವಾಹನೆ ಕೂಡ ರಾಜತ್ವಕ್ಕೆ ಕನಸಿನ ರೂಪದಲ್ಲಿ ನೀಡಿದ ಪ್ರತಿಕ್ರಿಯೆ ಎನ್ನಬಹುದು. ರಾಜಪ್ರಭುತ್ವ ತನ್ನ ಅಧಿಕಾರ ಹಾಗೂ ವೈಭೋಗದ ಬದುಕನ್ನು ಮತ್ತೊಬ್ಬರಿಗೆ ಅಥವಾ ಮತ್ತೊಂದು ಸಮುದಾಯಕ್ಕೆ ಬಿಟ್ಟುಕೊಡಲು ಬಯಸುವುದಿಲ್ಲ. ಬದಲಿಗೆ ಅದನ್ನು ರಕ್ಷಿಸಿಕೊಳ್ಳುವುದರಲ್ಲೇ ತನ್ನ ಶಕ್ತಿಯನ್ನು ವಿನಿಯೋಗಿಸುತ್ತದೆ. ಇದೇ ಸಂದರ್ಭಕ್ಕೆ ಆಳಿಸಿಕೊಳ್ಳುವ ಸಮುದಾಯಗಳು ತಾವೂ ಕೂಡ ಅಧಿಕಾರದ ನೆಲೆಗೆ ಹೋಗಬೇಕೆಂದು ಬಯಸುತ್ತವೆ. ವಾಸ್ತವ ಜೀವನದಲ್ಲಿ ಇದು ತತ್ಕ್ಷಣಕ್ಕೆ ಆಗಬಹುದಾದ ಕಾರ್ಯವಲ್ಲ. ನಿರಂತರ ಹೋರಾಟ ಪ್ರತಿಭಟನೆ ಬೇಕು. ಜೊತೆಗೆ ಅದಮ್ಯವಾದ ಆತ್ಮವಿಶ್ವಾಸ, ಜನಬೆಂಬಲ ಇವೆಲ್ಲವೂ ಬೇಕೆನಿಸುತ್ತದೆ. ಇಂಥ ಎಲ್ಲಾ ಸವಾಲುಗಳ ನಡುವೆ ನಿಂತ ಕಾಡುಗೊಲ್ಲರ ಸಮುದಾಯ ತನ್ನಲ್ಲಿ ರಾಜತ್ವವನ್ನು ಆವಾಹಿಸಿಕೊಂಡಿರುವುದು ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಯಾಗಿ ತೋರುತ್ತದೆ.
ಹೀಗೆ ರಾಜತ್ವವನ್ನು ಮಾನಸಿಕವಾಗಿ ಮುಖಾಮುಖಿಯಾಗುವುದರ ಜೊತೆಗೆ ನೇರ ಮುಖಾಮುಖಿಯಾಗಿರುವುದೂ ಇದೆ. ಜುಂಜಪ್ಪನ ಕಾವ್ಯದಲ್ಲಿ ಇಂಥ ಅನೇಕ ಪ್ರಸಂಗಗಳಿವೆ. ಈ ದೃಷ್ಟಿಯಿಂದ ನೋಡುವುದಾದರೆ ಕಾಡುಗೊಲ್ಲರು ಹೆಚ್ಚಾಗಿ ಹೋರಾಟ ನಡೆಸಿರುವುದು ಬೇಡ ಮತ್ತು ಕುರುಬ ಸಮುದಾಯಗಳೊಡನೆ. ಅದರಲ್ಲೂ ಬೇಡರ ಕೆಲವು ಗುಂಪುಗಳು ಆಗ ಸಾಮಂತರಸರಾಗಿ ಪಾಳೇಗಾರರೆನಿಸಿಕೊಂಡಿದ್ದವು. ಇಂಥ ಪಾಳೇಗಾರರೊಡನೆ ಗೊಲ್ಲ ಸಮುದಾಯ ಸಾಕಷ್ಟು ಕದನಗಳನ್ನು ನಡೆಸಿರುವುದಾಗಿ ತಿಳಿದುಬರುತ್ತದೆ. ಇಂಥ ಸಂಗತಿಗಳಲ್ಲಿ ಒಂದೆರಡನ್ನು ಇಲ್ಲಿ ಪ್ರಸ್ತಾಪಿಸಬಹುದು.
ಹರತಿ ಪಾಳೇಗಾರರು ಗಿ/ಖ ಗೊಲ್ಲರು
ಜುಂಜಪ್ಪ ಕಾವ್ಯದ ಆರಂಭಕ್ಕೆ ಒಂದು ಕುತೂಹಲಕರ ಸಂಗತಿ ಎದುರಾಗುತ್ತದೆ. ಅದ್ಯಾವುದೆಂದರೆ: ಗೊಲ್ಲರಲ್ಲಿ ಚಿತ್ತಮುತ್ತಿಗೊಲ್ಲರು, ಮಾರ್ನೋರು ಗೊಲ್ಲರು ಎಂಬ ಎರಡು ಗುಂಪುಗಳಿವೆ. ಅವು ಮೂಲದಲ್ಲಿ ಒಂದೇ ಗುಂಪಾಗಿದ್ದು ನಂತರ ಎರಡಾಗಿ ಒಡೆಯುತ್ತವೆ. ಇದಕ್ಕೆ ಕಾರಣವೆಂದರೆ, ಮಹಾರಾಜನ ಹತ್ತಿರ ಬಾಳೆತ್ತಿನ ದಂಡಕ್ಕಾಗಿ ಅಣ್ಣನಾಗಿದ್ದವನು ತನ್ನ ಮಡದಿಯ ತಾಳಿ ಬಿಚ್ಚಿಕೊಟ್ಟ, ತಮ್ಮ ಆಗಿದ್ದವನು ಬಿಚ್ಚಿಕೊಡಲಿಲ್ಲ. ಹೀಗೆ ಮಾತಿಗೆ ತಪ್ಪಿದೋನೆಂದು ತಮ್ಮನನ್ನು ಗುಂಪಿನಿಂದ ಹೊರ ತಳ್ಳಿದರು. ಅವನ ಗುಂಪೇ ಮುಂದೆ 'ಮಾರ್ನೋರು ಗೊಲ್ಲ'ರೆಂದು ಹೆಸರಾಯಿತು.
ಮೇಲಿನ ವಿವರಣೆಯನ್ನಷ್ಟೇ ಕಾವ್ಯ ನೀಡುತ್ತದೆ. ಆದರೆ ಇಲ್ಲಿ ಕೆಲವು ಅಂಶಗಳು ನಿಖರವಾಗಿ ತಿಳಿಯುವುದಿಲ್ಲ. ಅವುಗಳಲ್ಲಿ ಬಾಳೆತ್ತಿನ ದಂಡ ಎಂದರೆ ಏನು? ಆ ಮಹಾರಾಜ ಯಾರು? ಆತ ಯಾಕೆ ಗೊಲ್ಲರ ಮೇಲೆ ದಂಡವಿಧಿಸಿದ ಈ ಮೊದಲಾದ ಸಂಗತಿಗಳು ಇನ್ನಷ್ಟು ವಿವರಣೆಗಳನ್ನು ಬೇಡುತ್ತವೆ. ಗೊಲ್ಲರ ಕುರಿತು ದೀರ್ಘ ಅಧ್ಯಯನ ಮಾಡಿರುವ ಮೀರಾಸಾಬಿಹಳ್ಳಿ ಶಿವಣ್ಣ ಅವರು ಈ ಪ್ರಸಂಗದ ಹಿನ್ನೆಲೆಗಳನ್ನು ತಿಳಿಸುತ್ತಾರೆ. ಇಲ್ಲಿ ಬರುವ ಪಾಳೇಗಾರ ಹರತಿ ಕೋಟೆಯ ಪಾಳೇಗಾರ. ಈ ಪಾಳೇಗಾರನ ಮಗಳು ಕರಿಯೋಬಿ. ಇವಳನ್ನು ಒಬ್ಬ ಕಾಡುಗೊಲ್ಲ ಒಗಟು ಬಿಡಿಸುವ ಮೂಲಕ ವಿವಾಹವಾಗುತ್ತಾನೆ. ಈ ಕಾಡುಗೊಲ್ಲನ ಹೆಸರು ಬುಳ್ಳಣ್ಣ. ಮೊದಲೇ ಇಬ್ಬರ ಹೆಂಡಿರ ಗಂಡ. ಆದರೂ ಕರಿಯೋಬಿ, ಬುಳ್ಳಣ್ಣನ ಮೊದಲನೇ ಹೆಂಡತಿ ನಾಗಮ್ಮನ ಮಗ ಚಿತ್ತಮುತ್ತಿಯನ್ನು ದತ್ತು ತೆಗೆದುಕೊಂಡು ತನ್ನ ಬೇಡ ಜಾತಿಯ ಹೆಣ್ಣಿನೊಡನೆ ವಿವಾಹ ಮಾಡುತ್ತಾಳೆ. ನಂತರ ಒಂದು ದಿನ ಮುತ್ತಿನ ಶೆಟ್ಟಿ ಒಂದು ವಸ್ತ್ರ ಮಾರಲು ಬಂದಾಗ ಅದು ಭಾರಿ ಬೆಲೆಯಾದ್ದರಿಂದ ಕರಿಯೋಬಿಗೆ ಅದನ್ನು ಕೊಳ್ಳಲಾಗಲಿಲ್ಲ. ಅದಕ್ಕಾಗಿ ಸೊಸೆಯಂದಿರು ಹಾಸ್ಯಮಾಡಿ ನಕ್ಕರು. ಇದರಿಂದ ಕರಿಯೋಬಿ ಹಾಗೂ ಆಕೆಯ ಮಕ್ಕಳು ಸೇರಿ ಆ ವಸ್ತ್ರವನ್ನು ಕದ್ದರು. ಇದಕ್ಕೆ ಪಾಳೇಗಾರ ಪಂಚಾಯ್ತಿ ಕರೆದು ದಂಡವಿಧಿಸಿದ ಆಗ ಕರಿಯೋಬಿ ತನ್ನ ಎಲ್ಲಾ ಸಂಪತ್ತು ಸುರಿದರೂ ದಂಡಕ್ಕೆ ಸಾಲದಾಯಿತು. ಆಗ ಚಿತ್ತಮುತ್ತಿ ಸೊಸೇರು ತಮ್ಮ ಮಾಂಗಲ್ಯ ತೆಗೆದುಕೊಟ್ಟು ದಂಡ ಕಟ್ಟಿದರು. ತಮ್ಮ ಮಾರುಮುತ್ತಿ ಮಾತ್ರ ಇದರಲ್ಲಿ ಭಾಗಿಯಾಗಲಿಲ್ಲ. ಹಾಗಾಗಿ ಮಾರುಮುತ್ತಿಯನ್ನು ಸಮುದಾಯದಿಂದ ಹೊರತಳ್ಳಿ ಮಾರ್ನಾರು ಗೊಲ್ಲರು ಎಂದು ಕರೆದರು. ಚಿತ್ತಮುತ್ತಿ ಕುಲದವರು ಅಂದು ತಾಳಿ ಬಿಚ್ಚಿಕೊಟ್ಟಿದ್ದರ ಪರಿಣಾಮ ಇಂದಿಗೂ ತಾಳಿಕಟ್ಟುವುದಿಲ್ಲ.(ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, ಪುಟ: 14-15, 1999) ಈ ಸಂಗತಿಯೂ ಸಹ ಕಾವ್ಯ ಎವರಿಸುವ ಬಾಳೆತ್ತಿನ ದಂಡದ ಬಗ್ಗೆ ಸರಿಯಾದ ವಿವರಣೆ ನೀಡುವುದಿಲ್ಲ. ಆದರೂ ಮಹಾರಾಜ ಹರತಿ ಪಾಳೇಗಾರನೆಂದು ಸೂಚಿಸುವುದು ಇಲ್ಲಿ ಮುಖ್ಯ. ಅದರಂತೆ, ಮಾರ್ನೋರು ಗೊಲ್ಲರ ಸಂತತಿಯೂ ಮಹಾರಾಜನ ಹೇರಿಕೆ ಕಾನೂನನ್ನು ನಿರಾಕರಿಸಿರುವುದು ಗಮನಾರ್ಹ ಸಂಗತಿ. ತನ್ನ ಹೆಂಡತಿಯ ತಾಳಿಯನ್ನೇ ಬಿಚ್ಚಿಕೊಡುವಂತೆ ಹೇಳಿದ ರಾಜನ ಕಾನೂನನ್ನು ಗೊಲ್ಲರ ಸಮುದಾಯ ಧೈರ್ಯವಾಗಿ ನಿರಾಕರಿಸಿ, ಕೊನೆಗೆ ತನ್ನ ಸಮುದಾಯದಿಂದಲೇ ದೂರವಾಗಿದ್ದು ಮಾತ್ರ ಇಲ್ಲಿ ಮಹತ್ವಪೂರ್ಣವಾಗಿ ಕಾಣುತ್ತದೆ. ಒಟ್ಟಾರೆ, ರಾಜನ ಕಾನೂನನ್ನು ನಿರಾಕರಿಸಿದ್ದು, ತಳಸಮುದಾಯಗಳ ರಾಜಕೀಯ ಪ್ರತಿರೋಧವನ್ನು ತೋರಿಸುತ್ತದೆ.
ಶಿರಾದ ಪಾಳೇಗಾರರು ಗಿ/ಖ ಜುಂಜಪ್ಪ
ಶಿರಾದ ಪಾಳೇಗಾರ ರಂಗಪ್ಪ ಎಂಬಾತನೊಡನೆ ಜುಂಜಪ್ಪ ನೇರ ಮುಖಾಮುಖ ನಡೆಸುತ್ತಾನೆ. ಇದಕ್ಕೆ ಕಾರಣ ಅತ್ಯಂತ ಕುತೂಹಲಕರವಾಗಿದ್ದು, ಅದು ಹೀಗಿದೆ: ಹೊನ್ನಟ್ಟಿ ಹಾಲೇಗೌಡನ ಹೆಂಡತಿ ದೊಡ್ಡಕ್ಕಜ್ಜಿಯಿಂದ ಅವರೇಕಾಯಿ ಬೇಡಿ, ಆಕೆ ಕೊಡಲು ಒಪ್ಪದಿದ್ದಾಗ ಮಿಡಿನಾಗರ ಬಿಟ್ಟು ಆಕೆಯನ್ನು ಸಾಯಿಸುತ್ತಾನೆ. ದೊಡ್ಡಕ್ಕಜ್ಜಿಯ ಈ ಸಾವು ಶಿರಾದ ಪಾಳೇಗಾರ ರಂಗಪ್ಪನಿಗೆ ಕೋಪ ತರಿಸುತ್ತದೆ. ಏಕೆಂದರೆ ರಂಗಪ್ಪ ಹಾಗೂ ದೊಡ್ಡಕ್ಕಜ್ಜಿಯ ನಡುವೆ ಲೈಂಗಿಕ ಸಂಬಂಧವುಂಟು. ಇದರಿಂದಾಗಿ ರಂಗಪ್ಪ ಜುಂಜಪ್ಪನ ಮೇಲೆ ಯುದ್ಧ ಸಾರುತ್ತಾನೆ.
ಎಲವ ಕಾಡುಗೊಲ್ಲ ಜುಂಜಪ್ಪ
ನಮ್ಮ ದೊಡ್ಡಿನ ಹಾವು ಬುಟ್ಟಿ ಸಾಯಿಸಿದ್ದೀಯಾ
ಸರಿ ನಿನ್ನ ಈ ತುರುಕುರ್ನೂ ನಾರಿಷ್ಟರ್ನು
ಎಲ್ಲಾ ದಂಡು ಕಟ್ಕಂಡು ಬಂದು
ನಿನ್ನ ಮೇಲೆ ಯುದ್ಧ ಮಾಡಿ
ನಿಮ್ಮ ಮೂರು ಜನ ಅಣ್ಣ ತಮ್ಮಗೋಳು ತಲೆಗೆ ಚಂಡಾಡಿಸಿ
ನಿನ್ನ ಸಂಪತ್ತನ್ನು
ನಾನು ನನ್ನೆಂಡ್ತಿಯರು ನೀರಡಿ ಕಂಬದ ಬಚ್ಚಲ ಕಲ್ಲಡಿಕೆ
ಕಡ್ಕಂಡು ತಿಂಬರಿಗೆ
ಗೇಯ್ಕಂಡುಂಬರಿಗೆ
ಕರ್ಕಂಡು ಕುಡಿಯೋರಿಗೆ
ಬಡುವುರಿಗೆ ಬಗ್ಗರಿಗೆಲ್ಲ
ದಾನದತ್ತು ಕೊಡಸ್ತಿನಿ ಕಣಲೇ ಕಾಡುಗೊಲ್ಲ
ಅಂದ ಪಾಳೇಗಾರ (ಜುಂಜಪ್ಪ, ಪುಟ: 634)
ಪಾಳೇಗಾರ ರಂಗಪ್ಪನ ಈ ಮಾತುಗಳು ಸಾಮಾಜಿಕ ಬದ್ಧತೆಯಿಂದ ಕೂಡಿವೆ ಎನಿಸಿದರೂ ಜುಂಜಪ್ಪನ ನೆಲೆಯಿಂದ ನೋಡಿದರೆ ಇವುಗಳಿಗೆ ಮಾನ್ಯತೆ ಸಿಗುವುದಿಲ್ಲ. ಜೊತೆಗೆ ರಂಗಪ್ಪ ಯುದ್ಧಸಾರಿರುವ ಆಶಯವೇ ಆತನ ಅಂಥ ಸಾಮಾಜಿಕ ಬದ್ಧತೆಯನ್ನು ನಿರಾಕರಿಸುತ್ತದೆ.
ವಿಶೇಷವೆಂದರೆ, ಜುಂಜಪ್ಪನ ಮೇಲೆ ಯುದ್ಧಕ್ಕೆ ಬಂದ ನಾಡಿನ ಜನ ಮನಃಪೂರ್ವಕವಾಗಿ ಬಂದಿರದೆ ಜುಂಜಪ್ಪನ ಸಂಪತ್ತಿನ ಆಸೆಗೆ ಬಂದಿರುತ್ತಾರೆ. ಇವರಿಗೆಲ್ಲ ಜುಂಜಪ್ಪನ ಸಂಪತ್ತು ಸಿಗುವುದಿಲ್ಲ. ಬದಲಿಗೆ ಜುಂಜಪ್ಪನ ಶಿಕ್ಷೆ ಸಿಗುತ್ತದೆ. ಆಗ ಕಾಲಿಗೆ ಅಡ್ಡಬಿದ್ದ ವ್ಯಕ್ತಿಗಳಿಗೆ ಜುಂಜಪ್ಪ ಹೇಳುವ ಮಾತುಗಳು ಅತ್ಯಂತ ಮಾಮರ್ಿಕವಾಗಿವೆ. ಅಂಥವುಗಳಲ್ಲಿ ವಡ್ರ ಹನುಮನಿಗೆ ಹೇಳಿದ ಮಾತೊಂದನ್ನು ಗಮನಿಸಬಹುದು. ವಡ್ರ ಹನುಮ ಪಾಳೇಗಾರನ ಆದೇಶದಂತೆ ಯುದ್ಧಕ್ಕೆ ಡಂಗೂರ ಸಾರಿದ್ದಾನೆ. ಅದಕ್ಕಾಗಿ ಜುಂಜಪ್ಪ ವಡ್ರ ಹನುಮನ ಇಡೀ ಕುಟುಂಬವನ್ನೇ ಸಾವಿನ ಮಡಿಲಿಗೆ ದೂಡಿದ್ದಾನೆ. ಇದರಿಂದ ತಲ್ಲಣಗೊಂಡ ಹನುಮ ಜುಂಜಪ್ಪನ ಪಾದಕ್ಕೆ ಬಿದ್ದಿದ್ದಾನೆ. ಅದಕ್ಕೆ ಜುಂಜಪ್ಪನ ಪ್ರಕ್ರಿಯೆ ಹೀಗಿದೆ:
ನನಗೆ ಬಂದು ಅಡ್ಡಬಿದ್ರೆ ನಿನಗೇನೋ ಬರತೈತೆ
ಹೋಗೋ ನಿನ್ನ ಪಾಳ್ಯಗಾರ್ಗೆ ಹಾಸ್ಯಾಸಿ ಅಡ್ಡಬಿದ್ರೆ
ನಿನ್ನೆಂಡ್ತಿ ಮಕ್ಕಳ ಎಬ್ಬಿಸಿಕೊಡ್ತಾನೆ ಅಂದ ಜುಂಜಪ್ಪ (ಜುಂಜಪ್ಪ, ಪುಟ: 637)
ಪಾಳೇಗಾರನಿಗೆ ಸಾಧ್ಯವಾಗದೇ ಇರುವ ಕೆಲಸ ತನ್ನಿಂದ ಸಾಧ್ಯ ಎಂಬ ಧ್ವನಿ ಜುಂಜಪ್ಪನಲ್ಲಿ ಹೊರಡುತ್ತದೆ. ಅಂದರೆ, ರಾಜನ ಶಕ್ತಿಗೆ ಸವಾಲಾಗಿ ನಿಲ್ಲಬಲ್ಲ ಶಕ್ತಿ ಜುಂಜಪ್ಪನಿಗಿದೆ. ಹೀಗೆ ಹೇಳುವಲ್ಲಿ ಪ್ರಭುತ್ವದ ನೆಲೆಗಳನ್ನೇ ಛಿದ್ರಗೊಳಿಸುವ ಬಯಕೆಯಿದೆ. ಇಂಥ ಶಕ್ತಿಯಿಂದಾಗಿಯೇ ಜುಂಜಪ್ಪ ತನ್ನ ವಿರುದ್ಧ ಯುದ್ಧಕ್ಕೆ ಬಂದ ಜನರೆಲ್ಲರನ್ನೂ ಸರಾಗವಾಗಿ ಶರಣಾಗತರನ್ನಾಗಿಸುತ್ತಾನೆ. ರಾಜನೂ ಕೂಡ ಸ್ವತಃ ತಾನೆ ಶರಣಾಗುತ್ತಾನೆ. ಶರಣಾಗುವ ಕ್ರಮಗಳನ್ನು ಗಮನಿಸುವುದಾದರೆ, ವಡ್ರ ಹನುಮ ಪಾಳೇಗಾರನ ಮಾತು ಕೇಳಿ ಡಂಗೂರ ಹಾಕಿ ನಿನ್ನ ಮೇಲೆ ದೈರ ಕಟ್ಟಿಕೊಂಡಿದ್ದು ನನ್ನ ಸರ್ವಂತ ತಪ್ಪು ಕಣಪ್ಪ ಎಂದರೆ, ಶಿರೇದ ಪಾಳೇಗಾರನ ತಾಯಿ ಜುಂಜಪ್ಪ ಅಂದ್ರೇನು ನೀನು ಅಂದ್ರೇನು ಬೆಂಕಿಗೆ ನೊಣ ಮುಸ್ರದುಂಟೇನೋ ಮಗನೆ ಎಂದು ಪಾಳೇಗಾರನನ್ನು ಯುದ್ಧದ ಆರಂಭಕ್ಕೆ ಎಚ್ಚರಿಸುತ್ತಾಳೆ. ಮುಸಲ್ಮಾನರೆಲ್ಲ ಅರೆ ಅಲ್ಲ, ಮಿಸ್ಮಿಲ್ಲರಂಗಣ್ಣ ನೀವು ದುಡ್ಡುಕೊಡ್ತೀವಂದ್ರು ನಾವು ಬರೋದಿಲ್ಲ, ಜುಂಜಪ್ಪನ ಮೇಲೆ ಯುದ್ಧಕ್ಕೆ ಎನ್ನುತ್ತಾರೆ. ಹಾಗೆಯೇ ಉಳಿದ ದಂಡೆಲ್ಲ ಜುಂಜಪ್ಪನ ಹೊಡೆತಕ್ಕೆ ತಾಳಲಾರದೆ ನಮ್ಮ ಹೆಂಡ್ರು ಮಕ್ಕಳ ಮಕ ನೋಡಿದ್ರೆ ಸಾಕಪ್ಪ ಇದೇನು ಗ್ರಾಚಾರ ಅಂತ ಓಡೋಗ್ತಾರೆ. ಇಷ್ಟೆಲ್ಲ ಆದ ಮೇಲೆ ಸ್ವತಃ ರಾಜನೆ ಸ್ವಾಮಿ ಸರ್ವಂತ ತಪ್ಪು ಕಣಪ್ಪ ನಾನು ವಂಶುಕೊಬ್ಬನೆ ಇರದು ಮುಚ್ಚುಳದ ನಾಯಕರು ಸ್ವಾಮಿ ನಾವು. ನಿನ್ನೆಡೆ ಮ್ಯಾಗಳ 'ಹೆಣೆಂಡೆ ಕೂಳು' ತಿಂತಿನಪ್ಪ ನಾನು. ನಿನಗೆ ಹಳೇ ಮಗನಾಗಿರ್ತೀನಿ ಸ್ವಾಮಿ ಬಿಟ್ಟುಬಿಡ್ರಿ ಎನ್ನುತ್ತಾನೆ.
ಮೇಲಿನ ಘಟನೆಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪ್ರಭುತ್ವದ ನೆಲೆಯೇ ಗುರುತಿಸುವಾಗ ಹಾಗೆ ಜುಂಜಪ್ಪ ಬೆಂಕಿ. ಬೆಂಕಿಗೆ ಯಾವುದಡ್ಡಿ? ಪಾಳೇಗಾರ ಹಾಗೂ ಅವನ ದಂಡು ದಳವೆಲ್ಲ ಬೆಂಕಿಗೆ ಮುತ್ತಿಗೆ ಹಾಕಿದ ನೊಣಗಳಂತಾದವು. ಬೆಂಕಿ ಮತ್ತು ನೊಣ ಈ ಎರಡು ಮಾಮರ್ಿಕವಾದ ಪ್ರತಿಮೆಗಳು. ಈ ಪ್ರತಿಮೆಗಳನ್ನು ಸೃಷ್ಟಿಸಿದ ಮನಸ್ಸುಗಳಲ್ಲಿ ಪ್ರಭುತ್ವದ 'ಪಾವಿತ್ರ್ಯನಾಶ' ಮಾಡುವ ಆಶಯವಿದೆ. ಅತ್ಯಂತ ಶಕ್ತಿವಂತರಾದ ಅರಸರನ್ನೇ ನೊಣಗಳಂತೆ ಕಾಣುವ ಈ ದೃಷ್ಟಿಯಲ್ಲಿ ನೊಂದ ಸಮುದಾಯಗಳ ಆಕ್ರೋಶವಿದೆ. ಒಟ್ಟಾರೆ ಪ್ರಭುತ್ವದ ಪಾವಿತ್ರ್ಯ ನಾಶ ಹಾಗೂ ತಮ್ಮನ್ನು ಮೌಲ್ಯೀಕರಣ ಮಾಡಿಕೊಳ್ಳುವ ಹಂಬಲ ಇಲ್ಲಿ ಎದ್ದು ಕಾಣುತ್ತದೆ.
ಜುಂಜಪ್ಪ ಹಾಗೂ ಆತನ ಸಮುದಾಯ ಇಂಥ ಅನೇಕ ಪಾಳೇಗಾರರೊಡನೆ ಬೇರೆ ಬೇರೆ ಕಾರಣಗಳಿಗಾಗಿ ಮುಖಾಮುಖಿಯಾಗಿದ್ದಾರೆ. ಇಂಥ ಮುಖಾಮುಖಿಯ ಜೊತೆ ಮತ್ತೊಂದು ಸ್ವರೂಪದ ಎದುರುಗೊಳ್ಳುವಿಕೆ ಸಂಘರ್ಷ ನಡೆಸಿರುವುದು ಜುಂಜಪ್ಪನ ಸಂಪ್ರದಾಯದಲ್ಲಿ ಕಂಡಬರುತ್ತದೆ. ಅದು ಧರ್ಮದ ವಿಚಾರಕ್ಕೆ ಸಂಬಂಧಿಸಿದ್ದು. ಜುಂಜಪ್ಪ ಹಾಗೂ ಕಾಡುಗೊಲ್ಲರು  ವಿವಿಧ ಧರ್ಮಗಳ ಜೊತೆಗೆ ಹೇಗೆ ಸಂವಾದ ಮಾಡಿದ್ದಾರೆ, ಸಂಘರ್ಷ ನಡೆಸಿದ್ದಾರೆ ಎಂಬುದನ್ನು ಈ ಹಿಂದಿನ 'ಪುರಾಣ'ದ ಅಧ್ಯಾಯದಲ್ಲಿ ವಿವರಿಸಲಾಗಿದೆ. ಆದರೂ ಅಲ್ಲಿ ವಿವರಿಸದೇ ಇರುವ ಕೆಲವು ಘಟನೆಗಳನ್ನು ಇಲ್ಲಿ ವಿವರಿಸಿಕೊಳ್ಳುವುದರ ಮೂಲಕ ಪ್ರಭುತ್ವದೊಡನೆ ಕಾಡುಗೊಲ್ಲರು ನಡೆಸಿರುವ ಧರ್ಮ ಸಂಬಂಧಿ ಸಂಘರ್ಷದ ಸ್ವರೂಪಗಳನ್ನು ಅರಿಯಬಹುದಾಗಿದೆ.
 ಬ್ರಾಹ್ಮಣರೊಡನೆ ಸಂಘರ್ಷ
ಗೊಲ್ಲರ ಮೂಲಪುರುಷರಾದ ಕಾಟಮುಲಿಂಗ-ಚಿತ್ತೂರಲಿಂಗರು ಶಿವನ ಭುಜದ ಬೆವರಿಂದ ಉದ್ಬವವಾಗಿ, ಪಂಚಕಳಸಗಳಿರುವ ಬಂಗಾರದ ರಥದಲ್ಲಿ ಭೂಲೋಕಕ್ಕೆ ಬಂದು, ಬ್ರಾಹ್ಮಣರ ಹೊಲದಲ್ಲಿ ರಥವನ್ನು ಇಳಿಸುತ್ತಾರೆ. ಆ ರಥವನ್ನು ಬ್ರಾಹ್ಮಣರ ಬೊಮ್ಮಯ್ಯಲಿಂಗ ನೋಡಿ ಹೀಗೆ ಹೇಳುತ್ತಾನೆ:
ನಮಗೆ ಬ್ರಾಹ್ಮಣರಿಗೆ ಈ ರಥ
ಸರಿ ಈ ಪಂಚೈದು ಕಳಸಗಳಿದ್ರೆ
ಪೂಜೆ ಮಾಡಿಕೊಂಬದಕ್ಕೆ ಬಹಳ ಚನ್ನಾಗೈತೆ
ಈ ಕಾಡುಗೊಲ್ಲರಿಗೆ ಇಂಥ ರಥ ಯಾಕೆ? (ಜುಂಜಪ್ಪ ಪುಟ : 13)
ಬೊಮ್ಮಲಿಂಗನ ಈ ಮಾತುಗಳು ಬ್ರಾಹ್ಮಣರು ಪರಂಪರಾಗತವಾಗಿ ಧಾರ್ಮಿಕ ಹಕ್ಕುದಾರಿಕೆ ಅನುಭವಿಸುತ್ತಾ ಬಂದಿರುವುದನ್ನು ಹಾಗೂ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡಲಾರದ ಮನಸ್ಥಿತಿಯನ್ನು ಬಿಂಬಿಸುತ್ತವೆ. ಬೊಮ್ಮಲಿಂಗನ ಈ ಯೋಚನೆ ಇನ್ನಷ್ಟು ವಿಸ್ತರಿಸಿಕೊಂಡು ಆ ರತವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತದೆ. ಅದರ ಪರಿಣಾಮ ಕವಡೆ ಆಟ ಆಡಬೇಕೆಂದು ಗೊಲ್ಲರನ್ನು ವಿನಂತಿಸುತ್ತಾನೆ. ಗೊಲ್ಲರಾದರೂ ನಮಗೆ ಕವಡೆ ಆಡಲು ಬರುವುದಿಲ್ಲವೆಂದು ನಿರಾಕರಿಸುತ್ತಾರೆ. ಬೊಮ್ಮಲಿಂಗ ಮಾತ್ರ ಬಿಡಲೊಲ್ಲ. ಕೊನೆಗೆ ಕವಡೆ ಆಡಲು ಒಪ್ಪಿಗೆಯಾಗುತ್ತದೆ. ಆಗ ಕಾಟಮುಲಿಂಗ-ಚಿತ್ತೂರಲಿಂಗ ಅವರು ಹೇಳುವ ಮಾತುಗಳು ಬ್ರಾಹ್ಮಣರ ಅಹಂಕಾರವನ್ನು ಕೆದಕುತ್ತವೆ. ಕಾಡುಗೊಲ್ಲರಾದ ನಾವು ಅತ್ಯಂತ ಮಡಿವಂತರಾಗಿದ್ದು, ನೀವು ನಮ್ಮಷ್ಟು ಮಡಿವಂತರಲ್ಲ, ನೀವು ಸಿದ್ಧಿಯಿಲ್ಲದೆ ನಮ್ಮ ಹತ್ತಿರ ಬಂದರೆ ಸೂತಕವಾಗುತ್ತೆ ಎನ್ನುತ್ತಾರೆ.
ಬಾರಯ್ಯ ಆಡೋಣ
ತಣ್ಣೀರು ತಡಿಬಟ್ಟೆ ಒಳಗೆ
ಹುಲ್ಕಚ್ಚಿ ಕಲ್ಕಚ್ಚಿ
ಗೋವು ಬೇವಾಕ್ಕೊಂಡು
ಹತ್ತುರುಕೆ ಬಂದು ಕುಂತಕಳಯ್ಯ ಬ್ರಾಹ್ಮಣ (ಜುಂಜಪ್ಪ ಪುಟ: 16)
ವಿಶೇಷವೆಂದರೆ, ಬ್ರಾಹ್ಮಣ ಬೊಮ್ಮಲಿಂಗ ಅವರು ಹೇಳಿದಂತೆಯೇ ಮಾಡುತ್ತಾನೆ. ಆಟದಲ್ಲಿ ಗೊಲ್ಲರು 'ಬಂಗಾರದ ರಥವನ್ನು' ಬ್ರಾಹ್ಮಣ ಬೊಮ್ಮಲಿಂಗ 'ತನ್ನ ತಂಗಿ' ಗಂಗಿಮಾಳವ್ವನನ್ನು ಪಣಕ್ಕಿಡುತ್ತಾರೆ. ಇಲ್ಲಿ ಪಣಕ್ಕಿಟ್ಟಿರುವ ವ್ಯಕ್ತಿ ಮತ್ತು ವಸ್ತುಗಳು ಕೇವಲ ತಾಂತ್ರಿಕವಾದಂತಹವು ಎನಿಸುವುದಿಲ್ಲ. ಇವು ಎರಡು ಸಮುದಾಯಗಳ ಮನದಾಳದ ನೋವು-ನಲಿವು, ಕನಸು-ಕನವರಿಕೆಗಳೆಂದು ಸ್ಪಷ್ಟವಾಗುತ್ತವೆ. ಬ್ರಾಹ್ಮಣರು, ಪೌರೋಹಿತ್ಯದ ಹಕ್ಕುದಾರಿಕೆಯನ್ನು ಗೊಲ್ಲರಿಗೆ ಬಿಟ್ಟುಕೊಡಬಾರದೆಂಬ ಯೋಚನೆಯಲ್ಲಿದ್ದರೆ; ಗೊಲ್ಲರು, ತಮಗೆ ದೈವಿಕವಾಗಿ ದಕ್ಕಿದ ಧಾರ್ಮಿಕ ಶಕ್ತಿಯ ಪರಿಕರಗಳನ್ನು ತಮ್ಮ ವಶದಲ್ಲಿಯೇ ಇರಿಸಿಕೊಳ್ಳಲು ಬಯಸಿದ್ದಾರೆ. ಜೊತೆಗೆ ಪರಂಪರಾಗತವಾಗಿ ಧಾರ್ಮಿಕ ಅಧಿಕಾರ ನಡೆಸಿದ ಸಮೂಹವೊಂದರ 'ಪಾವಿತ್ರ್ಯನಾಶ' ಮಾಡಿ, ಅದಕ್ಕಿದ್ದ ಶಕ್ತಿಯನ್ನು ತಾವು ಪಡೆಯಬೇಕೆಂಬ ಹಂಬಲಗಳು ಇಲ್ಲಿ ಕಂಡುಬರುತ್ತವೆ. ಅದಕ್ಕಾಗಿಯೇ ಗಂಗಿಮಾಳಮ್ಮ ಪಣಕ್ಕಿಟ್ಟ ವಸ್ತುವಾಗಿದ್ದಾಳೆ. ಇತಿಹಾಸದಲ್ಲಿ ಈವರೆಗೂ ನಡೆದಿರುವ ಸಂಘರ್ಷಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಒಂದು ಸಮುದಾಯದ ಪ್ರಭುತ್ವವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ಆ ಸಮುದಾಯದೊಂದಿಗೆ ವಿವಾಹ ಸಂಬಂಧ ಬೆಳೆಸುವುದು ಸಾಮಾನ್ಯ ಕ್ರಮ. ಇಂಥದ್ದೇ ಮನೋಧರ್ಮ ಬ್ರಾಹ್ಮಣ ಮತ್ತು ಗೊಲ್ಲರ ಈ ಪಗಡೆಯಾಟದಲ್ಲೂ ಕಂಡುಬರುತ್ತದೆ.
ಕೊನೆಗೆ ಪಗಡೆಯಾಟದಲ್ಲಿ ಬ್ರಾಹ್ಮಣರ ಬೊಮ್ಮಲಿಂಗನಿಗೆ ಸೋಲಾಗುತ್ತದೆ. ಅದಕ್ಕಾಗಿ ಗಂಗಿಮಾಳವ್ವನನ್ನು ಗೊಲ್ಲರಿಗೆ ಒಪ್ಪಿಸಬೇಕಾಗುತ್ತದೆ. ಆದರೆ ಬೊಮ್ಮಲಿಂಗ ತಂಗಿಯನ್ನು ಗೊಲ್ಲರಿಗೆ ಕೊಟ್ಟರೆ ನಾವು ಬತಗೆಡುತ್ತೇವೆಂದು ಭಾವಿಸಿಕೊಂಡು ಅಗ್ರಹಾರದೊಳಗೆ ಅವಿತುಕೊಳ್ಳುತ್ತಾನೆ. ಇದು ಗೊಲ್ಲರಿಗೆ ಕೋಪ ತರಿಸುತ್ತದೆ. ಕುಪಿತರಾದ ಕಾಟಮುಲಿಂಗ ಬ್ರಾಹ್ಮಣರು ಮಾತಿನಂತೆ ನಡೆದುಕೊಳ್ಳದೆ ಅವರ ಬತದ ಬಗ್ಗೆ ಯೋಚಿಸಿದ್ದಾರೆ. ಹಾಗಾಗಿ ಅವರ ಬತವನ್ನೇ ನಾವು ಹಾಳುಮಾಡಬೇಕೆಂದು ಹೇಳುತ್ತಾನೆ. ಬತಹಾಳುಮಾಡುವುದಕ್ಕೆ ಹೂಡವ ತಂತ್ರ ಅತ್ಯಂತ ವಿಶಿಷ್ಟವಾಗಿದೆ. ಒಂದು ಕುರಿಯನ್ನು ಕೊಯ್ದು ಅದರ ಕೊಬ್ಬನ್ನು ಕಾಯಿಸಿ ಅದು ತುಪ್ಪವೆಂದು ಬ್ರಾಹ್ಮಣರಿಗೆ ತಿನ್ನಿಸುವುದು. ಗೊಲ್ಲರ ಈ ತಂತ್ರಕ್ಕೆ ಬೊಮ್ಮಲಿಂಗ ಸುಲಭವಾಗಿ ಬಲಿಬೀಳುತ್ತಾನೆ. ಆಗ ಬೊಮ್ಮಲಿಂಗನನ್ನು ಕುರಿತು ಕಾಟಮುಲಿಂಗ, ಚಿತ್ತೂರಲಿಂಗರು ಕೇಳುವ ಪ್ರಶ್ನೆ ಮಾಮರ್ಿಕವಾಗಿದೆ.
ಅಯ್ಯೋ ಬ್ರಾಹ್ಮಣ
ನೀನು ನನಗೆ ತಂಗಿಕೊಟ್ಟು ಮದುವೆ ಮಾಡಿದ್ರೆ
ಮಾತ್ರ ನಿನಗೆ ಕುಲ ಕೆಡತೈತೆ
ಮಾಂಸತಿಂದ್ರೆ ಕುಲ ಕೆಡೋದಿಲ್ಲವೇನೋ? (ಜುಂಜಪ್ಪ, ಪುಟ: 21)
ಇದರಿಂದ ಬೊಮ್ಮಲಿಂಗನ ಆತ್ಮ ಸಾಕ್ಷಿಗೆ ದಕ್ಕೆಯಾಗುತ್ತದೆ. ತಾಳಲಾರದ ಬೊಮ್ಮಲಿಂಗ ತಂಗಿಯನ್ನು ಕಾಡುಗೊಲ್ಲರಿಗೆ ಕೊಟ್ಟು ಮದುವೆ ಮಾಡುತ್ತಾನೆ. ಬಂಗಾರದ ಪಂಚೈದು ಕಳಸಗಳುಳ್ಳ ರಥದ ಆಸೆಗೆ ಬಿದ್ದ ಬ್ರಾಹ್ಮಣ ಕೊನೆಗೆ ತನ್ನ ಕರುಳ ಸಂಬಂಧವನ್ನು ಕಳೆದುಕೊಂಡಿದ್ದು, ಆ ಮೂಲಕ ಧಾರ್ಮಿಕ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿದ್ದು ಉಲ್ಲೇಖಾರ್ಹವಾಗಿದೆ. ಒಟ್ಟಾರೆ ಚಿತ್ತೂರಲಿಂಗ ಕಾಟಮುಲಿಂಗರು ಬ್ರಾಹ್ಮಣರ ಹೆಣ್ಣನ್ನು ಲಗ್ನವಾಗುವುದರ ಮೂಲಕ ಬ್ರಾಹ್ಮಣರಲ್ಲಿದ್ದ ಧಾರ್ಮಿಕ ಹಕ್ಕುದಾರಿಕೆಯನ್ನು ವಶಪಡಿಸಿಕೊಳ್ಳುತ್ತಾರೆ. ಚಿತ್ತೂರಲಿಂಗ ಹೇಳುವ ಒಂದು ಮಾತು ಮೇಲಿನ ಸಂಗತಿಯನ್ನು ಸ್ಪಷ್ಟಪಡಿಸುತ್ತದೆ. ಮಾರುಮುತ್ತಣ್ಣನ ಮದುವೆಯ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರ ಹತ್ತಿರ ಶಾಸ್ತ್ರ ಕೇಳುವುದೆಂದು ಅಭಿಪ್ರಾಯ ಬಂದಾಗ, ಚಿತ್ತೂರಲಿಂಗ ಹೀಗೆ ನುಡಿಯುತ್ತಾನೆ.
ಲೇ ಆರೂರು ಬತುವ ಅಳುದು
ಅವರ ಮಗಳು ಗಂಗಿಮಾಳಮ್ಮ ನನ್ನ
ನಾನೇ ಮದುವೆ ಆಗಿದ್ದೀನಿ
ನಿವ್ಯಾಕೆ ಬಾಂಬ್ರ ಹತ್ತಿರಕೆ
ಪುರೋಹಿತರನ್ನ ಕೇಳಾದಕೆ ಹೋಗ್ತಿರೋ
---------------------------
ಹೋಗಬ್ಯಾಡ್ರಿ ಬ್ರಾಹ್ಮರತ್ತುರಕೆ ಅವ್ರತ್ತುರಕ್ಕೆ
ನಾನೇಳಿದಂಗೆ ಮಾಡಿರೆಂದು (ಜುಂಜಪ್ಪ, ಪುಟ: 43) ಅವರದೇ ಆದ ಶಾಸ್ತ್ರಪದ್ಧತಿಯನ್ನು ಸೂಚಿಸುತ್ತಾನೆ.
ಒಟ್ಟಾರೆ, ಹೇಳುವುದಾದರೆ ಬ್ರಾಹ್ಮಣರ ಅತಿಯಾಸೆಯನ್ನು ಬಯಲುಮಾಡುವ, ಬ್ರಾಹ್ಮಣ ಕುಲದ ಪಾವಿತ್ರ್ಯ ನಾಶಮಾಡಿ ತಾವು ಮೌಲ್ಯೀಕರಣಗೊಳ್ಳುವ ಗೊಲ್ಲ ಸಮುದಾಯದ ಕಥನ ಇಲ್ಲಿ ಸಿಗುತ್ತದೆ. ಈ ಸಂಘರ್ಷದಲ್ಲಿ ಗೊಲ್ಲರು ಬ್ರಾಹ್ಮಣ ಕೈಯಿಂದ ಧಾಮರ್ಿಕ ಅಧಿಕಾರವನ್ನು ಪಡೆದಿದ್ದು ಗಮನಾರ್ಹವಾದ ಸಂಗತಿ. ಇಲ್ಲೆಲ್ಲ ಪ್ರತಿ ಸಂಸ್ಕೃತಿ ನಿಮರ್ಾಣದ ಸಾಧ್ಯತೆಯ ನೆಲೆಗಳು ಕಂಡುಬರುತ್ತವೆ.
 ತಾಳೇದುರುಗಿಯೊಡನೆ ಸಂಘರ್ಷ
ಜುಂಜಪ್ಪನ ಪುರಾಣ ಶೈವ ಮತ್ತು ವೈಷ್ಣವ ಸಂಪ್ರದಾಯಗಳಿಂದ ಹುಟ್ಟಿದ ಮಿಶ್ರ ಪುರಾಣವಾಗಿದೆ(ತೀ.ನಂ. ಶಂಕರನಾರಾಯಣ, ಜಾನಪದ ಸಾಹಿತ್ಯ ದರ್ಶನ-9, ಜುಂಜಪ್ಪ, ಪುಟ: 77, 1982) ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರ ಅಭಿಮತ. ಇದರ ಜೊತೆಗೆ ಜುಂಜಪ್ಪನ ಕಾವ್ಯ ಸಂಪ್ರದಾಯದಲ್ಲಿ ಶೈವ, ವೈಷ್ಣವ ವಿರೋಧಿಯಾಗಿದ್ದಾನೆ. ಆದರೆ ಭಕ್ತರು ಮಾತ್ರ ಜುಂಜಪ್ಪನನ್ನು ವಿಷ್ಣುವಾಗಿ ಕಾಣುತ್ತಾರೆ (ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, ಪುಟ: 45, 1999) ಎನ್ನುವ ಅಭಿಪ್ರಾಯವೂ ಇದೆ. ಇಂಥ ಅಭಿಪ್ರಾಯ ಭೇದಗಳು ಏನೇ ಇದ್ದರೂ 'ಜುಂಜಪ್ಪನ ಕಾವ್ಯ' ಸಂಪ್ರದಾಯದಲ್ಲಿ ಶೈವ, ವೈಷ್ಣವ ಧರ್ಮಗಳ ಸಂಘರ್ಷ ಹೆಚ್ಚು ಕಾಣುವುದಿಲ್ಲ. ಬದಲಿಗೆ ಇವೆರಡೂ ಅರ್ಥಪೂರ್ಣ ಸಂಯೋಗವನ್ನು ಸಾಧಿಸಿಕೊಂಡಿವೆ. ತಮ್ಮ ಉಳಿವಿಕೆಗಾಗಿ ಇತರೆ ದೈವಗಳೊಡನೆ ಜತೆಗೂಡಿ ಹೋರಾಡಿವೆ. ಆ ಮೂಲಕ ಸಾಂಸ್ಥಿಕ ಧರ್ಮಗಳ ಅರ್ಥವನ್ನು ಮೀರಿದ ಧರ್ಮಕಲ್ಪನೆಯನ್ನು ಕಾಣಿಸುತ್ತದೆ. ಇಂಥ ಪ್ರಕ್ರಿಯೆಗೆ ಜುಂಜಪ್ಪನ ಕಾವ್ಯದ 'ತಾಳೇದುರುಗಿ ಸಂದು' ಅತ್ಯುತ್ತಮ ಉದಾಹರಣೆ.
ಕಾವ್ಯ ಚಿತ್ರಿಸಿರುವಂತೆ, ತಾಳೇದುರುಗಿ ಅಂದಿನ ಇಡೀ ಧಾರ್ಮಿಕ ವಲಯವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಸ್ತ್ರೀ ದೇವತೆ. ಆರು ತಿಂಗಳು ಮಲಗುವ, ಆರು ತಿಂಗಳು ಎದ್ದಿರುವ ವಿಚಿತ್ರ ರಾಕ್ಷಸ ಸ್ವಭಾವದವಳು. ಈ ದೇವತೆ ತನ್ನ ಭಕ್ತರು, ಭಕ್ತರಲ್ಲದವರು ಎಂಬ ಭೇದ-ಭಾವವಿಲ್ಲದೆ ಎಲ್ಲರನ್ನೂ ನುಂಗಿ ನೀರು ಕುಡಿಯುತ್ತಿದ್ದಳು. ಇದರ ಪರಿಣಾಮವಾಗಿ ಭಕ್ತರಿಂದ ಮೊದಲ ಪೂಜೆ ಅವಳಿಗೆ ದಕ್ಕಿತು. ಇದರಿಂದ ಲಿಂಗಪ್ಪ (ಶೈವ), ರಂಗಪ್ಪ (ವೈಷ್ಣವ) ಮತ್ತು ಮಾರಿಗಳಂತಹ ಹಲವು ದೈವಗಳಿಗೆ ಸೂಕ್ತ ಪ್ರಾತಿನಿದ್ಯ ಇಲ್ಲದಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜುಂಜಪ್ಪ ತಾಳೇದುರಿಗಿಯೊಡನೆ ಸಂಘರ್ಷ ನಡೆಸಬೇಕಾದ ಸಂದರ್ಭ ಒದಗಿಬರುತ್ತದೆ. ಆಗ ಜುಂಜಪ್ಪ ತಾಳೇದುರಿಗಿಯ ನಾಶಕ್ಕೆ ಲಿಂಗಪ್ಪ, ರಂಗಪ್ಪ, ಮಾರಿಯರನ್ನು ಸೇರಿಸಿಕೊಂಡು ದೊಡ್ಡ ಶಕ್ತಿ ಸಮೂಹ ನಿಮರ್ಾಣಮಾಡುತ್ತಾನೆ. ತಾಳೇದುರುಗಿಗೂ ಹಾಗು ಜುಂಜಪ್ಪನಿಗೂ ನಡೆಯಬೇಕಾದ ಸಂಘರ್ಷ ಈಗ ಸಮೂಹದ ಕಡೆ ತಿರುಗುತ್ತದೆ. ಈ ರೀತಿ ಒಗ್ಗಿಸಿಕೊಂಡಿದ್ದು ಜುಂಜಪ್ಪನ ವಿಶಿಷ್ಟ ಆಲೋಚನಾ ದೃಷ್ಟಿಯನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲ ಇದೇ ಸಂದರ್ಭಕ್ಕೆ ಲಿಂಗಪ್ಪಗಳು, ರಂಗಪ್ಪಗಳು ಮತ್ತು ಮಾರಿಯರು ಸೇರಿ ಒಂದು ಪರಿವಾರವನ್ನೇ ನಿರ್ಮಾಣ ಮಾಡಬೇಕೆಂಬ ಆಶಯ ಇಲ್ಲಿದೆ.
ಒಟ್ಟಾರೆ, ತಾಳೇದುರುಗಿಗೂ ಮತ್ತು ಜುಂಜಪ್ಪನ ಪರಿವಾರದ ದೇವತೆಗಳಿಗೂ ಸಂಘರ್ಷ ಏರ್ಪಟ್ಟು ಪುರ್ಲಳ್ಳಿ ಭೂತ ತಾಳೇದುರುಗಿಯನ್ನು ಕೊಲ್ಲುತ್ತಾನೆ. ಇದರಿಂದ ತಾಳೇದುರುಗಿಯ ಪ್ರಭಾವದಿಂದ ತಪ್ಪಿದ್ದ ಪೂಜೆ ಉಳಿದ ದೇವತೆಗಳಿಗೂ ಸಲ್ಲುವಂತಾಗುತ್ತದೆ. ಇದನ್ನು ಕಾವ್ಯ ಹೀಗೆ ಶ್ಲಾಘಿಸುತ್ತದೆ:
ಅವಳ್ನ ಮಹಾನುಭಾವ ಪುರ್ಲಳ್ಳಿ ಭೂತ ಹೊಡೆದಾ
ಅವನಿಂದ ನಾವೆಲ್ಲ ಪೂಜೆ ತಕಂಬಕೆ ಅವಕಾಶವಾಯ್ತು
ಇಲ್ಲ ಅಂದಿದ್ರೆ ಅವುಳು ಮುಂದೆ
ನಮ್ಮ ಬಾಲ ಏನೂ ನಡೀತಿರಲಿಲ್ಲ (ಜುಂಜಪ್ಪ, ಪುಟ: 594)
ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಗಮನಿಸಬಹುದು. ತನಗೆ ಅಲಕ್ಷೆ ಮಾಡಿದ್ದಕ್ಕೆ ಪುರ್ಲಳ್ಳಿ ಭೂತ ಸಾಕಷ್ಟು ಕುಪಿತಗೊಳ್ಳುತ್ತಾನೆ. ತಾಳೇದುರುಗಿಯ ವಿರುದ್ಧ ನಡೆದ ಹೋರಾಟದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ನಿರಾಕರಿಸುತ್ತಾನೆ. ಕೊನೆಗೆ ಪುರ್ಲಳ್ಳಿ ಭೂತನನ್ನು ಬಿಟ್ಟು ತಾಳೇದುರುಗಿಯ ವಿರುದ್ಧ ಹೋರಾಟ ಮಾಡಲಾಗುತ್ತದೆ. ಹೋರಾಟದಲ್ಲಿ ಜುಂಜಪ್ಪನಿಗೆ ಲಿಂಗಪ್ಪ, ರಂಗಪ್ಪ, ಮಾರಿಯರು ಕೂಡ ಸಹಾಯ ಮಾಡಲಾಗುವುದಿಲ್ಲ. ಬದಲಿಗೆ ತಾಳೇದುರುಗಿಯನ್ನು ಕೊಲ್ಲುತ್ತಾನೆ. ನಂತರ ಪುರ್ಲಳ್ಳಿ ಭೂತ, ಜುಂಜಪ್ಪನಿಗೆ ಮೋಸ ಮಾಡಿದ ಎಲ್ಲಾ ದೈವಗಳಿಗು ಬುದ್ಧಿಕಲಿಸುತ್ತಾನೆ.
ಮತ್ತೊಂದು ಸಂಗತಿ ಇಲ್ಲಿ ಅತಿ ಮುಖ್ಯವಾಗಿದೆ. ದುರುಗಿಯ ನಾಮಾವಶೇಷ ಮಾಡಬೇಕು ಎಂಬುದು. ಹಾಗೆ ಮಾಡುವುದೆಂದರೆ ದುರುಗಿಯನ್ನು ಹಾಗೂ ಅವಲ ಗುಡಿಯನ್ನು ನಾಶಮಾಡಿದರೆ ಸಾಲದು, ಇದಿಷ್ಟೇ ಆದರೆ ದುರುಗಿಯನ್ನು ಮತ್ತೆ ಮೂತರ್ಿರೂಪದಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ದುರುಗಿಯನ್ನು ಸಂಪೂರ್ಣ ನಾಶಮಾಡುವುದೆಂದರೆ, ಅದು ನೆಲೆಸಿದ ಇಡೀ ಊರನ್ನೇ ನಾಶಮಾಡಬೇಕೆಂದು ಪುರ್ಲಳ್ಳಿಭೂತ ಹಾಗೂ ಜುಂಜಪ್ಪ ತೀಮರ್ಾನಿಸುತ್ತಾರೆ. ತಮಗಾಗದ ಸ್ತ್ರೀ ದೇವತೆಯಾದ ತಾಳೇದುರುಗಿ ಮೂತರ್ಿರೂಪದಲ್ಲಿಯೂ ಇರಕೂಡದೆಂಬುದು ಇಲ್ಲಿಯ ಆಶಯ.
ಮೇಲಿನ ಎಲ್ಲಾ ಅಂಶಗಳು, ವಿವಿಧ ತತ್ವಗಳ ನೆಲೆಗಳಿಂದ ಬಂದ ದೈವಗಳು ಒಂದಾಗಲು ಆಗಿರಬಹುದಾದ ಒಕ್ಕೂಟದಂತೆ ಕಾಣಿಸುತ್ತದೆ. ಈ ಎಲ್ಲಾ ಒಕ್ಕೂಟ ಮತ್ತು ವೈರುಧ್ಯಗಳನ್ನು ಮೀರಿ ಒಂದಾಗುವುದು ಸಹ ಇಲ್ಲಿ ಗಮನಾರ್ಹ ಸಂಗತಿ.
ಪರಾಮರ್ಶನ ಗ್ರಂಥಗಳು
1. ಚಲುವರಾಜು, ಸಂ : ಜುಂಜಪ್ಪ,  1997, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ
2. ಬರಗೂರು ರಾಮಚಂದ್ರಪ್ಪ (ಪ್ರ.ಸಂ.) ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, 1993
ಕನರ್ಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
3. ಕೇಶವಶರ್ಮ ಕೆ., ಶಬ್ದರೇಖೆ, 1998, ಅಭಿನವ ಪ್ರಕಾಶನ , ಬೆಂಗಳೂರು
4. ಮನೋಹರ ಚಂದ್ರಪ್ರಸಾದ್ ಡಿ., ಪ್ರತಿಸಂಸ್ಕೃತಿ ಆಂತೋನಿಗ್ರಾಂಶ್ಚಿಯ ಚಿಂತನೆಗಳು, 2002, ರಚನಾ ಪ್ರಕಾಶನ ಬೆಂಗಳೂರು
5. ರಾಜಾರಾಮ ಹೆಗಡೆ, ಲೌಕಿಕ-ಅಲೌಕಿಕ, 2001, ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
6. ಮೀರಾಸಾಬಿಹಳ್ಳಿ ಶಿವಣ್ಣ, ಗೊಲ್ಲಕಡಗ, 1999,ಸಿ.ವಿ.ಜಿ. ಪ್ರಕಾಶನ, ಬೆಂಗಳೂರು
7. ತೀ.ನಂ. ಶಂಕರನಾರಾಯಣ, ಜುಂಜಪ್ಪ(ಲೇಖನ) 
ಇದರಲ್ಲಿ: ಜಾನಪದ ಸಾಹಿತ್ಯ ದರ್ಶನ-9, 1982, ಪ್ರಸಾರಾಂಗ, ಕನರ್ಾಟಕ ವಿಶ್ವವಿದ್ಯಾಲಯ, ಧಾರವಾಡ

                                                                                                            ಡಾ.ಎಸ್.ಎಂ.ಮುತ್ತಯ್ಯ

Monday, 23 January 2012

ಮಡೆಸ್ನಾನ ಯಾರ ಹಿತಕ್ಕೆ ?

                                                                                                                                                                                    
ಮಡೆಸ್ನಾನ ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವೂ ಸೇರಿದಂತೆ ಕರ್ನಾಟಕದ ಕೆಲವಾರು ಪ್ರದೇಶಗಳಲ್ಲಿ ಪ್ರಚಲಿತವಿರುವ ಒಂದು ಅನಿಷ್ಟ ಆಚರಣೆ ಎಂಬುದನ್ನು ಯಾವುದೇ ಚರ್ಚೆಯಿಲ್ಲದ ಒಪ್ಪಿಕೊಳ್ಳಬಹುದಾದ ಸಂಗತಿ. ಮಡೆಸ್ನಾನ ಎಂಬ ಪದದಲ್ಲಿರುವ ಮಡೆ ಎಂಬ ಶಬ್ಧಕ್ಕೆ ತುಳುವಿನಲ್ಲಿ ಎಂಜಲು ಎಂದರ್ಥ.ಅಂದರೆ ಬ್ರಾಹ್ಮಣರು ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮೂಲಕ ಎಂಜಲು ಸ್ನಾನ ಮಾಡುವುದು ಮಡೆಸ್ನಾನವೆನಿಸಿಕೊಳ್ಳುತ್ತದೆ.ಹೀಗೆ ಮಾಡುವುದರಿಂದ ಉರುಳಾಡಿದವರ ದೇಹದಲ್ಲಿ ಇರುವ ಕಾಯಿಲೆಗಳು ವಾಸಿಯಾಗುತ್ತವೆ(?) ಎಂಬುದು ನಂಬಿಕೆ. ಇಂತಹ ಅನೇಕ ನಂಬಿಕೆಗಳು ಕನರ್ಾಟಕದ ತುಂಬೆಲ್ಲ ಪ್ರಚಲಿತವಿದ್ದು ಅವುಗಳಲ್ಲಿ ಭಾಗವಹಿಸುವವರು ಸಮಾಜದ ದಲಿತ ಹಾಗೂ  ಹಿಂದುಳಿದ ವರ್ಗಗಳ ಜನರಾಗಿರುತ್ತಾರೆ.ಹಾಗೆಯೇ ಈ ಆಚರಣೆಗಳನ್ನು ಜವ್ದಾರಿಯಿಂದ ನಡೆಸಿಕೊಡುವವರು,ಅದನ್ನು ನೋಡುತ್ತಾ ಒಳಗೊಳಗೆ ಖುಷಿಪಡುವ ಜನ ಸಾಮಾನ್ಯವಾಗಿ ಮೇಲ್ವರ್ಗದವರಾಗಿರುತ್ತಾರೆ.ಕರ್ನಾಟಕದ ಈ ರೀತಿಯ ಆಚರಣೆೆಗಳಲ್ಲಿ ಅಜಲು ಪದ್ಧತಿ, ಬೆತ್ತ್ತಲಸೇವೆ ಮೊದಲಾದವುಗಳು ತೀವ್ರ ಚಚರ್ೆಗೆ ಒಳಗಾಗಿದ್ದು  ಇವುಗಳ ಸಾಲಿಗೆ ಮಡೆಸ್ನಾನ ಹೊಸ ಸೇರ್ಪಡೆಯಾಗಿದೆ.ಇಂಥ ಆಚರಣೆಗಳಲ್ಲಿ ಸಮಸ್ಯೆ ಬರುವುದು ಆಚರಣೆಗಳಲ್ಲಿ ಬರೀ ಕೆಳವರ್ಗಗಳ ಜನರೇ ಏಕೆ ಭಾಗವಹಿಸಬೇಕು ? ಸಮಸ್ಯೆಗಳು, ಸಂಕಷ್ಟಗಳು ಕೆಳವರ್ಗದ ಜನರಿಗೆ ಮಾತ್ರ ಸೀಮಿತವೇ ? ಕಷ್ಟವಿರುವ ಜನ ಸಂಕಷ್ಟ ಪರಿಹಾರಕ್ಕಾಗಿ ನಡೆಸುವ ಆಚರಣೆಗಳಲ್ಲಿ ನಿಂತು ನೋಡುವವರಿಗೆ ಏನು ಕೆಲಸ ?ಕೆಳವರ್ಗದ ಜನ ಕಂಟಕ ಪರಿಹಾರಕ್ಕೆ ಮಾಡುವ ಸಮಪ್ರದಾಯಗಳು ಮೇಲವರ್ಗದವರಿಗೆ ಅನ್ವಯಿಸುವುದಿಲ್ಲ ಏಕೆ ?ಮೇಲವರ್ಗದವರಿಗೆ ಸಂಕಷ್ಟಗಳೇ  ಬರುವುದಿಲ್ಲವೇ ? ಎನ್ನುವುದು.ಈ ಹಿನ್ನೆಲೆಯೊಳಗೆ ಆಲೋಚಿಸಿದರೆ ಇಂಥ ಸಂಪ್ರದಾಯಗಳನ್ನು ಹುಟ್ಟುಹಾಕಿರುವ ಹಿಂದಿನ ಧಾಮರ್ಿಕ ಹುನ್ನಾರಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು.ಧರ್ಮ ರಕ್ಷಣೆಯ ಹೆಸರಿನಲ್ಲಿ ಇಂತಹ ಆಚರಣೆಗಳನ್ನು ಹುಟ್ಟುಹಾಕಿರುವಲ್ಲಿ ಹಿಂದೂ ಧರ್ಮದ ಮೂಲಭೂತವಾದಿಗಳ ಪಾತ್ರ ದೊಡ್ಡದಿದೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಇಂತಹ ಅನಿಷ್ಟ ಸಂಪ್ರದಾಯಗಳು ಇವರ ಕೂಸುಗಳೇ ಆಗಿರುವುದರಿಂದ ಆಚರಣೆಯಲ್ಲಿ ಪಾಲ್ಗೊಂಡು ಕಷ್ಟಗಳನ್ನು ಬಗೆಹರಿಸಿಕೊಳ್ಳುವವರಿಗಿಂತ ಇವರಿಗೆ ಇಂತಹ ಸಂಪ್ರದಾಯಗಳ ಮೇಲೆ  ಸಹಜವಾಗಿಯೇ ಜವಾಬ್ಧಾರಿ ಜಾಸ್ತಿ. ಇದನ್ನೆಲ್ಲ ಗಮನಿಸಿದರೆ ಈ ಸಂಪ್ರದಾಯಗಳು ಯಾರ ಹಿತಕ್ಕಾಗಿವೆ ಎಂಬುದು ಸ್ಪಷ್ಟವಾಗುತ್ತವೆ.
ಈ ಹಿನ್ನೆಲೆಯೊಳಗೆ ಮಡೆಸ್ನಾನದ ಬಗ್ಗೆ ಕೆಲವು ಸಂಗತಿಗಳನ್ನು ಪ್ರಸ್ಥಾಪಿಸಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು  ಶಿಕ್ಷಣವೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇಡೀ ರಾಜ್ಯಕ್ಕೇ ಮುಂದು. ಹಾಗೆಯೇ ಧಾಮರ್ಿಕ ಕ್ಷೇತ್ರಗಳಿಗೂ ಪ್ರಸಿದ್ಧಿ. ಕನರ್ಾಟಕದ ಬೇರೆ ಯಾವುದೇ ಜಿಲ್ಲೆಯಲ್ಲೂ ಕಾಣದಷ್ಟು ದೇವಾಲಯಗಳು  ಇಲ್ಲಿ ಕಂಡುಬರುತ್ತವೆ. ಹಾಗೆ ನೋಡಿದರೆ ಈಗಿನ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ದೇವಾಸ್ಥಾನಗಳೆಲ್ಲ ಬ್ರಾಹ್ಮಣ ಸ್ವಾಧೀನ. ಇಲ್ಲಿನ ಬಹುಪಾಲು ದೇವಾಸ್ಥಾನಗಳು ಬ್ರಾಹ್ಮಣ ಆಡಳಿತ ಮಂಡಳಿಯನ್ನು ಹೊಂದಿದ್ದು , ಇನ್ನೂ ಪೂಜಾರಿಕೆಯಂತೂ ಅವರದ್ದೆ. ಆದರೆ ಭಕ್ತರು ಮಾತ್ರ ಇಡೀ ದೇಶದ ಎಲ್ಲಾ ವರ್ಗಗಳ ಜನ. ಇಲ್ಲಿನ ದೇವಾಸ್ಥಾನಗಳಿಗೆ ಬರುವ ಬಹುಪಾಲು ಜನರು ಪ್ರವಾಸದ ಭಾಗವಾಗಿ ದೇಸ್ಥಾನಕ್ಕೆ ಬರುವವರಾಗಿದ್ದು  ಸಂಕಷ್ಟ ಪರಿಹಾರಕ್ಕೆ ಬರುವವರು ತೀರಾ ಅಪರೂಪ . ಇಷ್ಟರ ನಡುವೆ ಸಹಜವಾಗಿ ದೇವಾಸ್ಥಾನಗಳ ನಿರ್ವಹಣೆಯಲ್ಲಿ ಬ್ರಾಹ್ಮಣರು ಪ್ರಧಾನ ಪಾತ್ರವಹಿಸುವುದರಿಂದ ಬ್ರಾಹ್ಮಣೇತರರಿಗೆ ಸಿಗುವ ಸ್ಥಾನಮಾನ ಗೌರವಗಳಲ್ಲಿ ಸಹಜವಾಗಿಯೇ ಅಸಹನೀಯವಾದ ಹಲವಾರು ಸಂಗತಿಗಳಿವೆ.ಬಹುತೇಕ ದೇವಾಸ್ಥಾನಗಳಲ್ಲಿ ಊಟದ ವ್ಯವಸ್ಥೆಯಿದ್ದು ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸಲಾಗುತ್ತದೆ.ಹಾಗೆಯೇ ಕೆಲವಾರು ದೇವಾಸ್ಥಾನಗಳಲಿ ದೇವರ ದರ್ಶನಕ್ಕೆ ಕಡ್ಡಾಯವಾಗಿ ಅರೆ ಬೆತ್ತಲೆಯಲ್ಲಿ ತೆರಳಬೇಕಾಗಿರುತ್ತದೆ.(ಅದೃಷ್ಟವಶಾತ್ ಗಂಡಸರಿಗೆ ಮಾತ್ರ ಈ ನಿಯಮವಿದ್ದು ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ)ಇಂತಹ ಅಸಹನೀಯ ನಡವಳಿಕೆಗಳಲ್ಲಿ ಬ್ರಾಹ್ಮಣರು ಪ್ರತ್ಯೇಕ ಪಂಕ್ತಿಯಲ್ಲಿ ಉಂಡು ಬಿಟ್ಟ ಎಂಜಲೆಲೆ ಮೇಲೆ ಬ್ರಾಹ್ಮಣೇತರರು ಉರುಳಾಡುವ ಪದ್ಧತಿ ಒಂದಾಗಿದೆ.ಇದು ನಮ್ಮಂತಹ ಪ್ರಜಾಪ್ರಭುತ್ವದ ದೇಶದೊಳಗೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.ಈ ಬಗ್ಗೆ ಕಳೆದ 2011ನೇ ವರ್ಷದಲ್ಲಿ ತೀವ್ರವಾದ ಚರ್ಚೆ ವಾಗ್ವಾದ  ಪ್ರತಿಭಟನೆಗಳು ನಡೆದದ್ದು ಸ್ವಾಗತಾರ್ಹ. ಈ ಪದ್ಧತಿ ಮನುಕುಲದ ವ್ಯಂಗ ಎಂದರಿತ ನಾಡಿನ ಪ್ರಜ್ಞಾವಂತರೆಲ್ಲ ಇದರ ನಿಷೇಧಕ್ಕಾಗಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಉದ್ದೇಶವನ್ನು ಅರಿತ ಸಕರ್ಾರ ತಕ್ಷಣ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸಿತು. ಆದರೆ ಸಕರ್ಾರ ರದ್ಧತಿ ಆದೇಶವನ್ನು ಎರಡೇ ದಿನದಲ್ಲಿ ವಾಪಸ್ಸು ಪಡೆಯಿತು. ಇದಕ್ಕೆ ಕಾರಣವಾದುದು ಮಡೆಸ್ನಾನದಲ್ಲಿ ಭಾಗವಹಿಸುವ ಭಕ್ತರು ನಿಷೇಧದಿಂದ ನಮ್ಮ ನಂಬಿಕೆಗೆ ದಕ್ಕೆಯಾಗಿದೆ ಎಂದು ನಡೆಸಿದ ಪ್ರತಿಭಟನೆ. ಸಕರ್ಾರ ನಿಜವಾಗಿ ಭಕ್ತರ ಒತ್ತಾಯಕ್ಕೆ ಮಣಿಯಿತೋ? ಅಥವಾ ಇದರ ಹಿಂದೆ ಇನ್ಯಾರ್ಯಾದರೂ ಪ್ರಭಾವ ಬೀರಿದರೆ ಎಂಬುದು ಒಂದು ಅನುಮಾನ ಮೂಡಿತು. ಏಕೆಂದರೆ ಕನರ್ಾಟಕ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಮಿತಿ ಸದಸ್ಯ ಶಿವರಾಂ ಅವರ ಮೇಲೆ ಭಕ್ತರು ಹಲ್ಲೆ ನಡೆಸಿದರು ಎಂಬ ಸುದ್ದಿ ಆನಂತರ ಹಲ್ಲೆ ಮಾಡಿದವರು ಕೇವಲ ಭಕ್ತರಲ್ಲ ಅವರನ್ನು ಮುಂದಿಟ್ಟುಕೊಂಡು ದೇವಾಸ್ಥನದ ಆಡಳಿತ ಮಂಡಳಿಯವರೇ ಇಂತಹ ಕೃತ್ಯವೆಸಗಿದರು ಎಂಬ ವಿಷಯ ಬಹಿರಂಗವಾದಾಗ ಇಂತಹ ಅನುಮಾನಗಳಿಗೆ ಇನ್ನಷ್ಟು ರಕ್ಕೆ ಮೂಡಿದವು.ಇದೇನೇ ಆದರೂ ಸಕರ್ಾರ ಇಂತಹ ಅಮಾನವೀಯ ಪದ್ಧತಿಯನ್ನು ರದ್ದುಮಾಡಲು ಹಿಂಜರಿದ್ದದ್ದು ಮಾತ್ರ ಪ್ರಜ್ಞಾವಂತರನ್ನು ಚಿಂತೆಗೀಡುಮಾಡುವ ವಿಷಯ . ಬೆತ್ತಲೆಸೇವೆ, ಅಜಲು ಪದ್ಧತಿ ಗಳನ್ನು ರದ್ದುಮಾಡಿದ್ದು ದಢೀರನೆ ತಾನೆ. ಕೆಲವೊಂದು ಸಂಪ್ರದಾಯಗಳನ್ನು ನಿಧಾನವಾಗಿ ನಿಲ್ಲಿಸಬೇಕೆಂಬುದು ಸತ್ಯ . ಆದರೆ ಇನ್ನೂ ಕೆಲವು ವಿಷಯಗಳನ್ನು ತತ್ಕ್ಷಣದಿಂದಲೇ ರದ್ದು ಮಾಡಬೇಕಾಗುತ್ತದೆ. ಮಡೆಸ್ನಾನ ಆದಷ್ಟು ಬೇಗನೆ ರದ್ದುಮಾಡಬೇಕಾದ  ವಿಷಯ. ಮಡೆಸ್ನಾನದಲ್ಲಿ ದಲಿತರು ಮಾತ್ರವೇ ಪಾಲ್ಗೊಳ್ಳುವುದಿಲ್ಲ  ಜೊತೆಗೆ ಬೇರೆ ಬೇರೆ ಜನಾಂಗಗಳ ಜನರೂ ಪಾಲ್ಗೊಳ್ಳುವುದರಿಂದ ಇದನ್ನು ಜಾತಿ ಬಣ್ಣ ಹಚ್ಚಿ ಸಮಾಜದ ಸ್ವಾಸ್ತ್ಯ ಹಾಳುಮಾಡಬಾರದು ಎಂದು ಕೆಲವು ಮಠಾಧೀಶರು,ಕೆಲವು ಪ್ರಭಾವಿ ವ್ಯಕ್ತಿಗಳು ಪ್ರತಿಭಟನಾಕಾರರಿಗೆ ಕಿವಿಮಾತು ಹೇಳಿದರು.ಪೇಜಾವರ ಸ್ವಾಮಿಗಳಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಪದ್ಧತಿಯಲ್ಲಿ ಬ್ರಾಹ್ಮಣರನ್ನು ದೂಷಿಸುವುದು ಸರಿಯಲ್ಲ.ಈ ಪದ್ಧತಿ ಆಚರಣೆಯಲ್ಲಿರಲು ಬ್ರಾಹ್ಮಣರು ಯಾವ ರೀತಿಯಲ್ಲೂ ಕಾರಣರಲ್ಲ .ಅಷ್ಟಕ್ಕೂ ಇಂತಹ ಪದ್ದತಿಗಳಿಂದ ಹಿಂದೂ ಧರ್ಮ ಉಳಿಯ ಬೇಕಾಗಿಲ್ಲ.ಎಂಬುದಾಗಿ ವಾದಿಸಿದರು.ಆದರೆ ಇಂತಹ ಎಲ್ಲಾ ಮಾತುಗಳು ಸಮಾಜದ ಜವ್ದಾರಿಯಿಂದ ನುಸುಳಿಕೊಳ್ಳುವ ಪಲಾಯನವಾದಗಳೇ ಆಗಿದ್ದವು. 2012 ಜನವರಿ 7,8 ರಂದು ಬೆಂಗಳೂರಿನಲ್ಲಿ ನಡೆದ ಮಡೆಸ್ನಾನ ಕುರಿತ ಮುಕ್ತ ಸಂವಾದದಲ್ಲಿ ನಿಡಿಮಾಮುಡಿ ಸ್ವಾಮಿಗಳು ಸೇರಿದಂತೆ ಹಲವಾರು ಪ್ರಗತಿಪರರು ಇವೆಲ್ಲವುಗಳಿಗೆ ಸರಿಯಾದ ಉತ್ತರವನ್ನೇ ನೀಡಿದರು. ಮಡೆಸ್ನಾನದಲ್ಲಿ ದಲಿತೇತರರು ಭಾಗವಹಿಸುತ್ತಾರೆ ಎಂಬುವುದನ್ನು ಒಪ್ಪುವುದಾದರೂ ಇದರಲ್ಲಿ ದಲಿತರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿದೆ.ಅದೂ ಅಲ್ಲದೆ ಮೊದಲಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯ ಬುಡಕಟ್ಟಿನ ಜನ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರಮುಖ ಸಮುದಾಯ.ಹಾಗಾಗಿ ಈ ಆಚರಣೆಯಲ್ಲಿ ದಲಿತರ ಅಸಹಾಕತೆಯನ್ನು ಬಳಸಿಕೊಂಡು ಒಳಗೊಳಗೆ ಸುಖಿಸುವ ಮನಸ್ಸಿದೆ ಎಂಬುದು ನಿರ್ವವಿವಾದ.ಇನ್ನೂ ಇದಕ್ಕೆ ಬ್ರಾಹ್ಮಣರು ಕಾರಣರಲ್ಲ ಎಂಬ ಮಾತನ್ನು ಯಾವ ರೀತಿಯಲ್ಲೂ ಸಾಬೀತುಗೊಳಿಸುವುದು ಸಾಧ್ಯವಿಲ್ಲ.ಏಕೆಂದರೆ ದೇವಾಸ್ಥಾನದಲ್ಲಿ ಬ್ರಾಹ್ಮಣರು ಪ್ರತ್ಯೇಕ ಪಂಕ್ತಿಯಲ್ಲಿ ಉಣ್ಣುವುದು ಸಮರ್ಥನೆಗೆ ಅಡ್ಡಿ ಬರುತ್ತದೆ.(ಇಂತಲ್ಲಿ ಬ್ರಾಹ್ಮಣರನ್ನು ಮಾತ್ರ ಮುಂದೆಮಾಡಿ ಉಳಿದ ಮೇಲ್ವರ್ಗಗಳು ಬೆನ್ನು ತಟ್ಟಿಕೊಳ್ಳಬೇಕಿಲ್ಲ  ಏಕೆಂದರೆ ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಇಂತಹ ದುಸ್ಥಿತಿಯಲ್ಲಿಡುವುದರಲ್ಲಿ ಬ್ರಾಹ್ಮಣೇತರ ಮೆಲ್ವರ್ಗಗಳು ಪ್ರಧಾನ ಪಾತ್ರವಹಿಸಿವೆ ಎಂಬುದನ್ನು ಮರೆಯಬಾರದು) ಮಡೆಸ್ನಾನ ಬೇಡವೆಂದು ಪೇಜಾವರ ಸ್ವಾಮಿಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ.ಇದು ನಿಜವಾದರೆ ಈ ತತ್ ಕ್ಷಣದಿಂದಲೇ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿ ಭೋಜನದ ವ್ಯವಸ್ಥೆಯನ್ನು ನಿಲ್ಲಿಸಬೇಕಾಗುತ್ತದೆ.ಇದರ ಜೊತೆಗೆ ಪ್ರಜ್ಞಾವಂತರಾದ ನಾವೆಲ್ಲ ಮಡೆಸ್ನಾನದಲ್ಲಿ ಇರುವ ವೈಜ್ಞಾನಿಕ ಸತ್ಯವನ್ನು ತಿಳಿಯುವ ಪ್ರಯತ್ನಮಾಡಬೇಕು.ಈ ಆಚರಣೆಯಲ್ಲಿ ಭಾಗವಹಿಸುವ ಜನರಿಗೆ ತಿಳುವಳಿಕೆ ನೀಡಬೇಕಿದೆ. ಜೊತೆಗೆ ಈ ಮೊದಲೇ ಕೇಳಿಕೊಂಡ ಪ್ರಶ್ನೆಗಳೇನಿವೆ ಅವುಗಳಿಗೆ ಉತ್ತರ ಕಂಡುಕೊಳ್ಳುವ ಜರೂರು ಕೂಡ ಇಂದಿನದಾಗಿದೆ.ಮಡೆಸ್ನಾನ ಭಕ್ತರಿಗೆ ಬಿಟ್ಟು ಬೇರೆ ಯಾರಿಗೆ ಬೇಡವೆಂದರೆ ಸಂತೋಷ: ಆದರೆ ವಾಸ್ತವವಾಗಿ ಈ ಆಚರಣೆ ಭಕ್ತರಿಗಿಂತ ಹೊರಗಿನವರಿಗೆ ಬಹಳ ಬೇಕಾಗಿದೆ.ಅಂದರೆ ರೋಗ ಇರುವವರಿಗಿಂತ ಇಲ್ಲದವರ ಕಾಳಜಿ ಜಾಸ್ತಿಯಾಗಿದೆ.ಅದಕ್ಕಾಗಿಯೇ ಭಕ್ತರ ಹೆಸರಲ್ಲಿ ಈ ಆಚರಣೆಯನ್ನು ಉಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ತಾವೆ ನಡೆಸುತ್ತಿದ್ದಾರೆ.ಇದು ನಮ್ಮ ನಿಜವಾದ ಸಮಸ್ಯೆ ರಾಜ್ಯದ ಪ್ರಜೆಗಳು ಹಾಗೂ ಆಳುವವರು ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಭಾರತಿಯ ಸಮಾಜವನ್ನು  ನಿಜವಾದ ಅಭಿವೃದ್ಧಿಯತ್ತ ಕೊಂಡೊಯ್ಯ ಬೇಕಾಗಿದೆ.

                                                                                                                             - ಡಾ. ಎಸ್.ಎಂ. ಮುತ್ತಯ್ಯ