Tuesday 9 October 2012

ಕನ್ನಡ ಜನಪದ ಸಂಸ್ಕೃತಿ-5


ಸಮಾಜ
ಕನ್ನಡ ಜನಪದ ಸಮಾಜಕ್ಕೆ ದೀರ್ಘವಾದ ಪರಂಪರೆಯಿದ್ದು, ಅದರೊಳಗೆ ಅತ್ಯಂತ ಮಾನವೀಯ ನೆಲೆಗಳಿವೆ. ಅದರಲ್ಲಿ ಮುಖ್ಯವಾಗಿ ಕುಟುಂಬ, ಬಂಧುತ್ವ, ಸಾಮಾಜಿಕ-ಸಾರ್ವಜನಿಕ ಸಂಬಂಧ, ಲಿಂಗ ಸಂಬಂಧಗಳು, ಸಮಾನತೆಯ ಕಲ್ಪನೆ ಹಾಗೂ ಸಮೂಹ ಪ್ರಜ್ಞೆಯ ನೆಲೆಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಲಾಗಿದೆ.
ಕೌಟುಂಬಿಕ ಸಂಬಂಧಗಳು
ಪ್ರಸ್ತುತ ಆಧುನಿಕ ಸಮಾಜದ ಸಂದರ್ಭದಲ್ಲಿ ಕೌಟುಂಬಿಕ ಸಂಬಂಧಗಳಲ್ಲಿ ಸಾಕಷ್ಟು ಸಡಿಲತೆ ಇದೆ. ಹಾಗಾಗಿಯೇ ಅವಿಭಕ್ತ ಕುಟುಂಬಗಳೆಲ್ಲವೂ ಒಡೆದು ಚೂರು ಚೂರಾಗಿವೆ. ಇಂಥ ಅಣು ಕುಟುಂಬಗಳಲ್ಲಿಯೂ ಕೂಡ ನೈಜ ಸಂಬಂಧಗಳ ಕೊರತೆ ಎದ್ದು ಕಾಣುತ್ತದೆ. ನಮ್ಮ ಕನ್ನಡ ಪರಂಪರೆಯಲ್ಲಿ ಇಂಥ ಸಂಬಂಧಗಳ ಚರಿತ್ರೆಯನ್ನು ಗಮನಿಸಿದರೆ ಆ ಬಂಧುತ್ವದ ಬಂಧ ಎಷ್ಟು ಗಾಢವಾದುದು ಎಂಬುದು ಅರಿವಾಗುತ್ತದೆ. ಮಾನವೀಯ ಸಂಬಂಧಗಳು ಮನುಷ್ಯನ ಬದುಕಿನ ಮಹತ್ವದ ಆಯಾಮ. ಬದುಕಿನ ಸಾರ್ಥಕತೆ ಇರುವುದೇ ಮನುಷ್ಯ ಸಂಬಂಧಗಳ ಸ್ವರೂಪದಲ್ಲಿ. ಇದನ್ನು ನಂಬಿರುವ ಜನಪದರು ಬದುಕಿನ ಪ್ರತಿಯೊಂದು ಹಂತದಲ್ಲಿ ಮನುಷ್ಯನ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನಮಾಡಿದ್ದಾರೆ. ಜೀವನದಲ್ಲಿ ತಂದೆ-ತಾಯಿ, ಮಕ್ಕಳು, ಅಣ್ಣ-ತಂಗಿ, ಅಕ್ಕ-ತಮ್ಮ, ಅತ್ತೆ-ಮಾವ-ಸೊಸೆ, ಸತಿ-ಪತಿ, ಭಾವ-ಮೈದುನ ಇವೆ ಮೊದಲಾದ ವರಸೆಗಳು ಬಹುಮುಖ್ಯ. ಸುಖೀ ಜೀವನ ಸಾಧ್ಯವಾಗಬೇಕಾದರೆ ಈ ಎಲ್ಲಾ ಮಲುಕಿನ ಸಂಬಂಧಗಳ ನಿಜವಾದ ನೆಲೆಯಲ್ಲಿ ಅರಳಬೇಕಾಗುತ್ತದೆ. ದುರಾದೃಷ್ಟವೆಂದರೆ ಪ್ರಸ್ತುತ ಸಮಾಜ ಇಂಥ ಸಂಬಂಧಗಳೊಡನೆ ಬದುಕುವುದು ಬೇಡ ಅವುಗಳ ಸರಿಯಾದ ಪರಿಜ್ಞಾನ ಕೂಡ ಇಲ್ಲ. ಎಲ್ಲಾ ಸಂಬಂಧಗಳನ್ನು ಅಂಕಲ್-ಆಂಟಿಯ ಎರಡೇ ಎರಡು ರೂಪಗಳಲ್ಲಿ ಗುರುತಿಸಿಕೊಳ್ಳುವಷ್ಟು ಸಂಬಂಧಗಳ ದಾರಿದ್ರ್ಯವಿದೆ. ಸಮಾಜ ತಲುಪಿರುವ ಈ ದುಸ್ಥಿತಿಯ ಕಾರಣಕ್ಕೆ ದೂರದರ್ಶನಗಳಲ್ಲಿ ಇಂಥ ಮಾನವ ಸಂಬಂಧಗಳ ಸ್ವರೂಪ ಮತ್ತು ವರಸೆಗಳನ್ನು ಕಂಡುಹಿಡಿದು ಹಣಗಳಿಸುವ ಜೀನ್ಸ್ ನಂತಹ ಕಾರ್ಯಕ್ರಮಗಳು ರೂಪುಗೊಂಡಿವೆ. ಮನುಷ್ಯ ಸಂಬಂಧಗಳ ವಿಷಯದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ನಾವು ಇಂಥ ದುಸ್ಥಿತಿಗೆ ತಲುಪಿದ್ದು ಮಾತ್ರ ಒಂದು ಸಾಮಾಜಿಕ ದುರಂತ.
ಕುಟುಂಬದ ಸಂಬಂಧಗಳಲ್ಲಿ ತಂದೆ-ತಾಯಿ-ಮಕ್ಕಳ ಬಂಧ ಗಾಢವಾದುದು ಮತ್ತು ಮಧುರವಾದುದೂ ಹೌದು. ತಾಯಿ ತನ್ನ ಎಲ್ಲಾ ಸುಖಗಳನ್ನು ಮರೆತು ಬರೀ ಕಷ್ಟಗಳನ್ನೇ ಉಂಡು ಮಕ್ಕಳಿಗೆ ಜನ್ಮ ನೀಡಿ ಅವರಿಗೆ ಒಂದು ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಾಳೆ. ಅಣು ರೂಪದ ಮಗುವನ್ನು ಸ್ವತಂತ್ರ್ಯ ಜೀವನ ನಡೆಸುವ ವ್ಯಕ್ತಿಗಳಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ಹಿರಿದು. ಈ ತಾಯಿಯ ಜವಾಬ್ದಾರಿಗೆ ತಂದೆಯು ಕೈಜೋಡಿಸಿದ್ದಾರೆ. ಇಂಥ ಕಾರಣಕ್ಕಾಗಿಯೇ ತಾಯಿ-ತಂದೆಗೆ ಕುಟುಂಬದಲ್ಲಿ ದೊಡ್ಡ ಗೌರವ. ಮಕ್ಕಳಿಗಂತೂ ಮಾತಾಪಿತರೆಂದರೆ ದೇವರು.
ತಂದೀಯ ನೆನೆದರೆ ತಂಗೂಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ನ | ನೆನದರೆ
ಮಾಸಿದ ತಲೆ ಮಡಿಯಾಯ್ತು |
ತಾಯಿ-ತಂದೆಯರ ಶಕ್ತಿ ಮತ್ತು ಪಾತ್ರಗಳೆರಡನ್ನೂ ಮೇಲಿನ ತ್ರಿಪದಿ ಚನ್ನಾಗಿಯೇ ಸ್ಪಷ್ಟಪಡಿಸುತ್ತದೆ. ಇಲ್ಲಿಯೇ ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ ತಂದೆ-ತಾಯಿಯರಲ್ಲಿ ತಾಯಿಗೆ ಗೌರವ ಹೆಚ್ಚು
ಕಾಸಿಗೆ ಹೋಗಾಕ ಏಸೊಂದು ದಿನ ಬೇಕು|
ತಾಸೊತ್ತಿನಾದಿ ತವರಾಗೆ | ಕಾಸಿ ಕುಂಪವ್ಳೆ
ಹಡದವ್ವ|
ಈ ಪದ್ಯ ತಾಯಿಗೆ ಮಕ್ಕಳು ಕೊಡುವ ಗೌರವದ ಅಂತಿಮ ಹಂತ. ಹೀಗೆ ತಂದೆ-ತಾಯಿಯರನ್ನು ದೇವರೆಂದು ಕಾಣುವ ಪರಂಪರೆಯಲ್ಲಿ ತಂದೆ-ತಾಯಿಯರು ಕೂಡ ತಮ್ಮ ಪಾತ್ರವನ್ನು ಸರಿಯಾಗಿಯೇ ನಿರ್ವಹಿಸಿದ್ದಾರೆ. ಮಕ್ಕಳಿಗೆ ಕೊಡಬೇಕಾದ ಗೌರವ, ಅವರನ್ನು ಭವಿಷ್ಯದ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿಯನ್ನು ಹೊತ್ತು ಮುನ್ನಡೆದ ಬಗೆ ಅನುಕರಣೀಯ. ಇನ್ನು ಕುಟುಂಬದಲ್ಲಿ ಅಣ್ಣ ತಮ್ಮ, ತಂಗಿಯರ ಸಂಬಂಧಗಳು ಮಧುರ. ಇವರ ನಡುವಿನ ನಂಟು ಅತೀ ವಿಶಿಷ್ಟ, ಪರಸ್ಪರ ಒಬ್ಬರಿಗೊಬ್ಬರು ಸಹಕಾರ, ಬೆಂಬಲದೊಂದಿಗೆ ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಂಡಿದ್ದಾರೆ.
ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು|
ಬೆನ್ನು ಕಟ್ಟುವರು ಸಭೆಯೊಳಗೆ| ಸಾವಿರ |
ಹೊನ್ನು ಕಟ್ಟುವರು ಉಡಿಯೊಳಗೆ ||  ಎಂದು ತಂಗಿ ಹೇಳಿದರೆ ಅಣ್ಣ 'ತನ್ನ ತಂಗಿ ನಡೆದರೆ ರುದ್ರನ ತೇರು ಎಳೆದಂತೆ' ಎಂದು ಭಾವಿಸುತ್ತಾಳೆ. ತಂಗಿಯ ಮದುವೆಯ ನಂತರ ಅವಳನ್ನು ಗಂಡನ ಮನೆಗೆ ಕಳುಹಿಸುವಾಗಿ ತಂದೆ-ತಾಯಿಯಷ್ಟೆ ದುಃಖ ಪಡುವವರು ಅಣ್ಣ-ತಮ್ಮಂದಿರು. ತಂಗಿಯ ಅಥವಾ ಅಕ್ಕನ ಗಂಡನ ಮನೆ-ತವರು ಮನೆ ಸಂಬಂಧಗಳನ್ನು ಮುನ್ನಡೆಸುವವರು ಇವರೆ. ಈ ಹಿನ್ನೆಲೆಯಲ್ಲಿ ಕನ್ನಡ ಜನಪದ ಸಾಹಿತ್ಯದಲ್ಲಿ ವಿಫುಲವಾದ ವಿವರಗಳು ದಾಖಲಾಗಿವೆ. ಈ ಎಲ್ಲಾ ಸಂಗತಿಗಳು ಬದುಕಿನ ಕೌಟುಂಬಿಕ ಸಂಬಂಧಗಳಿಗೆ ಆದರ್ಶಪ್ರಾಯವಾಗಿವೆ.
ಕುಟುಂಬದಲ್ಲಿ ಸತಿ-ಪತಿಯರ ಪಾತ್ರ ಹಿರಿದು. ಅವರ ನಡುವಿನ ಸಂಬಂಧದ ಸ್ವರೂಪ ಕುಟುಂಬದ ನೆಮ್ಮದಿಗೆ ಕಾರಣವಾಗುತ್ತದೆ. ಸತಿ-ಪತಿಯರ ಸಂಸಾರ ಒಂದು ಸಾಗರ ಅದನ್ನು ಜನಪದ ತ್ರಿಪದಿಯೊಂದು ಹೀಗೆ ವಿವರಿಸುತ್ತದೆ.
ಸಂಸಾರವೆಂಬುದು ಸಾಗರ ಹೊಳೆಯವ್ವ
ಈಸ ಬಲ್ಲವಗ ಎದಿಯುದ್ದ | ಗಿಳಿರಾಮ
ಓದು ಬಲ್ಲವನ ಕೈಲಾಸ||
ಇಂಥ ಸಂಸಾರದಲ್ಲಿ ಪ್ರಮುಖ ಪಾತ್ರಗಳಾದ ಸತಿ-ಪತಿಗಳು ಹಲವಾರು ಸರಸ-ವಿರಸದ ಸಂದರ್ಭಗಳನ್ನು ಎದಿರುಗೊಳ್ಳುತ್ತಾರೆ. ಸಿಟ್ಟು, ಮುನಿಸು ರಾಜಿ-ಸಂಧಾನಗಳು ನಡೆಯುತ್ತಲೇ ಇರುತ್ತವೆ. ಇಂಥ ಇವರ ಜಗಳಗಳೆಲ್ಲ 'ಗಂಡ - ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬಂತೆ ಕ್ಷಣಿಕ. ಹಾಗಾಗಿ ಇವರ ನಡುವಿನ ಬಾಂಧವ್ಯ  ಸುಮಧುರವಾದುದು. ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಕೂಡಿದ ಕೌಟುಂಬಿಕ ವಾತಾವರಣ ಇರುವುದರಿಂದಾಗಿ ಇಡೀ ಕುಟುಂಬದ ವಾತಾವರಣ ಆರೋಗ್ಯಪೂರ್ಣವಾಗಿರುತ್ತದೆ. ಇವರ ನಡುವಿನ ಸಂಬಂಧಗಳ ಸ್ವರೂಪ ಎಂಥದ್ದು ಎಂದರೆ ಹೆಂಡತಿ ಹೇಳುತ್ತಾಳೆ :
ಕೂಲಿ ಮಾಡಿದರೇನು| ಕೋರಿ ಹೊತ್ತರೇನು?
ನಮಗೆ ನಮರಾಯ ಬಡವೇನ| ಬಂಗಾರ
ಮಾಲು ಇದ್ದಾಂಗ ಮನೆಯಾಗ ||
ಇದಕ್ಕೆ ಪ್ರತಿಯಾಗಿ ಗಂಡ
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯ ಬಿಡಲಾರೆ | ಕೇದಿಗೆ
ಗರಿ ನಿನ್ನನಗಲಿ ಇರಲಾರೆ ಎನ್ನುತ್ತಾನೆ.
ಹೀಗೆಯೇ ಜನಪದ ಸಮಾಜದ ಕೌಟುಂಬಿಕ ಸಂಬಂಧಗಳು ಅತ್ಯಂತ ಆಳವಾದ ನೆಲೆಗಳನ್ನು ಹೊಂದಿವೆ. ಈ ಸಂಬಂಧಗಳ ಅನೇಕ ರೂಪುಗಳು ಗಮನಾರ್ಹವಾದವುಗಳಾಗಿವೆ.
ಕನ್ನಡ ಜನಪದ ಸಮಾಜದ ಶ್ರೇಷ್ಠತೆ ಇರುವುದು ಬರೀ ರಕ್ತ ಸಂಬಂಧದ ನೆಲೆಗಳಲ್ಲಿ ಮಾತ್ರವಲ್ಲ. ಅದರಾಚೆಗಿನ ಸಂಬಂಧಗಳ ಸ್ವರೂಪದಲ್ಲಿ ಕುಟುಂಬದ ಹೊರಗಿನ ಅನೇಕ ವ್ಯಕ್ತಿ-ಸಮೂಹಗಳನ್ನು ತಮ್ಮ ರಕ್ತ ಸಂಬಂಧದ ವಾಚಕಗಳಲ್ಲಿಯೇ ಕರೆಯುವುದು ರೂಢಿ. ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಭಾವ, ಸೊಸೆ, ಅತ್ತೆ, ಇತ್ಯಾದಿ ವಾಚಕಗಳಿಂದ ಎಲ್ಲಾ ಮನುಷ್ಯರ ಸಂಬಂಧಗಳನ್ನು ಬಿಗಿದು ಕಟ್ಟುವ ಇವರ ಬದುಕಿನ ಪರಿ ಅದ್ಭುತವಾದುದು. ಈ ವಿಸ್ತಾರತೆ ಕೇವಲ ಊರಿಗೆ, ಪ್ರದೇಶಕ್ಕೆ ಜಾತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದರಾಚೆಗೆ ಧರ್ಮದ ವ್ಯಾಪ್ತಿಗೂ ವಿಸ್ತರಿಸಿಕೊಳ್ಳುತ್ತದೆ. ಮುಸ್ಲಿಂರನ್ನು, ಕ್ರಿಶ್ಚಿಯನ್ನರನ್ನು ಕನ್ನಡ ಜನಪದ ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣ, ತಮ್ಮ, ಅಕ್ಕ, ಚಿಕ್ಕಮ್ಮ ಮೊದಲಾದ ವಾಚಕಗಳಿಂದ ಕರೆಯುವುದನ್ನು ಕಂಡರೆ ಕನ್ನಡ ಜನಪದರ ಸಂಸ್ಕೃತಿಯ ಮಾನವೀಯ ಸಂಬಂಧಗಳ ಸ್ವರೂಪಗಳ ದರ್ಶನವಾಗುತ್ತದೆ. ಇಂಥ ಸಂದರ್ಭಗಳನ್ನು ಗಮನಿಸಿದಾಗ ಈ ಬದುಕಿನ ಉದಾರ ಮಾನವೀಯತೆ ಎಂಥದ್ದು ಎಂಬುದು ಮನವರಿಕೆಯಾಗುತ್ತದೆ.
ಸಮಾನತೆಯ ಕಲ್ಪನೆ
ಕನ್ನಡ ಜನಪದ ಸಮಾಜದ ಬಹುಮುಖ್ಯ ಆಯಾಮಗಳಲ್ಲಿ ಸಮಾನತೆಯ ಆಶಯವೂ ಒಂದು. ಈ ಸಮಾಜದ ರಚನೆಯನ್ನು ಕಂಡರೆ ಅದನ್ನು ಸಮಥರ್ಿಸುವ ಅನೇಕ ಸಂಗತಿಗಳು ದೊರೆಯುತ್ತವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೆಂದರೆ ಆಧುನಿಕ ವಿದ್ಯಾಮಾನಗಳು ನಮ್ಮ ಪಾರಂಪರಿಕ ಜೀವನಕ್ರಮಗಳನ್ನು ಪ್ರಭಾವಿಸುವವರೆಗೂ ತಾನು ಬದುಕಿ ಮತ್ತೊಬ್ಬರಿಗೂ ಬದುಕುಲು ಅವಕಾಶ ಮಾಡಿಕೊಡಬೇಕೆನ್ನುವ ಸಮಾನತೆಯ ಭಾವ ರೂಢಿಯಲ್ಲಿದ್ದಿತ್ತು. ಜಾತಿಯನ್ನು ಪೋಷಿಸಿ ಬೆಳೆಸಿದ ವೈದಿಕ ಧರ್ಮದ ಮನೋಭಾವಗಳಿಗೆ ವಿರುದ್ಧವಾಗಿ ಜನಪದ ಧರ್ಮದ ಸಮಾಜದಲ್ಲಿ ಮೇಲು ಜಾತಿ, ಕೆಳಜಾತಿ, ಹಿಂದೂ, ಮುಸ್ಲಿಂ ಎನ್ನುವ ಯಾವುದೇ ರೀತಿಯ ಭೇದ-ಭಾವಗಳಿಲ್ಲದೆ ಎಲ್ಲರೂ ಸಮಾನರಾಗಿ ಸಾಮರಸ್ಯದ ಬದುಕನ್ನು ಬದುಕುವ ಕ್ರಮವನ್ನು ಕಾಣಬಹುದು. ಕನರ್ಾಟಕದ ಮೊಹರಂ ಹಬ್ಬದಲ್ಲಿ ಹಾಡಲ್ಪಡುವ ಹಾಡುಗಳು ಅಂಥ ಸಂದೇಶವನ್ನು ಸಾಕಾರಗೊಳಿಸುತ್ತವೆ. ದಗರ್ಾಗಳಲ್ಲಿ ಸಕ್ಕರೆ ಓದಿಸಿಕೊಂಡು ಬರುವ ಹಿಂದೂಗಳು, ದೇವಸ್ಥಾನಗಳಿಗೆ ಪೂಜೆ ಮಾಡಿಸಿ ಕೈ ಮುಗಿಯುವ ಮುಸಲ್ಮಾನರು ಇಂದಿಗೂ ನಮ್ಮ ಸಮಾಜಗಳಲ್ಲಿ ಇರುವುದನ್ನು ಕಂಡರೆ ಕನ್ನಡ ಜನಪದ ಸಮಾಜದ ಸಮಾನತೆಯ ಕಲ್ಪನೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಸಾವಳಿಗ ಮಠ, ಶಿರಹಟ್ಟಿಯ ಪಕೀರಸ್ವಾಮಿ, ಶಿಶುನಾಳ ಶರೀಫ, ಬಾಬಯ್ಯನ ಜಲ್ಡಿಗಳು, ಅಲಾವಿ ಕುಣಿತಗಳು, ಉರುಸುಗಳು, ದೀವಳಿಗೆ ದಂಡು ಉರಾಡುವುದು, ಅಂಟಿಕೆ-ಪಂಟಿಕೆ ಸಂಪ್ರದಾಯದ ಜ್ಯೋತಿ ನೀಡುವ ಕ್ರಿಯೆಗಳೆಲ್ಲವೂ ಕನ್ನಡ ನೆಲದ ಸಂಸ್ಕೃತಿಯಲ್ಲಿ ಕಂಡುಬರುವ ಮತೀಯ ಸೌಹಾರ್ದತೆಗೆ ಸಾಕ್ಷಿಗಳಾಗಿವೆ. ಮತೀಯ ಕಲ್ಪನೆಗಳ ಹೊರತಾಗಿ ಬದುಕಿನ ಸಾಮಾನ್ಯ ಜೀವನದ ಸಂದರ್ಭದೊಳಗೂ ಸೌಹಾರ್ದ ಜೀವನಕ್ಕೆ ಹಂಬಲಿಸಿದ ರೀತಿಗೆ ಈ ಕೆಳಗಿನ ತ್ರಿಪದಿ ಒಂದು ಅತ್ಯುತ್ತಮ ಉದಾಹರಣೆ.
ಭಾಗಾದಿ ಬಲಕಿರಲಿ ವೈದಿ ತಾ ಎಡಕಿರಲಿ |
ಚಾಡಿಕಾರರ ಮನೆಯು ಎದುರಿರಲಿ | ಬಲಭೀಮ|
ದೇವ ನನ ಮ್ಯಾಲ ದಯವಿರಲಿ ||
ಇಂಥ ಸರ್ವಸಮಾನತೆಯ ಸಮಾಜದ ಹಿನ್ನೆಲೆಯಿರುವ ನಮ್ಮ ಸಮಾಜ ಇಂದಿಗೆ ಅತ್ಯಂತ ಸ್ಥಿರ ಸ್ಥಿತಿಗೆ ತಲುಪಿರುವುದು ದೊಡ್ಡ ದುರಂತ.

ಸಮಷ್ಠಿ ಪ್ರಜ್ಞೆ
ಕನ್ನಡ ಜನಪದ ಲೋಕದ ಬಹುಮುಖ್ಯ ಧ್ಯೇಯ 'ತಿರ್ಕೊಂಡು ಬಂದ್ರು ಕರಕೊಂಡು ಉಣ್ಣು' ಬದುಕಿನ ಕಷ್ಟ ಸುಖಗಳಲ್ಲಿ ಯಾವುದಾದರೂ ಸರಿ ಸಾಮೂಹಿಕವಾಗಿ ಅನುಭವಿಸಬೇಕೆಂಬುದು ಇಲ್ಲಿಯ ಮೌಲ್ಯ. ಇಲ್ಲಿ ಏಕ ವ್ಯಕ್ತಿ ಪಾಲ್ಗೊಳ್ಳುವಿಕೆ, ಏಕ ವ್ಯಕ್ತಿ ದೃಷ್ಟಿ ಬಹಳ ಕಡಿಮೆ. ಕನ್ನಡ ಜನಪದ ಸಾಹಿತ್ಯ ಕಲೆ, ಆರಾಧನೆ, ಆಚರಣೆಗಳಲ್ಲಿ ಈ ದೃಷ್ಟಿ ಪ್ರಧಾನವಾಗಿ ಗೋಚರಿಸುತ್ತದೆ. ಮುಖ್ಯವಾಗಿ ಇವರ ಬದುಕಲ್ಲಿ ಖಾಸಗೀ ಆಸ್ತಿಯ ಕಲ್ಪನೆಯೇ ಇಲ್ಲ. ಎಲ್ಲವೂ ಸಾಮೂಹಿಕ ಅಥವಾ ಸಾರ್ವಜನಿಕ ಆಸ್ತಿಯೆ. ನನ್ನದು ಎನ್ನುವುದು ಅಪರಾಧ ಎಂದು ಭಾವಿಸಿದ ಇವರು ಇರುವುದೆಲ್ಲವೂ ನಮ್ಮದು ಎಂದುಕೊಳ್ಳುತ್ತಾರೆ.
ಕನ್ನಡ ಜನಪದ ತ್ರಿಪದಿ ಸಾಹಿತ್ಯದಲ್ಲಿ ದೊರೆಯುವ ಎರಡು ತ್ರಿಪದಿಗಳನ್ನು ಇಲ್ಲಿ ಉಲ್ಲೇಖಿಸಿದರೆ ಜನಪದರ ಸಮಷ್ಟಿ ಪ್ರಜ್ಞೆ ಎಂತಹದ್ದು ಎಂಬುದು ಅರಿವಾಗುತ್ತದೆ.
ಸುಕ್ರವಾರದ ದಿನ ಸುಕದ ಸ್ಯಾವಿಗೆ ಮಾಡಿ |
ಅಕ್ಕ ದ್ಯಾಮವ್ವಾಗೆ ಎಡೆಮಾಡಿ | ಬೇಡಿದೆ |
ಸುತ್ತೇಳು ಬಳಗ ಸುಖವಿರಲಿ ||

'ಆಚಾರಕೆ ಅರಸಾಗು ನೀತಿಗೆ ಪ್ರಭುವಾಗು |
ಮಾತಿನಲಿ ಚೂಡಾಮಣಿಯಾಗು | ನನ ಕಂದ |
ಜ್ಯೋತಿಯೇ ಆಗು ಜಗಕೆಲ್ಲ'
ಇಲ್ಲಿನ ಮೊದಲ ಪದ್ಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾಥರ್ಿಸುವ ಸಮಯದಲ್ಲಿ ವೈಯುಕ್ತಿಕವಾಗಿ ನನಗೆ ಮಾತ್ರ ಒಳ್ಳೆಯದನ್ನು ಮಾಡು ಎಂದು ಬೇಡದೆ 'ಸುತ್ತೇಳು ಬಳಗ ಸುಖವಿರಲಿ' ಎಂಬುದಾಗಿ ಬೇಡುವುದರ ಮೂಲಕ ತಮಗಿರುವ ಸಮಷ್ಟಿ ಹಿತದ ಮನೋಭಾವನೆಯನ್ನು ಕಾಣಿಸುತ್ತಾರೆ. ಇನ್ನೂ ಎರಡನೇ ಪದ್ಯದಲ್ಲಿ ತಾಯಿ ತನ್ನ ಮಗು ಮುಂದೇನಾಗಬೇಕು ಎಂಬ ಕನಸನ್ನು ತನ್ನ ಎದೆ ಹಾಲಿನ ಜೊತೆಗೆ ಮಗುವಿಗೆ ಉಣಿಸುತ್ತಾ ಮಗನೇ ನೀನು ಮತ್ತು ನಿನ್ನ ಕುಟುಂಬವನ್ನು ಮಾತ್ರ ಬೆಳಗುವಂತಹ ದೀಪ ಮಾತ್ರವಾಗದೆ 'ಜ್ಯೋತಿಯೇ ಆಗು ಜಗಕೆಲ್ಲ' ಎಂದು ಹರಸುವ ತಾಯಿಯ ಭಾವನೆಯಲ್ಲಿ ವ್ಯಕ್ತಿಗತ ಹಿತವನ್ನು ಮೀರಿದ ಸಮಷ್ಟಿಯ ಹಿತ ಕಾಣುತ್ತದೆ. ಹಾಗಾಗಿಯೇ ಒಟ್ಟಾದರೆ ನಾವು ನಿಲ್ಲುತ್ತೇವೆ. ಒಡೆದರೆ ಬಿದ್ದು ಹೋಗುತ್ತೇವೆ ಎನ್ನುವ ಅರಿವು ಪ್ರಧಾನವಾಗಿದೆ. ಅನೇಕ ಜನಪದ ಸಂಪ್ರದಾಯ-ಆಚರಣೆಗಳಲ್ಲಿ ಸಮೂಹ ಪಾಲ್ಗೊಳ್ಳುವಿಕೆ ಬಹುಮುಖ್ಯ ಲಕ್ಷಣವಾಗಿದೆ. ಸಾಂಸ್ಕೃತಿಕ ನಾಯಕ-ನಾಯಕಿಯರೂ ಕೂಡ ತಮ್ಮ ಹೋರಾಟ ನಡೆಸಿದ್ದು ತಮಗಾಗಲಿ, ತಮ್ಮ ಕುಟುಂಬಕ್ಕಾಗಲಿ ಅಲ್ಲ ಬದಲಿಗೆ ಅವರನ್ನು ಒಳಗೊಂಡಂತೆ ಇಡೀ ಸಮೂಹದ ಹಿತಕ್ಕೆ. ಅದಕ್ಕಾಗಿಯೇ ಅವರು ಇಡೀ ಸಮುದಾಯದ ದೈವವಾಗುತ್ತಾರೆ.
ಸ್ತ್ರೀಪ್ರಧಾನ ಮೌಲ್ಯಗಳು
ಕನ್ನಡ ಜನಪದ ಸಂಸ್ಕೃತಿಯ ಪರಂಪರೆಯಲ್ಲಿ ಹೆಣ್ಣಿಗೆ ಬಹು ಮಹತ್ವದ ಸ್ಥಾನವಿದ್ದು ಕೆಲವೊಮ್ಮೆ ಗಂಡಿಗಿಂತ ಹೆಚ್ಚಿನ ಮಾನ್ಯತೆಗೆ ಒಳಗಾಗಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ಅವಳಿಗಿರುವ ಉತ್ಪಾದಕತೆಯ ಶಕ್ತಿ. ಯಾವುದೇ ಸಂಸ್ಕೃತಿಯ ಮೂಲದಲ್ಲಿ ಇದೇ ಗುಣ ಇರಲಿಕ್ಕೆ ಸಾಧ್ಯ. ಯಾರಲ್ಲಿ ಉತ್ಪತ್ತಿಮಾಡುವ ಶಕ್ತಿ-ಸಾಮಥ್ರ್ಯ ಇರುತ್ತದೆಯೋ ಅವರಿಗೆ ಸಮಾಜದಲ್ಲಿ ವಿಶೇಷ ಗೌರವ-ಸ್ಥಾನಮಾನಗಳು ಇರುತ್ತವೆ. ಹಲವಾರು ವರ್ಷಗಳಿಂದ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ಮಹಿಳೆಯ ಶಕ್ತಿ ಮತ್ತು ಸ್ವಾತಂತ್ರ್ಯವನ್ನು ಹರಣ ಮಾಡುತ್ತಾ ಬರಲಾಗಿದೆ. ಇದರ ಪರಿಣಾಮವಾಗಿ ಹೆಣ್ಣು ಎಂದರೆ ಸಮಾಜದ ದ್ವಿತೀಯ ದಜರ್ೆಯ ಪ್ರಜೆ ಎಂಬಂತಾಗಿದೆ. ಗಂಡಿಗಿಲ್ಲದ ಅನೇಕ ನಿರ್ಬಂಧಗಳನ್ನು ಈಕೆಯ ಮೇಲೆ ಹೊರಿಸಲಾಗಿದೆ. ಇದು ಯಾವ ದೃಷ್ಟಿಯಲ್ಲೂ ಸರಿಯಲ್ಲ ಎಂಬುದನ್ನು ಈಗಾಗಲೇ ಬಹುಪಾಲು ಜನ ಒಪ್ಪಿದ್ದಾರೆ. ಚರಿತ್ರೆಯ ಗತಿಯಲ್ಲಿ ಯಾತಕ್ಕಾಗಿ ಈ ತರಹದ ಪಲ್ಲಟಗಳಾದವು ಎಂಬುದರ ಬಗ್ಗೆಯೂ ಶೋಧನೆಗಳನ್ನು ನಡೆಸಲಾಗಿದೆ. ಇಂಥ ಶೋಧನೆಗಳಿಂದ ತಿಳಿದು ಬಂದಿರುವುದೇನೆಂದರೆ ಕಾಲದ ಚಲನೆಯಲ್ಲಿ ದುಡಿಮೆಯ - ಆಥರ್ಿಕ ಶಕ್ತಿಯ ಕೇಂದ್ರವಾಗಿದ್ದ ಮಹಿಳೆಯನ್ನು ಪುರುಷನ ಸವರ್ಾಧಿಕಾರದ ಮನೋಭಾವ ಮೂಲೆಗುಂಪಾಗಿಸಿದೆ. ಆಧುನಿಕ ಕಾಲಕ್ಕೆ ಬರುತ್ತಿದ್ದ ಹಾಗೆಯೇ ಈ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾಗಿ ಆಳವಾಗಿ ಬೇರೂರಿ ತನ್ನ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ.
ಈಗಾಗಲೇ ಹೇಳಿದಂತೆ ಜನಪದ ಸಂಸ್ಕೃತಿಯಲ್ಲಿ ಹೆಣ್ಣು ಸಮಾನ ಉತ್ಪತ್ಯಾತ್ಮಕ ಘಟಕ. 'ಹೆಣ್ಣನ್ನು, ಗೋವನ್ನು, ಬ್ರಾಹ್ಮಣನನ್ನು ಕೊಲ್ಲಬಾರದು' ಎಂಬ ಇವೊತ್ತಿನ ಶಿಷ್ಟಧಾರೆಗಳ ನಾಣ್ನುಡಿ ಜನಪದ ಸಮಾಜದಲ್ಲಿ ಒಂದು ನಂಬಿಕೆ ಮತ್ತು ನಡಾವಳಿ. ಇದರಲ್ಲಿ ಅವೈದಿಕ ವಿರೋಧಿ ನೀತಿಗಳಿವೆ ಎಂಬುದನ್ನು ಅರಿತು ನೋಡುವುದಾದರೆ ಹೆಣ್ಣು-ಗೋವುಗಳನ್ನು ಹೋಲಿಸಿ ನೋಡಿರುವುದರಲ್ಲಿ ಅರ್ಥವಿದೆ. ಕೃಷಿ-ಪಶುಪಾಲನೆಯ ಸಾಂಸ್ಕೃತಿಕ ಹಿನ್ನೆಲೆಯಿರುವ ಈ ಪರಂಪರೆಗಳು ಹೆಣ್ಣನ್ನು ಉತ್ಪತ್ತಿಯ ಮೂಲ ಸಾಧನವಾಗಿ ಕಂಡಿರುವುದರಲ್ಲಿ ವಿಶೇಷವೇನೂ ಇಲ್ಲ. ಗಂಡಿನಂತೆಯೇ ಕೆಲವೊಮ್ಮೆ ಗಂಡಿಗಿಂತಲೂ ಮಿಗಿಲಾಗಿ ಕೃಷಿ ಹಾಗೂ ಮತ್ತಿತರ ಮೂಲ ವೃತ್ತಿಗಳಲ್ಲಿ ಮಹಿಳೆ ದುಡಿದಿದ್ದಾಳೆ. ಸಾಮಾನ್ಯ ಜನರು ಹೆಣ್ಣನ್ನು ಕೊಲ್ಲಬಾರದು ಎಂಬಲ್ಲಿ ಆಥರ್ಿಕ ಶಕ್ತಿಯ ಸಂರಕ್ಷಣೆಯೇ ಆಗಿರುವುದನ್ನು ಗಮನಿಸಬೇಕು.
ಈ ಸಮಾಜದೊಳಗೆ ಹೆಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಬರುವುದಕ್ಕೆ ಇರುವ ಮತ್ತೊಂದು ಕಾರಣ ಸಂತಾನ ಅಭಿವೃದ್ಧಿಯದು. ಆದಿಮಾನವನ ಆರಂಭದ ದಿನಗಳಲ್ಲಿ ಮಕ್ಕಳು ಕೇವಲ ಮುದ್ದಿನ ಜೀವಗಳಲ್ಲ. ಬದಲಿಗೆ ದುಡಿಮೆಯ ಶಕ್ತಿಗಳು. ಇಂಥ ಶಕ್ತಿಗಳಿಗೆ ಜನ್ಮ ನೀಡಿದಕ್ಕಾಗಿಯೇ ಮಹಿಳೆಗೆ ಮಹತ್ವ ಸ್ಥಾನ. ಭೂಮಿ ಕೂಡ ಫಲ ನೀಡುವ ತಾಣ. ಇದನ್ನು ಮನಗಂಡ ಮಾನವ ಭೂಮಿ ಮತ್ತು ಹೆಣ್ಣನ್ನು ಸಾಮ್ಯತೆಯ ದೇವತೆಗಳಂತೆ ಕಂಡಿದ್ದಾನೆ. ಇದಿಷ್ಟೆ ಅಲ್ಲ ಗಂಡಿನಂತೆ ಹಲವಾರು ಕೆಲಸಗಳಲ್ಲಿ ಭಾಗಿಯಾಗುವ ಮಹಿಳೆ ಒಮ್ಮೊಮ್ಮೆ ಗಂಡಿನಷ್ಟೇ ಶಕ್ತಿಶಾಲಿ. ಗಂಡನ್ನು ಅಷ್ಟೇ ಅಲ್ಲ ಊರನ್ನೂ ಕಾಪಾಡುವಷ್ಟು ಸಮರ್ಥಳಾಗಿರುತ್ತಾಳೆ. ಆ ಕಾರಣಕ್ಕಾಗಿಯೇ ದೇವತೆಗಳಾಗಿ ಪೂಜನೀಯರಾಗಿದ್ದಾರೆ. ಗ್ರಾಮ ಸಮಾಜದಲ್ಲಿ ಇಂದಿಗೂ ಪ್ರಚಲಿತ ವಿರುವ ಗ್ರಾಮ ದೇವತೆಗಳ ಸಂಖ್ಯೆ ಮತ್ತು ಸ್ವರೂಪವನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ.
ಒಟ್ಟಾರೆ ಮಹಿಳೆ ಆದಿಮಾನವನ ಆರಂಭಿಕ ದಿನಗಳಲ್ಲಿ ತನ್ನ ಶಕ್ತಿ ಸಾಮಥ್ರ್ಯ ಹಾಗೂ ಪಾತ್ರ ನಿರ್ವಹಣೆಯಲ್ಲಿ ಮಹತ್ವದ ಅಸ್ತಿತ್ವವನ್ನು ಸ್ಥಾಪಿಸುವುದರ ಮೂಲಕ ಸಮಾನತೆಯ ಸ್ಥಾನವನ್ನು ಪಡೆದಿದ್ದಳು.  ಆದರೆ ಬರು ಬರುತ್ತಾ ಮಹಿಳೆಯನ್ನು ಅಡುಗೆಮನೆಗೆ ಮಾತ್ರ ಸೀಮಿತ ಮಾಡಿದ್ದರಿಂದ ಹಿಂದಿನ ಸ್ಥಾನಮಾನ ಕಳೆದುಕೊಂಡು ಹಿನ್ನೆಲೆಗೆ ಸರಿಯುವಂತಾಯಿತು. ಈ ಕುರಿತಂತೆ ಸಾಕಷ್ಟು ಚಿಂತನೆಗಳು ನಡೆದಿದ್ದು ಅದರಿಂದ ಹೊರ ಬಂದ ಸಂದೇಶವಿಷ್ಟು: ಮೂಲ ವೃತ್ತಿ ಸಂಸ್ಕೃತಿಯಲ್ಲಿ ಹೆಣ್ಣು ದುರ್ಬಲೆಯಲ್ಲ. ಅವಳ ಎಲ್ಲಾ ಉತ್ಪಾದನೆಗಳು 'ಮೂಲ-ಪಾವಿತ್ರ್ಯ, ಪೂಜೆ, ವ್ಯಾಪಾರ, ಕೈಗಾರಿಕಾ ಸಂಸ್ಕೃಇಗಳ ಹುಟ್ಟಿನೊಂದಿಗೆ ಅಂದರೆ ಎರಡನೇ ಹಂತದ ವೃತ್ತಿಗಳ ಉದಯದೊಂದಿಗೆ ಅವಳ ಪಾವಿತ್ರ್ಯ ಅವುಗಳಿಗೆ ವರ್ಗವಾಗಿ ತಾನು ಹಿಂದೆ ತಳಲ್ಪಟ್ಟಿದ್ದಾಳೆ. ಡಿ ಜನರೇಟ್ ಆಗಿ ಸೇವಕಿಯಾಗಿದ್ದಾಳೆ'.
ಆಥರ್ಿಕ ಆಯಾಮಗಳು
ಜನಪದ ಸಮಾಜಗಳಲ್ಲಿ ಆರಂಭದಿಂದಲೂ ಒಂದು ರೀತಿಯ ಆಥರ್ಿಕ ನೀತಿ ಇದ್ದೇ ಇತ್ತು. ಅದು ವಸ್ತುವಿನಿಮಯ ಪದ್ಧತಿ ಇರಬಹುದು. ಆಯಗಾರರ ಕಲ್ಪನೆ ಇರಬಹುದು. ಮುಯ್ಯಿ ತೀರಿಸುವ ಪದ್ಧತಿಗಳಿರಬಹುದು. ಈ ಸಮಾಜಗಳ ಆಥರ್ಿಕತೆಗೆ ಸೀಮಿತ ವ್ಯಾಪ್ತಿಯಿದ್ದು ಒಂದು ಸಮುದಾಯದ, ಒಂದು ಊರಿನ ಅಗತ್ಯತೆಯನ್ನು ಈಡೇರಿಸುವ ಉದ್ದೇಶವಿರುತ್ತಿತ್ತು. ಇಂಥ ಸ್ವರೂಪದಲ್ಲಿ ರೂಪತಳೆದಿದ್ದ ಜಾನಪದ ಆಥರ್ಿಕ ವ್ಯವಸ್ಥೆಯನ್ನು ಕುರಿತ ಸ್ಪಷ್ಟ ತಿಳುವಳಿಕೆ ನಮಗೆ ಇಲ್ಲವಾಗಿದೆ. ಹಾಗಾಗಿಯೇ ಆಥರ್ಿಕತೆ ಎನ್ನುವುದು ಆಧುನಿಕ ಕಾಲದ ಫಲ ಎಂದು ತಪ್ಪಾಗಿ ಭಾವಿಸಲಾಗಿದೆ. ಇದರಿಂದ ಅಪಾಯಗಳಿಲ್ಲದ ಆಥರ್ಿಕತೆಯನ್ನು ಕಲ್ಪಿಸಿಕೊಳ್ಳುವುದು ನಮಗೆ ಕನಸಾಗಿದೆ. ಅಪಾಯವಿಲ್ಲದ ಆಥರ್ಿಕತೆಯನ್ನು ಗಮನಿಸಿ ಮರು ಅಳವಡಿಸಿ ಕೊಳ್ಳುವುದು ಇಂದಿನ ತುತರ್ು ಎನಿಸುತ್ತಿದೆ. ಕನ್ನಡ ಜನಪದಗಳ ಆಥರ್ಿಕತೆಯ ಪ್ರಮುಖ ಲಕ್ಷಣಗಳನ್ನು ಹೀಗೆ ಗುರುತಿಸಬಹುದು. ಪರಿಸರ ಸ್ನೇಹಿ ಕಾಯಕ ನಿಷ್ಠೆ, ಶ್ರಮ ಸಹಿತ ದುಡಿಮೆ, ಸಂಪತ್ತಿನ ವಿಕೇಂದ್ರೀಕರಣ, ವೃತ್ತಿ ಸಮಾನತೆ, ಸರಳ ಜೀವನ ಇವೇ ಮುಂತಾದವು.ಈ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿಕೊಳ್ಳಬಹುದು.
ಜನಪದರ ಆಥರ್ಿಕತೆ ಪ್ರಕೃತಿ ಕೇಂದ್ರಿತವಾದುದು. ಪರಿಸರ ಸ್ನೇಹಿಯಾದುದು. ಅಂದರೆ ತಾವು ಮಾಡುವ ಆಥರ್ಿಕ ಚಟುವಟಿಕೆಗಳಿಂದ ಪ್ರಕೃತಿಗೆ ಯಾವುದೇ ರೀತಿಯ ಹಾನಿಯುಂಟಾಗಬಾರದು ಎಂಬ ಭಾವನೆ ಇಲ್ಲಿ ಪ್ರಧಾನ. ಇವರು ಯಾವುದೇ ವೃತ್ತಿ ಮಾಡಿದಾಗಲೂ ಅಲ್ಲಿ ಅವರು ಬಳಸುವ ವಸ್ತುಗಳನ್ನು ಮರು ಸೃಷ್ಠಿ ಹಾಗೂ ಮರುಬಳಕೆಗೆ ಅನುಕೂಲವಾಗುವಂತೆ ಬಳಸುತ್ತಾರೆ. ಈ ಹೊತ್ತಿನ ರೀತಿ ಬಳಸಿ ಬಿಸಾಕುವ  'ಗಜ ಚಿಟಿಜ ಖಿಡಿಠಣರ' ಕ್ರಮ ಇವರದಲ್ಲ. ಉದಾ: ಒಂದು ಮಡಿಕೆ ತೆಗೆದುಕೊಳ್ಳಿ ಅದನ್ನು ಮೊದಲು ಅಡಿಗೆ ಮಾಡಲು, ನೀರು ತುಂಬಲು ಬಳಸುತ್ತಾರೆ. ಬಳಸುತ್ತಾ ಅದು ತೂತಾದಾಗ ಅದನ್ನು ಕಾಳು ತುಂಬಿಡಲು ಅಥವಾ ಏನನ್ನಾದರೂ ವಸ್ತುಗಳನ್ನು ಸಂಗ್ರಹಿಸಿಡಲು ಬಳಕೆ ಮಾಡಲಾಗುತ್ತದೆ. ಕಾಳು-ಕಡ್ಡಿ ಸಂಗ್ರಹಿಸಲು ಆಗದಷ್ಟು ರಂದ್ರಗಳು ದೊಡ್ಡವುಗಳಾದರೆ ಅದನ್ನು ಹೊಲದಲ್ಲಿ ಬೆದರುಗೊಂಬೆ ಮಾಡಲು ಉಪಯೋಗಿಸುತ್ತಾರೆ. ಅದಕ್ಕೂ ಬರದಂತೆ ಚೂರು ಚೂರಾಗಿ ಒಡೆದರೆ ಮನೆಯ ಯಾರಾದರೂ ವ್ಯಕ್ತಿಗಳಿಗೆ/ಸದಸ್ಯರಿಗೆ ನಿವಾಳಿಸಿ ಎಸೆಯುವ ಶಾಸ್ತ್ರಕ್ಕೆ ಬಳಸುತ್ತಾರೆ. ಅದರ ನಂತರ ರೈತ ಮಹಿಳೆ ಶೇಂಗಾ ಕೆದರಲು ಬಳಸುತ್ತಾಳೆ. ಇದರ ನಂತರವೂ ಮಕ್ಕಳು ಚಿಕ್ಕ ಮಡಿಕೆ ಚೂರನ್ನು ತೂರಾ ಬಿಲ್ಲೆ ಆಟ ಆಡಲು ಬಳಸುತ್ತಾರೆ. ಇಂಥ ಅನೇಕ ಉದಾಹರಣೆೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರಿಂದ ತಿಳಿದು ಬರುವ ಸಂಗತಿಗಳೆಂದರೆ ಜನಪದದ ಆಥರ್ಿಕತೆ ಮುಖ್ಯವಾಗಿ ಅವರ ವೃತ್ತಿಗಳು ಮತ್ತು ಸೇವಾ ಮನೋಭಾವಗಳ ತಳಹದಿಯ ಮೇಲೆ ರೂಪುಗೊಂಡಿದ್ದು ಪ್ರಕೃತಿಗೆ ಘಾಸಿಗೊಳಿಸುವ ಅಥವಾ ಪ್ರಕೃತಿಯನ್ನೆ ನಾಶಗೊಳಿಸುವ ಯಾವುದೇ ಕೆಲಸಗಳು ಇಲ್ಲಿ ನಡೆಯುವುದಿಲ್ಲ.
ಜನಪದ ಆಥರ್ಿಕ ಜೀವನದಲ್ಲಿ ದೇಹ ಶ್ರಮವೇ ಜೀವಾಳ ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬುದು ಇಲ್ಲಿನ ಪ್ರಧಾನ ನಂಬಿಕೆ. ಹಾಗಾಗಿ ಇವರಿಗೆ ದೇಹ ಬಗ್ಗಿಸಿ ಕೆಲಸ ಮಾಡುವುದು ಆನಂದದಾಯಕ ಕಾರ್ಯ. ಹೀಗೆ ದುಡಿಯದಿದ್ದರೆ ಇವರಿಗೆ ಮೈನೋವು. ಹಾಗಾಗಿ ಜನಪದ ಬದುಕಿನೊಳಗೆ ದುಡಿಮೆ ಒಂದು ಬಹುದೊಡ್ಡ ಮೌಲ್ಯವಾಗಿದೆ. ಆದ್ದರಿಂದಲೇ ಮನುಷ್ಯನಾಗಿ ಹುಟ್ಟಿದವನಿಗೆ ಶ್ರಮವಿಲ್ಲದೆ ತಿಂದು ಜೀವಿಸುವುದು ಒಂದು ಅಪರಾಧ ಎಂಬುದು ಇಲ್ಲಿ ತಿಳುವಳಿಕೆ. 'ಮಾಡಿದವ ಉಂಡ ಮಲಗಿದವ ಕೆಟ್ಟ' ಎಂಬ ಅನುಭವ ಮಾತು ಮೆಲಿನ ಎಲ್ಲಾ ವಿಚಾರಗಳನ್ನು ಸರಿಯಾಗಿಯೇ ಪ್ರತಿಪಾದಿಸುತ್ತದೆ. ದೇಹ ಶ್ರಮ ಮಾನವನ ಉನ್ನತಿಗೆ ಉತ್ತಮ ಮೆಟ್ಟಿಲು ಎಂಬ ಸದಾಶಯದೊಂದಿಗೆ ತಮ್ಮ ಜೀವನ ಸಾಗಿಸುವ ಜನಪದರು 'ಆಳಾಗ ಬಲ್ಲವ ಅರಸಾಗ ಬಲ್ಲ' ಎಂಬುದನ್ನು ಬದುಕಿ ತೋರಿಸಿದ್ದಾರೆ. ಇಂಥ ಕಾರಣಗಳಿಂದಾಗಿಯೇ ಪರಂಪರೆಯಲ್ಲಿ ಬೆವರು ಸುರಿಸಿ ದುಡಿವ ಕುಟುಂಬ ಹಾಗೂ ವ್ಯಕ್ತಿಗಳಿಗೆ ದೊಡ್ಡ ಗೌರವವಿದೆ. ಆದರೆ ಈ ಮೌಲ್ಯ ನಂತರದ ದಿನಗಳಲ್ಲಿ ಬದಲಾಗಿರುವುದನ್ನು ಕಾಣುತ್ತಿದ್ದೇವೆ. ಬದಲಾದ ಕಾಲಮಾನದಲ್ಲಿ ಈ ಮೌಲ್ಯ ತಿರುವು-ಮುರುವು ಆಗಿದ್ದು ಕೂತು ತಿನ್ನುವ, ಬೆವರಿಲ್ಲದ ದುಡಿವ, ಬಿಳಿಕೊಳಪಟ್ಟಿಯ ಉದ್ಯೋಗಸ್ಥರಿಗೆ ಇಂದು ಇನ್ನಿಲ್ಲದ ಪ್ರಾಮುಖ್ಯತೆ ಸಿಕ್ಕಿಬಿಟ್ಟಿದೆ.

ದುಡಿಮೆಯ ಮೌಲ್ಯವಾಗಿದ್ದ ಜನಪದ ಸಮಾಜದೊಳಗೆ ದುಡಿಮೆಯ ಕ್ಷೇತ್ರಗಳು ಎಷ್ಟೊಂದು!? ಉದಾ: ಕೃಷಿಯಂಥ ಕ್ಷೇತ್ರವನ್ನೆ ನೋಡಿ ಇಲ್ಲಿ ಎಲ್ಲಾ ವಯೋಮಾನದ ವ್ಯಕ್ತಿಗಳಿಗೂ ದುಡಿಯುವ ಅವಕಾಶವಿದೆ. ಉಳುಮೆ, ಬಿತ್ತನೆ, ಕಳೆತೆಗೆಯುವುದು, ಕಟಾವು, ಕಣದ ಕೆಲಸಗಳು ಇತ್ಯಾದಿ. ಒಟ್ಟಾರೆ ಜನಪದರ ಸಂಸ್ಕೃತಿಯು ನಿಂತಿರುವುದೇ ಶ್ರಮದ ನೆರಳಲ್ಲಿ; ಶ್ರಮದ ಅಡಿಪಾಯದಲ್ಲಿ ಎಂದರೆ ತಪ್ಪಾಗಲಾರದು. ಎಂಥದ್ದೇ ಕೆಲಸವನ್ನು ಸಮಾನ ಗೌರವದಿಂದ ಕಂಡ ಅದ್ಭುತ ಲೋಕವಿದು. ಮೂಲ ಮಾನವನ ಬದುಕಿನಲ್ಲಿದ್ದ ಆಯಾಗಾರರ ಕಲ್ಪನೆಯನ್ನು ಗಮನಿಸಿ ಆ ವ್ಯವಸ್ಥೆಯಲ್ಲಿ ಕೃಷಿ ಮಾಡುವ ರೈತನಷ್ಟೇ ನೇಯುವ ನೇಕಾರನಿಗೂ, ಹೊಲೆಯುವ ಮಾದಿಗನಿಗೂ ಗೌರವದ ಸ್ಥಾನಮಾನಗಳು ದಕ್ಕಿವೆ. ಜನಪದ ಬದುಕಿನೊಳಗೆ ಉಸಿರಾಡುವ ಇಂಥ ಮೌಲ್ಯಗಳಿಗೆ ಕೊರತೆಯಿಲ್ಲ. ಮಾಡುವ ವೃತ್ತಿಯನ್ನು ಗೌರವದಿಂದ ಮಾಡಬೇಕೆಂಬುದು ಇಲ್ಲಿಯ ಬಹುಮುಖ್ಯ ಆಶಯವಾಗಿದ್ದು, ಇಂಥ ಭಾವನೆಯನ್ನು ಈ ಕೆಳಗಿನ ತ್ರಿಪದಿಯೊಂದು ಹೀಗೆ ಬಿಂಬಿಸುತ್ತದೆ.
ಕಸವು ಹೊಡೆದ ಕೈಯು ಕಸ್ತೂರಿ ನಾತಾವ|
ಬಸವಣ್ಣ ನಿನ್ನ ಸಗಣೀಯ | ಬಳದ ಕೈ
ವಿಸಳ ಯಾಲಕ್ಕಿ ಗೊನಿ ನಾತ ||
ಇಂಥ ಚರಿತ್ರೆಯೊಂದಿರುವ ಕನ್ನಡ ನಾಡಿನೊಳಗೆ ಆಧುನಿಕತೆಯ ಪ್ರಭಾವದಿಂದ ದೇಹ ಶ್ರಮವನ್ನು ಗೌಣ ಮೌಲ್ಯದಂತೆ ಕಾಣುತ್ತಿರುವುದು ವಿಷಾದನೀಯ. ದೇಹ ಶ್ರಮದಿಂದ ದೂರ ಸರಿದ ಇಂದಿನ ಜನ ಆರೋಗ್ಯವನ್ನು ಕಳೆದುಕೊಂಡಿರುವುದು ಗಮನಿಸಬೇಕಾದ ಸಂಗತಿ. ಆರೋಗ್ಯಕ್ಕಾಗಿ ದೇಹ ಶ್ರಮವನ್ನು ವ್ಯರ್ಥಮಾಡುತ್ತಿರುವ ಇಂದಿನ ಸಂದರ್ಭಕ್ಕೆ ಏನನ್ನ ಬೇಕೋ ತಿಳಿಯದು. ಆರೋಗ್ಯ - ಆಹಾರವನ್ನು ನೀಡುತ್ತಿದ್ದ ದೇಹ ಶ್ರಮದ ತೀವ್ರ ಕೊರತೆಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಇದೇ ಕಾಲಕ್ಕೆ ಶ್ರಮರಹಿತ ಉದ್ಯೋಗ ಕ್ಷೇತ್ರಗಳು ತೀವ್ರ ಒತ್ತಡದಲ್ಲಿ ಸಿಕ್ಕಿಕೊಂಡಿವೆ. ಇಂಥ ಅಸಮತೋಲನದ ಕಾರಣದಿಂದಾಗಿಯೇ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗದೆ ಅನೇಕ ಸಮಸ್ಯೆಗಳಿಗೂ ಕಾರಣವಾಗಿದೆ.
ಕನ್ನಡ ಜನಪದ ಸಂಸ್ಕೃತಿಯ ಸಾಮಾನ್ಯ ಲಕ್ಷಣಗಳಲ್ಲಿ ಭೌತಿಕ ಸಂಪತ್ತಿನ ನಿರಾಕರಣೆಯೂ ಒಂದಾಗಿದೆ. ಹಾಗೆಯೇ ಬೌದ್ಧಿಕ ಅಂದರೆ ಆಂತರಿಕ ಗುಣ ಸಂಪನ್ನತೆಯನ್ನು ಪಡೆಯುವ ಗುಣವೂ ಇದೆ. ಆದ್ದರಿಂದಲೇ ಜನಪದ ಜೀವನದಲ್ಲಿ ಬಾಹ್ಯ ಸಂಪತ್ತಿಗಿಂತ ಆಂತರಿಕ ಸಂಪತ್ತಿಗೆ ಹೆಚ್ಚಿನ ಬೆಲೆಯಿದೆ. ಒಬ್ಬ ವ್ಯಕ್ತಿಯ ಬಳಿ ಎಷ್ಟು ಹಣವಿದೆ ಆಸ್ತಿಯಿದೆ ಎನ್ನುವುದಕ್ಕಿಂತ ಎಷ್ಟು ಗುಣ ಸಂಪನ್ನನಾಗಿದ್ದಾನೆ ಎಂಬುದು ಬಹಳ ಮುಖ್ಯವಾಗುತ್ತದೆ. ಇವರು ಬದುಕಿನೊಳಗೆ ಬಾಹ್ಯ ಸಂಪತ್ತು ಕ್ಷಣಿಕವೂ ಆಂತರಿಕ ಸಂಪತ್ತು ಶಾಶ್ವತವೂ ಎಂಬ ಸ್ಪಷ್ಟ ಕಲ್ಪನೆಯಿದೆ. ಹಾಗಾಗಿಯೇ ಅನೇಕ ಜಾನಪದ ಅಭಿವ್ಯಕ್ತಿಗಳಲ್ಲಿ ಇಂಥ ಭಾವಗಳು ವ್ಯಕ್ತವಾಗಿವೆ. ಗರತಿಯೊಬ್ಬಳು ಹೇಳುವ ತ್ರಿಪದಿಯೊಂದನ್ನು ಗಮನಿಸಿ.
ಬಂಗಾರ ಬಳಿಯಿದ್ರೆ ಬೈ ಬೇಡ ಬಡವರಿಗೆ |
ಬಂಗಾರ ನಿನಗೆ ಸ್ಥಿರವಲ್ಲ | ಮಧ್ಯಾಹ್ನದ |
ಬಿಸಿಲು ಹೊರಳುವುದು ತಡವಲ್ಲ ||
ಬಂಗಾರದಂತಹ ಸಂಪತ್ತು ಮಧ್ಯಾಹ್ನದ ಬಿಸಿಲಿನಂತೆ ಕ್ಷಣಿಕ ಎಂಬ ಅರ್ಥ ಇಲ್ಲಿದೆ. ಹಾಗಾದರೆ ಇವರು ಬಯಸುವ ಆಂತರಿಕ ಸಂಪತ್ತು ಎಂಥದ್ದು? ಎಂದರೆ ಅದಕ್ಕೆ ಮತ್ತೊಂದು ತ್ರಿಪದಿ ಸರಳವಾಗಿ ಹೀಗೆ ಉತ್ತರಿಸುತ್ತದೆ.
ಮುತ್ತು ಮಾಣಿಕ ಬೇಡ ಮತ್ತೆ ಸಂಪದ ಬೇಡ |
ಸುತ್ತು ಕೋಟಿಯ ವೈಭವ ಬೇಡ | ನನ್ನವ್ವ|
ಸುತ್ತೆಲ್ಲ ಜನಪದ ಹಾಡಿರಲಿ ||
ಇಲ್ಲಿನ ಮಾತುಗಳಲ್ಲಿ ಬಾಹ್ಯ ಸಂಪತ್ತಿಗೆ ಪಯರ್ಾಯವಾಗಿ 'ಜನಪದ ಹಾಡು' ಇರಲಿ ಎಂಬುದಾಗಿ ಆಶಿಸಲಾಗಿದೆ. ಇದನ್ನು ಸರಳವಾಗಿ ಅಥರ್ೈಯಿಸದೆ ಗಂಭೀರವಾಗಿ ಆಲೋಚಿಸಿದರೆ ಜನಪದ ಹಾಡು ಎಂಬುದಕ್ಕೆ ವಿಶೇಷ ಅರ್ಥ ಹೊಳೆಯುತ್ತದೆ. ಜನಪದ ಹಾಡು ಕೇವಲ ಅಕ್ಷರಗಳ ಸಂಯೋಜನೆಯಲ್ಲ; ರಾಗರಚನೆಯಲ್ಲ ಇವುಗಳಾಚೆಗಿನ ಅರ್ಥವಿದ್ದು ಅದೆಂದರೆ ಜನಪದ ಹಾಡೆಂದರೆ ಜನ-ಜೀವನದ ಮಾನವೀಯ ಮೌಲ್ಯಗಳ ಮಾರ್ಗದಶರ್ಿ ಇದರಲ್ಲಿ ಸುಖೀ ಬದುಕಿಗೆ ಅಗತ್ಯವಾದ ಸಮಗ್ರ ಸೂತ್ರಗಳಿವೆ.
'ಮಂಟೇಸ್ವಾಮಿ' ಜನಪದ ಮಹಾಕಾವ್ಯದಲ್ಲಿ ಜನಪದರ ಈ ಮೌಲ್ಯಗಳ ಸಮಗ್ರ ವಿವರಗಳಿವೆ. ಸಾಂಸ್ಕೃತಿಕ ನಾಯಕನಾದ ಮಂಟೇಸ್ವಾಮಿ ತನ್ನ ಪರಂಪರೆಯನ್ನು ಕಟ್ಟಲು ಬಯಸಿದ್ದು ಹಣ-ಆಸ್ತಿಗಳಿಂದಲ್ಲ. ಮುಖ್ಯವಾಗಿ ಮಾನವೀಯ ಸ್ವರೂಪದ ಸಂಪನ್ಮೂಲಗಳನ್ನು. ಹಾಗಾಗಿ ಭಿಕ್ಷೆಗೆ ಹೋದ ಮಂಟೇಸ್ವಾಮಿಗೆ ಯಾರಾದರು ಹಣವನ್ನೋ, ಧಾನ್ಯವನ್ನೋ ನೀಡಿದರೆ ಅದನ್ನು ಸ್ಪಷ್ಟವಾಗಿ ನಿರಾಕರಿಸುತ್ತಾನೆ. ಈ ಸಂಪತ್ತು ಏನಿದ್ದರೂ ನಿಜರ್ೀವ ಸ್ಥಿತಿಯದ್ದು. ಹಾಗಾಗಿ ನನಗೆ ಅಂಥ ಭಿಕ್ಷೆ ಬೇಡ. ನನಗೆ ಬೇಕಿರುವುದು ಮಾತನಾಡುವ ಭಿಕ್ಷೆ ಎನ್ನುತ್ತಾನೆ. ಅಂದರೆ ಮಾನವ ಸಂಪನ್ಮೂಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ವದ ಸಂಗತಿ ಎಂದರೆ ಮಂಟೇಸ್ವಾಮಿಗೆ ಶತ್ರುಗಳೆನಿಸಿದವರೆಲ್ಲರೂ ಭೌತಿಕ ಆಸ್ತಿ-ಅಂತಸ್ತುಳ್ಳ ಶ್ರೀಮಂತರು. ಉದಾ: ಪಾಂಚಾಳರು, ಕೆಂಪಾಚಾರಿ, ಮುದ್ದಮ್ಮ ಇಂಥ ಶ್ರೀಮಂತರ ಸೊಕ್ಕು ಮುರಿದು ಶ್ರೀಮಂತಿಕೆಗೆ ಸಮಾಜದಲ್ಲಿ ಯಾವ ಬೆಲೆಯೂ ಇಲ್ಲ ಎಂಬ ಅರಿವು ಮೂಡಿಸುವುದು ಮಂಟೇಸ್ವಾಮಿಯ ಪ್ರಮುಖ ಗುರಿಯಾಗಿದೆ.
ಇಂಥ ಮೌಲ್ಯಯುತ ಸಮಾಜ ಇಂದು ತಲುಪಿರುವ ಸ್ಥಿತಿ ಎಂಥವರನ್ನು ಚಿಂತೆಗೀಡು ಮಾಡುತ್ತದೆ. ಈ ಹೊತ್ತಿನ ಸಮಕಾಲೀನ ಸಮಾಜದ ಆಕರ್ಷಕ ಸಂಗತಿ ಎಂದರೆ ಹಣ-ಆಸ್ತಿಗಳ ಸಂಪಾದನೆ. ಸಂಪಾದನೆಯ ಮಾರ್ಗ ಯಾವುದಾದರೂ ಸರಿ ಶ್ರೀಮಂತರಾಗಬೇಕಷ್ಟೆ. ಇಂಥ ಮನೋಭಾವಗಳಿಂದಾಗಿ ಇಂದಿನ ಸಾಮಾಜಿಕ ಪರಿಸ್ಥಿತಿಗಳು ಈ ಸ್ಥಿತಿಗೆ ತಲುಪಿವೆ.
ರಾಜಕೀಯ ಸ್ಥಿತಿ
ಜನಪದ ಜೀವನದಲ್ಲಿ ಅದರದೇ ಆದ ರಾಜಕೀಯ ಪರಿಸ್ಥಿತಿ ಜಾರಿಯಲ್ಲಿರುವುದಕ್ಕೆ ಅನೇಕ ರೀತಿಯ ಆಧಾರಗಳಿವೆ. ಇಂದಿನ ಕಾಲದ ರಾಜಕೀಯ ವಿದ್ಯಾಮಾನಗಳಂತೆ ಬಹುದೊಡ್ಡ ಸ್ಥಾನದಲ್ಲಿ ರಾಜಕೀಯ ಪರಿಸ್ಥಿತಿ ಇರಲಿಲ್ಲ. ಈ ದೇಶ ವಸಾಹತು ನೀತಿಗೆ ಒಳಗಾದ ನಂತರದ ದಿನಗಳಲ್ಲಿ ಜನಸಾಮಾನ್ಯರು ನೇರವಾಗಿ ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಳ್ಳುವಂತಾಗಿ ತಮ್ಮದೇ ಆದ ರಾಜಕೀಯ ನಿಲುವುಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಜನಪದ ಸಮಾಜಗಳ ಆರಂಭದ ಸ್ಥಿತಿಯಲ್ಲಿ ಸ್ಥಾನಿಕ ಆಡಳಿತ ವಿಶಿಷ್ಟ ರೂಪ ಪಡೆದಿದ್ದು, 'ಆಡಳಿತವು ಗೌಡ, ಶಾನುಭೋಗ, ತಳವಾರ, ನೀರುಗಂಟಿ, ಮಣೆಗಾರ, ಚಮ್ಮಾರ, ಅಗಸ, ಕಮ್ಮಾರ ಮೊದಲಾದ ಆಯಗಾರರಿಂದ ಕೂಡಿದ ವ್ಯವಸ್ಥೆಯಾಗಿತ್ತು' ಇವರು ಬದುಕಿನಲ್ಲಿ 'ಧರ್ಮ ಮತ್ತು ರಾಜಕಾರಣಗಳು ಮಕ್ಕಳ ಬದುಕನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡ ವ್ಯವಸ್ಥೆಯೂ ಇತ್ತು. ಸಂಸ್ಥಾನಿಕರು, ಪಾಳೆಯಗಾರರು, ರಾಜರುಗಳು ಹಲವು ಬಗೆಯ ಕರ ಕಂದಾಯಗಳನ್ನು ಹೇರಿ ಜನಸಾಮಾನ್ಯರ ಬದುಕನ್ನು ಇಕ್ಕಟ್ಟಿಗೆ ಗುರಿಪಡಿಸಿದ್ದರು. ಊಳಿಗಮಾನ್ಯ ಪದ್ಧತಿ ರೂಢಿಯಲ್ಲಿತ್ತು. ಯಜಮಾನ ಸಂಸ್ಕೃತಿಯು ಆಳರಸರ ತುತ್ತೂರಿಯಾಗಿತ್ತು. ಜನ ಸಾಮಾನ್ಯರ ಸಂಪರ್ಕಕ್ಕೆ ಬಾರದೆ ಜನ ದೂರ ಪಟ್ಟಣಗಳಲ್ಲಿ ವೈಭವದ ಬದುಕು ನಡೆಸುತ್ತಿದ್ದ ಆಳರಸರ ತೆವಲುಗಳಿಗೆ, ರಣೋತ್ಸಾಹಗಳಿಗೆ ಅಧಿಕಾರ, ರಾಜ್ಯದಾಹಗಳಿಗೆ ಜನಸಾಮಾನ್ಯರು ಚದುರಂಗದ ಕಾಯಿಗಳಾಗಿದ್ದರು'
ಆದರೂ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲವು ಸಾಮಂತರು, ಪಾಳೆಗಾರರು ಹಾಗೂ ಅರಸರ ಬಗ್ಗೆ ದಾಖಲಾಗಿರುವ ವಿಷಯಗಳನ್ನು ಗಮನಿಸಿದರೆ ರಾಜಪ್ರಭುತ್ವದ ನಾಯಕರು ಕೇವಲ ದರ್ಪ-ದೌರ್ಜನ್ಯಗಳಲ್ಲೇ ಬದುಕಿದರು ಎಂದು ಹೇಳಲಾಗದು. ಜನಸಾಮಾನ್ಯರಿಗೆ ಬಂದ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತ ಸ್ಪಂದಿಸಿದ ಅರಸರು - ಪಾಳೇಗಾರರೂ ಇದ್ದಾರೆ. ಇವರನ್ನು ಕುರಿತಂತೆ ತಮ್ಮ ಹಾಡುಗಳ ಮೂಲಕ ಕೊಂಡಾಡಿಸಿಕೊಂಡ ಪ್ರಭುಗಳಲ್ಲಿ ಕೆಂಪೇಗೌಡ, ಸರ್ಜಪ್ಪನಾಯಕ, ಸಿಂಧೂರ ಲಕ್ಷಣ, ಕುಮಾರರಾಮ, ಹಲಗಲಿಬೇಡರು, ದೊಂಡಿಯ ವಾಘ ಅವರು ಮುಖ್ಯರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮೇಲೆ ವಿವರಿಸಿದ ರಾಜರೆಲ್ಲರೂ ಸಾಮಾನ್ಯ ಕುಟುಂಬಗಳಿಂದ ಬಂದವರು ಅಥವಾ ಸಾಮಾನ್ಯ ಕುಟುಂಬಗಳ ಬಗ್ಗೆ ಕಾಳಜಿ ಹೊಂದಿದವರು. ಪ್ರಭುತ್ವದ ಚರಿತ್ರೆಯನ್ನು ಗಮನಿಸಿದರೆ 'ಜನಸಾಮಾನ್ಯರು ತಮ್ಮ ದೇಶಭಕ್ತಿ ಹಾಗೂ ಕಲಿತನಗಳಿಂದಾಗಿ ಈ ನೆಲದಲ್ಲಿ ಅಜರಾಮರರಾಗಿದ್ದಾರೆ. ಕೆಳವರ್ಗಕ್ಕೆ ಸೇರಿದ ಭಜಂತ್ರಿಗಳು, ಮಾದಿಗರು ಈ ನೆಲವನ್ನಾಳಿದ ಉಲ್ಲೇಖಗಳನ್ನು ಜನಪದ ಸಾಹಿತ್ಯ ದಾಖಲು ಮಾಡಿದೆ'.
ಜನಪದರು ಪ್ರಭುತ್ವಕ್ಕೆ ಅಪ್ಪುಗೆ ಮತ್ತು ವಿರೋಧದ ಎರಡೂ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ತಮ್ಮ ಮೌಲ್ಯಗಳಿಗೆ ವಿರುದ್ಧ ನಡೆಯುವ ರಾಜರಾದರೆ ಅವರನ್ನು ಯಾವುದೇ ಮುಲಾಜಿಲ್ಲದೆ ಟೀಕಿಸಿದ್ದಾರೆ. ಅಧಿಕಾರ ಇರುವುದು ಜನರ ಒಳಿತಾಗಿ ಹೊರತು ವೈಯುಕ್ತಿಕ ಹಿತಾಸಕ್ತಿಗೆ ಅಲ್ಲ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಇದನ್ನು ಮೀರಿ ನಡೆದ ರಾಜ್ಯತ್ವಕ್ಕೆ ಮಾತಿನ ಚಾಟಿಯನ್ನು ಬೀಸುವ ಕೆಲಸವೂ ನಡೆದಿದೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ತ್ರಿಪದಿಯೊಂದನ್ನು ಗಮನಿಸಿ.
ಅನ್ನೇಕಾರ ಅರಸು ನಿನ್ನ ಸಂಬಳ ಸಾಕು |
ಹನ್ನೆರಡು ವರ್ಷದ ಹಳೆ ಅಕ್ಕಿ-ಅನ್ನ ಉಂಡು |
ಚನ್ನೀಗ ನನ ತಮ್ಮ ಬಡವಾದ ||
ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾನವ ಅಭಿವೃದ್ಧಿಗೆ ಮಾರಕವಾದ ಪ್ರಭುತ್ವವನ್ನು ಟೀಕಿಸುವುದು, ವಿರುದ್ಧ ಪ್ರತಿಭಟಿಸುವುದು ಮಾತ್ರವಲ್ಲ ಸಮಯ ಬಂದಾಗ ಅಂಥ ಪ್ರಭುತ್ವಗಳನ್ನು ನಾಶಗೊಳಿಸಿ ಪರ್ಯಾಯ ಪ್ರಭುತ್ವವನ್ನು ಸೃಷ್ಟಿಸುವ ಹಲವಾರು ಪ್ರಸಂಗಗಳು ದೊರೆಯುತ್ತವೆ.
                                                                                                                         ಡಾ.ಎಸ್. ಎಂ. ಮುತ್ತಯ್ಯ

No comments:

Post a Comment